ಮರ್ಯಾದೆ ಪ್ರಶ್ನೆ: ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಅಂಥದ್ದೇನಾಯ್ತು?

|

Updated on: Mar 13, 2024 | 7:33 PM

ಜನ ಸಾಮಾನ್ಯರಾಗಿರಲಿ ಅಥವಾ ಸೆಲೆಬ್ರಿಟಿಗಳೇ ಆಗಿರಲಿ ಮರ್ಯಾದೆ ಪ್ರಶ್ನೆ ಬಂದರೆ ಸುಮ್ಮನಿರೋಕೆ ಸಾಧ್ಯವಿಲ್ಲ. ಸ್ಯಾಂಡಲ್​ವುಡ್​ನ ಅನೇಕ ಮಂದಿಗೆ ಈಗ ಮರ್ಯಾದೆ ಪ್ರಶ್ನೆ ಎದುರಾಗಿದೆ. ಅವರೆಲ್ಲ ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿದ್ದಾರೆ. ಅಷ್ಟಕ್ಕೂ ಈ ಸೆಲೆಬ್ರಿಟಿಗಳೆಲ್ಲ ಏಕಕಾಲಕ್ಕೆ ಮರ್ಯಾದೆ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಯಾಕೆ ಎಂಬ ಕೌತುಕ ಮೂಡಿದೆ.

ಮರ್ಯಾದೆ ಪ್ರಶ್ನೆ: ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಅಂಥದ್ದೇನಾಯ್ತು?
ಮರ್ಯಾದೆ ಪ್ರಶ್ನೆ
Follow us on

ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೆ ಮರ್ಯಾದೆ ಪ್ರಶ್ನೆ (Maryade Prashne) ಎದುರಾಗಿದೆ. ಅವರ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಇದೇ ಟ್ರೆಂಡ್​ ಆಗುತ್ತಿದೆ. ತಮ್ಮ ಪಾಲಿನ ಮರ್ಯಾದೆ ಪ್ರಶ್ನೆ ಏನು ಎಂಬುದನ್ನು ಸೆಲೆಬ್ರಿಟಿಗಳು ಪೋಸ್ಟ್​ ಮಾಡುತ್ತಿದ್ದಾರೆ. ನಿರ್ದೇಶಕ ಸಿಂಪಲ್​ ಸುನಿ, ನಟಿ ನಿಶ್ವಿಕಾ ನಾಯ್ಡು, ಸಂಯುಕ್ತಾ ಹೊರನಾಡು, ಸೆಲೆಬ್ರಿಟಿ ಜಿಮ್​ ಟ್ರೇನರ್​ ಶ್ರಿನಿವಾಸ್​ ಗೌಡ ಮುಂತಾದವರು ಇದೇ ವಿಷಯವಾಗಿ ಬರೆದುಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ವಲಯದಲ್ಲಿ ಕೌತುಕ ಮೂಡಿಸಲಾಗಿದೆ. ಸ್ಯಾಂಡಲ್​ವುಡ್​ನ (Sandalwood) ಇವರಿಗೆಲ್ಲ ಅಂದೆಂಥ ಮರ್ಯಾದೆ ಪ್ರಶ್ನೆ ಎದುರಾಗಿರಬಹುದು ಎಂದು ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದಾರೆ.

‘ಕರಟಕ ದಮನಕ’ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಅವರು ನಟಿಸಿದ್ದಾರೆ. ಆ ಚಿತ್ರದಲ್ಲಿ ಪ್ರಭುದೇವ ಜೊತೆ ಅವರು ಡ್ಯಾನ್ಸ್​ ಮಾಡಿದ ‘ಹಿತ್ತಲಕ ಕರಿಬ್ಯಾಡ ಮ್ಯಾವ..’ ಸಾಂಗ್​ ಸೂಪರ್​ ಹಿಟ್​ ಆಗಿದೆ. ಇದೇ ವಿಷಯವನ್ನು ಇಟ್ಟುಕೊಂಡು ನಿಶ್ವಿಕಾ ನಾಯ್ಡು ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ‘ಹಿತ್ತಲಕ ಕರಿಬೇಡ ಮಾವಾ. ಮರ್ಯಾದೆ ಪ್ರಶ್ನೆ’ ಎಂದು ಬರೆದುಕೊಂಡಿದ್ದಾರೆ.

ಇನ್ನು, ಸಿಂಪಲ್​ ಸುನಿ ನಿರ್ದೇಶನ ಮಾಡಿರುವ ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಮಾರ್ಚ್​ 22ರಂದು ತೆರೆಕಾಣಲಿದೆ. ಅದರ ತಯಾರಿಯಲ್ಲಿರುವ ಸಿಂಪಲ್​ ಸುನಿ ಅವರಿಗೂ ಮರ್ಯಾದೆ ಪ್ರಶ್ನೆ ಎದುರಾಗಿದೆ. ‘ಅವತಾರ ಪುರುಷ 2 ಸಿನಿಮಾ ಗೆಲ್ಲಲೇ ಬೇಕು. ಮರ್ಯಾದೆ ಪ್ರಶ್ನೆ’ ಎಂದು ಸುನಿ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಲೇಡಿ ಡೈರೆಕ್ಟರ್ಸ್ ಕಡಿಮೆ ಏಕೆ? ಉತ್ತರಿಸಿದ ನಿರ್ದೇಶಕಿ ರಿಷಿಕಾ ಶರ್ಮಾ

‘ಮನಸ್ಸಿಗೆ ಅನ್ಸಿದ್ದು ಹೇಳಿಬಿಡಬೇಕು. ಮರ್ಯಾದೆ ಪ್ರಶ್ನೆ’ ಎಂದು ನಿರಂಜನ್​ ದೇಶಪಾಂಡೆ ಬರೆದುಕೊಂಡಿದ್ದಾರೆ. ‘ಒಳ್ಳೆಯವರಾಗಿ ಇರೋದಕ್ಕೆ ಕಾಸು ಬೇಕಾ? ಮರ್ಯಾದೆ ಪ್ರಶ್ನೆ’ ಎಂದು ನಟಿ ಸಂಯುಕ್ತಾ ಹೊರನಾಡು ಬರೆದುಕೊಂಡಿದ್ದಾರೆ. ‘ಜಿಮ್​ಗೆ ಸೇರ್ತೀರ. ಕಾಸು ಕೊಡ್ತೀರ. ಆದ್ರೆ ಜಿಮ್​ಗೆ ಬರೋದೇ ಇಲ್ಲ. ಮರ್ಯಾದೆ ಪ್ರಶ್ನೆ’ ಎಂದು ಸೆಲೆಬ್ರಿಟಿ ಟ್ರೇನರ್​ ಶ್ರೀನಿವಾಸ್​ ಗೌಡ ಪೋಸ್ಟ್​ ಮಾಡಿದ್ದಾರೆ. ಸೆಲೆಬ್ರಿಟಿಗಳ ಈ ಪೋಸ್ಟ್​ಗೆ ಕಮೆಂಟ್​ ಮಾಡಿದ ನೆಟ್ಟಿಗರು ‘ಇದೇನು ಹೊಸ ಟ್ರೆಂಡ್​’ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ನನ್ನೊಬ್ಬನಿಂದ ಕನ್ನಡ ಚಿತ್ರರಂಗ ಅಲ್ಲ, ಹೊಸಬರಿಗೂ ಪ್ರೋತ್ಸಾಹ ಸಿಗಲಿ: ಯಶ್

‘ಮರ್ಯಾದೆ ಪ್ರಶ್ನೆ’ ಬಗ್ಗೆ ಕೆಲವು ಅನುಮಾನಗಳ ಕೂಡ ಮೂಡಿವೆ. ಇದು ಹೊಸ ಸಿನಿಮಾದ ಟೈಟಲ್​ ಆಗಿರಬಹುದೇ? ಆ ಶೀರ್ಷಿಕೆ ಅನೌನ್ಸ್​ ಮಾಡುವುದಕ್ಕೂ ಮುನ್ನವೇ ಹೀಗೆ ಟ್ರೆಂಡ್​ ಮಾಡಲಾಗುತ್ತಿದೆಯೇ? ಪ್ರಚಾರಕ್ಕಾಗಿ ಹೊಸ ಪ್ಲ್ಯಾನ್​ ಮಾಡಲಾಗಿದೆಯೇ? ಒಂದು ವೇಳೆ ಅದು ಸಿನಿಮಾದ ಟೈಟಲ್​ ಆಗಿದ್ದರೆ ಆ ಚಿತ್ರಕ್ಕೆ ಹೀರೋ ಯಾರು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಶೀಘ್ರದಲ್ಲೇ ಅದಕ್ಕೆ ಉತ್ತರ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.