AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಲ್ಕಾ ಕೆಲಸ ಬಿಡೋಕಾಗಲ್ಲ, ಸೆಲೆಬ್ರಿಟಿ ಆದಮೇಲೆ ಬಿಡದಿದ್ರೆ ಮನುಷ್ಯರಲ್ಲ’: ಮುಖ್ಯಮಂತ್ರಿ ಚಂದ್ರು ಹೀಗೆ ಹೇಳಿದ್ದೇಕೆ?

ಮುಖ್ಯಮಂತ್ರಿ ಚಂದ್ರು ಅವರು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಇದರ ಜೊತೆಗೆ ರಂಗಭೂಮಿಯಲ್ಲೂ ಅವರು ಆ್ಯಕ್ಟೀವ್​ ಆಗಿದ್ದಾರೆ. ಅವರು ಇತ್ತೀಚೆಗೆ ‘ಕಲಾ ಮಾಧ್ಯಮಕ್ಕೆ ಸಂದರ್ಶನ’ ನೀಡಿದ್ದಾರೆ. ಈ ವೇಳೆ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಹೇಗೆ ಇರಬೇಕು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

‘ಹಲ್ಕಾ ಕೆಲಸ ಬಿಡೋಕಾಗಲ್ಲ, ಸೆಲೆಬ್ರಿಟಿ ಆದಮೇಲೆ ಬಿಡದಿದ್ರೆ ಮನುಷ್ಯರಲ್ಲ’: ಮುಖ್ಯಮಂತ್ರಿ ಚಂದ್ರು ಹೀಗೆ ಹೇಳಿದ್ದೇಕೆ?
ಮುಖ್ಯಮಂತ್ರಿ ಚಂದ್ರು
ರಾಜೇಶ್ ದುಗ್ಗುಮನೆ
|

Updated on:Jul 05, 2024 | 11:37 AM

Share

ಮುಖ್ಯಮಂತ್ರಿ ಚಂದ್ರು ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಚಂದ್ರಶೇಖರ್ ಅನ್ನೋದು ಅವರ ಹೆಸರು. ‘ಮುಖ್ಯಮಂತ್ರಿ’ ನಾಟಕ ಮಾಡಿ ಮುಖ್ಯಮಂತ್ರಿ ಚಂದ್ರು ಎಂದೇ ಫೇಮಸ್ ಆದರು. ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರು ಶಾಸಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಇತ್ತೀಚೆಗೆ ‘ಕಲಾ ಮಾಧ್ಯಮಕ್ಕೆ ಸಂದರ್ಶನ’ ನೀಡಿದ್ದಾರೆ. ಈ ವೇಳೆ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ.

ಹಲವು ಸೆಲೆಬ್ರಿಟಿಗಳು ವಿವಾದದಲ್ಲಿ ಸಿಕ್ಕಿಕೊಳ್ಳುತ್ತಿದ್ದಾರೆ. ಮಾದರಿಯಾಗಿರಬೇಕಾದ ಹೀರೋಗಳು ಜೈಲು ಸೇರುತ್ತಿದ್ದಾರೆ. ಸೆಲೆಬ್ರಿಟಿ ಪಟ್ಟ ಸಿಕ್ಕಮೇಲೆ ಅವನು ತೋರಿಕೆಗಾದರೂ ಸಭ್ಯನಾಗಿರಬೇಕು ಎಂಬುದು ಮುಖ್ಯಮಂತ್ರಿ ಚಂದ್ರು ಅವರ ಅಭಿಪ್ರಾಯ. ಈ ಬಗ್ಗೆ ಅವರು ಹಳೆಯ ಘಟನೆ ಒಂದನ್ನು ಉದಾಹರಣೆ ಕೊಟ್ಟು ಹೇಳಿದ್ದಾರೆ.

‘ಮುಖ್ಯಮಂತ್ರಿ’ ನಾಟಕವನ್ನು ಲೋಹಿತಾಶ್ವ ಅವರು ಮಾಡಬೇಕಿತ್ತು. ಈ ನಾಟಕದ ಬಗ್ಗೆ ಚರ್ಚೆ ಮಾಡಲು ಹೋಟೆಲ್ ಒಂದರಲ್ಲಿ ಲೋಹಿತಾಶ್ವ ಹಾಗೂ ಚಂದ್ರು ಹೋಟೆಲ್ ಮಾಡಿಕೊಂಡಿದ್ದರು. ಈ ವೇಳೆ ರಮ್ ಕುಡಿಯುತ್ತಿದ್ದರಂತೆ. ಈ ವಿಚಾರವನ್ನು ಚಂದ್ರು ಹೇಳಿಕೊಂಡರು. ‘ರಮ್ ಕುಡಿಯೋದ್ರಲ್ಲಿ ಏನಿದೆ? ಇದೆಲ್ಲ ಓಪನ್ ಆಗಿ ಹೇಳಿಕೊಳ್ಳುತ್ತೇನೆ. ಆದರೆ, ಇದನ್ನು ಓಪನ್ ಆಗಿ ಎಲ್ಲಿಯೂ ಹೇಳಿಕೊಳ್ಳಬೇಡಿ ಎಂದು ನಾನು ನಾಯಕರಿಗೆ ಹೇಳುತ್ತಿರುತ್ತೇನೆ’ ಎಂದಿದ್ದಾರೆ ಚಂದ್ರು. ಆ ಬಳಿಕ ಅವರು ಸೆಲೆಬ್ರಿಟಿಗಳು ಪಾಲಿಸಬೇಕಾದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ನಾಗಮಂಗಲದಲ್ಲಿ ದರ್ಶನ್ ಮತ್ತು ಮುಖ್ಯಮಂತ್ರಿ ಚಂದ್ರುರಿಂದ ಸ್ಟಾರ್ ಚಂದ್ರು ಪರ ರೋಡ್ ಶೋ!

‘ಹಲ್ಕಾ ಕೆಲಸ ಬಿಡೋಕೆ ಆಗಲ್ಲ. ಸೆಲೆಬ್ರಿಟಿ ಆದಮೇಲೆ ಅದನ್ನು ಬಿಡದೆ ಇದ್ರೆ ಮನುಷ್ಯರಲ್ಲ. ಬಿಡದೇ ಇದ್ದರೆ ಎಂದರೆ ಸಾರ್ವಜನಿಕ ಮಾಡದನ್ನು ಬಿಡದೇ ಇದ್ದರೆ ಅವನು ಮಾದರಿ ಆಗಲ್ಲ. ಈಗ ಎಲ್ಲವನ್ನೂ ಓಪನ್ ಆಗಿ ತೋರ್ಸಿ ಗಬ್ಬೆದ್ದು ಹೋಗುತ್ತಿದ್ದಾರೆ. ಮನುಷ್ಯನ ಚಟ ಏನು ಮಾಡೋಕಾಗಲ್ಲ. ಇದು ವೀಕ್​ನೆಸ್. ಇತಿ-ಮಿತಿಯಲ್ಲಿ ಇರಬೇಕು’ ಎಂದಿದ್ದಾರೆ ಚಂದ್ರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:35 am, Fri, 5 July 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ