ಲಾಕ್​ಡೌನ್ ಎಫೆಕ್ಟ್​: ದೇವಾಲಯದಲ್ಲಿ ಸರಳವಾಗಿ ಸಪ್ತಪದಿ ತುಳಿಯಲಿರುವ ನಯನತಾರಾ?

ಚೆನ್ನೈ: ಸದ್ಯ ಲಾಕ್​ಡೌನ್ ಸಡಿಲಗೊಂಡಿದ್ದು, ಅಭಿಮಾನಿಗಳಿಗೆ ಬಹುಭಾಷಾ ನಟಿ ನಯನತಾರಾ ಶುಭಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ತಮಿಳುನಾಡಿನ ದೇವಾಲಯವೊಂದರಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಮದುವೆಯಾಗಲಿದ್ದಾರೆ. ನಾನುಮ್ ರೌಡಿ ದಾನ್ ಸಿನಿಮಾ ಸೆಟ್​ನಲ್ಲಿ ಈ ಜೋಡಿಯ ಲವ್ ಪ್ರಾರಂಭವಾಗಿತ್ತು. ಹಿಂದಿನಿಂದಲೂ ಇಬ್ಬರು ಮದುವೆಯಾಗುವ ಮಾಹಿತಿ ಇತ್ತು. ಈಗ ಕೊರೊನಾ ಲಾಕ್​ಡೌನ್​ ಕಾರಣದಿಂದ ದೇವಸ್ಥಾನದಲ್ಲಿ ಸರಳ ವಿವಾಹವಾಗಲು ನಿರ್ಧರಿಸಿದ್ದಾರೆ. ಸದ್ಯ ಮದುವೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅತಿ ಶೀಘ್ರದಲ್ಲಿ ಮದುವೆ ದಿನಾಂಕವನ್ನು ಅಧಿಕೃತಗೊಳಿಸಲಿದ್ದಾರೆ.

ಲಾಕ್​ಡೌನ್ ಎಫೆಕ್ಟ್​: ದೇವಾಲಯದಲ್ಲಿ ಸರಳವಾಗಿ ಸಪ್ತಪದಿ ತುಳಿಯಲಿರುವ ನಯನತಾರಾ?
ಸಾಧು ಶ್ರೀನಾಥ್​ Edited By:

Updated on: Jun 04, 2020 | 5:49 PM

ಚೆನ್ನೈ: ಸದ್ಯ ಲಾಕ್​ಡೌನ್ ಸಡಿಲಗೊಂಡಿದ್ದು, ಅಭಿಮಾನಿಗಳಿಗೆ ಬಹುಭಾಷಾ ನಟಿ ನಯನತಾರಾ ಶುಭಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ತಮಿಳುನಾಡಿನ ದೇವಾಲಯವೊಂದರಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಮದುವೆಯಾಗಲಿದ್ದಾರೆ.

ನಾನುಮ್ ರೌಡಿ ದಾನ್ ಸಿನಿಮಾ ಸೆಟ್​ನಲ್ಲಿ ಈ ಜೋಡಿಯ ಲವ್ ಪ್ರಾರಂಭವಾಗಿತ್ತು. ಹಿಂದಿನಿಂದಲೂ ಇಬ್ಬರು ಮದುವೆಯಾಗುವ ಮಾಹಿತಿ ಇತ್ತು. ಈಗ ಕೊರೊನಾ ಲಾಕ್​ಡೌನ್​ ಕಾರಣದಿಂದ ದೇವಸ್ಥಾನದಲ್ಲಿ ಸರಳ ವಿವಾಹವಾಗಲು ನಿರ್ಧರಿಸಿದ್ದಾರೆ. ಸದ್ಯ ಮದುವೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅತಿ ಶೀಘ್ರದಲ್ಲಿ ಮದುವೆ ದಿನಾಂಕವನ್ನು ಅಧಿಕೃತಗೊಳಿಸಲಿದ್ದಾರೆ.

Published On - 5:47 pm, Thu, 4 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us