ಹೊಸ ವರ್ಷದ ಪ್ರಯುಕ್ತ ‘ಕರಾವಳಿ’ ಸಿನಿಮಾದಿಂದ ಬಂತು ಪಿಶಾಚಿ ಟೀಸರ್​

‘ಕರಾವಳಿ’ ಸಿನಿಮಾದ ಹೊಸ ಟೀಸರ್​ ಅನಾವರಣ ಆಗಿದೆ. ಈ ಟೀಸರ್​ನಲ್ಲಿ ಒಂದು ಕುರ್ಚಿ ಹೈಲೆಟ್ ಆಗಿದ್ದು, ಪ್ರೇಕ್ಷಕರ ಗಮನವನ್ನು ಸೆಳೆದುಕೊಂಡಿದೆ. ಪ್ರಜ್ವಲ್ ದೇವರಾಜ್ ನಟನೆಯ ಈ ಸಿನಿಮಾಗೆ ಗುರುದತ್ ಗಾಣಿಗ ಆ್ಯಕ್ಷನ್​-ಕಟ್ ಹೇಳಿದ್ದಾರೆ. 2025ರಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಹಳ್ಳಿ ಸೊಗಡಿನ ಕಹಾನಿ ಈ ಸಿನಿಮಾದಲ್ಲಿ ಇರಲಿದೆ.

ಹೊಸ ವರ್ಷದ ಪ್ರಯುಕ್ತ ‘ಕರಾವಳಿ’ ಸಿನಿಮಾದಿಂದ ಬಂತು ಪಿಶಾಚಿ ಟೀಸರ್​
Prajwal Devaraj, Karavali Movie Poster

Updated on: Dec 30, 2024 | 6:24 PM

ಪ್ರಜ್ವಲ್​ ದೇವರಾಜ್​ ನಟನೆಯ ‘ಕರಾವಳಿ’ ಸಿನಿಮಾ ಒಂದಷ್ಟು ಕಾರಣಗಳಿಂದ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. 2025ರ ಹೊಸ ವರ್ಷದ ಸಲುವಾಗಿ ‘ಕರಾವಳಿ’ ಚಿತ್ರತಂಡದಿಂದ ಹೊಸ ಟೀಸರ್​ ಬಿಡುಗಡೆ ಮಾಡಲಾಗಿದೆ. ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಅವರು ಈ ಸಿನಿಮಾದಲ್ಲಿ ಬೇರೆ ಬೇರೆ ಗೆಟಪ್​ಗಳ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್​ನಿಂದ ಸಿನಿಮಾ ಮೇಲಿನ ಕೌತುಕ ಜಾಸ್ತಿ ಆಗಿದೆ. ‘ಕರಾವಳಿ’ ಟೀಸರ್​ನಲ್ಲಿ ನಾಯಕಿ, ನಾಯಕಿ, ವಿಲನ್ ಅಥವಾ ಯಾವುದೇ ಒಂದು ಪಾತ್ರ ಹೈಲೈಟ್ ಆಗಿಲ್ಲ. ಬದಲಿಗೆ, ಒಂದು ಕುರ್ಚಿಯೇ ಕೇಂದ್ರ ಸ್ಥಾನ ಪಡೆದುಕೊಂಡಿದೆ.

ಹೌದು, ‘ಕರಾವಳಿ’ ಟೀಸರ್​ನಲ್ಲಿ ಪ್ರತಿಷ್ಠೆಯ ಒಂದು ಕುರ್ಚಿ ಹೈಲೆಟ್ ಆಗಿದೆ. ‘ಅದು ಬರೀ ಕುರ್ಚಿಯಲ್ಲ.. ಪ್ರತಿಷ್ಠೆಯ ಪಿಚಾಚಿ’ ಎಂಬ ಡೈಲಾಗ್​ ಮೂಲಕ ಟೀಸರ್​ ಆರಂಭ ಆಗುತ್ತದೆ. ಹಾಗಾದರೆ ಆ ಖುರ್ಚಿಯ ಹಿಂದೆ ಇರುವ ಕಥೆ ಏನು ಎಂಬ ಕೌತುಕ ಮೂಡಿಸುವ ರೀತಿಯಲ್ಲಿ ಟೀಸರ್​ ಸಿದ್ಧವಾಗಿದೆ. ‘ಕರಾವಳಿ’ ಚಿತ್ರಕ್ಕೆ ಈಗಾಗಲೇ ಶೇಕಡ 80ರಷ್ಟು ಶೂಟಿಂಗ್ ಮುಕ್ತಾಯ ಆಗಿದೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್​ಗೆ ಜೋಡಿಯಾಗಿ ಸಂಪದಾ ನಟಿಸಿದ್ದಾರೆ.

‘ಕರಾವಳಿ’ ಸಿನಿಮಾದಲ್ಲಿ ಇರುವುದು ಕಂಬಳ ಕುರಿತ ಕಥೆ. ಈ ಮೊದಲು ಬಿಡುಗಡೆ ಆಗಿದ್ದ ಟೀಸರ್​ನಲ್ಲಿ ಒಂದು ಮಗು ಜನಿಸುತ್ತದೆ, ಅದೇ ಸಮಯದಲ್ಲಿ ಕೊಟ್ಟಿಗೆಯಲ್ಲಿ ಒಂದು ಕರುವಿನ ಜನನ ಕೂಡ ಆಗುತ್ತದೆ. ಈಗ ಬಂದಿರುವ ಹೊಸ ಟೀಸರ್ ಆ ಕಥೆಯ ಮುಂದುವರಿದ ಭಾಗದಂತಿದೆ. ಆ ಮಗು ಹುಟ್ಟಿದಾಗಿನಿಂದ ಪ್ರತಿಷ್ಠೆಯ ಕುರ್ಚಿಯನ್ನು ನೋಡುತ್ತ ಬೆಳೆಯುತ್ತದೆ. ಕುರ್ಚಿಯ ಮೇಲೆ ಕಣ್ಣಿಟ್ಟವರಿಗೆ ಏನಾಗುತ್ತದೆ ಎಂಬುದನ್ನು ಸಹ ಟೀಸರ್​ನಲ್ಲಿ ಹೇಳಲಾಗಿದೆ.

ಕರಾವಳಿ ಟೀಸರ್​:

ಟೀಸರ್​ನಲ್ಲಿ ಮಿತ್ರ, ರಮೇಶ್ ಇಂದಿರ, ಎಂ.ಕೆ. ಮಠ, ಪ್ರಜ್ವಲ್ ದೇವರಾಜ್ ಅವರ ಪಾತ್ರಗಳು ಕುತೂಹಲ ಹುಟ್ಟಿಸಿವೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರ 3 ರೀತಿಯ ಲುಕ್ ಬಹಿರಂಗವಾಗಿದೆ. ಯಕ್ಷಗಾನ, ಕಂಬಳ, ಮಹಿಷಾಸುರ ಹೀಗೆ 3 ಬೇರೆ ಬೇರೆ ಗೆಟಪ್​ನಲ್ಲಿ ಅವರ ಪೋಸ್ಟರ್​ಗಳು ಬಂದಿವೆ. ಈ ಎಲ್ಲ ಕಾರಣಗಳಿಂದಾಗಿ ಅವರ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಜಾಸ್ತಿ ಇದೆ.

ಇದನ್ನೂ ಓದಿ: ‘ಕುಡ್ಲ ನಮ್ದು ಊರುʼ ಸಿನಿಮಾದಲ್ಲಿ ಕರಾವಳಿಯ ಪ್ರತಿಭೆಗಳ ಸಂಗಮ

ಸಚಿನ್ ಬಸ್ರೂರು ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಭಿಮನ್ಯು ಸದಾನಂದನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಕರಾವಳಿ ಸುತ್ತಮುತ್ತನೇ ಚಿತ್ರೀಕರಣ ಮಾಡಲಾಗಿದೆ. ಗುರುದತ್ ಗಾಣಿಗ ಅವರ ನಿರ್ದೇಶನದ ಜತೆಗೆ ‘ಗುರುದತ್ ಗಾಣಿಗ ಫಿಲ್ಮ್ಸ್​’ ಹಾಗೂ ‘ವಿಕೆ ಫಿಲ್ಮ್ಸ್​’ ಸಹಯೋಗದಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಕಥೆ ಈ ಚಿತ್ರದಲ್ಲಿ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:13 pm, Mon, 30 December 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us