AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಂಗಕರ್ಮಿಗಳಿಗಾಗಿ ‘ನಿರ್ದಿಗಂತ’ ನಿರ್ಮಿಸಿದ ಪ್ರಕಾಶ್ ರೈ: ಏನಿದು ನಿರ್ದಿಗಂತ? ಎಲ್ಲಿದೆ?

Prakash Raj: ಪ್ರಕಾಶ್ ರೈ

ರಂಗಕರ್ಮಿಗಳಿಗಾಗಿ 'ನಿರ್ದಿಗಂತ' ನಿರ್ಮಿಸಿದ ಪ್ರಕಾಶ್ ರೈ: ಏನಿದು ನಿರ್ದಿಗಂತ? ಎಲ್ಲಿದೆ?
ಪ್ರಕಾಶ್ ರೈ ನಿರ್ದಿಗಂತ
ಮಂಜುನಾಥ ಸಿ.
|

Updated on:Jun 17, 2023 | 8:38 PM

Share

ಬಹುಭಾಷಾ ನಟ ಪ್ರಕಾಶ್ ರೈ (Prakash Rai) ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಸಿನಿಮಾಗಲ್ಲಿ ನಟಿಸುತ್ತಿರುವ ಜೊತೆಗೆ ತಮ್ಮ ಮೂಲವಾದ ರಂಗಭೂಮಿಗೆ (Theater) ಪ್ರಕಾಶ್ ರೈ ಮರಳಿದ್ದಾರೆ. ಹಾಗೆಂದು ಅವರು ನಾಟಕದಲ್ಲಿ (Drama) ನಟಿಸುತ್ತಿಲ್ಲ ಬದಲಿಗೆ ನಾಟಕಕರ್ಮಿಗಳಿಗಾಗಿ ಸುಂದರವಾದ, ಸಕಲ ಸೌಕರ್ಯ ಸಜ್ಜಿತ ವೇದಿಕೆಯನ್ನು ಒದಗಿಸಿದ್ದಾರೆ. ಶ್ರೀರಂಗಪಟ್ಟಣದ ಸಮೀಪ ಪ್ರಶಾಂತ ಸ್ಥಳವೊಂದರಲ್ಲಿ ನಿರ್ದಿಗಂತ ಹೆಸರಿನ ನಾಟಕ ಇನ್​ಕ್ಯುಬೇಟರ್ ರಂಗ ಚಟುವಟಿಕೆ ನೆಲೆಯನ್ನು ನಿರ್ಮಿಸಿದ್ದಾರೆ.

ಶ್ರೀರಂಗಪಟ್ಟಣದ ಕೆ ಶೆಟ್ಟಿಹಳ್ಳಿ ಬಳಿ ತಣ್ಣಗೆ ಹರಿಯುತ್ತಿರುವ ಲೋಕಪಾವನಿ ನದಿ ದಡದಲ್ಲಿ ತೋಟ ಮಾಡಿರುವ ಪ್ರಕಾಶ್ ರೈ ಅಲ್ಲಿಯೇ ವಿಶಿಷ್ಟ, ಕ್ರಿಯಾಶೀಲ ವಿನ್ಯಾಸದ ನಿರ್ದಿಗಂತ ಹೆಸರಿನ ನಾಟಕ ಇನ್​ಕ್ಯುಬೇಟರ್ (ಕಾವುಗೂಡು) ಸ್ಥಾಪಿಸಿದ್ದಾರೆ. ಇಲ್ಲಿ ನಾಟಕ ಪ್ರದರ್ಶನ, ತಾಮೀಲು, ನಾಟಕ ರಚನೆ, ರಂಗಕರ್ಮಿಗಳ ನಿರ್ಮಾಣ ಹೀಗೆ ಹಲವು ರಂಗಚಟುವಟಿಕೆಗಳು ನಡೆಯಲಿವೆ.

ಮೂವತ್ತು ಜನ ಅಲ್ಲಿಯೇ ಉಳಿದುಕೊಂಡು ರಂಗಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸಕಲ ವ್ಯವಸ್ಥೆಯನ್ನೂ ಪ್ರಕಾಶ್ ರೈ ಮಾಡಿದ್ದು, ”ನಾನು ನಾಟಕ ಮಾಡಲು ನಿರ್ಧಿಸಿದಾಗ ಗೆಳೆಯರೊಬ್ಬರು ಎಚ್ಚರಿಸಿದರು. ನಾನೂ ಯೋಚಿಸಿ ಹೌದಲ್ಲವೆ ನಾನು ನಾಟಕ ಮಾಡಿದರೆ ಪ್ರಕಾಶ್ ರೈ ಮಾಡಿರುವ ನಾಟಕ ಎಂದು ಜನ ಬರುತ್ತಾರೆ. ಆದರೆ ಜನ ಕೇವಲ ನಾಟಕ ನೋಡಲು ಬರಬೇಕು, ಅದನ್ನು ಯಾರಾದರೂ ಮಾಡಿರಲಿ ಎನಿಸಿ, ಹೊಸಬರಿಗೆ ತಮ್ಮ ನಾಟಕ ಕಲೆಯ ಅಭಿವ್ಯಕ್ತಿಗಾಗಿ ನಿರ್ದಿಗಂತ ಮಾಡಿದೆ ಎಂದಿದ್ದಾರೆ.

ರಾಜ್ಯದ ಸಕ್ರಿಯ ರಂಗ ತಂಡಗಳ ಅಂಕಿ-ಅಂಶವನ್ನು ನಿರ್ದಿಂಗತ ಸಂಗ್ರಹಿಸಿದೆ. ಹಣಕಾಸಿನ ತೊಂದರೆ ಇರುವ ರಂಗತಂಡಗಳಿಗೆ ಅಗತ್ಯ ಸಹಕಾರ ನೀಡಲಿದೆ ನಿರ್ದಿಗಂತ. ಯಾವುದೇ ರಂಗತಂಡ ಇಲ್ಲಿ ಬಂದು ತಾಲೀಮು ಮಾಡಬಹುದು. ನಾಟಕಗಳನ್ನು ಪ್ರದರ್ಶಿಸಬಹುದು, ನಿರ್ದಿಗಂತ ನಾಟಕೋತ್ಸವ ಆಯೋಜಿಸಬಹುದು. ಇಲ್ಲಿನ ನಾಟಕಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗಬಹುದು.

ಇದನ್ನೂ ಓದಿ:ಕೆನ್ನೆಗೆ ಬಾರಿಸಿ ಸುದ್ದಿಯಾದ ಪ್ರಕಾಶ್ ರೈ; ನಟನ ಬೆಂಬಲಕ್ಕೆ ನಿಂತ ದಕ್ಷಿಣ ಭಾರತದ ಮಂದಿ

ಪ್ರಸ್ತುತ ಯುದ್ಧ ಮತ್ತು ಕೋಮು ವಿಷಯ ಆರಿಸಿಕೊಂಡು ಕಾರ್ಯಾಗಾರ ನಡೆಯುತ್ತಿದ್ದು ಶ್ರೀಪಾದ ಭಟ್ ಅವರು, ಹೊಸ ಪಠ್ಯಗಳ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಮಂಟೋನ ಕತೆ, ಕುವೆಂಪು ಅವರು ಸ್ಮಶಾನ ಕುರುಕ್ಷೇತ್ರದ ಆಯ್ದ ಭಾಗ, ಕೃಷ್ಣಮೂರ್ತಿ ಹನೂರು ಕಾದಂಬರಿಯ ಕೆಲ ಪುಟಗಳು, ರವೀಂದ್ರನಾಥ ಟ್ಯಾಗೋರರ ಡಿಸ್​ಟ್ರಕ್ಷನ್ ಕತೆ, ಬ್ರಾಂಡೋಲ್​ರ ವಾರ್ ಗಳನ್ನು ಪಠ್ಯಗಳನ್ನಾಗಿ ಆರಿಸಿಕೊಳ್ಳಲಾಗಿದ್ದು ಅವುಗಳೊಟ್ಟಿಗೆ ಕನ್ನಡದ ಕೆಲವು ಕವನಗಳನ್ನು ಬಳಸಿ ಯುದ್ಧ ಮತ್ತು ಕೋಮು ರಂಗಪಯಣ ಮಾಡಲಾಗುತ್ತಿದೆ.

ಪ್ರಸ್ತುತ ಹದಿನೈದು ಯುವ ಆಸಕ್ತಿಕರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದು, ರಂಗ ಚಟುವಟಿಕೆಗಳ ಭಾಗವಾಗಿದ್ದಾರೆ. ನಿರ್ದಿಗಂತವು ಬೇರೆ ಕಲೆಗಳಿಗೂ ಅವಕಾಶ ಮಾಡಿಕೊಡುತ್ತಿದ್ದು ಆಡಿಯೋ ಬುಕ್ ನಿರ್ಮಾಣದ ಆಶಯ ಇದೆ. ನಿರ್ದಿಗಂತ ಬಹುಮಾಧ್ಯಮದ ಅಭಿವ್ಯಕ್ತಿ ಸ್ಥಳ ಎಂದಿದ್ದಾರೆ ಸಂಸ್ಥಾಪಕ ಪ್ರಕಾಶ್ ರೈ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:37 pm, Sat, 17 June 23

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ