AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಂಗಕರ್ಮಿಗಳಿಗಾಗಿ ‘ನಿರ್ದಿಗಂತ’ ನಿರ್ಮಿಸಿದ ಪ್ರಕಾಶ್ ರೈ: ಏನಿದು ನಿರ್ದಿಗಂತ? ಎಲ್ಲಿದೆ?

Prakash Raj: ಪ್ರಕಾಶ್ ರೈ

ರಂಗಕರ್ಮಿಗಳಿಗಾಗಿ 'ನಿರ್ದಿಗಂತ' ನಿರ್ಮಿಸಿದ ಪ್ರಕಾಶ್ ರೈ: ಏನಿದು ನಿರ್ದಿಗಂತ? ಎಲ್ಲಿದೆ?
ಪ್ರಕಾಶ್ ರೈ ನಿರ್ದಿಗಂತ
ಮಂಜುನಾಥ ಸಿ.
|

Updated on:Jun 17, 2023 | 8:38 PM

Share

ಬಹುಭಾಷಾ ನಟ ಪ್ರಕಾಶ್ ರೈ (Prakash Rai) ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಸಿನಿಮಾಗಲ್ಲಿ ನಟಿಸುತ್ತಿರುವ ಜೊತೆಗೆ ತಮ್ಮ ಮೂಲವಾದ ರಂಗಭೂಮಿಗೆ (Theater) ಪ್ರಕಾಶ್ ರೈ ಮರಳಿದ್ದಾರೆ. ಹಾಗೆಂದು ಅವರು ನಾಟಕದಲ್ಲಿ (Drama) ನಟಿಸುತ್ತಿಲ್ಲ ಬದಲಿಗೆ ನಾಟಕಕರ್ಮಿಗಳಿಗಾಗಿ ಸುಂದರವಾದ, ಸಕಲ ಸೌಕರ್ಯ ಸಜ್ಜಿತ ವೇದಿಕೆಯನ್ನು ಒದಗಿಸಿದ್ದಾರೆ. ಶ್ರೀರಂಗಪಟ್ಟಣದ ಸಮೀಪ ಪ್ರಶಾಂತ ಸ್ಥಳವೊಂದರಲ್ಲಿ ನಿರ್ದಿಗಂತ ಹೆಸರಿನ ನಾಟಕ ಇನ್​ಕ್ಯುಬೇಟರ್ ರಂಗ ಚಟುವಟಿಕೆ ನೆಲೆಯನ್ನು ನಿರ್ಮಿಸಿದ್ದಾರೆ.

ಶ್ರೀರಂಗಪಟ್ಟಣದ ಕೆ ಶೆಟ್ಟಿಹಳ್ಳಿ ಬಳಿ ತಣ್ಣಗೆ ಹರಿಯುತ್ತಿರುವ ಲೋಕಪಾವನಿ ನದಿ ದಡದಲ್ಲಿ ತೋಟ ಮಾಡಿರುವ ಪ್ರಕಾಶ್ ರೈ ಅಲ್ಲಿಯೇ ವಿಶಿಷ್ಟ, ಕ್ರಿಯಾಶೀಲ ವಿನ್ಯಾಸದ ನಿರ್ದಿಗಂತ ಹೆಸರಿನ ನಾಟಕ ಇನ್​ಕ್ಯುಬೇಟರ್ (ಕಾವುಗೂಡು) ಸ್ಥಾಪಿಸಿದ್ದಾರೆ. ಇಲ್ಲಿ ನಾಟಕ ಪ್ರದರ್ಶನ, ತಾಮೀಲು, ನಾಟಕ ರಚನೆ, ರಂಗಕರ್ಮಿಗಳ ನಿರ್ಮಾಣ ಹೀಗೆ ಹಲವು ರಂಗಚಟುವಟಿಕೆಗಳು ನಡೆಯಲಿವೆ.

ಮೂವತ್ತು ಜನ ಅಲ್ಲಿಯೇ ಉಳಿದುಕೊಂಡು ರಂಗಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸಕಲ ವ್ಯವಸ್ಥೆಯನ್ನೂ ಪ್ರಕಾಶ್ ರೈ ಮಾಡಿದ್ದು, ”ನಾನು ನಾಟಕ ಮಾಡಲು ನಿರ್ಧಿಸಿದಾಗ ಗೆಳೆಯರೊಬ್ಬರು ಎಚ್ಚರಿಸಿದರು. ನಾನೂ ಯೋಚಿಸಿ ಹೌದಲ್ಲವೆ ನಾನು ನಾಟಕ ಮಾಡಿದರೆ ಪ್ರಕಾಶ್ ರೈ ಮಾಡಿರುವ ನಾಟಕ ಎಂದು ಜನ ಬರುತ್ತಾರೆ. ಆದರೆ ಜನ ಕೇವಲ ನಾಟಕ ನೋಡಲು ಬರಬೇಕು, ಅದನ್ನು ಯಾರಾದರೂ ಮಾಡಿರಲಿ ಎನಿಸಿ, ಹೊಸಬರಿಗೆ ತಮ್ಮ ನಾಟಕ ಕಲೆಯ ಅಭಿವ್ಯಕ್ತಿಗಾಗಿ ನಿರ್ದಿಗಂತ ಮಾಡಿದೆ ಎಂದಿದ್ದಾರೆ.

ರಾಜ್ಯದ ಸಕ್ರಿಯ ರಂಗ ತಂಡಗಳ ಅಂಕಿ-ಅಂಶವನ್ನು ನಿರ್ದಿಂಗತ ಸಂಗ್ರಹಿಸಿದೆ. ಹಣಕಾಸಿನ ತೊಂದರೆ ಇರುವ ರಂಗತಂಡಗಳಿಗೆ ಅಗತ್ಯ ಸಹಕಾರ ನೀಡಲಿದೆ ನಿರ್ದಿಗಂತ. ಯಾವುದೇ ರಂಗತಂಡ ಇಲ್ಲಿ ಬಂದು ತಾಲೀಮು ಮಾಡಬಹುದು. ನಾಟಕಗಳನ್ನು ಪ್ರದರ್ಶಿಸಬಹುದು, ನಿರ್ದಿಗಂತ ನಾಟಕೋತ್ಸವ ಆಯೋಜಿಸಬಹುದು. ಇಲ್ಲಿನ ನಾಟಕಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗಬಹುದು.

ಇದನ್ನೂ ಓದಿ:ಕೆನ್ನೆಗೆ ಬಾರಿಸಿ ಸುದ್ದಿಯಾದ ಪ್ರಕಾಶ್ ರೈ; ನಟನ ಬೆಂಬಲಕ್ಕೆ ನಿಂತ ದಕ್ಷಿಣ ಭಾರತದ ಮಂದಿ

ಪ್ರಸ್ತುತ ಯುದ್ಧ ಮತ್ತು ಕೋಮು ವಿಷಯ ಆರಿಸಿಕೊಂಡು ಕಾರ್ಯಾಗಾರ ನಡೆಯುತ್ತಿದ್ದು ಶ್ರೀಪಾದ ಭಟ್ ಅವರು, ಹೊಸ ಪಠ್ಯಗಳ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಮಂಟೋನ ಕತೆ, ಕುವೆಂಪು ಅವರು ಸ್ಮಶಾನ ಕುರುಕ್ಷೇತ್ರದ ಆಯ್ದ ಭಾಗ, ಕೃಷ್ಣಮೂರ್ತಿ ಹನೂರು ಕಾದಂಬರಿಯ ಕೆಲ ಪುಟಗಳು, ರವೀಂದ್ರನಾಥ ಟ್ಯಾಗೋರರ ಡಿಸ್​ಟ್ರಕ್ಷನ್ ಕತೆ, ಬ್ರಾಂಡೋಲ್​ರ ವಾರ್ ಗಳನ್ನು ಪಠ್ಯಗಳನ್ನಾಗಿ ಆರಿಸಿಕೊಳ್ಳಲಾಗಿದ್ದು ಅವುಗಳೊಟ್ಟಿಗೆ ಕನ್ನಡದ ಕೆಲವು ಕವನಗಳನ್ನು ಬಳಸಿ ಯುದ್ಧ ಮತ್ತು ಕೋಮು ರಂಗಪಯಣ ಮಾಡಲಾಗುತ್ತಿದೆ.

ಪ್ರಸ್ತುತ ಹದಿನೈದು ಯುವ ಆಸಕ್ತಿಕರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದು, ರಂಗ ಚಟುವಟಿಕೆಗಳ ಭಾಗವಾಗಿದ್ದಾರೆ. ನಿರ್ದಿಗಂತವು ಬೇರೆ ಕಲೆಗಳಿಗೂ ಅವಕಾಶ ಮಾಡಿಕೊಡುತ್ತಿದ್ದು ಆಡಿಯೋ ಬುಕ್ ನಿರ್ಮಾಣದ ಆಶಯ ಇದೆ. ನಿರ್ದಿಗಂತ ಬಹುಮಾಧ್ಯಮದ ಅಭಿವ್ಯಕ್ತಿ ಸ್ಥಳ ಎಂದಿದ್ದಾರೆ ಸಂಸ್ಥಾಪಕ ಪ್ರಕಾಶ್ ರೈ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:37 pm, Sat, 17 June 23

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ