ಶಿಖಂಡಿ ಅಂದ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಸೂರಪ್ಪ ಬಾಬು ಫೈರ್

| Updated By: ಮಂಜುನಾಥ ಸಿ.

Updated on: Jul 23, 2023 | 9:11 PM

Soorappa Babu: ವಿಡಿಯೋ ಒಂದರಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ನಿರ್ಮಾಪಕ ಸೂರಪ್ಪ ಬಾಬು ವಾಗ್ದಾಳಿ ನಡೆಸಿದ್ದಾರೆ.

ಶಿಖಂಡಿ ಅಂದ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಸೂರಪ್ಪ ಬಾಬು ಫೈರ್
ಚಕ್ರವರ್ತಿ ಚಂದ್ರಚೂಡ್
Follow us on

ಸುದೀಪ್ (Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ (MN Kumar) ವಿವಾದದ ನಡುವೆ ಸೂರಪ್ಪ ಬಾಬು ಎಂಟ್ರಿ ಆಗಿದ್ದಾರೆ. ಎಂಎನ್ ಕುಮಾರ್, ಸುದೀಪ್ ವಿರುದ್ಧ ಆರೋಪ ಮಾಡಿದ ಬಳಿಕ ಸುದೀಪ್ ಪರವಾಗಿ ಸುದ್ದಿಗೋಷ್ಠಿ ನಡೆಸಿದ್ದ ಅವರ ಆಪ್ತರಾದ ಜಾಕ್ ಮಂಜು ಹಾಗೂ ಚಕ್ರವರ್ತಿ ಚಂದ್ರಚೂಡ್, ಎಂಎನ್ ಕುಮಾರ್ ಮಾಡಿದ್ದ ಆರೋಪಗಳಿಗೆ ಉತ್ತರ ನೀಡುವ ಜೊತೆಗೆ, ಈ ಪ್ರಕರಣದ ಹಿಂದೆ ನಿರ್ಮಾಪಕ ಸೂರಪ್ಪ ಬಾಬು ಕೈವಾಡವಿದೆ ಎಂದಿದ್ದರು. ಆ ಬಳಿಕ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಸೂರಪ್ಪ ಬಾಬು (Soorappa Babu) ಅವರನ್ನು ಶಿಖಂಡಿ ಎಂದು ಜರಿದು ಹಲವು ಆರೋಪಗಳನ್ನು ಮಾಡಿದ್ದರು.

ಇಂದು (ಜುಲೈ 23) ಸುದ್ದಿಗೋಷ್ಠಿ ಕರೆದಿದ್ದ ನಿರ್ಮಾಪಕ ಸೂರಪ್ಪ ಬಾಬು, ”ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಮಾತನಾಡಲು ಅವನಿಗೇನು ಹಕ್ಕಿದೆ. ಯಾವುದೇ ಹಕ್ಕಿಲ್ಲದೇ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ, ನಾನು ಉತ್ತರ ಕೊಡಬೇಕಾಗಿರೋದು ನನಗೆ ಹಣ ಕೊಟ್ಟವರಿಗೆ ಹಾಗು ನನ್ನ ಮನೆಯವರಿಗೆ. ಸತ್ಯ ಹರಿಶ್ಚಂದ್ರನ ತುಂಡು ಅಂತ ಅಂದ್ಕೊಂಡಿದ್ದಾರಾ ನನ್ನ ಶಿಖಂಡಿ ಅಂತ ಹೇಳ್ತಿದ್ದಾರೆ, ನನಗೆ ಹೆಂಡತಿ ಇದ್ದಾರೆ, ನನಗೆ ಇಬ್ಬರು ಮಕ್ಕಳು ಇದ್ದಾರೆ, 34 ವರ್ಷ ಆಯ್ತು ಇಂಡಸ್ಡ್ರಿಗೆ ಬಂದು” ಎಂದು ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಸೂರಪ್ಪ ಬಾಬು ಅಬ್ಬರಿಸಿದ್ದಾರೆ.

”ಯಾವ ನಟರಿಗೆ ಅನ್ಯಾಯ ಮಾಡಿದ್ದೀನಿ ತಾಕತ್ ಇದ್ದರೆ ಹೆಸರು ಬಹಿರಂಗಗೊಳಿಸಲಿ. ಹೆಸರು ಮುಚ್ಚಿಟ್ಟು ಮಾತನಾಡುವುದರಲ್ಲಿ ಏನಿದೆ. ವರ್ಷಾನುಗಟ್ಟಲೆಗಳಿಂದ ಚಿತ್ರರಂಗದಲ್ಲಿದ್ದೀನಿ. ಹಲವಾರು ನಟರೊಟ್ಟಿಗೆ ಸಿನಿಮಾ ಮಾಡಿದ್ದೇನೆ. ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದೇನೆ. ಒಂದೇ ನಟರೊಟ್ಟಿಗೆ ಹಲವು ಸಿನಿಮಾಗಳನ್ನು ಮಾಡಿದ್ದೀನಿ. ಈಗ ಮೂರು ಸಿನಿಮಾ ಮಾಡುತ್ತಿದ್ದೀನಿ. ಡೇಟ್ಸ್ ಸಿಕ್ಕರೆ ಇನ್ನೂ ಆರು ಜನ ಸ್ಟಾರ್ ನಟರೊಟ್ಟಿಗೆ ಸಿನಿಮಾ ಮಾಡುತ್ತೀನಿ” ಎಂದಿದ್ದಾರೆ ಸೂರಪ್ಪ ಬಾಬು.

ಇದನ್ನೂ ಓದಿ:ಸೂರಪ್ಪ ಬಾಬು ಸುದೀಪ್​ಗೆ 7.50 ಕೋಟಿ ಹಣ ಬಾಕಿ ಕೊಡಬೇಕು, ಅವರೇ ಎಲ್ಲದಕ್ಕೂ ಕಾರಣ: ಚಂದ್ರಚೂಡ್

”75 ರೂಪಾಯಿಗೆ ಕಾಫಿ ಸಪ್ಲೈ ಮಾಡುವ ಆಫೀಸ್ ಬಾಯ್ ಆಗಿದ್ದೆ. ಈಗ 65-70 ಕೋಟಿ ರೂಪಾಯಿ ಮೌಲ್ಯದ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದಿದ್ದೇನೆ. ವೀರಾಸ್ವಾಮಿ ಅವರೂ ಸಹ ಯಾವುದೋ ಆಫೀಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಅವರು ದೊಡ್ಡ-ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ನಾನು ಬೆಳೆದು ಬಂದ ದಾರಿಯೂ ಹಾಗೆಯೇ ಇದೆ” ಎಂದಿದ್ದಾರೆ.

”ಕುಮಾರ್ ನನಗಿಂತ ಸೀನಿಯರ್. ಅವರಿಗೆ ಅವಶ್ಯಕತೆ ಇದ್ದಾಗ ಸಲಹೆ ಕೊಟ್ಟಿದ್ದೇನೆ. ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ತಡೆದಿದ್ದೀನಿ. ಅವರು ನನ್ನ ಹಳೆಯ ಗೆಳೆಯರು. ಅವರು ಏನೋ ಮಾತನಾಡಿದ್ದಕ್ಕೆ ನಾನು ಹೇಗೆ ಕಾರಣ ಆಗ್ತೀನಿ? ಕುಮಾರ್ ವಿಷಯ ಇತ್ಯರ್ಥ ಮಾಡಿಸಿಕೊಡಿ ಎಂದು ಸುಮಾರು ನಾಲ್ಕು ಮಂದಿಯ ಬಳಿ ನಾನೇ ಕೇಳಿಕೊಂಡಿದ್ದೆ. ಸಾಕಷ್ಟು ನಷ್ಟದಲ್ಲಿ ಕುಮಾರ್ ಇದ್ದ ಹಾಗಾಗಿ ನಾನು ಅವನ ಪರವಾಗಿ ಕೆಲವರನ್ನು ಮನವಿ ಮಾಡಿಕೊಂಡಿದ್ದೇ” ಎಂದಿದ್ದಾರೆ. ಸುದೀಪ್ ಬಗ್ಗೆ ಮಾತನಾಡಿದ ಸೂರಪ್ಪ ಬಾಬು, ”ಸುದೀಪ್ ಬಾಯಲ್ಲಿ ನನ್ನ ಹೆಸರು ಬಂದಿಲ್ಲ. ಮಧ್ಯದಲ್ಲಿ ಇರುವವರು ನನ್ನ ಹಾಗೂ ಸುದೀಪ್ ಮಧ್ಯೆ ಹುಳಿ ಹಿಂಡುವ ಕಾರ್ಯ ಮಾಡುತ್ತಿದ್ದಾರೆ” ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ