AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ ಇಟ್ಟ ಹೆಸರಿನಿಂದ ಹೊಸ ಉದ್ಯಮ ಆರಂಭಿಸಿದ ಅಪ್ಪು ಪುತ್ರಿ

Puneeth Rajkumar daughter's new business: ಪುನೀತ್ ರಾಜ್​​ಕುಮಾರ್ ಅವರ ಪುತ್ರಿ ಉದ್ಯಮಕ್ಕೆ ಕಾಲಿರಿಸಿದ್ದಾರೆ. ಹವ್ಯಾಸವಾಗಿದ್ದ ಬೇಕಿಂಗ್ ಅನ್ನೇ ಉದ್ಯಮವಾಗಿ ಬದಲಾಯಿಸಿಕೊಂಡಿದ್ದಾರೆ. ಇದೀಗ ಅಪ್ಪು ಅವರ ಕಿರಿಯ ಪುತ್ರಿ ವಂದಿತಾ ಅವರು ಹೊಸ ಸಣ್ಣ ಬ್ಯುಸಿನೆಸ್ ಆರಂಭ ಮಾಡಿದ್ದಾರೆ. ಅಷ್ಟಕ್ಕೂ ಆ ಉದ್ಯಮ ಯಾವುದು? ಇಲ್ಲಿದೆ ಮಾಹಿತಿ....

ಅಪ್ಪ ಇಟ್ಟ ಹೆಸರಿನಿಂದ ಹೊಸ ಉದ್ಯಮ ಆರಂಭಿಸಿದ ಅಪ್ಪು ಪುತ್ರಿ
Vanditha
ಮಂಜುನಾಥ ಸಿ.
|

Updated on:Jul 16, 2026 | 9:52 AM

Share

ಪುನೀತ್ ರಾಜ್​ಕುಮಾರ್ (Puneeth Rajkumar) ಅವರಿಗೆ ಉದ್ಯಮಗಳ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ನಟರಾಗಿರುವ ಜೊತೆಗೆ ನಿರ್ಮಾಣ ಮತ್ತು ಸಂಗೀತ ಕ್ಷೇತ್ರದಲ್ಲಿ ಉದ್ಯಮವನ್ನು ಪುನೀತ್ ನಡೆಸುತ್ತಿದ್ದರು. ಜೊತೆಗೆ ಇತರೆ ಕೆಲವು ಉದ್ಯಮಗಳ ಮೇಲೂ ಸಹ ಅವರು ಹೂಡಿಕೆ ಮಾಡಿದ್ದರು. ಮಾತ್ರವಲ್ಲದೆ, ಅವರ ಅತ್ತಿಗೆ, ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಬೇಕಿಂಗ್ ಉದ್ಯಮ ಆರಂಭಿಸುವಂತೆ ಅಪ್ಪು ತಮಗೆ ಹೇಳುತ್ತಿದ್ದುದಾಗಿ ಹಿಂದೆ ಹೇಳಿಕೊಂಡಿದ್ದರು. ಆದರೆ ಇದೀಗ ಪುನೀತ್ ರಾಜ್​​ಕುಮಾರ್ ಅವರ ಪುತ್ರಿಯೇ ಹೊಸ ಉದ್ಯಮ ಆರಂಭ ಮಾಡಿದ್ದಾರೆ. ಅದೂ ಅಪ್ಪ ತಮಗೆ ಇಟ್ಟ ಹೆಸರಿನಿಂದಲೇ ಉದ್ಯಮ ಆರಂಭಿಸಿರುವುದು ವಿಶೇಷ.

ಪುನೀತ್ ರಾಜ್​​ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ಅವರು ಬೇಕಿಂಗ್ ಉದ್ಯಮ ಆರಂಭಿಸಿದ್ದಾರೆ. ದೊಡ್ಡಮ್ಮ ಗೀತಾ ಶಿವರಾಜ್ ಕುಮಾರ್ ರೀತಿಯಲ್ಲಿಯೇ ವಂದಿತಾ ಅವರಿಗೂ ಸಹ ಬೇಕಿಂಗ್ ಬಗ್ಗೆ ಸಾಕಷ್ಟು ಆಸಕ್ತಿ ಮತ್ತು ನಿಪುಣತೆಯೂ ಇದೆ. ಹಾಗಾಗಿ ಇದೀಗ ಅವರೇ ಖುದ್ದು ಬೇಕಿಂಗ್ ಉದ್ಯಮಕ್ಕೆ ಕಾಲಿರಿಸಿದ್ದು, ಸಣ್ಣದಾಗಿ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ. ಅದಕ್ಕೆ ‘ನುಕಾಸ್ ಕೆಫೆ’ ಎಂದು ಹೆಸರಿಟ್ಟಿದ್ದಾರೆ. ಅಂದಹಾಗೆ ನುಕಾ ಎಂಬುದು, ವಂದಿತಾರನ್ನು ಅಪ್ಪು ಅವರು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು.

ಕೇಕು, ಬಿಸ್ಕೆಟ್ಟುಗಳು ಸೇರಿದಂತೆ ಇನ್ನೂ ಹಲವು ಬೇಕ್ಡ್ ಐಟಂಗಳನ್ನು ವಂದಿತಾ ಮಾರಾಟ ಮಾಡುತ್ತಿದ್ದಾರೆ. ಆನ್​​ಲೈನ್ ಮೂಲಕ ಆರ್ಡರ್ ಮಾಡಿ ಖಾಸ್ಯಗಳನ್ನು ಖರೀದಿ ಮಾಡಬಹುದಾಗಿದೆ. ಕೆಫೆಗಾಗಿ ವಿಶೇಷ ವೆಬ್​​ಸೈಟ್ ಅನ್ನು ಸಹ ವಂದಿತಾ ಮಾಡಿಸಿದ್ದಾರೆ. ಖುದ್ದು ಅವರೇ ಮನೆಯಲ್ಲಿ ಖಾದ್ಯ ತಯಾರಿಸಿ ಅದನ್ನು ಆನ್​​ಲೈನ್​​ನಲ್ಲಿ ಮಾರಾಟ ಮಾಡುತ್ತಾರೆ ವಂದಿತಾ. ತಾವು ಒಬ್ಬರೇ ಈ ಖಾದ್ಯಗಳನ್ನು ತಯಾರಿಸುವ ಕಾರಣ, ಕೆಲವೊಮ್ಮೆ ಆರ್ಡರ್ ಹೆಚ್ಚಾದಾಗ ಡೆಲಿವರಿ ತಡ ಆಗಬಹುದು ಎಂದು ತಮ್ಮ ವೆಬ್​​ಸೈಟ್​​ನಲ್ಲಿ ಅವರು ಮೊದಲೇ ಹೇಳಿಬಿಟ್ಟಿದ್ದಾರೆ.

ಇದನ್ನೂ ಓದಿ:ಶಾಲಾ ಪಠ್ಯಪುಸ್ತಕದಲ್ಲಿ ಇರಲಿದೆ ಪುನೀತ್ ರಾಜ್​ಕುಮಾರ್ ಜೀವನದ ಪಾಠ

ವಂದಿತಾ ಅವರು ತಮ್ಮ ಪ್ರೀತಿ ಪಾತ್ರರಿಗೆ, ಆಪ್ತರಿಗಾಗಿ ಕೇಕು ಇನ್ನಿತರೆ ಖಾದ್ಯಗಳನ್ನು ತಯಾರಿಸುತ್ತಿದ್ದರಂತೆ. ಇತ್ತೀಚೆಗಷ್ಟೆ ತಮ್ಮ ಸಹೋದರ ವಿನಯ್ ರಾಜ್​ಕುಮಾರ್ ಅವರ ‘ಗ್ರಾಮಾಯಣ’ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ವಂದಿತಾ ಅವರು ಅಣ್ಣನಿಗಾಗಿ ವಿಶೇಷ ಕೇಕ್ ತಯಾರಿಸಿದ್ದರು. ಅದರ ಮೇಲೆ ‘ಗ್ರಾಮಾಯಣ’ ಎಂದು ಸಹ ಬರೆದಿದ್ದರು. ಈ ಹವ್ಯಾಸವನ್ನೇ ಈಗ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ.

ಬೇಕಿಂಗ್ ಎಂಬುದು ವಂದಿತಾ ಅವರಿಗೆ ಹವ್ಯಾಸ ಆಗಿತ್ತಂತೆ ಈಗ ಹವ್ಯಾಸವನ್ನೇ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ತಿರಮಿಸು, ಥರಹೇವಾರಿ ಕೇಕುಗಳು, ಬಿಸ್ಟೆಟ್ಟುಗಳು, ಬ್ರೆಡ್, ಬ್ರೌನಿ, ಚೀಸ್​ ಕೇಕ್, ಕಪ್ ಕೇಕ್ ಇನ್ನೂ ಹಲವು ಖಾದ್ಯಗಳನ್ನು ವಂದಿತಾ ರೆಡಿ ಮಾಡಿ ಗ್ರಾಹಕರು ಮನೆಗಳಿಗೆ ಕಳಿಸಿಕೊಡುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:48 am, Thu, 16 July 26

Follow Us
ಪಾವಗಡ - ಆಂಧ್ರ ಪ್ರದೇಶ ಗಡಿಯಲ್ಲಿ ಕೋವಿಡ್ ಚೆಕ್​ಪೋಸ್ಟ್: ತಪಾಸಣೆ ಶುರು
ಪಾವಗಡ - ಆಂಧ್ರ ಪ್ರದೇಶ ಗಡಿಯಲ್ಲಿ ಕೋವಿಡ್ ಚೆಕ್​ಪೋಸ್ಟ್: ತಪಾಸಣೆ ಶುರು
ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು
ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು
ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಮೇಷ ಮತ್ತು ವೃಷಭ ರಾಶಿಯವರಿಗೆ ಭಾರಿ ಧನಲಾಭದ ಯೋಗ
ಮೇಷ ಮತ್ತು ವೃಷಭ ರಾಶಿಯವರಿಗೆ ಭಾರಿ ಧನಲಾಭದ ಯೋಗ
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?
ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ
ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ಸಿಎಂ ವಿಜಯ್​ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ
ಸಿಎಂ ವಿಜಯ್​ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ