AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೀವನವನ್ನು ವಿಶೇಷವಾಗಿಸಿದ್ದೀಯಾ, ನಮ್ಮ ನಗುವಿಗೆ ನೀನೇ ಕಾರಣ’; ಮಗಳು ಆಯ್ರಾ ಬಗ್ಗೆ ರಾಧಿಕಾ-ಯಶ್ ವಿಶೇಷ ಮಾತು

Radhika Pandit: ಆಯ್ರಾ ಸೆಲೆಬ್ರಿಟಿ ಕಿಡ್​. ಈ ಕಾರಣಕ್ಕೆ ಅವಳ ಫೋಟೋಗಳನ್ನು ನೋಡೋಕೆ ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಯಶ್​ ಪತ್ನಿ ರಾಧಿಕಾ ಪಂಡಿತ್​ ಆಯ್ರಾ ಹಾಗೂ ಯಥರ್ವ್​ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

‘ಜೀವನವನ್ನು ವಿಶೇಷವಾಗಿಸಿದ್ದೀಯಾ, ನಮ್ಮ ನಗುವಿಗೆ ನೀನೇ ಕಾರಣ’; ಮಗಳು ಆಯ್ರಾ ಬಗ್ಗೆ ರಾಧಿಕಾ-ಯಶ್ ವಿಶೇಷ ಮಾತು
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Sep 26, 2021 | 8:21 PM

Share

ಇಂದು ಮಗಳ ದಿನಾಚರಣೆ. ಈ ವಿಶೇಷ ದಿನದಂದು ಎಲ್ಲ ತಂದೆ-ತಾಯಂದಿರು ತಮ್ಮ ತಮ್ಮ ಮಗಳಿಗೆ ವಿಶೇವಾಗಿ ಶುಭಾಶಯ ಕೋರುತ್ತಿದ್ದಾರೆ. ಅನೇಕ ಸ್ಟಾರ್​ ನಟರು ತಮ್ಮ ಮಗಳ ಫೋಟೋ ಪೋಸ್ಟ್​ ಮಾಡಿ ಶುಭಾಶಯ ಕೋರುತ್ತಿದ್ದಾರೆ. ನಟ ಯಶ್ ಹಾಗೂ ರಾಧಿಕಾ ಪಂಡಿತ್​​ ಕೂಡ ಹೊರತಾಗಿಲ್ಲ. ಇಬ್ಬರೂ ಮಗಳು ಆಯ್ರಾಗೆ ವಿಶೇಷವಾಗಿ ವಿಶ್​ ಮಾಡಿದ್ದಾರೆ. ಅಲ್ಲದೆ, ನಿನ್ನಿಂದ ಜೀವನ ವಿಶೇಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ಅನೇಕರು ಖುಷಿಯಾಗಿದ್ದಾರೆ. ಅಲ್ಲದೆ, ಯಶ್​ ಹಾಗೂ ಆಯ್ರಾ ಫೋಟೋ ನೋಡಿ ಬಾಯ್ತುಂಬ ಹೊಗಳಿದ್ದಾರೆ.

ಆಯ್ರಾ ಸೆಲೆಬ್ರಿಟಿ ಕಿಡ್​. ಈ ಕಾರಣಕ್ಕೆ ಅವಳ ಫೋಟೋಗಳನ್ನು ನೋಡೋಕೆ ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಯಶ್​ ಪತ್ನಿ ರಾಧಿಕಾ ಪಂಡಿತ್​ ಆಯ್ರಾ ಹಾಗೂ ಯಥರ್ವ್​ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಯಶ್​ ಕುಟುಂಬದ ಜತೆ ಹೆಚ್ಚು ಸಮಯ ಕಳೆಯುತ್ತಾರೆ. ಆದರೆ, ಅವರು ಮಕ್ಕಳ ಫೋಟೋ ಪೋಸ್ಟ್​ ಮಾಡುವುದು ಅಪರೂಪ.

ಈಗ ಯಶ್​ ಅವರು ತಮ್ಮ ಮಗಳ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಈ ಮೂಲಕ ಮಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ್ದಾರೆ. ಮಗಳ ಜತೆ ಕುಳಿತಿರುವ ಫೋಟೋವನ್ನು ಯಶ್​ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಯಶ್​ ಅವರನ್ನು ಆಯ್ರಾ ಮುದ್ದಾಗಿ ನೋಡುತ್ತಿದ್ದಾಳೆ. ಈ ಫೋಟೋ ಅನೇಕರಿಗೆ ಇಷ್ಟವಾಗಿದೆ.

‘ನಾನು ನಿನ್ನ ಮಾತನ್ನು ಯಾವಾಗಲೂ ಕೇಳುತ್ತಾ ಇರಬಹುದು. ನೀನು ನಮಗೆ ಸಿಕ್ಕಿದ್ದು ಅದೃಷ್ಟ. ಮಗಳ ದಿನಾಚರಣೆಯ ಶುಭಾಶಯ. ನೀನು ಜೀವನವನ್ನು ವಿಶೇಷವಾಗಿಸಿದ್ದೀಯಾ’ ಎಂದು ಯಶ್​ ಕ್ಯಾಪ್ಶನ್​ ಕೊಟ್ಟಿದ್ದಾರೆ.

View this post on Instagram

A post shared by Yash (@thenameisyash)

ರಾಧಿಕಾ ಪಂಡಿತ್​ ಕೂಡ ಮಗಳ ಜತೆಗಿನ ಫೋಟೋ ಹಾಕಿ, ‘ನಾವೆಲ್ಲರೂ ನಗುತ್ತಿರುವುದಕ್ಕೆ ನೀನು ಕಾರಣ. ಲವ್​ ಯು ಬೆಸ್ಟ್​ ಫ್ರೆಂಡ್​’ ಎಂದು ಬರೆದುಕೊಂಡಿದ್ದಾರೆ.

ಯಶ್​ ‘ಕೆಜಿಎಫ್ ಚಾಪ್ಟರ್​ 2’ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ. ಈ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಗಾಗಿ ಇನ್ನೂ ಹಲವು ತಿಂಗಳು ಕಾಯಬೇಕಿದೆ. ಸ್ಟಾರ್​ ತಾರಾ ವರ್ಗ ಇರುವುದರಿಂದ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಪ್ರಶಾಂತ್​ ನೀಲ್​ ತಮ್ಮ ನಿರ್ದೇಶನದ ಮೂಲಕ ಈಗಾಗಲೇ ಮನೆ ಮಾತಾಗಿದ್ದಾರೆ. ಈಗ ಅವರು ‘ಕೆಜಿಎಫ್​ ಚಾಪ್ಟರ್​ 2’ ಹೇಗೆ ಕಟ್ಟಿಕೊಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ:  ‘ಅವರ ವಯಸ್ಸಿನಲ್ಲಿ ನಾನು ಹೀಗೆ ಇರಲು ಸಾಧ್ಯವೇ?’ ರಾಧಿಕಾ ಪಂಡಿತ್​ಗೆ ಹೀಗೊಂದು ಅನುಮಾನ

ಯಶ್​ಗೆ ಭೀಮನ ಪಾತ್ರ, ಪ್ರಶಾಂತ್​ ನೀಲ್​ ನಿರ್ದೇಶನ; ಹೀಗೊಂದು ನಕಲಿ ಸಿನಿಮಾದ ಟ್ರೇಲರ್​ಗೆ ಲಕ್ಷಾಂತರ ವೀವ್ಸ್​

Published On - 7:46 pm, Sun, 26 September 21

ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ಯಾವ ನೈತಿಕತೆಯೊಂದಿಗೆ ಯತ್ನಾಳ್ ಮಾತಾಡುತ್ತಾರೆ? ಶಿವರಾಜ್ ತಂಗಡಿಗಿ
ಯಾವ ನೈತಿಕತೆಯೊಂದಿಗೆ ಯತ್ನಾಳ್ ಮಾತಾಡುತ್ತಾರೆ? ಶಿವರಾಜ್ ತಂಗಡಿಗಿ