AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೀವನವನ್ನು ವಿಶೇಷವಾಗಿಸಿದ್ದೀಯಾ, ನಮ್ಮ ನಗುವಿಗೆ ನೀನೇ ಕಾರಣ’; ಮಗಳು ಆಯ್ರಾ ಬಗ್ಗೆ ರಾಧಿಕಾ-ಯಶ್ ವಿಶೇಷ ಮಾತು

Radhika Pandit: ಆಯ್ರಾ ಸೆಲೆಬ್ರಿಟಿ ಕಿಡ್​. ಈ ಕಾರಣಕ್ಕೆ ಅವಳ ಫೋಟೋಗಳನ್ನು ನೋಡೋಕೆ ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಯಶ್​ ಪತ್ನಿ ರಾಧಿಕಾ ಪಂಡಿತ್​ ಆಯ್ರಾ ಹಾಗೂ ಯಥರ್ವ್​ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

‘ಜೀವನವನ್ನು ವಿಶೇಷವಾಗಿಸಿದ್ದೀಯಾ, ನಮ್ಮ ನಗುವಿಗೆ ನೀನೇ ಕಾರಣ’; ಮಗಳು ಆಯ್ರಾ ಬಗ್ಗೆ ರಾಧಿಕಾ-ಯಶ್ ವಿಶೇಷ ಮಾತು
TV9 Web
| Edited By: |

Updated on:Sep 26, 2021 | 8:21 PM

Share

ಇಂದು ಮಗಳ ದಿನಾಚರಣೆ. ಈ ವಿಶೇಷ ದಿನದಂದು ಎಲ್ಲ ತಂದೆ-ತಾಯಂದಿರು ತಮ್ಮ ತಮ್ಮ ಮಗಳಿಗೆ ವಿಶೇವಾಗಿ ಶುಭಾಶಯ ಕೋರುತ್ತಿದ್ದಾರೆ. ಅನೇಕ ಸ್ಟಾರ್​ ನಟರು ತಮ್ಮ ಮಗಳ ಫೋಟೋ ಪೋಸ್ಟ್​ ಮಾಡಿ ಶುಭಾಶಯ ಕೋರುತ್ತಿದ್ದಾರೆ. ನಟ ಯಶ್ ಹಾಗೂ ರಾಧಿಕಾ ಪಂಡಿತ್​​ ಕೂಡ ಹೊರತಾಗಿಲ್ಲ. ಇಬ್ಬರೂ ಮಗಳು ಆಯ್ರಾಗೆ ವಿಶೇಷವಾಗಿ ವಿಶ್​ ಮಾಡಿದ್ದಾರೆ. ಅಲ್ಲದೆ, ನಿನ್ನಿಂದ ಜೀವನ ವಿಶೇಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ಅನೇಕರು ಖುಷಿಯಾಗಿದ್ದಾರೆ. ಅಲ್ಲದೆ, ಯಶ್​ ಹಾಗೂ ಆಯ್ರಾ ಫೋಟೋ ನೋಡಿ ಬಾಯ್ತುಂಬ ಹೊಗಳಿದ್ದಾರೆ.

ಆಯ್ರಾ ಸೆಲೆಬ್ರಿಟಿ ಕಿಡ್​. ಈ ಕಾರಣಕ್ಕೆ ಅವಳ ಫೋಟೋಗಳನ್ನು ನೋಡೋಕೆ ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಯಶ್​ ಪತ್ನಿ ರಾಧಿಕಾ ಪಂಡಿತ್​ ಆಯ್ರಾ ಹಾಗೂ ಯಥರ್ವ್​ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಯಶ್​ ಕುಟುಂಬದ ಜತೆ ಹೆಚ್ಚು ಸಮಯ ಕಳೆಯುತ್ತಾರೆ. ಆದರೆ, ಅವರು ಮಕ್ಕಳ ಫೋಟೋ ಪೋಸ್ಟ್​ ಮಾಡುವುದು ಅಪರೂಪ.

ಈಗ ಯಶ್​ ಅವರು ತಮ್ಮ ಮಗಳ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಈ ಮೂಲಕ ಮಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ್ದಾರೆ. ಮಗಳ ಜತೆ ಕುಳಿತಿರುವ ಫೋಟೋವನ್ನು ಯಶ್​ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಯಶ್​ ಅವರನ್ನು ಆಯ್ರಾ ಮುದ್ದಾಗಿ ನೋಡುತ್ತಿದ್ದಾಳೆ. ಈ ಫೋಟೋ ಅನೇಕರಿಗೆ ಇಷ್ಟವಾಗಿದೆ.

‘ನಾನು ನಿನ್ನ ಮಾತನ್ನು ಯಾವಾಗಲೂ ಕೇಳುತ್ತಾ ಇರಬಹುದು. ನೀನು ನಮಗೆ ಸಿಕ್ಕಿದ್ದು ಅದೃಷ್ಟ. ಮಗಳ ದಿನಾಚರಣೆಯ ಶುಭಾಶಯ. ನೀನು ಜೀವನವನ್ನು ವಿಶೇಷವಾಗಿಸಿದ್ದೀಯಾ’ ಎಂದು ಯಶ್​ ಕ್ಯಾಪ್ಶನ್​ ಕೊಟ್ಟಿದ್ದಾರೆ.

View this post on Instagram

A post shared by Yash (@thenameisyash)

ರಾಧಿಕಾ ಪಂಡಿತ್​ ಕೂಡ ಮಗಳ ಜತೆಗಿನ ಫೋಟೋ ಹಾಕಿ, ‘ನಾವೆಲ್ಲರೂ ನಗುತ್ತಿರುವುದಕ್ಕೆ ನೀನು ಕಾರಣ. ಲವ್​ ಯು ಬೆಸ್ಟ್​ ಫ್ರೆಂಡ್​’ ಎಂದು ಬರೆದುಕೊಂಡಿದ್ದಾರೆ.

ಯಶ್​ ‘ಕೆಜಿಎಫ್ ಚಾಪ್ಟರ್​ 2’ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ. ಈ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಗಾಗಿ ಇನ್ನೂ ಹಲವು ತಿಂಗಳು ಕಾಯಬೇಕಿದೆ. ಸ್ಟಾರ್​ ತಾರಾ ವರ್ಗ ಇರುವುದರಿಂದ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಪ್ರಶಾಂತ್​ ನೀಲ್​ ತಮ್ಮ ನಿರ್ದೇಶನದ ಮೂಲಕ ಈಗಾಗಲೇ ಮನೆ ಮಾತಾಗಿದ್ದಾರೆ. ಈಗ ಅವರು ‘ಕೆಜಿಎಫ್​ ಚಾಪ್ಟರ್​ 2’ ಹೇಗೆ ಕಟ್ಟಿಕೊಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ:  ‘ಅವರ ವಯಸ್ಸಿನಲ್ಲಿ ನಾನು ಹೀಗೆ ಇರಲು ಸಾಧ್ಯವೇ?’ ರಾಧಿಕಾ ಪಂಡಿತ್​ಗೆ ಹೀಗೊಂದು ಅನುಮಾನ

ಯಶ್​ಗೆ ಭೀಮನ ಪಾತ್ರ, ಪ್ರಶಾಂತ್​ ನೀಲ್​ ನಿರ್ದೇಶನ; ಹೀಗೊಂದು ನಕಲಿ ಸಿನಿಮಾದ ಟ್ರೇಲರ್​ಗೆ ಲಕ್ಷಾಂತರ ವೀವ್ಸ್​

Published On - 7:46 pm, Sun, 26 September 21

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?