Dwarakish: ‘ದ್ವಾರಕೀಶ್​ ನಿಧನದಿಂದ ತೀವ್ರ ನೋವಾಗಿದೆ’: ಕಂಬನಿ ಮಿಡಿದ ರಜನಿಕಾಂತ್​

ಸ್ಟಾರ್​ ನಟ ರಜನಿಕಾಂತ್​ ಮತ್ತು ದ್ವಾರಕೀಶ್​ ಅವರ ನಡುವೆ ಉತ್ತಮ ಒಡನಾಟ ಇತ್ತು. ರಜನಿಕಾಂತ್​ ಅಭಿನಯಿಸಿದ್ದ ‘ಅಡುತ ವಾರಿಸು’ ಚಿತ್ರಕ್ಕೆ ದ್ವಾರಕೀಶ್​ ಬಂಡವಾಳ ಹೂಡಿದ್ದರು. 1983ರಲ್ಲಿ ಆ ಸಿನಿಮಾ ಬಿಡುಗಡೆ ಆಗಿತ್ತು. ಇಂದು (ಏ.16) ಅಗಲಿದ ತಮ್ಮ ಗೆಳೆಯನಿಗೆ ರಜನಿಕಾಂತ್​ ಸಂತಾಪ ಸೂಚಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Dwarakish: ‘ದ್ವಾರಕೀಶ್​ ನಿಧನದಿಂದ ತೀವ್ರ ನೋವಾಗಿದೆ’: ಕಂಬನಿ ಮಿಡಿದ ರಜನಿಕಾಂತ್​
ರಜನಿಕಾಂತ್​, ದ್ವಾರಕೀಶ್​

Updated on: Apr 16, 2024 | 4:13 PM

ಖ್ಯಾತ ನಟ ದ್ವಾರಕೀಶ್​ ಅವರ ನಿಧನಕ್ಕೆ (Dwarakish Death) ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯಲ್ಲೂ ದ್ವಾರಕೀಶ್​ ಅವರು ಕೆಲಸ ಮಾಡಿದ್ದರು. ನಿರ್ಮಾಪಕನಾಗಿ ಅವರು ಸಾಕಷ್ಟು ಖ್ಯಾತಿ ಹೊಂದಿದ್ದರು. ಸೂಪರ್​ ಸ್ಟಾರ್​ ರಜನಿಕಾಂತ್​ ಜೊತೆಗೂ ದ್ವಾರಕೀಶ್​ (Dwarakish) ಅವರು ಸಿನಿಮಾ ಮಾಡಿದ್ದರು. ಇಂದು (ಏಪ್ರಿಲ್​ 16) ದ್ವಾರಕೀಶ್​ ನಿಧನಕ್ಕೆ ರಜನಿಕಾಂತ್​ (Rajinikanth) ಸಂತಾಪ ಸೂಚಿಸಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಗಲಿದ ಗೆಳೆಯನ ಆತ್ಮಕ್ಕೆ ರಜನಿಕಾಂತ್​ ಶಾಂತಿಕೋರಿದ್ದಾರೆ.

‘ನನ್ನ ಆತ್ಮೀಯ ಗೆಳೆಯ ದ್ವಾರಕೀಶ್​ ನಿಧನದಿಂದ ನನಗೆ ತೀವ್ರ ನೋವಾಗಿದೆ. ಹಾಸ್ಯನಟನಾಗಿ ಅವರು ವೃತ್ತಿಜೀವನ ಆರಂಭಿಸಿದ್ದರು. ನಂತರ ದೊಡ್ಡ ನಿರ್ಮಾಪಕನಾಗಿ, ನಿರ್ದೇಶಕನಾಗಿ ಬೆಳೆದು ನಿಂತರು. ಆ ಎಲ್ಲ ಸಂಗತಿಗಳು ಈಗ ನೆನಪಾಗುತ್ತಿವೆ. ಅವರ ಆಪ್ತರು ಮತ್ತು ಕುಟುಂಬದವರಿಗೆ ನನ್ನ ಸಂತಾಪಗಳು’ ಎಂದು ರಜನಿಕಾಂತ್​ ಅವರು ‘ಎಕ್ಸ್​’ (ಟ್ವಿಟರ್​) ಮೂಲಕ ಬರೆದುಕೊಂಡಿದ್ದಾರೆ.

ರಜನಿಕಾಂತ್​ ‘ಎಕ್ಸ್​’ (ಟ್ವಿಟರ್​) ಪೋಸ್ಟ್​:

ರಜನಿಕಾಂತ್​ ಮತ್ತು ದ್ವಾರಕೀಶ್​ ನಡುವೆ ಒಳ್ಳೆಯ ಒಡನಾಟ ಇತ್ತು. ರಜನಿ ನಟಿಸಿದ್ದ ‘ಅಡುತ ವಾರಿಸು’ ಸಿನಿಮಾವನ್ನು ದ್ವಾರಕೀಶ್​ ಅವರು ನಿರ್ಮಾಣ ಮಾಡಿದ್ದರು. ಆ ಸಿನಿಮಾ 1983ರಲ್ಲಿ ಬಿಡುಗಡೆ ಆಗಿತ್ತು. ಶ್ರೀದೇವಿ ಕೂಡ ಆ ಚಿತ್ರದಲ್ಲಿ ಅಭಿನಯಿಸಿದ್ದರು. ಇಂದು ತಮ್ಮ ಗೆಳೆಯನ ಅಗಲಿಕೆಗೆ ರಜನಿಕಾಂತ್​ ಅವರು ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಅನೇಕ ನಟ-ನಟಿಯರು, ತಂತ್ರಜ್ಞರು ದ್ವಾರಕೀಶ್​ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಅಣ್ಣಾವ್ರಿಗೆ 2 ಸಿನಿಮಾ ಮಾತ್ರ ನಿರ್ಮಿಸಿದ ದ್ವಾರಕೀಶ್; ವಿಷ್ಣು ಜತೆ ಹಲವು ಚಿತ್ರ ಮಾಡಿದ್ದೇಕೆ?

ಬುಧವಾರ (ಏಪ್ರಿಲ್​ 17) ಬೆಳಗ್ಗೆ 7 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ದ್ವಾರಕೀಶ್​ ಅವರ ಪಾರ್ಥಿವ ಶರೀರ ಇಡಲಾಗುವುದು. 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. 11 ಗಂಟೆ ಬಳಿಕ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂಬ ಮಾಹಿತಿ ಇದೆ. ‘ದ್ವಾರಕೀಶ್​ ಚಿತ್ರ’ ಸಂಸ್ಥೆಯ ಮೂಲಕ 50ಕ್ಕೂ ಅಧಿಕ ಸಿನಿಮಾಗಳನ್ನು ದ್ವಾರಕೀಶ್​ ಅವರು ನಿರ್ಮಾಣ ಮಾಡಿದ್ದರು. ಆ ಮೂಲಕ ಅನೇಕರಿಗೆ ಅವಕಾಶ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us