‘ನಾನು ಎಮ್ಮೆ ಕಾದವನು ಎಂಎ ಮಾಡಿದವನಲ್ಲ, ನನಗೇಕೆ ಡಾಕ್ಟರೇಟ್’ ಎಂದು ಕೇಳಿದ್ದ ರಾಜ್​ಕುಮಾರ್

ರಾಜ್​ಕುಮಾರ್ ಅವರಿಗೆ ಸಿಕ್ಕ ಗೌರವಗಳು ಹಲವು. ಅವರಿಗೆ ಪದ್ಮ ಭೂಷಣ, ದಾದಾ ಸಾಹೇಬ್ ಫಾಲ್ಕೆ ರೀತಿಯ ಗೌರವಗಳು ಸಂದಾಯ ಆಗಿವೆ. ಇದರ ಜೊತೆಗೆ ಮೈಸೂರು ವಿಶ್ವವಿದ್ಯಾ ನಿಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿತ್ತು.ಈ ಬಗ್ಗೆ ಅವರು ಒಮ್ಮೆ ಮಾತನಾಡಿದ್ದರು.

‘ನಾನು ಎಮ್ಮೆ ಕಾದವನು ಎಂಎ ಮಾಡಿದವನಲ್ಲ, ನನಗೇಕೆ ಡಾಕ್ಟರೇಟ್’ ಎಂದು ಕೇಳಿದ್ದ ರಾಜ್​ಕುಮಾರ್
ರಾಜ್​ಕುಮಾರ್
Follow us
| Updated By: ರಾಜೇಶ್ ದುಗ್ಗುಮನೆ

Updated on: Oct 09, 2024 | 7:58 AM

ರಾಜ್​ಕುಮಾರ್ ಕೇವಲ ರಾಜ್​​ಕುಮಾರ್ ಅಲ್ಲ. ಅವರು ವರನಟ ಡಾಕ್ಟರ್ ರಾಜ್​ಕುಮಾರ್. ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ನೀಡಿ ಗೌರವಿಸಿದೆ. ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದರೂ ರಾಜ್​ಕುಮಾರ್​ಗೆ ಅಹಂ ಇರಲಿಲ್ಲ. ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದರು. ಅವರು ಒಮ್ಮೆ ತಮಗೆ ಸಿಕ್ಕ ಗೌರವ ಡಾಕ್ಟರೇಟ್ ಬಗ್ಗೆ ಮಾತನಾಡಿದ್ದರು. ಅದನ್ನು ನನಗೇಕೇ ನೀಡಿದಿರಿ ಎಂದು ವಿಶ್ವ ವಿದ್ಯಾನಿಲಯದವರಿಗೆ ಕೇಳಿದ್ದರಂತೆ.

ರಾಜ್​ಕುಮಾರ್ ಅವರಿಗೆ ಸಿಕ್ಕ ಗೌರವಗಳು ಹಲವು. ಅವರಿಗೆ ಪದ್ಮ ಭೂಷಣ, ದಾದಾ ಸಾಹೇಬ್ ಫಾಲ್ಕೆ ರೀತಿಯ ಗೌರವಗಳು ಸಂದಾಯ ಆಗಿವೆ. ಇದರ ಜೊತೆಗೆ ಮೈಸೂರು ವಿಶ್ವವಿದ್ಯಾ ನಿಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿತ್ತು. ಇದನ್ನು ರಾಜ್​ಕುಮಾರ್ ಅವರು ಪ್ರೀತಿಯಿಂದ ಸ್ವೀಕರಿಸಿದ್ದರು. ಅವರು ಒಮ್ಮೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಈ ಬಗ್ಗೆ ಮಾತನಾಡಿದ್ದರು.

‘ನಾನು ವಿದ್ಯಾವಂತವನಲ್ಲ. ಡಿಗ್ರೀ ಪಡೆದವನಲ್ಲ. ಮೈಸೂರು ವಿಶ್ವವಿದ್ಯಾನಿಲಯದವರು ನನಗೆ ಡಾಕ್ಟರೇಟ್ ಕೊಟ್ಟರು. ಅಲ್ಲಿಯೇ ನಾನು ಕೇಳಿದೆ, ಏನು ನೋಡಿ ನನಗೆ ಡಾಕ್ಟರೇಟ್ ಕೊಡ್ತಿದೀರಿ ಎಂದು ಕೇಳಿದ್ದೆ. ನಾನು ಎಂಎ ಪಾಸ್ ಮಾಡಿದ್ದೀನಾ? ಹಳ್ಳಿಯಲ್ಲಿದ್ದಾಗ ಎಮ್ಮೆ ಮೇಯಿಸುತ್ತಿದ್ದೆ ಎಂದೆ ಎಂಬುದಾಗಿ ಅವರಿಗೆ ಹೇಳಿದ್ದೆ’ ಎಂದಿದ್ದರು ಅವರು.

ರಾಜ್​ಕುಮಾರ್ ಅವರಿಗೆ ರಸಿಕರ ರಾಜ ಎನ್ನುವ ಬಿರುದು ಕೂಡ ಇದೆ. ಈ ಬಗ್ಗೆಯೂ ಮಾತನಾಡಿದ್ದರು. ‘ರಸಿಕರಿಗೆ ನಾನು ರಾಜನಂತೆ. ಎಲ್ಲಾ ನೀವು ಕೊಟ್ಟ ಹೆಸರು, ಎಲ್ಲಾ ನೀವು ಕೊಟ್ಟ ಆಸ್ತಿ, ನೀವು ಕೊಟ್ಟ ಕರುಣೆ. ಇದರ ವಿನಃ ರಾಜ್​ಕುಮಾರ್​ಗೆ ಏನು ಗೊತ್ತಾಗಲು ಸಾಧ್ಯವಿಲ್ಲ’ ಎಂದು ರಾಜ್​ಕುಮಾರ್ ಅವರು ಈ ಮೊದಲು ಹೇಳಿದ್ದರು.

ರಾಜ್​ಕುಮಾರ್ ಅವರು ಸರಳತೆಗೆ ಮತ್ತೊಂದು ಹೆಸರು ಆಗಿದ್ದರು. ಅವರು ಯಾವಾಗಲೂ ಬಿಳಿ ಶರ್ಟ್​, ಬಿಳಿ ಪಂಚೆ ಧರಿಸುತ್ತಿದ್ದರು. ಅಭಿಮಾನಿಗಳನ್ನು ಕಂಡರೆ ಅವರು ತೋರಿಸುತ್ತಿದ್ದ ಪ್ರೀತಿ ಅಪಾರ. ಅವರ ಮನೆಗೆ ಯಾರೇ ಬಂದರೂ ರಾಜ್​ಕುಮಾರ್ ಅತಿಯಾಗಿ ಗೌರವಿಸುತ್ತಿದ್ದರು.

ಇದನ್ನೂ ಓದಿ: ವೀರಪ್ಪನ್ ಜೊತೆ ಇದ್ದು ಮರಳಿ ಬಂದಾಗ ರಾಜ್​ಕುಮಾರ್​ಗೆ ಸಿಕ್ಕ ಸ್ವಾಗತ ಹೇಗಿತ್ತು? ಇಲ್ಲಿದೆ ಹಳೆಯ ವಿಡಿಯೋ

ರಾಜ್​ಕುಮಾರ್ ಅವರು ಜನಿಸಿದ್ದು 1929ರಲ್ಲಿ. ಮರಣ ಹೊಂದಿದ್ದು 2006ರಲ್ಲಿ. ಅವರ ಸರಳತೆ ಈಗಲೂ ಅನೇಕರಿಗೆ ಮಾದರಿ. ಅವರ ಮಾತುಗಳಲ್ಲಿ ಎಂದಿಗೂ ಗರ್ವ ಕಾಣಿಸಿಲ್ಲ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಅವರ ಸಿನಿಮಾಗಳು ಈಗಲೂ ಅನೇಕರಿಗೆ ಆದರ್ಶದಾಯಕವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನವರಾತ್ರಿಯ 7ನೇ ದಿನ ಕಾಲರಾತ್ರಿ ದೇವಿ ಆರಾಧನೆಯ ಮಹತ್ವ ತಿಳಿಯಿರಿ
ನವರಾತ್ರಿಯ 7ನೇ ದಿನ ಕಾಲರಾತ್ರಿ ದೇವಿ ಆರಾಧನೆಯ ಮಹತ್ವ ತಿಳಿಯಿರಿ
ನವರಾತ್ರಿ 7ನೇ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ನವರಾತ್ರಿ 7ನೇ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ
ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್