AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಬ್ ಶೆಟ್ಟಿ ತಮಿಳು ಚಿತ್ರರಂಗಕ್ಕೆ ಹೊರಟು ಹೋಗಲು ನಿರ್ಧರಿಸಿದ್ದ: ರಕ್ಷಿತ್ ಶೆಟ್ಟಿ

Rishab Shetty: ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರದಾದ್ಯಂತ ಮನ್ನಣೆ ತಂದುಕೊಟ್ಟ ವ್ಯಕ್ತಿ. ಮಾತ್ರವಲ್ಲದೆ, ಪಂಚೆ ತೊಟ್ಟುಕೊಂಡು ಓಡಾಡುತ್ತಾ, ಕನ್ನಡತನವನ್ನು ಹೋದಲ್ಲೆಲ್ಲ ಪಸರಿಸುತ್ತಿದ್ದಾರೆ. ಇಂತಿಪ್ಪ ರಿಷಬ್ ಶೆಟ್ಟಿ, ಒಂದು ಸಮಯದಲ್ಲಿ ತಮಿಳು ಚಿತ್ರರಂಗಕ್ಕೆ ಹೋಗಿ ಬಿಡುವ ನಿಶ್ಚಯ ಮಾಡಿದ್ದರಂತೆ. ಈ ವಿಷಯ ಹೇಳಿರುವುದು ಅವರ ಆತ್ಮೀಯ ಗೆಳೆಯ ರಕ್ಷಿತ್ ಶೆಟ್ಟಿ.

ರಿಷಬ್ ಶೆಟ್ಟಿ ತಮಿಳು ಚಿತ್ರರಂಗಕ್ಕೆ ಹೊರಟು ಹೋಗಲು ನಿರ್ಧರಿಸಿದ್ದ: ರಕ್ಷಿತ್ ಶೆಟ್ಟಿ
ಮಂಜುನಾಥ ಸಿ.
|

Updated on: Oct 21, 2023 | 5:02 PM

Share

ಕಾಂತಾರ‘ (Kantara) ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಶಕ್ತಿಯನ್ನು ಭಾರತಕ್ಕೆ ಪರಿಚಯಿಸಿದ್ದಾರೆ ರಿಷಬ್ ಶೆಟ್ಟಿ (Rishab Shetty). ಮಾತ್ರವಲ್ಲದೆ ‘ಕಾಂತಾರ’ ಸಿನಿಮಾದ ಬಳಿಕ ರಾಷ್ಟ್ರಮಟ್ಟದಲ್ಲಿ ಗುರುತು ಸಂಪಾದಿಸಿದ ರಿಷಬ್, ತಾವು ಹೋದಲ್ಲೆಲ್ಲ ಪಂಚೆ ತೊಟ್ಟು ಕನ್ನಡತನವನ್ನು ಮೆರೆಯುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ವಿಶ್ವಸಂಸ್ಥೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಯೂ ಕನ್ನಡದಲ್ಲಿಯೇ ಮಾತನಾಡುವ ಪ್ರಯತ್ನ ಮಾಡಿದ್ದರು ರಿಷಬ್. ಕನ್ನಡದ ಬಗ್ಗೆ ಕರ್ನಾಟಕದ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿರುವ ರಿಷಬ್ ಶೆಟ್ಟಿ, ಒಂದು ಸಮಯದಲ್ಲಿ ತಮಿಳು ಚಿತ್ರರಂಗಕ್ಕೆ ಹೊರಟು ಬಿಡುವ ಆಲೋಚನೆ ಮಾಡಿದ್ದರಂತೆ.

ಈ ವಿಷಯವನ್ನು ರಿಷಬ್​ರ ಆತ್ಮೀಯ ಸ್ನೇಹಿತ್ ರಕ್ಷಿತ್ ಶೆಟ್ಟಿಯೇ ತಿಳಿಸಿದ್ದು, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗ ಹೇಗೆ ಕಳೆದ ಹತ್ತು ವರ್ಷಗಳಲ್ಲಿ ಬದಲಾಗುತ್ತಾ ಬಂದಿದೆ ಎಂಬ ವಿಷಯ ಮಾತನಾಡುತ್ತಾ, ”ನಾನು ಸಿನಿಮಾ ನಟ, ನಿರ್ದೇಶಕ ಆಗಬೇಕು ಎಂದು ಬಂದಾಗ ಬಂದಾಗ, ನನ್ನ ವಾರಗೆಯ ಕೆಲವರು ಇಲ್ಲಿಗಿಂತಲೂ ಬೇರೆ ಭಾಷೆಯ ಚಿತ್ರರಂಗ ಹೆಚ್ಚು ಸೂಕ್ತವಾಗಿದೆ, ಹೊಸತನಕ್ಕೆ ಪರಭಾಷೆಯಲ್ಲಿ ಅವಕಾಶ ಇದೆ ಎಂದು ತಮಿಳು, ತೆಲುಗು ಚಿತ್ರರಂಗಗಳಿಗೆ ಹೋದರು, ಕೆಲವರು ಬಾಂಬೆಗೆ ಹೋಗಿ ಕೆಲಸ ಮಾಡಲು ಆರಂಭಿಸಿದರು. ಅವರು ಈಗಲೂ ಅಲ್ಲಿಯೇ ಇದ್ದಾರೆ. ಆಗ ಕನ್ನಡದಲ್ಲಿ ಕಮರ್ಷಿಯಲ್, ಒಂದು ಸಿದ್ಧ ಮಾದರಿಯ ಸಿನಿಮಾಗಳೇ ಬಹಳ ಹೆಚ್ಚು ನಿರ್ಮಾಣವಾಗುತ್ತಿತ್ತು, ಅವರಿಗೆ ಅವರ ರೀತಿಯ ಸಿನಿಮಾ ಮಾಡಲಿಕ್ಕಿತ್ತು ಹಾಗಾಗಿ ಬೇರೆಡೆ ಹೋದರು” ಎಂದಿದ್ದಾರೆ.

ಇದನ್ನೂ ಓದಿ:ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿಯ ಸಿನಿಮಾ, ಕಾಂತಾರ ಅಲ್ಲ

”ಅಷ್ಟು ಮಾತ್ರವೇ ಅಲ್ಲ, ಒಂದು ಸಮಯದಲ್ಲಿ ಸ್ವತಃ ರಿಷಬ್ ಶೆಟ್ಟಿ ಸಹ ತಮಿಳು ಚಿತ್ರರಂಗಕ್ಕೆ ಹೋಗಿ ಬಿಡುವ ಮನಸ್ಸು ಮಾಡಿದ್ದರು. ಆದರೆ ನನಗೆ ಅದು ಇಷ್ಟವಿರಲಿಲ್ಲ, ಇಲ್ಲ ನಾವು ಇಲ್ಲೇ ಇದ್ದು ಇಲ್ಲೇ ಕೆಲಸ ಮಾಡಬೇಕು ಎಂದೆ. ಬೆಂಗಳೂರಿನ ಸಿನಿಮಾ ಮೇಕರ್​ಗಳು ಪರಭಾಷೆಯ ಸಿನಿಮಾಗಳಿಂದಲೂ ಪ್ರಭಾವಕ್ಕೆ ಒಳಗಾಗುತ್ತಾರೆ. ಮಲಯಾಳಂ, ತಮಿಳುನಾಡಿನಲ್ಲಿ ಸಿನಿಮಾ ಮಾಡಿದಾಗ ಅವರು ಭಾಷಾ ವೈವಿಧ್ಯತೆಯನ್ನು ಸಮಾನವಾಗಿ ಕಾಣುತ್ತಾರೆ, ಸಿನಿಮಾಗಳಲ್ಲಿಯೂ ಪ್ರಯೋಗಿಸುತ್ತಾರೆ. ಆದರೆ ಕನ್ನಡದಲ್ಲಿ ಆ ಸಮಯದಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. ಆಗೆಲ್ಲ ಕೇವಲ ಬೆಂಗಳೂರು ಕನ್ನಡ, ಮಂಡ್ಯ ಕನ್ನಡವನ್ನು ಮಾತ್ರವೇ ಸಿನಿಮಾಗಳಲ್ಲಿ ಬಳಸಲಾಗುತ್ತಿತ್ತು. ನಾವು ‘ಉಳಿದವರು ಕಂಡಂತೆ’ ಸಿನಿಮಾ ಮಾಡುವ ವರೆಗೆ ಉಡುಪಿ, ಮಂಗಳೂರು ಕನ್ನಡವನ್ನು ಕೇವಲ ಹಾಸ್ಯಕ್ಕಾಗಿ ಮಾತ್ರ ಬಳಸಲಾಗುತ್ತಿತ್ತು. ಆ ಭಾಗದ ಕತೆಗಳನ್ನು ಸಹ ನಿರ್ಲಕ್ಷಿಸಲಾಗಿತ್ತು” ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಸಂದರ್ಶನದಲ್ಲಿ ಪವನ್ ಕುಮಾರ್ ನಿರ್ದೇಶಿಸಿದ ‘ಲೂಸಿಯಾ’ ಸಿನಿಮಾ ಬಗ್ಗೆಯೂ ಮಾತನಾಡಿರುವ ರಕ್ಷಿತ್ ಶೆಟ್ಟಿ, ಪವನ್ ಕುಮಾರ್ ಮಾಡಿದ ‘ಲೂಸಿಯಾ’ ಅದೇ ಜನರೇಷನ್​ನ ಸಿನಿಮಾ ಮೇಕರ್​ಗಳಾದ ನಮಗೆ ಸ್ಪೂರ್ತಿ ತುಂಬಿತು. ಆಗೆಲ್ಲ ವರ್ಷಕ್ಕೆ ಒಂದಷ್ಟೆ ಭಿನ್ನ ಸಿನಿಮಾ ಬರುತ್ತಿತ್ತು, ‘ಲೂಸಿಯಾ’ ಅದರ ನಂತರದ ವರ್ಷ ‘ಉಳಿದವರು ಕಂಡಂತೆ’, ಅದರ ನಂತರದ ವರ್ಷ ‘ರಂಗಿತರಂಗ’, ಅದಾದ ಬಳಿಕ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಹೀಗೆ ಬರುತ್ತಾ ಹೋದವು. ಪವನ್ ಕುಮಾರ್ ತಂಡದಲ್ಲಿದ್ದ ಕೆಲವು ಅಸಿಸ್ಟೆಂಟ್ ಡೈರೆಕ್ಟರ್​ಗಳು ಈಗ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಾದ ಬದಲಾವಣೆಯನ್ನು ಜಗತ್ತು ಈಗ ನೋಡುತ್ತಿದೆ. ಆದರೆ ಕಳೆದ ಹತ್ತು ವರ್ಷಗಳಿಂದಲೂ ಆ ಬದಲಾವಣೆ ನಿಧಾನಕ್ಕೆ ನಡೆಯುತ್ತಲೇ ಇತ್ತು” ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಅದೇ ಸಂದರ್ಶನದಲ್ಲಿ ಹಾಜರಿದ್ದ ನಿರ್ದೇಶಕ ಹೇಮಂತ್ ರಾವ್ ಸಹ ರಕ್ಷಿತ್ ಶೆಟ್ಟಿಯ ಮಾತು ಅನುಮೋದಿಸುತ್ತಾ, ”ನಮಗೆಲ್ಲ ಒಂದು ಹಠ ಇತ್ತು, ಇದು ನಮ್ಮ ಭಾಷೆ, ನಾವು ಇಲ್ಲೇ ಇರಬೇಕು, ಇಲ್ಲಿಯೇ ಕೆಲಸ ಮಾಡಬೇಕು ಎಂದು. ಹಾಗಾಗಿ ನಾವು ಉಳಿದುಕೊಂಡೆವು. ಪವನ್ ಕುಮಾರ್ ‘ಲೂಸಿಯಾ’ ಮಾಡಿದಾಗ ನಮಗೆ ಆಶ್ಚರ್ಯವಾಯಿತು. ನನಗೆ ಚಿತ್ರರಂಗ ಹಣ ಕೊಡುವುದು ಬೇಡ ನಾನು ಬೇರೆಯದ್ದೇ ಹಾದಿ ಹಿಡಿದು ನನ್ನ ರೀತಿಯಲ್ಲಿಯೇ ಸಿನಿಮಾ ಮಾಡುತ್ತೀನಿ ಎಂದು ಮಾಡಿ ತೋರಿಸಿದರು. ಅದಾದ ನಂತರ ‘ಉಳಿದವರು ಕಂಡಂತೆ’ ಸಿನಿಮಾ ಬಂತು. ಇವರಿಂದ ಸ್ಪೂರ್ತಿ ಪಡೆದು ನಮ್ಮಂಥಹಾ ನಿರ್ದೇಶಕರು ಸಹ, ಓಕೆ ನಾವು ಹೇಳಬೇಕಾದ ಕತೆಯನ್ನು ಹೇಳಬಹುದು ಎಂಬ ಧೈರ್ಯ ಮೂಡಿತು. ಆಗೆಲ್ಲ ಸಿದ್ಧ ಮಾದರಿ ಬಿಟ್ಟು ಸಿನಿಮಾ ಮಾಡುವ ಐದಾರು ಮಂದಿ ಸಿಗುತ್ತಿದ್ದರು. ಈಗ ಅವರ ಸಂಖ್ಯೆ ಐವತ್ತಾಗಿದೆ, ಅದು ಇನ್ನೂ ಹೆಚ್ಚಾಗುತ್ತಿದೆ” ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ