AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಂಗೆ ವೋಟ್​ ಹಾಕ್ರಿ, ವಿಧಾನಸೌಧ ಮಾರಿ ನಿಮ್ಮ ಸಾಲ ತೀರಿಸ್ತೀನಿ’: ಆಶ್ವಾಸನೆ ಕೊಟ್ಟ ನಟ ರಿಷಿ

Ramana Avatara | Rishi: ಏಪ್ರಿಲ್​ 10ರಂದು ‘ರಾಮನ ಅವತಾರ’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಲಿದೆ. ಅದರ ಸಲುವಾಗಿ ಕುತೂಹಲ ಮೂಡಿಸಲು ರಿಷಿ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ.

‘ನಂಗೆ ವೋಟ್​ ಹಾಕ್ರಿ, ವಿಧಾನಸೌಧ ಮಾರಿ ನಿಮ್ಮ ಸಾಲ ತೀರಿಸ್ತೀನಿ’: ಆಶ್ವಾಸನೆ ಕೊಟ್ಟ ನಟ ರಿಷಿ
ರಿಷಿ
ಮದನ್​ ಕುಮಾರ್​
|

Updated on: Apr 04, 2023 | 7:15 AM

Share

ಮುಖ್ಯಾಂಶಗಳು

  • ‘ರಾಮನ ಅವತಾರ’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿರುವ ನಟ ರಿಷಿ
  • ಟ್ರೇಲರ್​ ಬಗ್ಗೆ ಮಾಹಿತಿ ನೀಡಲು ಹೊಸ ವಿಡಿಯೋ ಹಂಚಿಕೊಂಡ ನಟ
  • ಏಪ್ರಿಲ್​ 10ರಂದು ಬಿಡುಗಡೆ ಆಗಲಿದೆ ‘ರಾಮನ ಅವತಾರ’ ಟ್ರೇಲರ್​

ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ದಿನಗಣನೆ ಆರಂಭ ಆಗಿದೆ. ಎಲ್ಲ ಪಕ್ಷಗಳೂ ಭರ್ಜರಿಯಾಗಿ ಪ್ರಚಾರ ನಡೆಸುತ್ತಿವೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಪ್ರಚಾರ ತಂತ್ರ. ಬಗೆಬಗೆಯ ಆಶ್ವಾಸನೆ ನೀಡುವ ಮೂಲಕ ಜನರ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಇಂಥ ಸಮಯದಲ್ಲಿ ಕನ್ನಡದ ನಟ ರಿಷಿ ಅವರು ವಿಧಾನಸೌಧ (Vidhana Soudha) ಮಾರಿ, ಅದರಿಂದ ಬರುವ ಹಣದಲ್ಲಿ ಜನರ ಸಾಲ ತೀರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಹಾಗಂತ ಅವರು ಚುನಾವಣೆಗೆ ನಿಲ್ಲುತ್ತಾರಾ? ಖಂಡಿತಾ ಇಲ್ಲ. ಆದರೆ ಅವರು ಇಷ್ಟೆಲ್ಲ ಹೇಳಿರುವುದು ‘ರಾಮನ ಅವತಾರ’ (Ramana Avatara) ಸಿನಿಮಾದಲ್ಲಿನ ಪಾತ್ರದ ಬಗ್ಗೆ ಅಷ್ಟೇ. ಸೋಶಿಯಲ್​ ಮೀಡಿಯಾದಲ್ಲಿ ರಿಷಿ ಹಂಚಿಕೊಂಡಿರುವ ವಿಡಿಯೋ ಸಖತ್​ ಇಂಟರೆಸ್ಟಿಂಗ್​ ಆಗಿದೆ.

ಜಂಟಲ್​ಮ್ಯಾನ್​ ರಾಮ ಹೇಳಿದ್ದೇನು?

‘ನಮ್ಮ ರಾಜ್ಯದ ಎಲ್ಲ ಸಮಸ್ಯೆಯನ್ನು ಬಗೆಹರಿಸಬೇಕು ಎಂದರೆ ಮೊದಲು ನಾವು ವಿಧಾನಸೌಧ ಮಾರಬೇಕು. ಓಹ್​.. ನಾನು ಯಾರು ಅಂತ ಕೇಳ್ತಾ ಇದ್ದೀರಾ? ನನ್ನ ಹೆಸರು ರಾಮಕೃಷ್ಣ. ಊರಲ್ಲಿ ಎಲ್ಲರೂ ನನ್ನ ಜಂಟಲ್​ಮ್ಯಾನ್​ ರಾಮ ಅಂತ ಕರೀತಾರೆ. ಚಾಟ್​ ಜಿಪಿಟಿ ಬಂದಮೇಲೆ ನನ್ನನ್ನು ಕೆಲಸದಿಂದ ಕಿತ್ತು ಹಾಕಿದ್ರು. ಎಲ್ಲೇ ಕೆಲಸ ಹುಡುಕಿಕೊಂಡು ಹೋದ್ರು ಏನ್​ ಓದಿದೀಯಾ ಅಂತ ಕೇಳ್ತಾರೆ. ಯಾರೂ ಈ ಪ್ರಶ್ನೆ ಕೇಳಬಾರದು. ಅಂತಹ ಕೆಲಸ ಮಾಡ್ತೀನಿ. ಎಲೆಕ್ಷನ್​ಗೆ ನಿಲ್ಲುತ್ತೇನೆ’ ಎಂದಿದ್ದಾರೆ ಜಂಟಲ್​ಮ್ಯಾನ್​ ರಾಮನ ಪಾತ್ರ ಮಾಡಿರುವ ರಿಷಿ.

ಇದನ್ನೂ ಓದಿ
Image
Kichcha Sudeep: ಬಿಜೆಪಿ ಜೊತೆ ಕೈ ಜೋಡಿಸಲು ಸಜ್ಜಾದ ಸುದೀಪ್​? ಕಿಚ್ಚನ ರಾಜಕೀಯ ಎಂಟ್ರಿ ಬಗ್ಗೆ ದೊಡ್ಡ ಸುದ್ದಿ
Image
Karnataka Assembly Polls 2023: ಏಪ್ರಿಲ್ 19ರಂದು ನಾಮಪತ್ರ ಸಲ್ಲಿಕೆಗೆ ಕುಮಾರಸ್ವಾಮಿ ಮುಹೂರ್ತ ನಿಗದಿ
Image
K. Manju: ರಾಜಕೀಯ ಪ್ರವೇಶಕ್ಕೆ ಸಜ್ಜಾದ ನಿರ್ಮಾಪಕ ಕೆ. ಮಂಜು; ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ?
Image
Kichcha Sudeep: ನರೇಂದ್ರ ಮೋದಿ ಭೇಟಿಗೆ ಸುದೀಪ್​ ಯಾಕೆ ಬರಲಿಲ್ಲ? ಅಸಲಿ ಕಾರಣ ವಿವರಿಸಿದ ಕಿಚ್ಚ

ಇದನ್ನೂ ಓದಿ: Kichcha Sudeep: ಬಿಜೆಪಿ ಜೊತೆ ಕೈ ಜೋಡಿಸಲು ಸಜ್ಜಾದ ಸುದೀಪ್​? ಕಿಚ್ಚನ ರಾಜಕೀಯ ಎಂಟ್ರಿ ಬಗ್ಗೆ ದೊಡ್ಡ ಸುದ್ದಿ

ರಾಜಕಾರಣಿಗಳಿಗೆ ಅಷ್ಟು ದೊಡ್ಡ ಆಫೀಸ್​​ ಯಾಕೆ ಬೇಕು?

‘ನಾನೇನಾದರೂ ಅಧಿಕಾರಕ್ಕೆ ಬಂದರೆ ವಿಧಾನಸೌಧ ಮಾರುತ್ತೇನೆ. ಎಲ್ಲರಿಗೂ ವರ್ಕ್​ ಫ್ರಮ್​ ಹೋಮ್​ ಇದೆ. ನಮ್ಮಂಥ ರಾಜಕಾರಣಿಗಳಿಗೆ ಬೆಂಗಳೂರಿನಲ್ಲಿ ಅಷ್ಟು ದೊಡ್ಡ ಆಫೀಸ್​​ ಯಾಕೆ ಬೇಕು? ವಿಧಾನಸೌಧ ಮಾರಿ, ಅದರಿಂದ ಬಂದ ದುಡ್ಡಲ್ಲಿ ನಮ್ಮೆಲ್ಲರ ಸಾಲ ತೀರಿಸುತ್ತೇನೆ. ಪ್ಯಾನ್​ ಕಾರ್ಡ್​ ಮತ್ತು ಆಧಾರ್​ ಕಾರ್ಡ್​ ಲಿಂಕ್​ ಉಚಿತವಾಗಿ ಮಾಡಿಸುತ್ತೇನೆ. ನನ್ನಂಥ ಹೊಸ ನಾಯಕ ಬೇಕು ಅಂದರೆ ನನಗೆ ನೀವು ವೋಟ್​ ಹಾಕಬೇಕು’ ಎಂದು ರಿಷಿ ಈ ವಿಡಿಯೋದಲ್ಲಿ ಹೇಳಿದ್ದಾರೆ.

View this post on Instagram

A post shared by Rishi (@rishi_actor)

ಅಷ್ಟಕ್ಕೂ ರಿಷಿ ಇದನ್ನೆಲ್ಲ ಹೇಳಿದ್ದು ಯಾಕೆ? ಈ ಜಂಟಲ್​ಮ್ಯಾನ್​ ರಾಮ ಯಾರು? ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ‘ರಾಮನ ಅವತಾರ’ ಸಿನಿಮಾದ ಟ್ರೇಲರ್​ ನೋಡಬೇಕು. ಏಪ್ರಿಲ್​ 10ರಂದು ಟ್ರೇಲರ್​ ಬಿಡುಗಡೆ ಆಗಲಿದೆ. ಅದರ ಸಲುವಾಗಿ ಕುತೂಹಲ ಮೂಡಿಸಲು ರಿಷಿ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು