Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಬರ್ಟ್‌ ಟ್ರೇಲರ್‌ ಸೋಷಿಯಲ್‌ ಮೀಡಿಯಾದಲ್ಲಿ ಮಾಡಿದ ಕಮಾಲ್ ಏನು? ಡಿ ಬಾಸ್ ಬರ್ತ್‌ಡೇ ದಿನ ಏನ್ ಮಾಡುದ್ರು.. ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ

Roberrt Trailer | ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್‌ ಸಿನಿಮಾದ ಟ್ರೇಲರ್‌ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸಿದೆ. ಒಂದ್ಕಡೆ ಟ್ರೇಲರ್‌ ಕ್ರೇಜ್‌ ಜೊತೆಗೆ ಹಾಡುಗಳ ಹಬ್ಬಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಹಾಗಿದ್ರೆ ಸದ್ಯ ಹಾಡುಗಳ ಹಬ್ಬಕ್ಕೆ ನಡೀತಿರೋ ಸಿದ್ಧತೆ ಹೇಗಿದೆ. ಇನ್ನು ದರ್ಶನ್‌ ಬರ್ತ್‌ಡೇ ದಿನ ದರ್ಶನ್‌ ಏನ್ ಮಾಡಿದ್ರು ಅನ್ನೋದ್ರ ಡಿಟೇಲ್ಸ್ ಇಲ್ಲಿದೆ.

ರಾಬರ್ಟ್‌ ಟ್ರೇಲರ್‌ ಸೋಷಿಯಲ್‌ ಮೀಡಿಯಾದಲ್ಲಿ ಮಾಡಿದ ಕಮಾಲ್ ಏನು? ಡಿ ಬಾಸ್ ಬರ್ತ್‌ಡೇ ದಿನ ಏನ್ ಮಾಡುದ್ರು.. ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ
ರಾಬರ್ಟ್​ ಸಿನಿಮಾ ಟೀಸರ್​ನ ಒಂದು ದೃಶ್ಯ
Follow us
ಆಯೇಷಾ ಬಾನು
|

Updated on:Feb 18, 2021 | 9:58 AM

ಒಬ್ಬರ ಲೈಫಲ್ಲಿ ಹೀರೋ ಆಗ್ಬೇಕು ಅಂದ್ರೆ ಇಬ್ಬೊಬ್ಬರ ಲೈಫ್‌ನಲ್ಲಿ ವಿಲನ್‌ ಆಗಲೇಬೇಕು ಅಂತ ಖಡಕ್‌ ಡೈಲಾಗ್‌ ಹೊಡೆದು ಅಭಿಮಾನಿಗಳ ತಲೆಯಲ್ಲಿ ಬರ್ತ್‌ಡೇ ದಿನ ಹುಳ ಬಿಟ್ಟಿದ್ದಾರೆ. ಶಬರಿ ಮುಂದೆ ಸೋಲೋದು ಗೊತ್ತು.. ರಾವಣನ ಮುಂದೆ ಗೆಲ್ಲೋದು ಗೊತ್ತು ಅನ್ನೋ ಗತ್ತು ದಚ್ಚು ಅಭಿಮಾನಿಗಳು ಮತ್ತಷ್ಟು ಕತ್ತು ಎತ್ತಿ ಗತ್ತಿನಲ್ಲೇ ನಡೆಯುವಂಥಾ ಕ್ರೇಜ್ ಸೃಷ್ಟಿಸಿದೆ. ಸ್ಯಾಂಡಲ್‌ವುಡ್‌ ರಾಬರ್ಟ್ ಟ್ರೇಲರ್‌ ರಿಲೀಸ್ ಆಗಿ 2 ದಿನಕ್ಕೆ 6 ಮಿಲಿಯನ್‌ಗೂ ಹೆಚ್ಚು ವೀವ್ಸ್‌ ಪಡೆದಿದ್ರೆ, 2 ಮಿಲಿಯನ್‌ಗೂ ಹೆಚ್ಚು ವೀವ್ಸ್‌ ಟಾಲಿವುಡ್‌ ರಾಬರ್ಟ್‌ ಟ್ರೇಲರ್‌ಗೆ ಸಿಕ್ಕಿದೆ.

ಅಂದ್ಹಾಗೆ ಸದ್ಯ ಅವ್ರ ಅಭಿಮಾನಿಗಳು ಇನ್ನೂ ಕೂಡ ಟ್ರೇಲರ್‌ ನೋಡಿ ಹಬ್ಬದ ರೀತಿ ಸಂಭ್ರಮಿಸ್ತಿರೋವಾಗ್ಲೇ ಚಿತ್ರದ ಹಾಡುಗಳ ಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಅಂದ್ಹಾಗೆ ಸದ್ಯ ಫೆಬ್ರವರಿ 26 ಹಾಗೂ ಫೆಬ್ರವರಿ 28ಕ್ಕೆ ಹಾಡುಗಳನ್ನ ರಿಲೀಸ್‌ ಮಾಡೋ ಪ್ಲ್ಯಾನ್ ಮಾಡಿದ್ಯಂತೆ. ಫೆಬ್ರವರಿ 26ರಂದು ಹುಬ್ಬಳ್ಳಿಯಲ್ಲಿ ಹಾಗೂ ಫೆಬ್ರವರಿ 28ರಂದು ಹೈದರಾಬಾದ್‌ನಲ್ಲಿ ರಾಬರ್ಟ್‌ ಆಡಿಯೋ ಅಬ್ಬರ ಶುರುವಾಗಲಿದೆ.

ಈಗಾಗಲೇ ಟ್ರೇಲರ್‌ ಹಾಗೂ ಸಾಂಗ್‌ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದ್ರೆ, ಇತ್ತ ದರ್ಶನ್‌ ಫೆಬ್ರವರಿ 16ರಂದು ಹುಟ್ಟುಹಬ್ಬದ ದಿನ ಎಲ್ಲಿದ್ರು ಅಂತ ಅಭಿಮಾನಿಗಳಿಗೆ ದೊಡ್ಡ ಕುತೂಹಲವಿತ್ತು. ಆದ್ರೆ, ದರ್ಶನ್‌, ರಾಬರ್ಟ್‌ ನಿರ್ಮಾಪಕ ಉಮಾಪತಿ ಸೇರಿದಂತೆ ಅವ್ರ ಆಪ್ತರು ಹಾಗೂ ನಟರ ಜತೆ ಮೈಸೂರಿನ ಬಳಿ ಇರೋ ಫಾರ್ಮ್‌ ಹೌಸ್‌ನಲ್ಲಿ ಕಾಲ ಕಳೆದಿದ್ದಾರೆ. ಅದ್ರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್​ (Challenging Star Darshan) ಹುಟ್ಟುಹಬ್ಬದ ದಿನದಂದು ದರ್ಶನ್ ಜನ್ಮದಿನಾಚರಣೆ ಪ್ರಯುಕ್ತ ‘ರಾಬರ್ಟ್​’ (Roberrt) ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಟ್ರೇಲರ್​ ನೋಡಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕಿದ್ದರು. ಆನಂದ್ ಆಡಿಯೋ ಅವರ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲಿ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಅರ್ಧತಾಸಿನಲ್ಲಿ ಸುಮಾರು 4.50 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿತ್ತು.

ಮಾರ್ಚ್​ 11ರಂದು ಶಿವರಾತ್ರಿ ದಿನವೇ ರಾಬರ್ಟ್​ ಸಿನಿಮಾ ಬಿಡುಗಡೆಯಾಗಲಿದೆ. ಅಭಿಮಾನಿಗಳು ಚಿತ್ರ ವೀಕ್ಷಿಸಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ದರ್ಶನ್, ವಿನೋದ್ ಪ್ರಭಾಕರ್​, ಆಶಾ ಭಟ್, ಜಗಪತಿ ಬಾಬು, ರವಿ ಕಿಶನ್, ರವಿ ಶಂಕರ್ ಸೇರಿದಂತೆ ಮೊದಲಾದವರು ಅಭಿನಯಿಸಿರುವ ಈ ಚಿತ್ರದ ಕುರಿತು ಬಹು ನಿರೀಕ್ಷೆ ವ್ಯಕ್ತವಾಗುತ್ತಿದೆ. ಉಮಾಪತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ಅವರು ಚಿತ್ರವನ್ನು ನಿರ್ಮಿಸುತ್ತಿದ್ದು, ತರುಣ್ ಕಿಶೋರ್ ಸುಧೀರ್ ಅವರು ನಿರ್ದೇಶನ ಮಾಡಿದ್ದಾರೆ.

ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ವಿ.ಹರಿಕೃಷ್ಣ ಅವರು ಬ್ಯಾಕ್​ಗ್ರೌಂಡ್ ಸ್ಕೋರ್ ನೀಡಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಜೋರಾಗಿಯೇ ಸದ್ದು ಮಾಡುವ ಲಕ್ಷಣ ಕಾಣುತ್ತಿದೆ. ಒಟ್ನಲ್ಲಿ ಸದ್ಯ ಟ್ರೇಲರ್‌ ಮಾಡ್ತಿರೋ ಮೋಡಿಗೆ ಬೆರಗಾಗಿ ಕಾಯ್ತಿರೋ ಫ್ಯಾನ್ಸ್‌ ಇನ್ನು ಸಾಂಗ್‌ ರಿಲೀಸ್‌ಗೆ ಹೇಗೆ ರೆಡಿಯಾಗ್ತಾರೆ ಅನ್ನೋದನ್ನ ಕಾದುನೋಡ್ಬೇಕಿದೆ. ಇದನ್ನೂ ಓದಿ: Roberrt Trailer: ಒಬ್ಬರ ಲೈಫಲ್ಲಿ ಹೀರೋ ಆಗ್ಬೇಕಂದ್ರೆ ಇನ್ನೊಬ್ಬರ ಲೈಫಲ್ಲಿ ವಿಲನ್ ಆಗ್ಲೇ ಬೇಕು, ರಾಬರ್ಟ್​ನಲ್ಲಿ ಅಬ್ಬರಿಸಿದ ದರ್ಶನ್

Published On - 7:42 am, Thu, 18 February 21

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು