ಕುಟುಂಬಸ್ಥರ ವಿರುದ್ಧ ದೂರು ನೀಡಿದ ಸ್ಯಾಂಡಲ್​ವುಡ್ ಹಿರಿಯ ನಟ ಅಶ್ವತ್ಥ್ ನಾರಾಯಣ

Actor Ashwath Narayan: ಸ್ಯಾಂಡಲ್​ವುಡ್ ಹಿರಿಯ ನಟ ಅಶ್ವತ್ಥ್ ನಾರಾಯಣ ಕುಟುಂಬದವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಕುಟುಂಬದವರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಕುಟುಂಬಸ್ಥರ ವಿರುದ್ಧ ದೂರು ನೀಡಿದ ಸ್ಯಾಂಡಲ್​ವುಡ್ ಹಿರಿಯ ನಟ ಅಶ್ವತ್ಥ್ ನಾರಾಯಣ
ಸ್ಯಾಂಡಲ್​ವುಡ್ ಹಿರಿಯ ನಟ ಅಶ್ವತ್ಥ ನಾರಾಯಣ
Edited By:

Updated on: Dec 15, 2021 | 1:31 PM

ಬೆಂಗಳೂರು: ‘‘ನನ್ನ ಮಕ್ಕಳು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ’’ ಎಂದು ಬೆಂಗಳೂರಿನಲ್ಲಿ ಸ್ಯಾಂಡಲ್​ವುಡ್ (sandalwood) ಹಿರಿಯ ನಟ ಅಶ್ವತ್ಥ್ ನಾರಾಯಣ (Actor Ashwath Narayan) ಆರೋಪ ಮಾಡಿದ್ದಾರೆ. ಕಳೆದ ಗುರುವಾರ ತಮ್ಮ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎಂದೂ ಅವರು ಆರೋಪಿಸಿದ್ದಾರೆ. ಕಿರಿಯ ಮಗಳು ವಸುಂಧರಾ ಹಾಗೂ ಮಗ ಉದಯ್ ಕುಮಾರ್ ವಿರುದ್ಧ ಆರೋಪ ಮಾಡಿರುವ ನಟ ಅಶ್ವತ್ಥ್ ನಾರಾಯಣ, ‘‘ಹೆಂಡತಿಯ ಹೆಸರಲ್ಲಿ ಇದ್ದ ಜಾಗದಲ್ಲಿ ತಾನು ಮೂರು ಅಂತಸ್ಥಿನ ಮನೆ ಕಟ್ಟಿದ್ದೆ. ಆ ಮನೆಯನ್ನು ದಾನ ಪತ್ರ ಅಂತಮಾಡಿಸಿಕೊಂಡಿದ್ದಾರೆ. ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಕಳೆದ ಗುರುವಾರ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ. ತಮಗೆ ಸಹಾಯ ಬೇಕು’’ ಎಂದು ಕೋರಿಕೊಂಡಿದ್ದಾರೆ.

ನಟ ಅಶ್ವತ್ಥ್ ನಾರಾಯಣ ಅವರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ನಿ, ಮಗ ಹಾಗೂ ಮೂರನೇ ಮಗಳ ವಿರುದ್ಧ ದೂರು ನೀಡಿದ್ದಾರೆ. ಬಸವೇಶ್ವರನಗರ ಠಾಣೆ (Basaveshwara Nagar police station) ಹಿರಿಯರ ಸಹಾಯವಾಣಿಯಲ್ಲಿ ದೂರು ನೀಡಲಾಗಿದ್ದು, ‘‘ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಹಲ್ಲೆ ಮಾಡಿದ್ದಾರೆಂದು’’ ಆರೋಪಿಸಲಾಗಿದೆ. ಎರಡನೇ ಮಗಳ ಜತೆ ಠಾಣೆಗೆ ತೆರಳಿ ಅಶ್ವತ್ಥ್ ನಾರಾಯಣ ಅವರು ದೂರು ನೀಡಿದ್ದಾರೆ.

ಇದನ್ನೂ ಓದಿ:

Raj Kundra: ಅಶ್ಲೀಲ ಚಿತ್ರ ಪ್ರಕರಣ; ರಾಜ್ ಕುಂದ್ರಾಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್

Katrina Kaif: ಮದುವೆಗೂ ಮುನ್ನ ವಿಕ್ಕಿ ಕೌಶಲ್​ಗೆ ಒಂದೇ ಒಂದು ಷರತ್ತು ವಿಧಿಸಿದ್ದರಂತೆ ಕತ್ರಿನಾ; ಏನದು?

Web contact

TV9 Kannada

Read More
Follow Us