AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್ ಕುಮಾರ್-ಗೀತಾ ಶಿವರಾಜ್​ಕುಮಾರ್ ವಿವಾಹ ವಾರ್ಷಿಕೋತ್ಸವಕ್ಕೆ ಮಗಳ ಪ್ರೀತಿಯ ಸಂದೇಶ

Shiva Rajkumar-Geetha Shivarajkumar: ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್​ಕುಮಾರ್ ವಿವಾಹ ವಾರ್ಷಿಕೋತ್ಸವಕ್ಕೆ ಪುತ್ರಿ ನಿವೇದಿತ ವಿಷ್ ಮಾಡಿದ್ದು ಹೀಗೆ...

ಶಿವರಾಜ್ ಕುಮಾರ್-ಗೀತಾ ಶಿವರಾಜ್​ಕುಮಾರ್ ವಿವಾಹ ವಾರ್ಷಿಕೋತ್ಸವಕ್ಕೆ ಮಗಳ ಪ್ರೀತಿಯ ಸಂದೇಶ
ಶಿವಣ್ಣ-ಗೀತಕ್ಕ
ಮಂಜುನಾಥ ಸಿ.
|

Updated on: May 19, 2023 | 8:24 PM

Share

ಶಿವರಾಜ್ ಕುಮಾರ್ (Shiva Rajkumar) ಹಾಗೂ ಗೀತಾ ಶಿವರಾಜ್​ಕುಮಾರ್ (Geetha Shivarajkumar) ಚಂದನವನದ ಕ್ಯೂಟ್ ತಾರಾ ಜೋಡಿ. ಶಿವರಾಜ್ ಕುಮಾರ್​ಗೆ ಇಂಡಸ್ಟ್ರಿಯಲ್ಲಿ ಹಲವು ಗೆಳೆಯರಿದ್ದಾರೆ ಆದರೆ ಶಿವಣ್ಣನಿಗೆ ಆಪ್ತ ಗೆಳತಿ ಅವರ ಪತ್ನಿಯೇ. ಸಿನಿಮಾ ಕಾರ್ಯಕ್ರಮ ಆಗಿರಲಿ ಖಾಸಗಿ ಕಾರ್ಯಕ್ರಮ ಆಗಿರಲಿ ಪತ್ನಿಯನ್ನು ಸದಾ ಜೊತೆಗೊಯ್ಯುತ್ತಾರೆ ಶಿವಣ್ಣ. ಪತ್ನಿಯ ಬಗ್ಗೆ ಅಪಾರ ಪ್ರೀತಿ ಹಾಗೂ ಗೌರವಗಳನ್ನು ಶಿವಣ್ಣ ಹೊಂದಿದ್ದಾರೆ. ಈ ತಾರಾ ಜೋಡಿಗೆ ಇಂದು ವಿಶೇಷ ದಿನ. ಇಂದು (ಮೇ 19) ಅವರ ವಿವಾಹ ವಾರ್ಷಿಕೋತ್ಸವ.

ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್​ಕುಮಾರ್ ಅವರು 1986 ಮೇ 19 ರಂದು ವಿವಾಹವಾದರು. 37 ವರ್ಷಗಳ ಯಶಸ್ವಿ ದಾಂಪತ್ಯ ಈ ಜೋಡಿಯದ್ದು. ಇಂದು ಶಿವಣ್ಣನವರ ಕುಟುಂಬ ಸದಸ್ಯರು ಸೇರಿದಂತೆ ಹಲವರು ಈ ಕ್ಯೂಟ್ ಜೋಡಿಗೆ ಶುಭ ಹಾರೈಕೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಶಿವಣ್ಣ ದಂಪತಿಯ ಪುತ್ರಿ ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ಕ್ಯೂಟ್ ಆದ ಚಿತ್ರವನ್ನು ಹಂಚಿಕೊಂಡು ಅಪ್ಪ-ಅಮ್ಮನಿಗೆ ವಿಶೇಷ ಸಂದೇಶ ಪ್ರಕಟಿಸಿದ್ದಾರೆ.

ನಿಮ್ಮಿಬ್ಬರ ಮಧ್ಯೆ ಇರೋ ಮುಗ್ಧ ಸ್ನೇಹ, ಸ್ನೇಹವನ್ನ ಮೀರಿ ಇರೋ ಪ್ರೀತಿ ನೋಡ್ತಾ ಇದ್ದರೆ ಕಳೆದುಹೋದ ಹಕ್ಕಿಗಳೆರಡು ಒಂದಾಗಿ ಜೀವನ ಮಾಡಿದ ಹಾಗೆ ಕಾಣಿಸುತ್ತೆ. ಜನುಮದ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು! ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ನಿವೇದಿತಾ, ಅಪ್ಪ-ಅಮ್ಮನೊಂದಿಗೆ ತಾವು ಇರುವ ಹಳೆಯ ಹಾಗೂ ಇತ್ತೀಚೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಗೀತಾ ಶಿವರಾಜ್​ಕುಮಾರ್ ಮಾಜಿ ಸಿಎಂ ಬಂಗಾರಪ್ಪನವರ ಮಗಳು. ಮೊದಲಿಗೆ ಅಣ್ಣಾವ್ರಿಗೆ ರಾಜಕಾರಣಿಯ ಕುಟುಂಬದಿಂದ ಮಗನಿಗೆ ಹೆಣ್ಣು ತರುವುದು ಇಷ್ಟವಿರಲಿಲ್ಲವಂತೆ. ಆದರೆ ಪಾರ್ವತಮ್ಮ ಹಾಗೂ ಅವರ ಸಹೋದರ ಚಿನ್ನಪ್ಪನವರ ಬಲವಂತಕ್ಕೆ ಬಂಗಾರಪ್ಪನವರ ಮನೆಗೆ ಹೋಗಿ ಅವರ ಪತ್ನಿ ಹಾಗೂ ಮಕ್ಕಳನ್ನು ಕಂಡು ಮಾತನಾಡಿಸಿ ಅವರ ಸಂಸ್ಕಾರ, ಸಂಪ್ರದಾಯಕ್ಕೆ ಮನಸೋತು ಒಪ್ಪಿದರಂತೆ.

ಇದನ್ನೂ ಓದಿ: ಪ್ರಚಾರಕ್ಕೆ ಬರ್ತಾರಾ ಶಿವಣ್ಣ? ಕಾಂಗ್ರೆಸ್ ಸೇರಿದ ಗೀತಾ ಶಿವರಾಜ್​ಕುಮಾರ್ ಕೊಟ್ಟರು ಉತ್ತರ

ಇನ್ನು ಶಿವಣ್ಣ ಹಾಗೂ ಗೀತಕ್ಕೆ ಪರಸ್ಪರರ ಬಗ್ಗೆ ಬಹಳ ಪ್ರೀತಿ ಹಾಗೂ ವಿಶ್ವಾಸಗಳನ್ನು ಹೊಂದಿರುವವರು. ಕೆಲ ವರ್ಷಗಳ ಹಿಂದೆ ಶಿವಣ್ಣನಿಗೆ ಹೃದಯ ಸಮಸ್ಯೆ ಎದುರಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗ ಪತಿಯ ಆರೋಗ್ಯಕ್ಕೆ ಹರಕೆ ಹೊತ್ತು ತಿರುಪತಿಗೆ ಮುಡಿ ಕೊಟ್ಟಿದ್ದರು ಗೀತಾ ಶಿವರಾಜ್​ಕುಮಾರ್, ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದ ಶಿವಣ್ಣ, ಯಾವ ಮಹಿಳೆ ತಾನೆ ತನ್ನ ತಲೆಕೂದಲು ಕೊಡುತ್ತಾಳೆ, ಆದರೆ ನನ್ನ ಪತ್ನಿ ನನ್ನ ಆರೋಗ್ಯಕ್ಕಾಗಿ ಆ ಕಾರ್ಯ ಮಾಡಿದಳು ಎಂದು ಭಾವುಕರಾಗಿದ್ದರು.

ಗೀತಾ ಶಿವರಾಜ್​ಕುಮಾರ್ ಈಗ ನಿರ್ಮಾಪಕಿಯೂ ಹೌದು, ಪತಿಯೊಟ್ಟಿಗೆ ಹೆಗಲಿಗೆ ಹೆಗಲು ಕೊಟ್ಟು ಸಿನಿಮಾ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಶಿವಣ್ಣ-ಗೀತಕ್ಕ ಸೇರಿ ಶಕ್ತಿಧಾಮ ಶಾಲೆ ನಡೆಸುತ್ತಿದ್ದಾರೆ. ಇತ್ತೀಚೆಗೆ ದಾವಣಗೆರೆಯ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ. ಈ ಜೋಡಿ ನೂರು ಕಾಲ ಹೀಗೆಯೇ ಖುಷಿಯಿಂದ ಬಾಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ನಟ, ನಿರ್ಮಾಪಕ ರಾಘವೇಂದ್ರ ರಾಜ್​ಕುಮಾರ್ ಸಹ ಅಣ್ಣ ಹಾಗೂ ಅತ್ತಿಗೆಗೆ ವಿವಾಹ ವಾರ್ಷಿಕೋತ್ಸವದ ಶುಭಾಷಯಗಳನ್ನು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ