AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್ ಕುಮಾರ್-ಗೀತಾ ಶಿವರಾಜ್​ಕುಮಾರ್ ವಿವಾಹ ವಾರ್ಷಿಕೋತ್ಸವಕ್ಕೆ ಮಗಳ ಪ್ರೀತಿಯ ಸಂದೇಶ

Shiva Rajkumar-Geetha Shivarajkumar: ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್​ಕುಮಾರ್ ವಿವಾಹ ವಾರ್ಷಿಕೋತ್ಸವಕ್ಕೆ ಪುತ್ರಿ ನಿವೇದಿತ ವಿಷ್ ಮಾಡಿದ್ದು ಹೀಗೆ...

ಶಿವರಾಜ್ ಕುಮಾರ್-ಗೀತಾ ಶಿವರಾಜ್​ಕುಮಾರ್ ವಿವಾಹ ವಾರ್ಷಿಕೋತ್ಸವಕ್ಕೆ ಮಗಳ ಪ್ರೀತಿಯ ಸಂದೇಶ
ಶಿವಣ್ಣ-ಗೀತಕ್ಕ
ಮಂಜುನಾಥ ಸಿ.
|

Updated on: May 19, 2023 | 8:24 PM

Share

ಶಿವರಾಜ್ ಕುಮಾರ್ (Shiva Rajkumar) ಹಾಗೂ ಗೀತಾ ಶಿವರಾಜ್​ಕುಮಾರ್ (Geetha Shivarajkumar) ಚಂದನವನದ ಕ್ಯೂಟ್ ತಾರಾ ಜೋಡಿ. ಶಿವರಾಜ್ ಕುಮಾರ್​ಗೆ ಇಂಡಸ್ಟ್ರಿಯಲ್ಲಿ ಹಲವು ಗೆಳೆಯರಿದ್ದಾರೆ ಆದರೆ ಶಿವಣ್ಣನಿಗೆ ಆಪ್ತ ಗೆಳತಿ ಅವರ ಪತ್ನಿಯೇ. ಸಿನಿಮಾ ಕಾರ್ಯಕ್ರಮ ಆಗಿರಲಿ ಖಾಸಗಿ ಕಾರ್ಯಕ್ರಮ ಆಗಿರಲಿ ಪತ್ನಿಯನ್ನು ಸದಾ ಜೊತೆಗೊಯ್ಯುತ್ತಾರೆ ಶಿವಣ್ಣ. ಪತ್ನಿಯ ಬಗ್ಗೆ ಅಪಾರ ಪ್ರೀತಿ ಹಾಗೂ ಗೌರವಗಳನ್ನು ಶಿವಣ್ಣ ಹೊಂದಿದ್ದಾರೆ. ಈ ತಾರಾ ಜೋಡಿಗೆ ಇಂದು ವಿಶೇಷ ದಿನ. ಇಂದು (ಮೇ 19) ಅವರ ವಿವಾಹ ವಾರ್ಷಿಕೋತ್ಸವ.

ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್​ಕುಮಾರ್ ಅವರು 1986 ಮೇ 19 ರಂದು ವಿವಾಹವಾದರು. 37 ವರ್ಷಗಳ ಯಶಸ್ವಿ ದಾಂಪತ್ಯ ಈ ಜೋಡಿಯದ್ದು. ಇಂದು ಶಿವಣ್ಣನವರ ಕುಟುಂಬ ಸದಸ್ಯರು ಸೇರಿದಂತೆ ಹಲವರು ಈ ಕ್ಯೂಟ್ ಜೋಡಿಗೆ ಶುಭ ಹಾರೈಕೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಶಿವಣ್ಣ ದಂಪತಿಯ ಪುತ್ರಿ ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ಕ್ಯೂಟ್ ಆದ ಚಿತ್ರವನ್ನು ಹಂಚಿಕೊಂಡು ಅಪ್ಪ-ಅಮ್ಮನಿಗೆ ವಿಶೇಷ ಸಂದೇಶ ಪ್ರಕಟಿಸಿದ್ದಾರೆ.

ನಿಮ್ಮಿಬ್ಬರ ಮಧ್ಯೆ ಇರೋ ಮುಗ್ಧ ಸ್ನೇಹ, ಸ್ನೇಹವನ್ನ ಮೀರಿ ಇರೋ ಪ್ರೀತಿ ನೋಡ್ತಾ ಇದ್ದರೆ ಕಳೆದುಹೋದ ಹಕ್ಕಿಗಳೆರಡು ಒಂದಾಗಿ ಜೀವನ ಮಾಡಿದ ಹಾಗೆ ಕಾಣಿಸುತ್ತೆ. ಜನುಮದ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು! ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ನಿವೇದಿತಾ, ಅಪ್ಪ-ಅಮ್ಮನೊಂದಿಗೆ ತಾವು ಇರುವ ಹಳೆಯ ಹಾಗೂ ಇತ್ತೀಚೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಗೀತಾ ಶಿವರಾಜ್​ಕುಮಾರ್ ಮಾಜಿ ಸಿಎಂ ಬಂಗಾರಪ್ಪನವರ ಮಗಳು. ಮೊದಲಿಗೆ ಅಣ್ಣಾವ್ರಿಗೆ ರಾಜಕಾರಣಿಯ ಕುಟುಂಬದಿಂದ ಮಗನಿಗೆ ಹೆಣ್ಣು ತರುವುದು ಇಷ್ಟವಿರಲಿಲ್ಲವಂತೆ. ಆದರೆ ಪಾರ್ವತಮ್ಮ ಹಾಗೂ ಅವರ ಸಹೋದರ ಚಿನ್ನಪ್ಪನವರ ಬಲವಂತಕ್ಕೆ ಬಂಗಾರಪ್ಪನವರ ಮನೆಗೆ ಹೋಗಿ ಅವರ ಪತ್ನಿ ಹಾಗೂ ಮಕ್ಕಳನ್ನು ಕಂಡು ಮಾತನಾಡಿಸಿ ಅವರ ಸಂಸ್ಕಾರ, ಸಂಪ್ರದಾಯಕ್ಕೆ ಮನಸೋತು ಒಪ್ಪಿದರಂತೆ.

ಇದನ್ನೂ ಓದಿ: ಪ್ರಚಾರಕ್ಕೆ ಬರ್ತಾರಾ ಶಿವಣ್ಣ? ಕಾಂಗ್ರೆಸ್ ಸೇರಿದ ಗೀತಾ ಶಿವರಾಜ್​ಕುಮಾರ್ ಕೊಟ್ಟರು ಉತ್ತರ

ಇನ್ನು ಶಿವಣ್ಣ ಹಾಗೂ ಗೀತಕ್ಕೆ ಪರಸ್ಪರರ ಬಗ್ಗೆ ಬಹಳ ಪ್ರೀತಿ ಹಾಗೂ ವಿಶ್ವಾಸಗಳನ್ನು ಹೊಂದಿರುವವರು. ಕೆಲ ವರ್ಷಗಳ ಹಿಂದೆ ಶಿವಣ್ಣನಿಗೆ ಹೃದಯ ಸಮಸ್ಯೆ ಎದುರಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗ ಪತಿಯ ಆರೋಗ್ಯಕ್ಕೆ ಹರಕೆ ಹೊತ್ತು ತಿರುಪತಿಗೆ ಮುಡಿ ಕೊಟ್ಟಿದ್ದರು ಗೀತಾ ಶಿವರಾಜ್​ಕುಮಾರ್, ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದ ಶಿವಣ್ಣ, ಯಾವ ಮಹಿಳೆ ತಾನೆ ತನ್ನ ತಲೆಕೂದಲು ಕೊಡುತ್ತಾಳೆ, ಆದರೆ ನನ್ನ ಪತ್ನಿ ನನ್ನ ಆರೋಗ್ಯಕ್ಕಾಗಿ ಆ ಕಾರ್ಯ ಮಾಡಿದಳು ಎಂದು ಭಾವುಕರಾಗಿದ್ದರು.

ಗೀತಾ ಶಿವರಾಜ್​ಕುಮಾರ್ ಈಗ ನಿರ್ಮಾಪಕಿಯೂ ಹೌದು, ಪತಿಯೊಟ್ಟಿಗೆ ಹೆಗಲಿಗೆ ಹೆಗಲು ಕೊಟ್ಟು ಸಿನಿಮಾ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಶಿವಣ್ಣ-ಗೀತಕ್ಕ ಸೇರಿ ಶಕ್ತಿಧಾಮ ಶಾಲೆ ನಡೆಸುತ್ತಿದ್ದಾರೆ. ಇತ್ತೀಚೆಗೆ ದಾವಣಗೆರೆಯ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ. ಈ ಜೋಡಿ ನೂರು ಕಾಲ ಹೀಗೆಯೇ ಖುಷಿಯಿಂದ ಬಾಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ನಟ, ನಿರ್ಮಾಪಕ ರಾಘವೇಂದ್ರ ರಾಜ್​ಕುಮಾರ್ ಸಹ ಅಣ್ಣ ಹಾಗೂ ಅತ್ತಿಗೆಗೆ ವಿವಾಹ ವಾರ್ಷಿಕೋತ್ಸವದ ಶುಭಾಷಯಗಳನ್ನು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ