AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಪ್ಪಾಜಿ ಜೊತೆ ಮಾತನಾಡಿದಂತೆ ಭಾಸವಾಯ್ತು’; ಕಮಲ್ ಹಾಸನ್ ಜೊತೆಗಿನ ಸಂಭಾಷಣೆ ನೆನಪಿಸಿಕೊಂಡ ಶಿವಣ್ಣ

ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರದ ಆಡಿಯೋ ಲಾಂಚ್‌ನಲ್ಲಿ ಶಿವರಾಜ್ ಕುಮಾರ್ ಅವರು ಭಾಗವಹಿಸಿದ್ದರು. ಶಿವಣ್ಣ ಅವರು ಕಮಲ್ ಹಾಸನ್ ಜೊತೆಗಿನ ತಮ್ಮ ಆತ್ಮೀಯ ಬಾಂಧವ್ಯವನ್ನು ಹಂಚಿಕೊಂಡರು. ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಕಮಲ್ ಹಾಸನ್ ಅವರಿಂದ ಬಂದ ಕರೆ ಅವರಿಗೆ ಎಷ್ಟು ಸಂತೋಷ ನೀಡಿತು ಎಂಬ ಮಾಹಿತಿಯನ್ನು ಶಿವಣ್ಣ ಹಂಚಿಕೊಂಡರು.

‘ಅಪ್ಪಾಜಿ ಜೊತೆ ಮಾತನಾಡಿದಂತೆ ಭಾಸವಾಯ್ತು’; ಕಮಲ್ ಹಾಸನ್ ಜೊತೆಗಿನ ಸಂಭಾಷಣೆ ನೆನಪಿಸಿಕೊಂಡ ಶಿವಣ್ಣ
ಕಮಲ್ ಹಾಸನ್ ಹಾಗೂ ಅಣ್ಣಾವ್ರ ಕುಟುಂಬ (ಚಿತ್ರ: ರಾಘವೇಂದ್ರ ರಾಜ್​ಕುಮಾರ್ )
ರಾಜೇಶ್ ದುಗ್ಗುಮನೆ
|

Updated on: May 26, 2025 | 8:50 AM

Share

ಕಮಲ್ ಹಾಸನ್ (Kamal Haasan) ನಟನೆಯ ‘ಥಗ್​ ಲೈಫ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಚೆನ್ನೈನಲ್ಲಿ ನಡೆಯಿತು. ಇದಕ್ಕೆ ಸ್ಟಾರ್ ಹೀರೋಗಳು ಅತಿಥಿಯಾಗಿ ಬಂದಿದ್ದರು. ಕಮಲ್ ಹಾಸನ್ ಅವರ ಒಳ್ಳೆಯ ಗೆಳೆಯ ಹಾಗೂ ಕನ್ನಡ ಚಿತ್ರರಂಗದ ಸ್ಟಾರ್ ಹೀರೋ ಶಿವರಾಜ್​ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿ ಹಾಕಿದ್ದರು. ಈ ವೇಳೆ ಅವರು ಕಮಲ್ ಹಾಸನ್ ಜೊತೆಗಿನ ಬಾಂಡ್​ನ ನೆನಪಿಸಿಕೊಂಡರು. ಕಮಲ್ ಹಾಸನ್ ಜೊತೆ ಮಾತನಾಡುವಾಗ ತಂದೆಯ ಜೊತೆ ಮಾತನಾಡಿದಂತೆ ಶಿವಣ್ಣನಿಗೆ ಅನಿಸಿತ್ತು.

ರಾಜ್​ಕುಮಾರ್ ಕನ್ನಡದ ಸ್ಟಾರ್ ಹೀರೋ. ದಕ್ಷಿಣದ ಬಹುತೇಕರಿಗೆ ರಾಜ್​ಕುಮಾರ್ ಪರಿಚಯ ಇತ್ತು. ಕಮಲ್ ಹಾಸನ್ ಬೆಂಗಳೂರಿಗೆ ಬಂದಾಗ ರಾಜ್​ಕುಮಾರ್ ಅವರನ್ನು ಭೇಟಿ ಮಾಡಿಯೇ ಹೋಗುತ್ತಿದ್ದರು. ಒಮ್ಮೆ ಕಮಲ್ ಹಾಸನ್ ಅವರು ಅಣ್ಣಾವ್ರ ಮನೆಗೆ ಬಂದಿದ್ದರು. ಆಗ ನಡೆದ ಘಟನೆಯನ್ನು ಶಿವಣ್ಣ ನೆನಪಿಸಿಕೊಂಡಿದ್ದಾರೆ.

‘ಒಮ್ಮೆ ಕಮಲ್ ಅವರು ನಮ್ಮ ಮನೆಗೆ ಬಂದಿದ್ದರು. ಅವರು ಹಾಗೂ ನನ್ನ ತಂದೆ ಮಾತನಾಡುತ್ತಿದ್ದರು. ಕಮಲ್ ಹಾಸನ್ ಅವರನ್ನೇ ನಾನು ನೋಡುತ್ತಿದ್ದೆ. ನಾನು ರಾಜ್​ಕುಮಾರ್ ಮಗ ಅನ್ನೋದು ಅವರಿಗೆ ತಿಳಿಯಿತು. ಅವರು ಬಂದು ನನಗೆ ಹ್ಯಾಂಡ್​ಶೇಕ್ ಮಾಡಿದರು. ನಾನು ಹಗ್​ ಕೊಡಬಹುದೇ ಎಂದು ಕೇಳಿದೆ. ಅವರು ಓಕೆ ಎಂದರು. ಅಪ್ಪುಗೆ ಕೊಟ್ಟ ಬಳಿಕ ನಾನು ಮೂರು ದಿನ ಸ್ನಾನವನ್ನೇ ಮಾಡಲಿಲ್ಲ. ನಾನು ಅಷ್ಟು ದೊಡ್ಡ ಅಭಿಮಾನಿ. ಕಮಲ್ ಹಾಸನ್ ಸಿನಿಮಾಗಳನ್ನು ನಾನು ಮೊದಲ ದಿನ ಮೊದಲ ಶೋನೇ ನೋಡೋದು’ ಎಂದು ಶಿವಣ್ಣ ಹೇಳಿದ್ದರು.

ಶಿವರಾಜ್​ಕುಮಾರ್ ಅವರು ಕ್ಯಾನ್ಸರ್ ಸರ್ಜರಿಗಾಗಿ ಮಿಯಾಮಿಗೆ ತೆರಳಿದ್ದರು. ಈ ವೇಳೆ ಕಮಲ್ ಅವರು ಶಿವರಾಜ್​ಕುಮಾರ್​ಗೆ ಕರೆ ಮಾಡಿದ್ದರು. ಆ ಘಟನೆಯನ್ನು ಶಿವಣ್ಣ ನೆನಪಿಸಿಕೊಂಡಿದ್ದಾರೆ. ‘ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾನು ಶಸ್ತ್ರಚಿಕಿತ್ಸೆಗಾಗಿ ಮಿಯಾಮಿಯಲ್ಲಿದ್ದೆ. ಕಮಲ್ ಸರ್ ನನಗೆ ಕರೆ ಮಾಡಿ ಮಾತನಾಡಿದರು. ಆ ಸಮಯದಲ್ಲಿ ಅವರು ಚಿಕಾಗೋದಲ್ಲಿದ್ದರು. ಅವರ ಕರೆ ನನಗೆ ಖುಷಿ ನೀಡಿತು’ ಎಂದಿದ್ದಾರೆ ಶಿವರಾಜ್​ಕುಮಾರ್.

ಇದನ್ನೂ ಓದಿ: ಶಿವರಾಜ್​ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..

ಶಿವರಾಜ್​ಕುಮಾರ್ ಜೊತೆ ಮಾತನಾಡಿದ ಬಳಿಕ ಕಮಲ್ ಹಾಸನ್​​ ಅವರು ಅತ್ತರಂತೆ. ‘ಕಮಲ್ ಹೇಳಿದ ಆ ಮಾತನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ನನ್ನ ತಂದೆಯೊಂದಿಗೆ ಮಾತನಾಡುತ್ತಿರುವಂತೆ ಭಾಸವಾಯಿತು’ ಎಂದು ಶಿವಣ್ಣ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ