ಕರ್ನಾಟಕ ಬಂದ್: ಚಿತ್ರರಂಗದ ಪ್ರತಿಭಟನೆಗೆ ಶಿವರಾಜ್​ಕುಮಾರ್ ನೇತೃತ್ವ

ಶಿವರಾಜ್​ಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಎನ್​ಎಂ ಕುಮಾರ್, ಶಿವರಾಜ್​ಕುಮಾರ್ ಬೆಂಬಲ ಸಿಕ್ಕಿರುವುದಾಗಿ ಹೇಳಿದ್ದಾರೆ. ‘ಶಿವರಾಜ್​ಕುಮಾರ್ ಅವರಿಗೆ ಧನ್ಯವಾದ ಹೇಳಬೇಕು. ಅವರು ಸಾಕಷ್ಟು ಗೌರವಯುತವಾಗಿ ನಡೆಸಿಕೊಂಡರು. ಅವರು ಬೆಂಬಲ ನೀಡುವುದಾಗಿ ಹೇಳಿದ್ದಾರೆ’ ಎಂದಿದ್ದಾರೆ ಎನ್​ಎಂ ಕುಮಾರ್.

ಕರ್ನಾಟಕ ಬಂದ್: ಚಿತ್ರರಂಗದ ಪ್ರತಿಭಟನೆಗೆ ಶಿವರಾಜ್​ಕುಮಾರ್ ನೇತೃತ್ವ
ಶಿವಣ್ಣ
Edited By:

Updated on: Sep 28, 2023 | 2:40 PM

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ (ಸೆಪ್ಟೆಂಬರ್ 29) ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಹಲವು ಸಂಘಟನೆಗಳು ಬಂದ್​​ಗೆ ಬೆಂಬಲ ನೀಡಿವೆ. ಸ್ಯಾಂಡಲ್​ವುಡ್​ ಕೂಡ ಬಂದ್​​ಗೆ ಬೆಂಬಲಸಿದೆ. ನಾಳೆ ಶಿವರಾಜ್​ಕುಮಾರ್ (Shivarajkumar) ನೇತೃತ್ವದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಇಂದು (ಸೆಪ್ಟೆಂಬರ್ 28) ಶಿವರಾಜ್​ಕುಮಾರ್ ಅವರ ನಿವಾಸಕ್ಕೆ ಫಿಲ್ಮ್​ ಚೇಂಬರ್ ಅಧ್ಯಕ್ಷ ಎನ್​ಎಂ ಸುರೇಶ್ (MN Suresh) ತಂಡ ತೆರಳಿತ್ತು. ಈ ಮಾತುಕತೆ ಯಶಸ್ವಿ ಆಗಿದೆ.

ಶಿವರಾಜ್​ಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಎನ್​ಎಂ ಕುಮಾರ್, ಶಿವರಾಜ್​ಕುಮಾರ್ ಬೆಂಬಲ ಸಿಕ್ಕಿರುವುದಾಗಿ ಹೇಳಿದ್ದಾರೆ. ‘ಶಿವರಾಜ್​ಕುಮಾರ್ ಅವರಿಗೆ ಧನ್ಯವಾದ ಹೇಳಬೇಕು. ಅವರು ಸಾಕಷ್ಟು ಗೌರವಯುತವಾಗಿ ನಡೆಸಿಕೊಂಡರು. ಅವರು ಬೆಂಬಲ ನೀಡುವುದಾಗಿ ಹೇಳಿದ್ದಾರೆ’ ಎಂದಿದ್ದಾರೆ ಎನ್​ಎಂ ಕುಮಾರ್.

ಶಿವರಾಜ್​ಕುಮಾರ್ ಬಿಟ್ಟು ಮತ್ಯಾರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ ಎಂದು ಕೇಳಲಾಯಿತು. ‘ಧ್ರುವ ಸರ್ಜಾ, ಪ್ರೇಮ್, ಅಜಯ್ ರಾವ್, ಶ್ರೀಮುರಳಿ, ವಿಜಯ್ ರಾಘವೇಂದ್ರ, ವಿನೋದ್ ಪ್ರಭಾಕರ್, ಮಾಲಾಶ್ರೀ, ಶ್ರುತಿ, ಪ್ರೇಮಾ ಮೊದಲಾದವರಿಗೆ ಆಹ್ವಾನ ನೀಡಿದ್ದೇವೆ. ಎಲ್ಲರೂ ಬರುತ್ತೇನೆ ಎನ್ನುವ ಭರವಸೆ ನೀಡಿದ್ದಾರೆ. ಶಿವಣ್ಣ ಅವರು ಬರ್ತೀನಿ ಎಂದಮೇಲೆ ಆನೆಬಲ ಸಿಕ್ಕಂತೆ ಆಯ್ತು’ ಎಂದಿದ್ದಾರೆ ಎನ್​​ಎಂ ಕುಮಾರ್.

ಇದನ್ನೂ ಓದಿ: ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಫೈರ್ ಫ್ಲೈ ಸಿನಿಮಾದ ಮೊದಲ‌ ಹಂತದ ಚಿತ್ರೀಕರಣ ಮುಕ್ತಾಯ

ಶಿವಾನಂದ ಸರ್ಕಲ್​ ಬಳಿಯ ಕಲ್ಯಾಣ ಮಂಟಪದ ಬಳಿ ಪ್ರತಿಭಟನೆ ನಡೆಯಲಿದೆ. 11 ಗಂಟೆಗೆ ಶಿವಣ್ಣ ಪ್ರತಿಭಟನೆಯಲ್ಲಿ ಭಾಗಿ ಆಗಲಿದ್ದಾರೆ. ಈ ಪ್ರತಿಭಟನೆಯಲ್ಲಿ ಯಾರ್ಯಾರು ಬರ್ತಾರೆ ಎಂಬ ಕತೂಹಲ ಮೂಡಿದೆ. ನಾಳೆ ಸಂಜೆಯವರೆಗ ಯಾವುದೇ ಸಿನಿಮಾ ಪ್ರದರ್ಶನ ಇರುವುದಿಲ್ಲ. ಹಲವು ಕಲಾವಿದರು ಪ್ರತಿಭಟನೆಯಲ್ಲಿ ಭಾಗಿ ಆಗುತ್ತಿದ್ದು, ಶೂಟಿಂಗ್ ಕೂಡ ಇರುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Mangala RR
Follow Us