‘ಸಪ್ಲೇಯರ್ ಶಂಕರ’ ಟೀಸರ್ ಬಿಡುಗಡೆ: ಬಾರು, ಕೊಲೆ, ಪೊಲೀಸ್ ದೌರ್ಜನ್ಯ, ರಿವೇಂಜ್ ಇನ್ನೂ ಏನೇನೋ

| Updated By: ಮದನ್​ ಕುಮಾರ್​

Updated on: Oct 21, 2023 | 3:46 PM

Supplier Shankar: ‘ಸಪ್ಲೇಯರ್ ಶಂಕರ’ ಸಿನಿಮಾದ ಟೀಸರ್ ಆನಂದ್ ಆಡಿಯೋ ನಲ್ಲಿ ಬಿಡುಗಡೆಯಾಗಿದೆ. ಥ್ರಿಲ್ಲರ್ ಕಥಾನಕ ಹೊಂದಿರುವ ಈ ಸಿನಿಮಾದ ಟೀಸರ್ ಗಮನ ಸೆಳೆಯುವಂತಿದೆ.

‘ಸಪ್ಲೇಯರ್ ಶಂಕರ’ ಟೀಸರ್ ಬಿಡುಗಡೆ: ಬಾರು, ಕೊಲೆ, ಪೊಲೀಸ್ ದೌರ್ಜನ್ಯ, ರಿವೇಂಜ್ ಇನ್ನೂ ಏನೇನೋ
‘ಸಪ್ಲೇಯರ್ ಶಂಕರ’ ಸಿನಿಮಾ ತಂಡ
Follow us on

ಸಪ್ಲೇಯರ್ ಶಂಕರ’ (Supplier Shankara) ಸಿನಿಮಾದ ಟೀಸರ್ ಆನಂದ್ ಆಡಿಯೋ ನಲ್ಲಿ ಬಿಡುಗಡೆಯಾಗಿದೆ. ಥ್ರಿಲ್ಲರ್ ಕತಾನಕ ಹೊಂದಿರುವ ಈ ಸಿನಿಮಾದ ಟೀಸರ್ ಗಮನ ಸೆಳೆಯುವಂತಿದೆ. ಬಾರಿನಲ್ಲಿ ನಡೆವ ಕೊಲೆ, ಆ ಕೊಲೆಯನ್ನು ಸಪ್ಲೈಯರ್​ಗಳು ಮಾಡಿದ್ದಾರಾ? ಗ್ರಾಹಕರಾ? ಎಂಬ ಕುತೂಹಲದ ನಡುವೆ ಪೊಲೀಸರ ದೌರ್ಜನ್ಯ, ಸೇಡು ಇತ್ಯಾದಿ ಎಲಿಮೆಂಟ್​ಗಳನ್ನು ಸಿನಿಮಾ ಒಳಗೊಂಡಿರುವ ಸುಳಿವನ್ನು ಸಿನಿಮಾದ ಟೀಸರ್ ನೀಡುತ್ತಿದೆ.

ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ಅವರು ‘ಸಪ್ಲೈಯರ್ ಶಂಕರ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾವನ್ನು ರಂಜಿತ್ ನಿರ್ದೇಶನ ಮಾಡಿದ್ದಾರೆ. ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿದ್ದಾರೆ. ಸಿನಿಮಾದ ಟೀಸರ್ ಅನ್ನು ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಬಿಡುಗಡೆ ಮಾಡಿದರು. ನಿರ್ದೇಶಕ ರಂಜಿತ್ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು. ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ತೆರೆಗೆ ತರುತ್ತೇವೆ ಎಂದು ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಈ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ:ಪುಂಡಾಟ ಮೆರೆದ ವಿಜಯ್ ಅಭಿಮಾನಿಗಳು, ಲಿಯೋ ಟ್ರೈಲರ್ ಬಿಡುಗಡೆ ವೇಳೆ ಚಿತ್ರಮಂದಿರದಲ್ಲಿ ದಾಂಧಲೆ

‘ಸಪ್ಲೇಯರ್ ಶಂಕರ” ಸಿನಿಮಾ ಬಾರ್ ಸಪ್ಲೇಯರ್ ಒಬ್ಬನ ಕತೆ. ಕತೆಯನ್ನು ನಾನೇ ಬರೆದಿದ್ದೇನೆ. ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಈ ಪಾತ್ರಕ್ಕಾಗಿ ನಾಯಕ ನಿಶ್ಚಿತ್ ಕರೋಡಿ ಬಹಳ ಶ್ರಮಪಟ್ಟಿದ್ದಾರೆ. ನನ್ನ ಕಥೆಗೆ ಜೀವ ತುಂಬಿದ್ದು ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್. ಈ ಚಿತ್ರದಲ್ಲಿ ಕೆಲಸ ಮಾಡಿರುವ ಬಹುತೇಕರು ಹೊಸಬರೇ. ಶೀಘ್ರದಲ್ಲೇ “ಸಪ್ಲೇಯರ್ ಶಂಕರ” ನಿಮ್ಮ ಮೆಚ್ಚಿನ ಚಿತ್ರಮಂದಿರಗಳಿಗೆ ಬರುತ್ತಾನೆ ಎಂದರು‌ ನಿರ್ದೇಶಕ ರಂಜಿತ್.

‘ಸಪ್ಲೇಯರ್ ಶಂಕರ’ ಟೀಸರ್ ಇಲ್ಲಿದೆ:

ನಾಯಕ ನಿಶ್ಚಿತ್ ಕರೋಡಿ ಮಾತನಾಡಿ, ”ಈ ಹಿಂದೆ ‘ಗಂಟು ಮೂಟೆ’ ಹಾಗೂ “ಟಾಮ್ & ಜೆರ್ರಿ” ಸಿನಿಮಾಗಳಲ್ಲಿ ನಟಿಸಿದ್ದೆ. ಇದು ಮೂರನೇ ಸಿನಿಮಾ. ಬಾರ್ ಸಪ್ಲೇಯರ್ ಪಾತ್ರ ನನ್ನದು. ಹಾಗಾಂತ ಈ ಚಿತ್ರದಲ್ಲಿ ಬರೀ ಸಪ್ಲೇಯರ್ ಕಥೆ ಮಾತ್ರ ಇಲ್ಲ. ಕಾಮಿಡಿ, ಸೆಂಟಿಮೆಂಟ್, ಲವ್, ಥ್ರಿಲ್ಲರ್ ಎಲ್ಲವೂ ಇದೆ. ನಿರ್ದೇಶಕ ರಂಜಿತ್ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ಶಿಕ್ಷಕಿ ಪಾತ್ರ ನಿರ್ವಹಿಸಿರುವುದಾಗಿ ನಾಯಕಿ ದೀಪಿಕಾ ಆರಾಧ್ಯ ಹೇಳಿದರು. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಆರ್ ಬಿ ಭರತ್ ಮಾಹಿತಿ ನೀಡಿದರು. ಛಾಯಾಗ್ರಾಹಕ ಸತೀಶ್ ಕುಮಾರ್ , ಸಂಕಲನಕಾರ ಸತೀಶ್ ಚಂದ್ರಯ್ಯ ಮುಂತಾದವರು “ಸಪ್ಲೇಯರ್ ಶಂಕರ” ಚಿತ್ರದ ಕುರಿತು ಮಾತನಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:55 pm, Fri, 20 October 23