ವಿಷ್ಣುವರ್ಧನ್ ನಟನೆಯ ಈ ಚಿತ್ರ ನೋಡಿದ್ದಾರೆ ಟಿಮ್ ಡೇವಿಡ್; ಅಚ್ಚರಿಯ ಮಾಹಿತಿ ರಿವೀಲ್

ಆರ್‌ಸಿಬಿ ಆಟಗಾರ ಟಿಮ್ ಡೇವಿಡ್ ಅವರು ದಾನಿಶ್ ಸೇಠ್ ಜೊತೆಗಿನ ಸಂದರ್ಶನದಲ್ಲಿ ವಿಷ್ಣುವರ್ಧನ್ ಅಭಿನಯದ ಚಿತ್ರವನ್ನು ನೋಡಿದ್ದಾಗಿ ಹೇಳಿದ್ದಾರೆ. ಈ ವಿಷಯ ವೈರಲ್ ಆಗಿದ್ದು, ಟಿಮ್ ಡೇವಿಡ್ ಅವರ ಕನ್ನಡ ಚಲನಚಿತ್ರದ ಬಗ್ಗೆ ಇರುವ ಒಲವು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಟಿಮ್ ಡೇವಿಡ್ ಸಿಂಗಾಪುರದಲ್ಲಿ ಜನಿಸಿದ್ದಾರೆ ಎಂಬುದನ್ನು ಸಹ ಅವರು ತಿಳಿಸಿದ್ದಾರೆ.

ವಿಷ್ಣುವರ್ಧನ್ ನಟನೆಯ ಈ ಚಿತ್ರ ನೋಡಿದ್ದಾರೆ ಟಿಮ್ ಡೇವಿಡ್; ಅಚ್ಚರಿಯ ಮಾಹಿತಿ ರಿವೀಲ್
ಡೇವಿಡ್-ವಿಷ್ಣು
Edited By:

Updated on: May 05, 2025 | 1:51 PM

2025ನೇ ಸಾಲಿನ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಟಿಮ್ ಡೇವಿಡ್ ಆಡುತ್ತಿದ್ದಾರೆ. ಅವರು ಸ್ಟ್ರಾಂಗ್ ಹಿಟ್ಟರ್ ಎನಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್​ನಲ್ಲಿ ಬಂದು ತಂಡದ ಮೊತ್ತ ಹೆಚ್ಚಿಸಲು ಅವರು ಕಾರಣ ಆಗುತ್ತಾರೆ. ಅವರು ದಾನಿಶ್ ಸೇಠ್ (Danish Sait) ಜೊತೆ ನೀಡಿದ ಸಂದರ್ಶನದಲ್ಲಿ ಒಂದು ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ. ಅದೇನೆಂದರೆ ಟಿಮ್ ಡೇವಿಡ್ ಅವರು ವಿಷ್ಣುವರ್ಧನ್ ನಟನೆಯ ಸಿನಿಮಾ ಒಂದನ್ನು ನೋಡಿದ್ದಾರಂತೆ! ಈ ಫನ್ ಟಾಕ್ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನು ಆರ್​ಸಿಬಿ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲಿ ಹಂಚಿಕೊಂಡಿದೆ.

ನಟ, ಆ್ಯಂಕರ್ ದಾನಿಶ್ ಸೇಠ್ ಅವರು ಪ್ರತಿ ಬಾರಿ ಆರ್​ಸಿಬಿ ಇನ್​ಸೈಡರ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ವೇಳೆ ಅವರು ಆಟಗಾರರ ಜೊತೆ ಮಾತುಕತೆ ನಡೆಸುತ್ತಾರೆ. ದಾನಿಶ್ ಅವರು ಈ ಬಾರಿ ಟಿಮ್ ಡೇವಿಡ್ ಜೊತೆ ಒಂದಷ್ಟು ಹರಟೆ ಹೊಡೆದಿದ್ದಾರೆ. ಅಷ್ಟೇ ಅಲ್ಲ, ಈ ವೇಳೆ ಒಂದು ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದಾರೆ.

ಟಿಮ್ ಡೇವಿಡ್ ಆಸ್ಟ್ರೇಲಿಯಾ ಆಟಗಾರ. ಆದರೆ, ಅವರು ಹುಟ್ಟಿದ್ದು ಸಿಂಗಾಪುರದಲ್ಲಿ. ಈ ವಿಚಾರವನ್ನು ಟಿಮ್ ರಿವೀಲ್ ಮಾಡಿದರು. ಆಗ, ದಾನಿಶ್ ಸೇಠ್ ಅವರು ‘ನಾನು ಮೊದಲ ಬಾರಿ ಸಿಂಗಾಪುರ ನೋಡಿದ್ದು ಕನ್ನಡದ ‘ಸಿಂಗಾಪೂರ್​ನಲ್ಲಿ ರಾಜ ಕುಳ್ಳ’ ಚಿತ್ರದಲ್ಲಿ. ಆ ಸಿನಿಮಾ ನೋಡಿದ್ದೀರಾ’ ಎಂದು ದಾನಿಶ್ ಕೇಳಿದ್ದಾರೆ. ಇದಕ್ಕೆ ಹೌದು ಎಂದಿದ್ದಾರೆ ಟಿಮ್.

ಇದನ್ನೂ ಓದಿ
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ
ಅಪಘಾತದ ಬಳಿಕ ಬದಲಾಯಿತು ನಾನಿ ಬದುಕು; ಅಂದು ಆಗಿದ್ದೇನು?
ಖ್ಯಾತ ನಿರ್ಮಾಪಕನ ಜೊತೆ ಪೋಸ್ ಕೊಟ್ಟ ಶ್ರೀಲೀಲಾ; ಕೇಳಿಬಂತು ಹೊಸ ಗಾಸಿಪ್
ಸಾರಾ ತೆಂಡೂಲ್ಕರ್​ಗೆ ಹೊಸ ಬಾಯ್​ಫ್ರೆಂಡ್; ಸ್ಟಾರ್ ನಟನ ಜೊತೆ ಡೇಟಿಂಗ್?

‘ಈ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ನಟಿಸಿದ್ದಾರೆ’ ಎಂದು ಟಿಮ್ ವಿವರಿಸಿದರು. ಆ ಬಳಿಕ ಈ ಚಿತ್ರದ ‘ಕುಳ್ಳರ ರಾಜ ಬಾರೋ..’ ಹಾಡಿಗೆ ಟಿಮ್ ಧ್ವನಿಗೂಡಿಸಿದ್ದಾರೆ. ಟಿಮ್ ಡೇವಿಡ್ ಅವರು ನಿಜಕ್ಕೂ ಈ ಸಿನಿಮಾನ ನೋಡಿದ್ದು ಅನುಮಾನವೇ. ಫನ್​ಗಾಗಿ ಅವರು ಈ ರೀತಿ ಹೇಳಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದ ಈ ನಟಿಗೆ 54 ವರ್ಷ; ಇವರು ಮದುವೆಯನ್ನೇ ಆಗಿಲ್ಲವೇಕೆ?

1978ರಲ್ಲಿ ಬಂದ ‘ಸಿಂಗಾಪೂರ್​ನಲ್ಲಿ ರಾಜ ಕುಳ್ಳ’ ಸಿನಿಮಾನ ಸಿವಿ ರಾಜೇಂದ್ರ ಅವರು ನಿರ್ದೇಶನ ಮಾಡಿದರು. ದ್ವಾರಕೀಶ್ ಅವರೇ ಚಿತ್ರವನ್ನು ನಿರ್ಮಾಣ ಮಾಡಿದರು. ವಿಷ್ಣುವರ್ಧನ್, ದ್ವಾರಕೀಶ್, ಮಂಜುಳಾ ಈ ಚಿತ್ರದಲ್ಲಿ ನಟಿಸಿದ್ದರು. ಆಗಿ ಕಾಲದಲ್ಲಿ ಸಿಂಗಾಪುರಕ್ಕೆ ತೆರಳಿ ಶೂಟ್ ಮಾಡಿ ಸಿನಿಮಾ ಸದ್ದು ಮಾಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:01 pm, Mon, 5 May 25

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us