ವಿಷ್ಣುವರ್ಧನ್ ನಟನೆಯ ಈ ಚಿತ್ರ ನೋಡಿದ್ದಾರೆ ಟಿಮ್ ಡೇವಿಡ್; ಅಚ್ಚರಿಯ ಮಾಹಿತಿ ರಿವೀಲ್

ಆರ್‌ಸಿಬಿ ಆಟಗಾರ ಟಿಮ್ ಡೇವಿಡ್ ಅವರು ದಾನಿಶ್ ಸೇಠ್ ಜೊತೆಗಿನ ಸಂದರ್ಶನದಲ್ಲಿ ವಿಷ್ಣುವರ್ಧನ್ ಅಭಿನಯದ ಚಿತ್ರವನ್ನು ನೋಡಿದ್ದಾಗಿ ಹೇಳಿದ್ದಾರೆ. ಈ ವಿಷಯ ವೈರಲ್ ಆಗಿದ್ದು, ಟಿಮ್ ಡೇವಿಡ್ ಅವರ ಕನ್ನಡ ಚಲನಚಿತ್ರದ ಬಗ್ಗೆ ಇರುವ ಒಲವು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಟಿಮ್ ಡೇವಿಡ್ ಸಿಂಗಾಪುರದಲ್ಲಿ ಜನಿಸಿದ್ದಾರೆ ಎಂಬುದನ್ನು ಸಹ ಅವರು ತಿಳಿಸಿದ್ದಾರೆ.

ವಿಷ್ಣುವರ್ಧನ್ ನಟನೆಯ ಈ ಚಿತ್ರ ನೋಡಿದ್ದಾರೆ ಟಿಮ್ ಡೇವಿಡ್; ಅಚ್ಚರಿಯ ಮಾಹಿತಿ ರಿವೀಲ್
ಡೇವಿಡ್-ವಿಷ್ಣು
Edited By:

Updated on: May 05, 2025 | 1:51 PM

2025ನೇ ಸಾಲಿನ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಟಿಮ್ ಡೇವಿಡ್ ಆಡುತ್ತಿದ್ದಾರೆ. ಅವರು ಸ್ಟ್ರಾಂಗ್ ಹಿಟ್ಟರ್ ಎನಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್​ನಲ್ಲಿ ಬಂದು ತಂಡದ ಮೊತ್ತ ಹೆಚ್ಚಿಸಲು ಅವರು ಕಾರಣ ಆಗುತ್ತಾರೆ. ಅವರು ದಾನಿಶ್ ಸೇಠ್ (Danish Sait) ಜೊತೆ ನೀಡಿದ ಸಂದರ್ಶನದಲ್ಲಿ ಒಂದು ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ. ಅದೇನೆಂದರೆ ಟಿಮ್ ಡೇವಿಡ್ ಅವರು ವಿಷ್ಣುವರ್ಧನ್ ನಟನೆಯ ಸಿನಿಮಾ ಒಂದನ್ನು ನೋಡಿದ್ದಾರಂತೆ! ಈ ಫನ್ ಟಾಕ್ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನು ಆರ್​ಸಿಬಿ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲಿ ಹಂಚಿಕೊಂಡಿದೆ.

ನಟ, ಆ್ಯಂಕರ್ ದಾನಿಶ್ ಸೇಠ್ ಅವರು ಪ್ರತಿ ಬಾರಿ ಆರ್​ಸಿಬಿ ಇನ್​ಸೈಡರ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ವೇಳೆ ಅವರು ಆಟಗಾರರ ಜೊತೆ ಮಾತುಕತೆ ನಡೆಸುತ್ತಾರೆ. ದಾನಿಶ್ ಅವರು ಈ ಬಾರಿ ಟಿಮ್ ಡೇವಿಡ್ ಜೊತೆ ಒಂದಷ್ಟು ಹರಟೆ ಹೊಡೆದಿದ್ದಾರೆ. ಅಷ್ಟೇ ಅಲ್ಲ, ಈ ವೇಳೆ ಒಂದು ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದಾರೆ.

ಟಿಮ್ ಡೇವಿಡ್ ಆಸ್ಟ್ರೇಲಿಯಾ ಆಟಗಾರ. ಆದರೆ, ಅವರು ಹುಟ್ಟಿದ್ದು ಸಿಂಗಾಪುರದಲ್ಲಿ. ಈ ವಿಚಾರವನ್ನು ಟಿಮ್ ರಿವೀಲ್ ಮಾಡಿದರು. ಆಗ, ದಾನಿಶ್ ಸೇಠ್ ಅವರು ‘ನಾನು ಮೊದಲ ಬಾರಿ ಸಿಂಗಾಪುರ ನೋಡಿದ್ದು ಕನ್ನಡದ ‘ಸಿಂಗಾಪೂರ್​ನಲ್ಲಿ ರಾಜ ಕುಳ್ಳ’ ಚಿತ್ರದಲ್ಲಿ. ಆ ಸಿನಿಮಾ ನೋಡಿದ್ದೀರಾ’ ಎಂದು ದಾನಿಶ್ ಕೇಳಿದ್ದಾರೆ. ಇದಕ್ಕೆ ಹೌದು ಎಂದಿದ್ದಾರೆ ಟಿಮ್.

ಇದನ್ನೂ ಓದಿ
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ
ಅಪಘಾತದ ಬಳಿಕ ಬದಲಾಯಿತು ನಾನಿ ಬದುಕು; ಅಂದು ಆಗಿದ್ದೇನು?
ಖ್ಯಾತ ನಿರ್ಮಾಪಕನ ಜೊತೆ ಪೋಸ್ ಕೊಟ್ಟ ಶ್ರೀಲೀಲಾ; ಕೇಳಿಬಂತು ಹೊಸ ಗಾಸಿಪ್
ಸಾರಾ ತೆಂಡೂಲ್ಕರ್​ಗೆ ಹೊಸ ಬಾಯ್​ಫ್ರೆಂಡ್; ಸ್ಟಾರ್ ನಟನ ಜೊತೆ ಡೇಟಿಂಗ್?

‘ಈ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ನಟಿಸಿದ್ದಾರೆ’ ಎಂದು ಟಿಮ್ ವಿವರಿಸಿದರು. ಆ ಬಳಿಕ ಈ ಚಿತ್ರದ ‘ಕುಳ್ಳರ ರಾಜ ಬಾರೋ..’ ಹಾಡಿಗೆ ಟಿಮ್ ಧ್ವನಿಗೂಡಿಸಿದ್ದಾರೆ. ಟಿಮ್ ಡೇವಿಡ್ ಅವರು ನಿಜಕ್ಕೂ ಈ ಸಿನಿಮಾನ ನೋಡಿದ್ದು ಅನುಮಾನವೇ. ಫನ್​ಗಾಗಿ ಅವರು ಈ ರೀತಿ ಹೇಳಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದ ಈ ನಟಿಗೆ 54 ವರ್ಷ; ಇವರು ಮದುವೆಯನ್ನೇ ಆಗಿಲ್ಲವೇಕೆ?

1978ರಲ್ಲಿ ಬಂದ ‘ಸಿಂಗಾಪೂರ್​ನಲ್ಲಿ ರಾಜ ಕುಳ್ಳ’ ಸಿನಿಮಾನ ಸಿವಿ ರಾಜೇಂದ್ರ ಅವರು ನಿರ್ದೇಶನ ಮಾಡಿದರು. ದ್ವಾರಕೀಶ್ ಅವರೇ ಚಿತ್ರವನ್ನು ನಿರ್ಮಾಣ ಮಾಡಿದರು. ವಿಷ್ಣುವರ್ಧನ್, ದ್ವಾರಕೀಶ್, ಮಂಜುಳಾ ಈ ಚಿತ್ರದಲ್ಲಿ ನಟಿಸಿದ್ದರು. ಆಗಿ ಕಾಲದಲ್ಲಿ ಸಿಂಗಾಪುರಕ್ಕೆ ತೆರಳಿ ಶೂಟ್ ಮಾಡಿ ಸಿನಿಮಾ ಸದ್ದು ಮಾಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:01 pm, Mon, 5 May 25