AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತದ ಬಳಿಕ ಬದಲಾಯಿತು ನಾನಿ ಬದುಕು; ಅಂದು ಆಗಿದ್ದೇನು?

ನಾನಿ ಅವರು ಇತ್ತೀಚೆಗೆ ಒಂದು ರಸ್ತೆ ಅಪಘಾತದ ಬಗ್ಗೆ ಮಾತನಾಡಿದ್ದಾರೆ. ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ನಾನಿ, ಆಂಬುಲೆನ್ಸ್‌ನಲ್ಲಿ ಮತ್ತೊಂದು ಅಪಘಾತಕ್ಕೆ ಸಾಕ್ಷಿಯಾಗಿದ್ದರು. ಗಾಯಾಳುಗಳಲ್ಲಿ ಒಬ್ಬ ಪುಟ್ಟ ಮಗುವನ್ನೂ ನೋಡಿದ ನಂತರ ಅವರ ಜೀವನದ ದೃಷ್ಟಿಕೋನವೇ ಬದಲಾಗಿದೆ ಎಂದು ಹೇಳಿದ್ದಾರೆ .

ಅಪಘಾತದ ಬಳಿಕ ಬದಲಾಯಿತು ನಾನಿ ಬದುಕು; ಅಂದು ಆಗಿದ್ದೇನು?
ನಾನಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:May 05, 2025 | 7:55 AM

Share

ನ್ಯಾಚುರಲ್ ಸ್ಟಾರ್ ನಾನಿ (Nani) ಪ್ರಸ್ತುತ ಸಾಲು ಸಾಲು ಹಿಟ್‌ ಚಿತ್ರಗಳನ್ನು ನೀಡುತ್ತಾ ಇದ್ದಾರೆ. ಒಂದೆಡೆ ನಾಯಕನಾಗಿ ನಟಿಸುತ್ತಾ, ಮತ್ತೊಂದೆಡೆ ನಿರ್ಮಾಪಕನಾಗಿಯೂ ನಾನಿ ಮಿಂಚುತ್ತಿದ್ದಾರೆ. ‘ದಸರಾ’ ಚಿತ್ರದಿಂದ ಪ್ರಾರಂಭಿಸಿ, ಅವರು ‘ಹಾಯ್ ನಾನ್ನ’, ‘ಹಿಟ್ 3’ ಚಿತ್ರಗಳೊಂದಿಗೆ ಬ್ಲಾಕ್‌ಬಸ್ಟರ್‌ ಹಿಟ್ ಪಡೆದರು. ಇತ್ತೀಚಿಗೆ ರಿಲೀಸ್ ಆದ  ‘ಹಿಟ್ 3’ ಚಿತ್ರವು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ‘ಹಿಟ್ 3’ ದೊಡ್ಡ ಹಿಟ್ ಆಗುವ ಹಾದಿಯಲ್ಲಿದೆ. ದಸರಾ ಚಿತ್ರದ ನಂತರ, ನಾನಿ ಮತ್ತೊಮ್ಮೆ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಪ್ರಭಾವಿತರಾದರು. ನಾನಿ ಪ್ರಸ್ತುತ ಹಿಟ್ 3 ಯಶಸ್ಸಿನ ಆನಂದದಲ್ಲಿದ್ದಾರೆ. ಅವರು ಸಂದರ್ಶನ ಒಂದರಲ್ಲಿ ರಸ್ತೆ ಅಪಘಾತದ ಬಗ್ಗೆ ಮಾತನಾಡಿದ್ದಾರೆ.

‘ನಾನು ಕಾರು ಖರೀದಿಸುವ ಮೊದಲು ರಸ್ತೆ ಅಪಘಾತವಾಗಿತ್ತು. ಒಂದು ದಿನ, ನಾನು ನನ್ನ ಸ್ನೇಹಿತನ ಕಾರನ್ನು ತೆಗೆದುಕೊಂಡು ಕೆಲವು ಸ್ನೇಹಿತರೊಂದಿಗೆ ಹೆದ್ದಾರಿಯಲ್ಲಿ ಡ್ರೈವ್ ಮಾಡಲು ಹೋದೆವು. ನಮ್ಮ ಕಾರು ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು. ರಾತ್ರಿಯ ಸಮಯವಾದ್ದರಿಂದ ಕತ್ತಲೆಯಲ್ಲಿ ನನಗೆ ಅದು ಕಾಣುತ್ತಿರಲಿಲ್ಲ. ಲಾರಿ ಅಲ್ಲೇ ಇದೆ ಎಂದು ನನಗೆ ಅರಿವಾಗುವ ಹೊತ್ತಿಗೆ ಅಪಘಾತ ನಡೆದುಹೋಗಿತ್ತು. ನಮ್ಮ ಕಾರು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿತ್ತು. ನನ್ನ ಮುಂದಿದ್ದ ಕನ್ನಡಿ ಒಡೆದು ನನ್ನ ಇಡೀ ದೇಹವನ್ನು ಚುಚ್ಚಿತು. ಅದರೊಂದಿಗೆ, ನನ್ನ ಇಡೀ ದೇಹವು ರಕ್ತದಲ್ಲಿ ಮುಳುಗಿತ್ತು.. ನನ್ನ ಪಕ್ಕದ ಸೀಟಿನಲ್ಲಿದ್ದ ನನ್ನ ಸ್ನೇಹಿತ ಪ್ರಜ್ಞೆ ತಪ್ಪಿದನು.. ಕೊನೆಗೆ, ನಾವು ಹೇಗೋ ಕಾರಿನಿಂದ ಇಳಿದೆವು’ ಎಂದಿದ್ದಾರೆ ಅವರು.

‘ನಮ್ಮನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ನಾವು ಹೋಗುವಾಗ ಮತ್ತೊಂದು ರಸ್ತೆ ಅಪಘಾತ ಸಂಭವಿಸಿತು. ಮದುವೆ ವಾಹನಕ್ಕೆ ಅಪಘಾತ ಸಂಭವಿಸಿತ್ತು. ಚಿಕ್ಕ ಮಗು ಸೇರಿದಂತೆ ಹಲವರು ಗಾಯಗೊಂಡಿದ್ದರು. ಅವರನ್ನೂ ನಮ್ಮ ಆಂಬ್ಯುಲೆನ್ಸ್‌ಗೆ ಹತ್ತಿಸಿಕೊಂಡರು. ಆ ಪುಟ್ಟ ಮಗುವನ್ನು ಹಾಗೆ ನೋಡುವುದು ನನಗೆ ಸಹಿಸಲಾಗಲಿಲ್ಲ. ಮಗುವನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಮಗು ಹೇಗಿದೆ ಎಂದು ತಿಳಿದುಕೊಳ್ಳಲು ನಾನು ಬೆಳಿಗ್ಗೆ ತನಕ ಕೋಣೆಯ ಹೊರಗೆ ನಿಂತಿದ್ದೆ. ಆ ರಾತ್ರಿ ನನ್ನ ಬದುಕನ್ನೇ ಬದಲಾಯಿಸಿತು’ ಎಂದಿದ್ದಾರೆ ಅವರು.

ಇದನ್ನೂ ಓದಿ
Image
ಖ್ಯಾತ ನಿರ್ಮಾಪಕನ ಜೊತೆ ಪೋಸ್ ಕೊಟ್ಟ ಶ್ರೀಲೀಲಾ; ಕೇಳಿಬಂತು ಹೊಸ ಗಾಸಿಪ್
Image
ಸಾರಾ ತೆಂಡೂಲ್ಕರ್​ಗೆ ಹೊಸ ಬಾಯ್​ಫ್ರೆಂಡ್; ಸ್ಟಾರ್ ನಟನ ಜೊತೆ ಡೇಟಿಂಗ್?
Image
‘ಲವ್ ಎಟ್ ಫಸ್ಟ್​ ಸೈಟ್’: ಕರ್ಣನ ನೋಡಿ ನಿಧಿಗೆ ಲವ್; ಹೇಗಿದೆ ನೋಡಿ ಹೊಸ ಪ್ರ
Image
ಖ್ಯಾತ ನಿರ್ದೇಶಕ ರಾಜಮೌಳಿಯ ನೆಚ್ಚಿನ ನಟಿ ಯಾರು ಗೊತ್ತಾ?

ಇದನ್ನೂ ಓದಿ: ಹಿಟ್ ಆಯ್ತಾ ‘ಹಿಟ್ 3’, ಎರಡು ದಿನಕ್ಕೆ ಸಿನಿಮಾ ಗಳಿಸಿದ್ದೆಷ್ಟು?

‘ಆ ಅಪಘಾತದ ನಂತರ ನಾನು ಜೀವನವನ್ನು ನೋಡುವ ರೀತಿ ಬದಲಾಯಿತು. ಈ ಭೂಮಿಯ ಮೇಲೆ ನಾವು ಕಳೆಯುವ ಪ್ರತಿ ಕ್ಷಣವೂ ನಮಗೆ ಒಂದು ಆಶೀರ್ವಾದ. ನಾವು ಪ್ರತಿ ಕ್ಷಣವನ್ನೂ ಸಂತೋಷದಿಂದ ಬದುಕಬೇಕು ಎಂದು ಅವನಿಗೆ ಅರ್ಥವಾಯಿತು’ ಎಂಬುದು ನಾನಿ ಮಾತು. ಈ ಕಾಮೆಂಟ್‌ಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:53 am, Mon, 5 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ