ನಾಳೆ ಬೆಳಗ್ಗೆ 9:45 ರ ವೇಳೆಗೆ ರಾಜಕುಮಾರ್ ಕುಟುಂಬಸ್ಥರು ಸಮಾಧಿ ಬಳಿ ಆಗಮಿಸಲಿದ್ದು, 11ನೇ ದಿನದ ಕಾರ್ಯ ನಡೆಸಲಿದ್ದಾರೆ. ಮೊದಲು ಸಮಾಧಿ ಬಳಿಯ ಕಾರ್ಯ ಮುಗಿಸಿ ನಂತರ ಮನೆಯಲ್ಲಿ ಕಾರ್ಯಗಳು ನಡೆಯಲಿದೆ. ಕುಟುಂಬದವರು ಸಮಾಧಿ ಬಳಿ ಬಂದು ವಿಧಿ ವಿಧಾನ ಕಾರ್ಯಗಳನ್ನು ಮುಗಿಸಿ ಹೋಗುವವರೆಗೂ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಕುಟುಂಬದವರು ತೆರಳಿದ ಬಳಿಕ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ನಟ ಪುನೀತ್ಗೆ ಬಸವಶ್ರೀ ಪ್ರಶಸ್ತಿ ಘೋಷಣೆ; ಮುರುಘಾಶ್ರೀಗಳಿಗೆ ಅಭಿಮಾನಿಗಳಿಂದ ಅಭಿನಂದನೆ
ನಟ ಪುನೀತ್ ರಾಜಕುಮಾರ್ಗೆ ಮುರುಘಾಮಠದಿಂದ ಬಸವಶ್ರೀ ಪ್ರಶಸ್ತಿ ಘೋಷಣೆ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾಶ್ರೀಗಳಿಗೆ ಅಪ್ಪು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮುರುಘಾಮಠಕ್ಕೆ ತೆರಳಿರುವ ಅಪ್ಪು ಅಭಿಮಾನಿಗಳು, ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ವಂದನೆ ಸಲ್ಲಿಸಿದ್ದಾರೆ. ನಟ ಪುನೀತ್ ರಾಜಕುಮಾರ್ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು.
ಇದನ್ನೂ ಓದಿ:
ನಟ ಪುನೀತ್ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಗಣ್ಯರ ಒತ್ತಾಯ; ದನಿಗೂಡಿಸಿದ ಆನಂದ್ ಸಿಂಗ್, ಬಿಸಿ ಪಾಟೀಲ್, ನಟ ಪ್ರೇಮ್
ರಿಲೀಸ್ಗೂ ಮೊದಲೇ ಸಂಕಷ್ಟಕ್ಕೆ ಸಿಲುಕಿದ ‘ಪುಷ್ಪ’; ಚಿಂತೆಗೀಡಾದ ಅಲ್ಲು ಅರ್ಜುನ್?