AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರಿಮಣಿ ಮಾಲೀಕ’ ಯಾರೆಂದು ಹೇಳಿದ ವಿಕ್ಕಿಪೀಡಿಯಾ

Vicky Pedia: ಕರಿಮಣಿ ಮಾಲೀಕ ಯಾರೆಂಬುದನ್ನು ವಿಕ್ಕಿಪೀಡಿಯಾ ಕಂಡು ಹಿಡಿದಿದ್ದಾರೆ. ಮಾಲೀಕ ಯಾರೆಂಬುದನ್ನು ಅವರಿಂದಲೇ ಕೇಳಿ.

‘ಕರಿಮಣಿ ಮಾಲೀಕ’ ಯಾರೆಂದು ಹೇಳಿದ ವಿಕ್ಕಿಪೀಡಿಯಾ
ಮಂಜುನಾಥ ಸಿ.
|

Updated on:Feb 08, 2024 | 3:11 PM

Share

‘ಏನಿಲ್ಲ, ಏನಿಲ್ಲ, ಕರಿ ಮಣಿ ಮಾಲೀಕ ನೀನಲ್ಲ’ ಹಾಡು ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ಟ್ರೆಂಡ್ ಆಗಿದೆ. ಎಲ್ಲರ ಮೊಬೈಲ್​ನಲ್ಲೂ, ಬಾಯಲ್ಲೂ ಈಗ ಅದೇ ಹಾಡು. 1999 ರಲ್ಲಿ ಬಿಡುಗಡೆ ಆಗಿದ್ದ ‘ಉಪೇಂದ್ರ’ ಸಿನಿಮಾದ ಈ ಹಾಡು ಆಗಲೂ ಜನಪ್ರಿಯವಾಗಿತ್ತು, ಈಗಂತೂ ಸಾಮಾಜಿಕ ಜಾಲತಾಣದ ದೆಸೆಯಿಂದ ಭಾರಿ ವೈರಲ್ ಆಗಿದೆ. ಸ್ವತಃ ಸಂಗೀತ ನಿರ್ದೇಶಕ ಗುರುಕಿರಣ್ ಸಹ ಹಾಡು ಹಾಡಿ ಟ್ರೆಂಡ್​ನ ಭಾಗವಾಗಿದ್ದಾರೆ. ಈ ಹಾಡಿನ ಮೇಲೆ ಒಂದರ ಹಿಂದೊಂದು ಮೀಮ್​ಗಳು ಬರುತ್ತಿವೆ. ‘ಕರಿಮಣಿ ಮಾಲಿಕ ನೀನಲ್ಲ’ ಸಾಲಂತೂ ಸಖತ್ ಟ್ರೆಂಡ್ ಆಗಿದೆ. ಈ ಕರಿಮಣಿ ಮಾಲೀಕ ಯಾರೆಂಬುದನ್ನು ಕನ್ನಡದ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ವಿಕ್ಕಿಪೀಡಿಯಾ ಅವರದ್ದೇ ಶೈಲಿಯಲ್ಲಿ ಹೇಳಿದ್ದಾರೆ.

ತಮ್ಮ ಕ್ಲೀನ್ ಕಾಮಿಡಿ, ಗುಣಮಟ್ಟದ ಕಾಮಿಡಿ ಕಂಟೆಂಟ್, ನಟನೆಯಿಂದ ಜನಪ್ರಿಯವಾಗಿರುವ ವಿಕ್ಕಿಪೀಡಿಯಾ ಇದೀಗ ‘ಏನಿಲ್ಲ ಏನಿಕ್ಕ’ ಟ್ರೆಂಡ್ ಮೇಲೆ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದಾರೆ. ವಿಡಿಯೋನಲ್ಲಿ ಕರಿಮಣಿ ಮಾಲೀಕ ಯಾರೆಂಬುದನ್ನು ಹೇಳಿದ್ದಾರೆ. ವಿಡಿಯೋನಲ್ಲಿ ವಿಕ್ಕಿಪೀಡಿಯಾ, ನಂದಿನಿ ವೇಷಧಾರಿಯಾಗಿದ್ದಾರೆ. ಅವರ ಗೆಳೆಯ ಅಮಿತ್ ಚಿಟ್ಟೆ ನಂದಿನಿಯ ಪತಿಯಾಗಿ ಕಾಣಿಸಿಕೊಂಡಿದ್ದಾರೆ. ಸಚಿತ್, ನಂದಿನಿಯ ‘ಗೆಳೆಯ’ನಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ನಮಗಿಂತ ಆ ನಟಿಯನ್ನು ರಕ್ಷಿತ್ ಶೆಟ್ಟಿ ಕಾಳಜಿ ಮಾಡಿದ: ಯೋಗಿ-ದಿಗಂತ್ ಅಳಲು, ಯಾರು ಆ ನಟಿ?

‘ನಿನಗೆ ಮಲ್ಲಿಗೆ, ಸಂಪಿಗೆ ಎಂದರೆ ಅಲರ್ಜಿ ಅಂತ ನಾನು ಹಣ್ಣು ತಂದಿದ್ದೀನಿ, ಆದರೆ ಅವನು ನೀನು ಸಸ್ಯಹಾರಿ ಅಂತ ಗೊತ್ತಿದ್ರೂ ಕಬಾಬ್ ತಂದಿದ್ದಾನೆ. ಈಗ ಹೇಳು ಈ ಕರಿಮಣಿ ಮಾಲೀಕ ಯಾರು ಅಂತ’ ಎಂದು ಅಮಿತ್, ನಂದಿನಿಯನ್ನು ಕೇಳುತ್ತಾನೆ. ಆಗ ನಂದಿನಿ, ಉತ್ತರವನ್ನು ಹಾಡಿನ ಮೂಲಕ ಕೊಡುತ್ತೀನಿ ಎಂದು ಹೇಳಿ, ‘ಮನಸಿನೊಳಗೆ ಖಾಲಿ ಖಾಲಿ, ಮನದೊಳಗೆ ನೀ ಇದ್ದರೂ. ಮಲ್ಲಿಗೆ, ಸಂಪಿಗೆ, ತರದೇ ಹೋದರು ನೀ ನನಗೆ, ಓ ನಲ್ಲ, ನೀ ನಲ್ಲ ಕರಿಮಣಿ ಮಾಲೀಕ ನೀನಲ್ಲ’ ಎಂದು ಹಾಡುತ್ತಾಳೆ, ಆಗ ಅಮಿತ್, ‘ಮತ್ತಿನ್ಯಾರು’ ಎಂದಾಗ ಮತ್ತೆ ಹಾಡು ಮುಂದುವರೆಸುವ ನಂದಿನಿ, ‘ಕರಿಮಣಿ ಮಾಲೀಕ ರಾಹುಲ್ಲ’ ಎನ್ನುತ್ತಾಳೆ. ಕಬಾಬ್ ಕೈಯಲ್ಲಿ ಹಿಡಿದ ರಾಹುಲ್ಲನಿಗೆ ಖುಷಿಯೋ ಖುಷಿ. ಪಾಪ ಅಮಿತ್ ಎದೆ ಬಡಿದುಕೊಂಡು ಅಳಲು ಪ್ರಾರಂಭಿಸುತ್ತಾನೆ.

ಹಾಡು ಮುಂದುವರೆದಂತೆ ‘ರಾಹುಲ್ಲ’ ಟ್ರೆಂಡ್​ ಸೃಷ್ಟಿಕರ್ತ ಚಂದ್ರು ಅವರ ‘ಚಟ-ಪಟ’, ‘ಒನ್ಸ್​ ಮೋರ್ ಒನ್ಸ್ ಮೋರ್ ಅಂತಾ ಇರ್ಬೇಕು’ ಡೈಲಾಗ್​ಗಳು ಸಹ ಕೇಳಿ ಬರುತ್ತವೆ. ವಿಕ್ಕಿಪೀಡಿಯಾ ಅವರ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್ ಆಗಿದೆ. ಸಾವಿರಾರು ಮಂದಿ ವಿಡಿಯೋ ವೀಕ್ಷಿಸಿ ಖುಷಿಪಟ್ಟಿದ್ದಾರೆ. ಕಮೆಂಟ್​ಗಳನ್ನು ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Thu, 8 February 24

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ