AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರಿಮಣಿ ಮಾಲೀಕ’ ಯಾರೆಂದು ಹೇಳಿದ ವಿಕ್ಕಿಪೀಡಿಯಾ

Vicky Pedia: ಕರಿಮಣಿ ಮಾಲೀಕ ಯಾರೆಂಬುದನ್ನು ವಿಕ್ಕಿಪೀಡಿಯಾ ಕಂಡು ಹಿಡಿದಿದ್ದಾರೆ. ಮಾಲೀಕ ಯಾರೆಂಬುದನ್ನು ಅವರಿಂದಲೇ ಕೇಳಿ.

‘ಕರಿಮಣಿ ಮಾಲೀಕ’ ಯಾರೆಂದು ಹೇಳಿದ ವಿಕ್ಕಿಪೀಡಿಯಾ
ಮಂಜುನಾಥ ಸಿ.
|

Updated on:Feb 08, 2024 | 3:11 PM

Share

‘ಏನಿಲ್ಲ, ಏನಿಲ್ಲ, ಕರಿ ಮಣಿ ಮಾಲೀಕ ನೀನಲ್ಲ’ ಹಾಡು ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ಟ್ರೆಂಡ್ ಆಗಿದೆ. ಎಲ್ಲರ ಮೊಬೈಲ್​ನಲ್ಲೂ, ಬಾಯಲ್ಲೂ ಈಗ ಅದೇ ಹಾಡು. 1999 ರಲ್ಲಿ ಬಿಡುಗಡೆ ಆಗಿದ್ದ ‘ಉಪೇಂದ್ರ’ ಸಿನಿಮಾದ ಈ ಹಾಡು ಆಗಲೂ ಜನಪ್ರಿಯವಾಗಿತ್ತು, ಈಗಂತೂ ಸಾಮಾಜಿಕ ಜಾಲತಾಣದ ದೆಸೆಯಿಂದ ಭಾರಿ ವೈರಲ್ ಆಗಿದೆ. ಸ್ವತಃ ಸಂಗೀತ ನಿರ್ದೇಶಕ ಗುರುಕಿರಣ್ ಸಹ ಹಾಡು ಹಾಡಿ ಟ್ರೆಂಡ್​ನ ಭಾಗವಾಗಿದ್ದಾರೆ. ಈ ಹಾಡಿನ ಮೇಲೆ ಒಂದರ ಹಿಂದೊಂದು ಮೀಮ್​ಗಳು ಬರುತ್ತಿವೆ. ‘ಕರಿಮಣಿ ಮಾಲಿಕ ನೀನಲ್ಲ’ ಸಾಲಂತೂ ಸಖತ್ ಟ್ರೆಂಡ್ ಆಗಿದೆ. ಈ ಕರಿಮಣಿ ಮಾಲೀಕ ಯಾರೆಂಬುದನ್ನು ಕನ್ನಡದ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ವಿಕ್ಕಿಪೀಡಿಯಾ ಅವರದ್ದೇ ಶೈಲಿಯಲ್ಲಿ ಹೇಳಿದ್ದಾರೆ.

ತಮ್ಮ ಕ್ಲೀನ್ ಕಾಮಿಡಿ, ಗುಣಮಟ್ಟದ ಕಾಮಿಡಿ ಕಂಟೆಂಟ್, ನಟನೆಯಿಂದ ಜನಪ್ರಿಯವಾಗಿರುವ ವಿಕ್ಕಿಪೀಡಿಯಾ ಇದೀಗ ‘ಏನಿಲ್ಲ ಏನಿಕ್ಕ’ ಟ್ರೆಂಡ್ ಮೇಲೆ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದಾರೆ. ವಿಡಿಯೋನಲ್ಲಿ ಕರಿಮಣಿ ಮಾಲೀಕ ಯಾರೆಂಬುದನ್ನು ಹೇಳಿದ್ದಾರೆ. ವಿಡಿಯೋನಲ್ಲಿ ವಿಕ್ಕಿಪೀಡಿಯಾ, ನಂದಿನಿ ವೇಷಧಾರಿಯಾಗಿದ್ದಾರೆ. ಅವರ ಗೆಳೆಯ ಅಮಿತ್ ಚಿಟ್ಟೆ ನಂದಿನಿಯ ಪತಿಯಾಗಿ ಕಾಣಿಸಿಕೊಂಡಿದ್ದಾರೆ. ಸಚಿತ್, ನಂದಿನಿಯ ‘ಗೆಳೆಯ’ನಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ನಮಗಿಂತ ಆ ನಟಿಯನ್ನು ರಕ್ಷಿತ್ ಶೆಟ್ಟಿ ಕಾಳಜಿ ಮಾಡಿದ: ಯೋಗಿ-ದಿಗಂತ್ ಅಳಲು, ಯಾರು ಆ ನಟಿ?

‘ನಿನಗೆ ಮಲ್ಲಿಗೆ, ಸಂಪಿಗೆ ಎಂದರೆ ಅಲರ್ಜಿ ಅಂತ ನಾನು ಹಣ್ಣು ತಂದಿದ್ದೀನಿ, ಆದರೆ ಅವನು ನೀನು ಸಸ್ಯಹಾರಿ ಅಂತ ಗೊತ್ತಿದ್ರೂ ಕಬಾಬ್ ತಂದಿದ್ದಾನೆ. ಈಗ ಹೇಳು ಈ ಕರಿಮಣಿ ಮಾಲೀಕ ಯಾರು ಅಂತ’ ಎಂದು ಅಮಿತ್, ನಂದಿನಿಯನ್ನು ಕೇಳುತ್ತಾನೆ. ಆಗ ನಂದಿನಿ, ಉತ್ತರವನ್ನು ಹಾಡಿನ ಮೂಲಕ ಕೊಡುತ್ತೀನಿ ಎಂದು ಹೇಳಿ, ‘ಮನಸಿನೊಳಗೆ ಖಾಲಿ ಖಾಲಿ, ಮನದೊಳಗೆ ನೀ ಇದ್ದರೂ. ಮಲ್ಲಿಗೆ, ಸಂಪಿಗೆ, ತರದೇ ಹೋದರು ನೀ ನನಗೆ, ಓ ನಲ್ಲ, ನೀ ನಲ್ಲ ಕರಿಮಣಿ ಮಾಲೀಕ ನೀನಲ್ಲ’ ಎಂದು ಹಾಡುತ್ತಾಳೆ, ಆಗ ಅಮಿತ್, ‘ಮತ್ತಿನ್ಯಾರು’ ಎಂದಾಗ ಮತ್ತೆ ಹಾಡು ಮುಂದುವರೆಸುವ ನಂದಿನಿ, ‘ಕರಿಮಣಿ ಮಾಲೀಕ ರಾಹುಲ್ಲ’ ಎನ್ನುತ್ತಾಳೆ. ಕಬಾಬ್ ಕೈಯಲ್ಲಿ ಹಿಡಿದ ರಾಹುಲ್ಲನಿಗೆ ಖುಷಿಯೋ ಖುಷಿ. ಪಾಪ ಅಮಿತ್ ಎದೆ ಬಡಿದುಕೊಂಡು ಅಳಲು ಪ್ರಾರಂಭಿಸುತ್ತಾನೆ.

ಹಾಡು ಮುಂದುವರೆದಂತೆ ‘ರಾಹುಲ್ಲ’ ಟ್ರೆಂಡ್​ ಸೃಷ್ಟಿಕರ್ತ ಚಂದ್ರು ಅವರ ‘ಚಟ-ಪಟ’, ‘ಒನ್ಸ್​ ಮೋರ್ ಒನ್ಸ್ ಮೋರ್ ಅಂತಾ ಇರ್ಬೇಕು’ ಡೈಲಾಗ್​ಗಳು ಸಹ ಕೇಳಿ ಬರುತ್ತವೆ. ವಿಕ್ಕಿಪೀಡಿಯಾ ಅವರ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್ ಆಗಿದೆ. ಸಾವಿರಾರು ಮಂದಿ ವಿಡಿಯೋ ವೀಕ್ಷಿಸಿ ಖುಷಿಪಟ್ಟಿದ್ದಾರೆ. ಕಮೆಂಟ್​ಗಳನ್ನು ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Thu, 8 February 24

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?