Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗ ಶೌರ್ಯನನ್ನು ನಟನಾಗಿಸುವ ಆಸೆಯಿತ್ತು ವಿಜಯ್-ಸ್ಪಂದನಾಗೆ: ನಾಗಾಭರಣ

Vijay-Spandana: ವಿಜಯ್ ರಾಘವೇಂದ್ರ-ಸ್ಪಂದನಾ ದಂಪತಿಗಳು ಪುತ್ರ ಶೌರ್ಯನ ಭವಿಷ್ಯದ ಬಗ್ಗೆ ಕಂಡಿದ್ದ ಕನಸಿನ ಬಗ್ಗೆ ನಿರ್ದೇಶಕ ಟಿಎಸ್ ನಾಗಾಭರಣ ಮಾತನಾಡಿದ್ದಾರೆ.

ಮಗ ಶೌರ್ಯನನ್ನು ನಟನಾಗಿಸುವ ಆಸೆಯಿತ್ತು ವಿಜಯ್-ಸ್ಪಂದನಾಗೆ: ನಾಗಾಭರಣ
ವಿಜಯ್ ದಂಪತಿ
Follow us
Mangala RR
| Updated By: ಮಂಜುನಾಥ ಸಿ.

Updated on: Aug 10, 2023 | 6:06 PM

ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅಕಾಲ ಮರಣಕ್ಕೆ ಈಡಾಗಿದ್ದಾರೆ. ಕಸಿನ್ ಜೊತೆ ಪ್ರವಾಸಕ್ಕೆ ತೆರಳಿದ್ದಾಗ ಅಲ್ಲಿ ಹೃದಯಾಘಾತಕ್ಕೆ ಗುರಿಯಾಗಿ ನಿಧನ ಹೊಂದಿದ್ದಾರೆ. ವಿಜಯ್ ಹಾಗೂ ಸ್ಪಂದನಾಗೆ 14 ವರ್ಷದ ಪುತ್ರನಿದ್ದಾನೆ. ಶೌರ್ಯ ಹೆಸರಿನ ಮಗನ ಬಗ್ಗೆ ಅಪಾರ ಕನಸುಗಳನ್ನು ಈ ಜೋಡಿ ಇರಿಸಿಕೊಂಡಿತ್ತು. ಸ್ಪಂದನಾ ಸಹ ಮಗನ ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಇಟ್ಟುಕೊಂಡಿದ್ದರು. ಆದರೆ ಮಗನ ಭವಿಷ್ಯವನ್ನು ಕಾಣದೆ ಇಹಲೋಕ ತ್ಯಜಿಸಿದರು.

ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾರಿಗೆ ಶೌರ್ಯನನ್ನು ನಟನನ್ನಾಗಿ ಮಾಡುವ ಆಸೆಯಿತ್ತು ಎಂದಿರುವ ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ, ಆ ಬಗ್ಗೆ ವಿಜಯ್ ರಾಘವೇಂದ್ರ ತಮ್ಮೊಟ್ಟಿಗೆ ಮಾತನಾಡಿದ್ದು ಮಾತ್ರವೇ ಅಲ್ಲದೆ, ತಮ್ಮದೇ ನಟನಾ ತರಬೇತಿ ತರಗತಿಗೆ ಶೌರ್ಯನನ್ನು ಸೇರಿಸಿದ್ದರ ಬಗ್ಗೆ ನಾಗಾಭರಣ ಅವರು ಟಿವಿ9ಗೆ ವಿವರಿಸಿದ್ದಾರೆ.

ವಿಜಯ್ ರಾಘವೇಂದ್ರ ನಮ್ಮ ಮನೆ ಮಗ, ‘ಚಿನ್ನಾರಿಮುತ್ತ’, ‘ಕಲ್ಲರಳಿ ಹೂವಾಗಿ’ ಸಿನಿಮಾಗಳಲ್ಲಿ ನಾನು ಅವನನ್ನು ನಿರ್ದೇಶಿಸಿದ್ದೀನಿ, ಅವನ ಬಾಲ್ಯ ಯೌವ್ವನ ಎರಡನ್ನೂ ನಾನು ನೋಡಿದ್ದೀನಿ, ನನ್ನ ಹಾಗೂ ಸಿನಿಮಾ ಪಯಣ ಒಟ್ಟಿಗೆ ಸಾಗುತ್ತಿತ್ತು ಎಂದರೂ ತಪ್ಪಾಗಲಾರದು. ಮಗನಿಗೆ ನಟನೆ ಬಗ್ಗೆ ಒಲವಿರುವುದು ಗುರುತಿಸಿದ್ದ ವಿಜಯ್ ರಾಘವೇಂದ್ರ, ನನ್ನ ಭರಣ ಅಕಾಡೆಮಿ ಫರ್ಮಾರ್ಮಿಂಗ್ ಆರ್ಟ್ಸ್​ಗೆ ಸೇರಿಸಿದ್ದ. ವಾರಕ್ಕೆ ಎರಡು ದಿನ ಮಾತ್ರವೇ ತರಗತಿ ಇರುತ್ತಿತ್ತು. ಎರಡೂ ದಿನ ವಿಜಯ್ ರಾಘವೇಂದ್ರನೇ ಮಗನನ್ನು ತರಗತಿಗೆ ಕರೆದುಕೊಂಡು ಬರುತ್ತಿದ್ದ, ಮರಳಿ ಕರೆದುಕೊಂಡು ಹೋಗುತ್ತಿದ್ದ ಮಗನ ಬಗ್ಗೆ ಅಷ್ಟು ಕಾಳಜಿ ವಿಜಯ್​ಗೆ ಇತ್ತು.

ಇದನ್ನೂ ಓದಿ:ವಿಜಯ್ ರಾಘವೇಂದ್ರಗೆ ಆಪ್ತವಾಗಿ ಸಾಂತ್ವನ ಹೇಳಿದ ನಟ ಯಶ್

ಶೌರ್ಯನ ಬಗ್ಗೆ ನನ್ನ ಬಳಿ ಮಾತನಾಡಿದ್ದ ವಿಜಯ್, ಅವನಿಗೆ ಅಭಿನಯದಲ್ಲಿ ಆಸಕ್ತಿ ಇದ್ದಂತಿದೆ, ನೀವೇ ಅವನನ್ನು ತರಬೇತುಗೊಳಿಸಬೇಕು ಎಂದಿದ್ದ ಮಾತ್ರವಲ್ಲದೆ, ಸ್ಪಂದನಾಗೆ ಸಹ ಶೌರ್ಯ ನಿಮ್ಮ ಬಳಿ ತರಬೇತಿ ಪಡೆಯುತ್ತಿರುವ ಬಗ್ಗೆ ಬಹಳ ಖುಷಿ ಇದೆ ಎಂದಿದ್ದ ಎಂಬುದನ್ನು ನೆನಪು ಮಾಡಿಕೊಂಡಿದ್ದಾರೆ. ಬಾಲಕ ಶೌರ್ಯನಿಗೆ ಇರುವ ಸಹಜ ಕುತೂಹಲ, ನಿಷ್ಕಲ್ಮಷ ನಗುವಿನ ಬಗ್ಗೆಯೂ, ನಟನಿಗೆ ಇರಬೇಕಾದ ಬೇಸಿಕ್ ಕೆಲವು ಅರ್ಹತೆಗಳು ಶೌರ್ಯಗೆ ಇರವುದಾಗಿಯೂ ನಾಗಾಭರಣ ಇದೇ ಸಂದರ್ಭದಲ್ಲಿ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್