Kichcha Sudeep: ಕಿಚ್ಚನ ಹೃದಯವಂತಿಕೆ; ಹಾರ್ಟ್​ ಸಮಸ್ಯೆ ಹೊಂದಿರುವ ಪುಟ್ಟ ಬಾಲಕನನ್ನು ಭೇಟಿಯಾದ ಸುದೀಪ್​

| Updated By: ಮದನ್​ ಕುಮಾರ್​

Updated on: Aug 02, 2022 | 10:14 AM

Vikrant Rona | Kichcha Sudeep Fans: ‘ವಿಕ್ರಾಂತ್​ ರೋಣ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಈ ನಡುವೆ ಕಿಚ್ಚ ಸುದೀಪ್​ ಅವರ ಈ ಸರಳತೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

Kichcha Sudeep: ಕಿಚ್ಚನ ಹೃದಯವಂತಿಕೆ; ಹಾರ್ಟ್​ ಸಮಸ್ಯೆ ಹೊಂದಿರುವ ಪುಟ್ಟ ಬಾಲಕನನ್ನು ಭೇಟಿಯಾದ ಸುದೀಪ್​
ಕಿಚ್ಚ ಸುದೀಪ್
Follow us on

ನಟ ಸುದೀಪ್​ ಅವರನ್ನು ಕಂಡರೆ ಎಲ್ಲ ವಯೋಮಾನದ ಅಭಿಮಾನಿಗಳಿಗೂ ಸಖತ್​ ಇಷ್ಟ. ಅದರಲ್ಲೂ ವಿಶೇಷವಾಗಿ ಮಕ್ಕಳು ಅವರನ್ನು ಹೆಚ್ಚು ಇಷ್ಟಪಡುತ್ತಾರೆ. ಅವರ ಸಿನಿಮಾಗಳನ್ನು ನೋಡಿ ಪುಟಾಣಿ ಫ್ಯಾನ್ಸ್​ ಎಂಜಾಯ್​ ಮಾಡುತ್ತಾರೆ. ಕಿಚ್ಚ ಸುದೀಪ್​ (Kichcha Sudeep) ಅವರನ್ನು ಭೇಟಿ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆ ಆಸೆ ಈಡೇರಲು ಸಮಯ ಕೂಡಿ ಬರಬೇಕು. ಈಗ ವಿಶೇಷ ಅಭಿಮಾನಿಯ ಬಯಕೆಯನ್ನು ಸುದೀಪ್​ ಈಡೇರಿಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ (Heart Disease) ಬಳಲುತ್ತಿರುವ ಬಾಲಕನ್ನು ಕಿಚ್ಚ ಭೇಟಿ ಮಾಡಿದ್ದಾರೆ. ಆ ಮೂಲಕ ತಮ್ಮ ಪುಟಾಣಿ ಅಭಿಮಾನಿಗೆ ಅವರು ಖುಷಿ ನೀಡಿದ್ದಾರೆ. ಅದೇ ರೀತಿ, ಆಟೋ ಚಾಲಕರೊಬ್ಬರ ಪ್ರೀತಿಗೆ ಸ್ವತಃ ಸುದೀಪ್​ ಮನಸೋತಿದ್ದಾರೆ. ಈ ಎರಡೂ ಘಟನೆಗಳ ಬಗ್ಗೆ ತಿಳಿದ ಬಳಿಕ ತಮ್ಮ ನೆಚ್ಚಿನ ನಟನ ಹೃದಯವಂತಿಕೆ ಕಂಡು ಫ್ಯಾನ್ಸ್​ (Kichcha Sudeep Fans) ಭೇಷ್​ ಎನ್ನುತ್ತಿದ್ದಾರೆ.

ಆಜಾನ್​ ಖಾನ್​ ಎಂಬ ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನಿಗೆ ಕಿಚ್ಚ ಸುದೀಪ್​ ಎಂದರೆ ಪಂಚಪ್ರಾಣ. ‘ಅಭಿನಯ ಚಕ್ರವರ್ತಿ’ಯನ್ನು ಒಮ್ಮೆಯಾದೂ ಭೇಟಿ ಮಾಡಬೇಕು ಎಂದು ಆತ ಕಂಡಿದ್ದ ಕನಸು ಸೋಮವಾರ (ಆಗಸ್ಟ್​ 1) ನನಸಾಗಿದೆ. ‘ವಿಕ್ರಾಂತ್​ ರೋಣ’ ಸಿನಿಮಾದ ನಿರ್ಮಾಪಕ ಜಾಕ್​ ಮಂಜು ಅವರ ಸಹಾಯದಿಂದ ಕಿಚ್ಚ ಸುದೀಪ್ ಅವರನ್ನು ಆಜಾನ್​ ಖಾನ್​ ಭೇಟಿ ಮಾಡಿದ್ದಾನೆ. ಫೇವರಿಟ್​ ಹೀರೋ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಆತ ಸಂಭ್ರಮಿಸಿದ್ದಾನೆ.

ಇನ್ನೊಂದೆಡೆ, ಆಟೋ ಚಾಲಕರೊಬ್ಬರ ಪ್ರೀತಿಯನ್ನು ಕಂಡು ಸುದೀಪ್​ ಖುಷಿಯಾಗಿದ್ದಾರೆ. ಅಭಿಮಾನಿಯ ಆಟೋ ಹಿಂದೆ ‘ಕಿಚ್ಚನ ಮೇಲೆ ಹುಚ್ಚು ಪ್ರೀತಿ’ ಎಂದು ಬರೆದಿರುವ ಸಾಲುಗಳು ಸುದೀಪ್​ ಕಣ್ಣಿಗೆ ಕಾಣಿಸಿದೆ. ಬೆಂಗಳೂರಿನ ಜಯನಗರದಲ್ಲಿ ಕಂಡ ಆ ಆಟೋದ ಚಾಲಕನನ್ನು ಕರೆದು ಸುದೀಪ್​ ಮಾತನಾಡಿಸಿದ್ದಾರೆ. ಅಭಿಮಾನಿಯ ಜೊತೆ ಫೋಟೋಗೆ ಪೋಸ್​ ನೀಡಿ ಚಾಲಕನನ್ನು ಖುಷಿಪಡಿಸಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ
‘ವಿಕ್ರಾಂತ್​ ರೋಣ’ ಸೂಪರ್​ ಹಿಟ್​; ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ‘ಕಬ್ಜ’ ಮೇಲೆ ಹೆಚ್ಚಿತು ನಿರೀಕ್ಷೆ
Vikrant Rona: ದೆಹಲಿಯಲ್ಲಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದ ಕಿಚ್ಚ ಸುದೀಪ್​; ಇಲ್ಲಿವೆ ಫೋಟೋಗಳು
Prashanth Neel: ಕಿಚ್ಚ ಸುದೀಪ್​, ‘ವಿಕ್ರಾಂತ್ ರೋಣ’ ತಂಡಕ್ಕೆ ವಿಶ್ ಮಾಡಿದ ‘ಕೆಜಿಎಫ್​ 2’ ನಿರ್ದೇಶಕ ಪ್ರಶಾಂತ್​ ನೀಲ್​
ಕ್ರಿಕೆಟ್​ ದಿಗ್ಗಜರಿಂದ ಸಿಕ್ಕ ಗಿಫ್ಟ್​​ಗಳ ಪೂರ್ತಿ ಪಟ್ಟಿ ನೀಡಿದ ಕಿಚ್ಚ ಸುದೀಪ್​; ಇವುಗಳಿಗೆ ಬೆಲೆ ಕಟ್ಟೋಕಾಗಲ್ಲ

ಕಿಚ್ಚ ಸುದೀಪ್​ ಅವರ ಈ ಸರಳತೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ‘ವಿಕ್ರಾಂತ್​ ರೋಣ’ ಸಿನಿಮಾಗೆ ಸಿಕ್ಕಿರುವ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಜುಲೈ 28ರಂದು ತೆರೆಕಂಡ ಈ ಚಿತ್ರ ಜಯಭೇರಿ ಬಾರಿಸಿದೆ. ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಬಾಕ್ಸ್​ ಆಫೀಸ್​ ಗಳಿಕೆಯಲ್ಲೂ ಈ ಚಿತ್ರ ಅನೇಕ ದಾಖಲೆಗಳನ್ನು ಬರೆಯುತ್ತಿದೆ.