AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೃಶ್ಯಂ ಸಿನಿಮಾ ನಿರ್ದೇಶಕರ ಸಾವಿನ ಸುದ್ದಿ ಕೇವಲ ವದಂತಿ ಎಂದ ಸ್ನೇಹಿತರು

ಕೆಲವು ಗಂಟೆಗಳ ಹಿಂದೆ ದೃಶ್ಯಂ ಸಿನಿಮಾದ ನಿರ್ದೇಶಕ ನಿಶಿಕಾಂತ್ ಕಾಮತ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಸದ್ಯ ನಿಶಿಕಾಂತ್ ಕಾಮತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಿಶಿಕಾಂತ್ ಕಾಮತ್ ಯಕೃತಿನ ಸಮಸ್ಯೆಯಿಂದ ಬಳಲುತ್ತಿದ್ದು, ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ ಇಂದು ನಿಶಿಕಾಂತ್ ಆಪ್ತ ನಿರ್ದೇಶಕ ಮಿಲಾಪ್​ ಝವೇರಿ ತಮ್ಮ ಟ್ವಿಟರ್​ ಖಾತೆಯಲ್ಲಿ ನಿಶಿಕಾಂತ್​ ಕಾಮತ್​ ನಿಧನರಾಗಿದ್ದಾರೆ ಎಂದು ಆಕಸ್ಮಿಕವಾಗಿ ಪೋಸ್ಟ್​ ಮಾಡಿಬಿಟ್ಟರು. ಇವರ ಟ್ವೀಟ್​ನಿಂದ ನಿಶಿಕಾಂತ್ ಸಾವಿನ್ನಪ್ಪಿದ್ದಾರೆ ಎಂದು ಎಲ್ಲರೂ […]

ದೃಶ್ಯಂ ಸಿನಿಮಾ ನಿರ್ದೇಶಕರ ಸಾವಿನ ಸುದ್ದಿ ಕೇವಲ ವದಂತಿ ಎಂದ ಸ್ನೇಹಿತರು
ಸಾಧು ಶ್ರೀನಾಥ್​
| Edited By: |

Updated on: Aug 17, 2020 | 4:01 PM

Share

ಕೆಲವು ಗಂಟೆಗಳ ಹಿಂದೆ ದೃಶ್ಯಂ ಸಿನಿಮಾದ ನಿರ್ದೇಶಕ ನಿಶಿಕಾಂತ್ ಕಾಮತ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಸದ್ಯ ನಿಶಿಕಾಂತ್ ಕಾಮತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ನಿಶಿಕಾಂತ್ ಕಾಮತ್ ಯಕೃತಿನ ಸಮಸ್ಯೆಯಿಂದ ಬಳಲುತ್ತಿದ್ದು, ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ ಇಂದು ನಿಶಿಕಾಂತ್ ಆಪ್ತ ನಿರ್ದೇಶಕ ಮಿಲಾಪ್​ ಝವೇರಿ ತಮ್ಮ ಟ್ವಿಟರ್​ ಖಾತೆಯಲ್ಲಿ ನಿಶಿಕಾಂತ್​ ಕಾಮತ್​ ನಿಧನರಾಗಿದ್ದಾರೆ ಎಂದು ಆಕಸ್ಮಿಕವಾಗಿ ಪೋಸ್ಟ್​ ಮಾಡಿಬಿಟ್ಟರು.

ಇವರ ಟ್ವೀಟ್​ನಿಂದ ನಿಶಿಕಾಂತ್ ಸಾವಿನ್ನಪ್ಪಿದ್ದಾರೆ ಎಂದು ಎಲ್ಲರೂ ನಂಬಿದರು. ಆದರೆ, ಕೂಡಲೇ ಮಿಲಾಪ್ ಝವೇರಿ ಹಾಗೂ ನಿಶಿಕಾಂತ್​ ಕಾಮತ್  ಸ್ನೇಹಿತರಾದ ರಿತೇಶ್ ದೇಶಮುಖ್ ನಿಶಿಕಾಂತ್ ಕಾಮತ್ ಮೃತಪಟ್ಟಿಲ್ಲ. ಬದಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸ್ಪಷ್ಟನೆ ನೀಡಿದ್ದಾರೆ.

https://twitter.com/zmilap/status/1295250907127377920?s=20