‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಚಿತ್ರದ ಬಗ್ಗೆ ವಿಶೇಷ ಅಪ್​ಡೇಟ್ ಕೊಟ್ಟ ಯಶ್

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅವರು ಅಪ್​ಡೇಟ್ ಕೊಟ್ಟಿದ್ದು ಕಡಿಮೆ. ಗೀತು ಮೋಹನ್​ದಾಸ್ ಜೊತೆ ಕೆಲಸ ಮಾಡಲು ಒಪ್ಪಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆಗೆ ಯಶ್ ಉತ್ತರ ನೀಡಿದ್ದಾರೆ. ‘ಜನರಿಗೆ ಒಳ್ಳೆಯ ಕಥೆಯನ್ನು ಹೇಳಬೇಕು ಎಂಬುದು ನನ್ನ ಉದ್ದೇಶ’ ಎಂದಿದ್ದಾರೆ ಯಶ್.

‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಚಿತ್ರದ ಬಗ್ಗೆ ವಿಶೇಷ ಅಪ್​ಡೇಟ್ ಕೊಟ್ಟ ಯಶ್
ಯಶ್

Updated on: Oct 23, 2024 | 6:59 AM

ನಟ ಯಶ್ ಅವರು ದೊಡ್ಡ ಬ್ರೇಕ್ ಪಡೆದಿದ್ದಾರೆ. ‘ಕೆಜಿಎಫ್ 2’ ಬಳಿಕ ಅವರು ಹೊಸ ಪ್ರೊಜೆಕ್ಟ್ ಘೋಷಣೆ ಮಾಡಲು ಸಮಯ ತೆಗೆದುಕೊಂಡರು. ಈಗ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅವರು ಅಪ್​ಡೇಟ್ ಕೊಟ್ಟಿದ್ದು ಕಡಿಮೆ. ಈ ಚಿತ್ರದ ಬಗ್ಗೆ, ಮುಂಬರುವ ‘ರಾಮಾಯಣ’ ಚಿತ್ರದ ಬಗ್ಗೆ ಅವರು ಮಾತನಾಡಿದ್ದಾರೆ. ‘ದಿ ಹಾಲಿವುಡ್​ ರಿಪೋರ್ಟರ್​ ಇಂಡಿಯಾ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಯಶ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಗೀತು ಮೋಹನ್​ದಾಸ್ ಜೊತೆ ಕೆಲಸ ಮಾಡಲು ಒಪ್ಪಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆಗೆ ಯಶ್ ಉತ್ತರ ನೀಡಿದ್ದಾರೆ. ‘ಗೀತು ಮೋಹನ್​ದಾಸ್ ಅವರ ಯಾವುದೇ ಸಿನಿಮಾಗಳನ್ನು ನೋಡಿರಲಿಲ್ಲ. ಅವರಿಗೆ ಸಾಕಷ್ಟು ಪ್ಯಾಷನ್ ಇದೆ. ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ. ಅವರು ಈ ಹಿಂದೆ ಮಾಡಿದ್ದು ಬೇರೆಯದೇ ರೀತಿಯ ಸಿನಿಮಾ. ಈಗ ಮಾಡ್ತಿರೋದು ಕೂಡ ಬೇರೆಯದೇ ರೀತಿಯ ಚಿತ್ರ. ಜನರಿಗೆ ಒಳ್ಳೆಯ ಕಥೆಯನ್ನು ಹೇಳಬೇಕು ಎಂಬುದು ನನ್ನ ಉದ್ದೇಶ’ ಎಂದಿದ್ದಾರೆ ಯಶ್.

‘ನಾನು ಯಾರ ಮಾತನ್ನೂ ಕೇಳಲ್ಲ. ನಾನು ಹೃದಯದ ಮಾತನ್ನು ಕೇಳುತ್ತೇನೆ. ಅವರು ಕಾನ್ಸೆಪ್ಟ್​ ಜೊತೆ ಬಂದರು. ಅವರಲ್ಲಿರುವ ಪ್ಯಾಷನ್ ಇಷ್ಟ ಆಯಿತು. ಅವರ ವಿಷನ್ ನನಗೆ ಇಷ್ಟ ಆಯಿತು. ಹೀಗೆ, ಸಿನಿಮಾ ಆರಂಭ ಆಯಿತು. ಗೊತ್ತಿಲ್ಲದ ವಿಚಾರವನ್ನು ನಾವು ಬೆನ್ನು ಹತ್ತಬೇಕು. ಜೀವನ ಕೂಡ ಕೋಟ್ಯಧಿಪತಿ ರೀತಿಯೇ. ಪ್ರಶ್ನೆ ಕೇಳಿದಾಗ ನಾವು ಉತ್ತರ ನೀಡಬಹುದು. ಉತ್ತರ ಕೊಟ್ಟರೆ ಹಣ ಬರುತ್ತದೆ. ಇಲ್ಲ ಎಲ್ಲವೂ ಕಳೆದು ಹೋಗಬಹುದು’ ಎಂದಿದ್ದಾರೆ ಯಶ್. ಸದ್ಯ ‘ಟಾಕ್ಸಿಕ್’ ಚಿತ್ರಕ್ಕೆ 30 ದಿನಗಳ ಶೂಟಿಂಗ್ ಮುಗಿದಿದೆ.

ಇದನ್ನೂ ಓದಿ: ಯಶ್ ಹಾದಿಯಲ್ಲಿ ಅನಿಲ್ ಕಪೂರ್, ಶಾರುಖ್, ಅಜಯ್, ಅಮಿತಾಬ್ ಬಚ್ಚನ್​ಗೂ ಮಾದರಿ

‘ರಾಮಾಯಣ ಚಿತ್ರದಲ್ಲಿ ನಟಿಸೋಕೆ ನನಗೆ ಆಫರ್ ಕೊಟ್ಟರು. ನಟನಾಗಿ ರಾವಣ ಪಾತ್ರ ನನಗೆ ಸಖತ್ ಎಗ್ಸೈಟ್​ಮೆಂಟ್ ಕೊಡುತ್ತದೆ. ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾರೆ ಯಶ್. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸದ್ಯ ‘ಟಾಕ್ಸಿಕ್’ ಸಿನಿಮಾದ ಶೂಟ್ ಬೆಂಗಳೂರಲ್ಲಿ ಪೂರ್ಣಗೊಂಡಿದ್ದು, ಯಶ್ ಈಗ ಮುಂಬೈನಲ್ಲಿ ಇದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us