AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಹಾದಿಯಲ್ಲಿ ಅನಿಲ್ ಕಪೂರ್, ಶಾರುಖ್, ಅಜಯ್, ಅಮಿತಾಬ್ ಬಚ್ಚನ್​ಗೂ ಮಾದರಿ

Anil Kapoor: ಕನ್ನಡದ ಸ್ಟಾರ್ ನಟ ಯಶ್ ಹಿಡಿದ ಹಾದಿಯನ್ನೇ ಬಾಲಿವುಡ್​ ನಟ ಅನಿಲ್ ಕಪೂರ್ ಹಿಡಿದಿದ್ದಾರೆ. ಶಾರುಖ್ ಖಾನ್, ಅಮಿತಾಬ್ ಬಚ್ಚನ್, ರಣ್ವೀರ್ ಸಿಂಗ್, ಅಜಯ್ ದೇವಗನ್, ಹೃತಿಕ್ ರೋಷನ್ ಇನ್ನೂ ಹಲವು ಬಾಲಿವುಡ್ ಸ್ಟಾರ್ ನಟರುಗಳಿಗೆ ಮಾದರಿ ಆಗಿದ್ದಾರೆ ಅನಿಲ್ ಕಪೂರ್.

ಯಶ್ ಹಾದಿಯಲ್ಲಿ ಅನಿಲ್ ಕಪೂರ್, ಶಾರುಖ್, ಅಜಯ್, ಅಮಿತಾಬ್ ಬಚ್ಚನ್​ಗೂ ಮಾದರಿ
ಮಂಜುನಾಥ ಸಿ.
|

Updated on: Oct 22, 2024 | 5:26 PM

Share

ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಹೃತಿಕ್ ರೋಷನ್, ಟೈಗರ್ ಶ್ರಾಫ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ಇವರನ್ನೆಲ್ಲ ಬಾಲಿವುಡ್​ನ ಸ್ಟಾರ್ ನಟರು ಎಂದು ಪರಿಗಣಿಸಲಾಗುತ್ತದೆ. ನಟ ಅನಿಲ್ ಕಪೂರ್ ಅನ್ನು ಈ ಸ್ಟಾರ್ ನಟರ ಸಾಲಿನಲ್ಲಿ ಪರಿಗಣಿಸಲಾಗುವುದಿಲ್ಲ. ಆದರೂ ಸಹ ಅನಿಲ್ ಕಪೂರ್ ಬಾಲಿವುಡ್​ನ ಹಿರಿಯ ಹಾಗೂ ಈಗಲೂ ಬೇಡಿಕೆ ಉಳಿಸಿಕೊಂಡಿರುವ ನಟ. ಭಾರಿ ಜನಪ್ರಿಯತೆ, ಅಭಿಮಾನಿಗಳನ್ನು ಹೊಂದಿರುವ ಶಾರುಖ್, ಹೃತಿಕ್, ಅಮಿತಾಬ್ ಅಂಥಹಾ ದೊಡ್ಡ ಸ್ಟಾರ್ ನಟರುಗಳಿಗೆ ಮಾದರಿ ಆಗುವಂಥಹಾ ಕಾರ್ಯವನ್ನು ಅನಿಲ್ ಕಪೂರ್ ಮಾಡಿದ್ದಾರೆ. ಕನ್ನಡದ ಸ್ಟಾರ್ ನಟ ಯಶ್​ ಅವರ ಹಾದಿಯನ್ನೇ ತುಳಿದಿದ್ದಾರೆ ಹಿರಿಯ ನಟ ಅನಿಲ್ ಕಪೂರ್.

67 ವರ್ಷ ವಯಸ್ಸಾದರೂ ಸಹ ಅನಿಲ್ ಕಪೂರ್ ಈಗಲೂ ಫಿಟ್ ಆಗಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಾರೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಾರೆ. ಜಾಹೀರಾತುಗಳಲ್ಲಿಯೂ ಸಹ ಕಾಣಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಅನಿಲ್ ಕಪೂರ್​ ಜಾಹೀರಾತೊಂದರಲ್ಲಿ ನಟಿಸಲು ನಿರಾಕರಿಸಿದ್ದಾರೆ. ಭಾರಿ ಸಂಭಾವನೆ ಕೊಡುವ ಆಮಿಷ ಒಡ್ಡಿದರೂ ಸಹ ಅನಿಲ್ ಕಪೂರ್ ಒಪ್ಪಿಲ್ಲ. ಬೃಹತ್ ಪಾನ್ ಮಸಾಲ, ಗುಟ್ಕಾ ಕಂಪೆನಿಯೊಂದು ತಮ್ಮ ಜಾಹೀರಾತಿನಲ್ಲಿ ನಟಿಸುವಂತೆ ಅನಿಲ್ ಕಪೂರ್​ಗೆ ಆಫರ್ ಕೊಟ್ಟಿತು. ಜಾಹೀರಾತಿನಲ್ಲಿ ನಟಿಸಿದರೆ 10 ಕೋಟಿ ರೂಪಾಯಿ ಸಂಭಾವನೆ ಕೊಡುವುದಾಗಿ ಆಮಿಷ ಒಡ್ಡಿತು. ಆದರೆ ಅನಿಲ್ ಕಪೂರ್ ಗುಟ್ಕಾ ಜಾಹೀರಾತಿನ ಅವಕಾಶವನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ:‘ಶಿಲ್ಪಾನ ಮದುವೆ ಆಗಲು ರಾಜ್ ಕುಂದ್ರಾ ಹಣ ಸುರಿದಿದ್ದರು’; ಅನಿಲ್ ಕಪೂರ್  

ಅನಿಲ್ ಕಪೂರ್ ಸ್ವತಃ ಫಿಟ್​ನೆಸ್ ಬಗ್ಗೆ ಅತೀವ ಆಸಕ್ತಿ ಇರುವ ವ್ಯಕ್ತಿಯಾಗಿದ್ದು. ಆರೋಗ್ಯದ ಬಗ್ಗೆ ಬಹಳ ಕಾಳಜಿವಹಿಸುತ್ತಾರೆ. ಸ್ವತಃ ತಾವು ಫಿಟ್​ನೆಸ್​ ಬಗ್ಗೆ ಗಮನವಹಿಸುವ ವ್ಯಕ್ತಿಯಾಗಿ ಆರೋಗ್ಯಕ್ಕೆ ಮಾರಕ ಆಗುವಂಥಹಾ ಗುಟ್ಕಾ, ತಂಬಾಕುಗಳ ಪ್ರಚಾರ ಮಾಡುವುದಿಲ್ಲವೆಂದು ನಿರ್ಣಯ ಮಾಡಿ ಗುಟ್ಕಾ ಜಾಹೀರಾತನ್ನು ಅನಿಲ್ ಕಪೂರ್ ನಿರಾಕರಿಸಿದ್ದಾರೆ. ನಟ ಯಶ್​ಗೂ ಸಹ ಕೆಲ ತಿಂಗಳ ಹಿಂದೆ ಗುಟ್ಕಾ ಸಂಸ್ಥೆಯೊಂದು ಜಾಹೀರಾತಿನಲ್ಲಿ ನಟಿಸಲು ಕೇಳಿತ್ತು. ಆದರೆ ಯಶ್ ಅದನ್ನು ನಿರಾಕರಿಸಿದ್ದರು. ಆರೋಗ್ಯಕ್ಕೆ ಮಾರಕವಾಗುವ ಯಾವುದೇ ವಸ್ತುವನ್ನು ತಾವು ಪ್ರಚಾರ ಮಾಡುವುದಿಲ್ಲವೆಂದು ತಿಳಿಸಿದರು.

ಅಜಯ್ ದೇವಗನ್, ಶಾರುಖ್ ಖಾನ್, ಹೃತಿಕ್ ರೋಷನ್, ಫಿಟ್​ನೆಸ್​ ಬಗ್ಗೆ ಅತೀವ ಕಾಳಜಿ ಇರುವ ಟೈಗರ್ ಶ್ರಾಫ್ ಅವರುಗಳು ಗುಟ್ಕಾ, ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದಾರೆ. ಈಗಲೂ ಕಾಣಿಸಿಕೊಳ್ಳುತ್ತಾರೆ. ಅಕ್ಷಯ್ ಕುಮಾರ್, ಅಮಿತಾಬ್ ಬಚ್ಚನ್ ಅವರುಗಳು ಸಹ ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಾರೆ. ಅಕ್ಷಯ್ ಕುಮಾರ್​, ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಟೀಕೆಗೆ ಗುರಿಯಾಗಿದ್ದರು. ಆಗ ತಾವು ಇನ್ನು ಮುಂದೆ ಗುಟ್ಕಾ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದಿದ್ದರು, ಅಲ್ಲದೆ ಜಾಹೀರಾತಿನಲ್ಲಿ ನಟಿಸಲು ಪಡೆದ ಸಂಭಾವನೆಯನ್ನು ದಾನ ಮಾಡಿದರು. ಅಮಿತಾಬ್ ಬಚ್ಚನ್ ಸಹ ಇದೇ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದರು. ಇನ್ನು ಮುಂದೆ ಅಂಥಹಾ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?