ಮತ್ತೆ ಅಖಾಡಕ್ಕೆ ಇಳಿದ ‘ಯುವರತ್ನ’ ಅಪ್ಪು.. ಡಬ್ಬಿಂಗ್ ಶುರು!

ಎಲ್ಲವೂ ಸರಿಯಾಗಿದ್ದಿದ್ರೆ, ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿತ್ತು. ಅಷ್ಟರಲ್ಲೇ ಕೊರೊನಾ ವೈರಸ್ ರಾಜ್ಯಕ್ಕೂ ಲಗ್ಗೆ ಇಟ್ಟಿದ್ದರಿಂದ ಚಿತ್ರೀಕರಣವನ್ನ ವಿಧಿಯಿಲ್ಲದೆ ನಿಲ್ಲಿಸಬೇಕಾಯ್ತು. ಆದ್ರೀಗ ಹೆಚ್ಚು-ಕಡಿಮೆ ಎರಡು ತಿಂಗಳ ಬಳಿಕ ಮತ್ತೆ ಯುವರತ್ನ ಚಿತ್ರತಂಡ ಅಖಾಡಕ್ಕೆ ಇಳಿದಿದೆ. ಇಂದಿನ ಅಪ್ಪು ಹಾಗೂ ಸಂತೋಷ್ ಆನಂದ್​ ರಾಮ್ ಕಾಂಬಿನೇಷನ್​ನ ಯುವರತ್ನ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಈ ವಿಷಯವನ್ನ ಸ್ವತ: ಪುನೀತ್ ರಾಜ್​ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಈಗಾಗ್ಲೇ ಫಸ್ಟ್ ಡಬ್ಬಿಂಗ್ ಮುಗಿಸಿರೋ […]

ಮತ್ತೆ ಅಖಾಡಕ್ಕೆ ಇಳಿದ ‘ಯುವರತ್ನ’ ಅಪ್ಪು.. ಡಬ್ಬಿಂಗ್ ಶುರು!
ಸಾಧು ಶ್ರೀನಾಥ್​

Updated on: May 25, 2020 | 5:12 PM

ಎಲ್ಲವೂ ಸರಿಯಾಗಿದ್ದಿದ್ರೆ, ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿತ್ತು. ಅಷ್ಟರಲ್ಲೇ ಕೊರೊನಾ ವೈರಸ್ ರಾಜ್ಯಕ್ಕೂ ಲಗ್ಗೆ ಇಟ್ಟಿದ್ದರಿಂದ ಚಿತ್ರೀಕರಣವನ್ನ ವಿಧಿಯಿಲ್ಲದೆ ನಿಲ್ಲಿಸಬೇಕಾಯ್ತು. ಆದ್ರೀಗ ಹೆಚ್ಚು-ಕಡಿಮೆ ಎರಡು ತಿಂಗಳ ಬಳಿಕ ಮತ್ತೆ ಯುವರತ್ನ ಚಿತ್ರತಂಡ ಅಖಾಡಕ್ಕೆ ಇಳಿದಿದೆ.

ಇಂದಿನ ಅಪ್ಪು ಹಾಗೂ ಸಂತೋಷ್ ಆನಂದ್​ ರಾಮ್ ಕಾಂಬಿನೇಷನ್​ನ ಯುವರತ್ನ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಈ ವಿಷಯವನ್ನ ಸ್ವತ: ಪುನೀತ್ ರಾಜ್​ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಈಗಾಗ್ಲೇ ಫಸ್ಟ್ ಡಬ್ಬಿಂಗ್ ಮುಗಿಸಿರೋ ಯುವರತ್ನ ಚಿತ್ರತಂಡ ಸೆಂಕೆಡ್ ಹಾಫ್ ಡಬ್ಬಿಂಗ್ ಅನ್ನ ಅರಂಭಿಸಿದೆ. ಈ ಸಂತಸದ ವಿಷಯವನ್ನ ನಿರ್ದೇಶಕ ಸಂತೋಷ್ ಆನಂದ್​ರಾಮ್ ಹಾಗೂ ಅಪ್ಪು ಇಬ್ಬರು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ರಾಜಕುಮಾರ ಬಳಿಕ ಅಪ್ಪು ಹಾಗೂ ಸಂತೋಷ್ ಆನಂದ್​ ರಾಮ್ ಕಾಂಬಿನೇಷನ್ ಸಿನಿಮಾ ಯುವರತ್ನ. ಹೀಗಾಗಿ ಸಹಜವಾಗೇ ಪವರ್ ಸ್ಟಾರ್ ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಇದೇ ವೇಳೆ ಕೊರೊನಾದಿಂದ ಥಿಯೇಟರ್​ಗಳು ಬಾಗಿಲು ಮುಚ್ಚಿವೆ. ಹಾಗಾಗಿ ಓಟಿಟಿ ಪ್ಲಾಟ್​ಫಾರ್ಮ್ ನಲ್ಲಿ ಬಿಡುಗಡೆಯಾಗುತ್ತೆ ಅಂತ ಸುದ್ದಿ ಹಬ್ಬಿತ್ತು. ಆದ್ರೆ ಚಿತ್ರತಂಡ ಇನ್ನೂ ಆರು ತಿಂಗಳಾದ್ರೂ ಯುವರತ್ನವನ್ನ ಚಿತ್ರಮಂದಿರದಲ್ಲೇ ರಿಲೀಸ್ ಮಾಡ್ತೀವಿ ಅಂತ ಹೇಳೊ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಹೀಗಾಗಿ ಕೊರೊನಾ ಬಿಕ್ಕಟ್ಟು ಮುಗಿದ ಕೂಡ್ಲೇ ಯುವರತ್ನ ಥಿಯೇಟರ್​ಗೆ ಅಪ್ಪಳಿಸೋದು ಗ್ಯಾರಂಟಿ.

Published On - 5:08 pm, Mon, 25 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us