AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sayantani Ghosh: ಬ್ರಾ ಸೈಜ್​ ಕೇಳಿದ ಅಭಿಮಾನಿಗೆ ಗ್ರಹಚಾರ ಬಿಡಿಸಿದ ಕಿರುತೆರೆ ನಟಿ

ಕಿರುತೆರೆ ನಟಿ​ ಈ ಬಗ್ಗೆ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ತಮಗಾದ ಕಹಿ ಅನುಭವ ಹಾಗೂ ಅದಕ್ಕೆ ನೀಡಿದ ಉತ್ತರದ ಬಗ್ಗೆ ಬರೆದುಕೊಂಡಿದ್ದಾರೆ.

Sayantani Ghosh: ಬ್ರಾ ಸೈಜ್​ ಕೇಳಿದ ಅಭಿಮಾನಿಗೆ ಗ್ರಹಚಾರ ಬಿಡಿಸಿದ ಕಿರುತೆರೆ ನಟಿ
ಸಾಯಂತನಿ ಘೋಷ್​
ರಾಜೇಶ್ ದುಗ್ಗುಮನೆ
| Edited By: |

Updated on:Apr 09, 2021 | 5:53 PM

Share

ಸೆಲೆಬ್ರಿಟಿಗಳು ತಾವು ಹಾಕುವ ಬಟ್ಟೆಯ ಮೂಲಕ ಸುದ್ದಿ ಆಗುತ್ತಲೇ ಇರುತ್ತಾರೆ. ಆದರೆ, ಅವರು ಹಾಕುವ ದಿರಿಸಿನ ಕಾರಣಕ್ಕಾಗಿ ಕೆಲವೊಮ್ಮೆ ಅಭಿಮಾನಿಗಳಿಂದ ಚಿತ್ರ-ವಿಚಿತ್ರ ಪ್ರಶ್ನೆಗಳನ್ನು ಎದುರಿಸಿ ಪೇಚಿಗೀಡಾಗುತ್ತಾರೆ. ಈ ರೀತಿ ಪ್ರಶ್ನೆ ಕೇಳುವವರಿಗೆ ಕೆಲವರು ಧೈರ್ಯದಿಂದ ತಿರುಗೇಟು ನೀಡಿದರೆ, ಇನ್ನೂ ಕೆಲವರು ತಮಗೇಕೆ ಎಂದು ಸುಮ್ಮನಾಗುತ್ತಾರೆ. ಈಗ ಹಿಂದಿ ಕಿರುತೆರೆ ನಟಿ ಸಾಯಂತನಿ ಘೋಷ್​ಗೂ ಇದೇ ರೀತಿಯ ವಿಚಿತ್ರ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಅವರು ತಕ್ಕ ಉತ್ತರ ನೀಡಿದ್ದಾರೆ. ಸಾಯಂತನಿ ಘೋಷ್​ ಈ ಬಗ್ಗೆ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ತಮಗಾದ ಕಹಿ ಅನುಭವ ಹಾಗೂ ಅದಕ್ಕೆ ನೀಡಿದ ಉತ್ತರದ ಬಗ್ಗೆ ಬರೆದುಕೊಂಡಿದ್ದಾರೆ. ನಿನ್ನೆ ಅಭಿಮಾನಿಗಳ ಜತೆ ಮಾತುಕತೆ ನಡೆಸುವಾಗ ಓರ್ವ ನನ್ನ ಬ್ರಾ ಸೈಜ್​ ಕೇಳಿದೆ. ಆತನಿಗೆ ನಾನು ಸೂಕ್ತ ಉತ್ತರ ನೀಡಿದ್ದೇನೆ. ಆದಾಗ್ಯೂ ಈ ಬಗ್ಗೆ ಸಾಕಷ್ಟು ಮಾತಾಡುವುದು ಇದೆ ಎಂದು ನನಗೆ ಅನ್ನಿಸುತ್ತಿದೆ. ಬಾಡಿ ಶೇಮಿಂಗ್​ ಮಾಡುವುದು ತಪ್ಪು. ಈ ರೀತಿಯ ಅಸಭ್ಯ ಪ್ರಶ್ನೆ ಕೇಳುವವರ ಮೆಂಟಾಲಿಟಿಯನ್ನು ಅಳತೆ ಮಾಡೋಕೆ ಪ್ರಯತ್ನ ಮಾಡಿದ್ದೇನೆ ಎಂದು ಸಾಯಂತನಿ ಹೇಳಿದ್ದಾರೆ.

ಮುಂದೆ ಬರಬಹುದಾದ ಟ್ರೋಲ್​ಗಳ ಬಗ್ಗೆಯೂ ಸಾಯಂತನಿ ಘೋಷ್ ಈಗಲೇ ಉತ್ತರಿಸಿದ್ದಾರೆ. ಮುಂದಿನ ಸಲ ಯಾರಾದರೂ ನನ್ನ ಕಪ್​ ಸೈಜ್​ ಕೇಳಿದರೆ ನಾನು ಏನು ಉತ್ತರಿಸಬೇಕು ಎಂಬುದು ನನಗೆ ಗೊತ್ತಿದೆ. ನನಗೆ ದೊಡ್ಡ ಕಪ್​ ಎಂದರೆ ಇಷ್ಟ. ಕಾಫಿ ಲವರ್ ಎಂದಮೇಲೆ ದೊಡ್ಡ ಕಪ್​ಅನ್ನೇ ಇಷ್ಟಪಡಬೇಕಲ್ಲವೆ ಎಂದು ವಿಡಂಬನಾತ್ಮಕವಾಗಿ ಸಾಯಂತನಿ ಮಾತನಾಡಿದ್ದಾರೆ.

ಸಾಯಂತನಿ ಹಿಂದಿಯಲ್ಲಿ ಮನೆಮಾತಾಗಿದ್ದಾರೆ. ಅವರು, ಸಾಕಷ್ಟು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕುಂಕುಮ್​-ಏಕ್​ ಪ್ಯಾರ್​ ಸಾ ಬಂಧನ್​, ನಾಮಕರಣ್​, ಬ್ಯಾರಿಸ್ಟರ್​ ಬಾಬು, ಸಂತೋಷಿ ಮಾ, ಮಹಾಭಾರತ್​, ನಾಗಿಣ್​ 4 ಸೇರಿ ಹಲವು ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ರಾಜು ಅಂಕಲ್​, ಸೇರಿ ಸಾಕಷ್ಟು ಬೆಂಗಾಳಿ ಸಿನಿಮಾಗಳಲ್ಲೂ ಸಾಯಂತನಿ ನಟಿಸಿದ್ದಾರೆ.

ಇದನ್ನೂ ಒದಿ: ‘ಮಹಿಳೆಯರು 8ರ ಶೇಪ್​ ಕಳೆದುಕೊಳ್ಳುತ್ತಿದ್ದಾರೆ.. ಸೊಂಟವೆಲ್ಲ ದೊಡ್ಡದಾಗುತ್ತಿದೆ’-ಅಸಭ್ಯ ಕೈಸನ್ನೆಯೊಂದಿಗೆ, ವಿವಾದಾತ್ಮಕ ಹೇಳಿಕೆ ನೀಡಿದ ರಾಜಕಾರಣಿ

Published On - 4:38 pm, Fri, 9 April 21

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?