AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sayantani Ghosh: ಬ್ರಾ ಸೈಜ್​ ಕೇಳಿದ ಅಭಿಮಾನಿಗೆ ಗ್ರಹಚಾರ ಬಿಡಿಸಿದ ಕಿರುತೆರೆ ನಟಿ

ಕಿರುತೆರೆ ನಟಿ​ ಈ ಬಗ್ಗೆ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ತಮಗಾದ ಕಹಿ ಅನುಭವ ಹಾಗೂ ಅದಕ್ಕೆ ನೀಡಿದ ಉತ್ತರದ ಬಗ್ಗೆ ಬರೆದುಕೊಂಡಿದ್ದಾರೆ.

Sayantani Ghosh: ಬ್ರಾ ಸೈಜ್​ ಕೇಳಿದ ಅಭಿಮಾನಿಗೆ ಗ್ರಹಚಾರ ಬಿಡಿಸಿದ ಕಿರುತೆರೆ ನಟಿ
ಸಾಯಂತನಿ ಘೋಷ್​
ರಾಜೇಶ್ ದುಗ್ಗುಮನೆ
| Edited By: |

Updated on:Apr 09, 2021 | 5:53 PM

Share

ಸೆಲೆಬ್ರಿಟಿಗಳು ತಾವು ಹಾಕುವ ಬಟ್ಟೆಯ ಮೂಲಕ ಸುದ್ದಿ ಆಗುತ್ತಲೇ ಇರುತ್ತಾರೆ. ಆದರೆ, ಅವರು ಹಾಕುವ ದಿರಿಸಿನ ಕಾರಣಕ್ಕಾಗಿ ಕೆಲವೊಮ್ಮೆ ಅಭಿಮಾನಿಗಳಿಂದ ಚಿತ್ರ-ವಿಚಿತ್ರ ಪ್ರಶ್ನೆಗಳನ್ನು ಎದುರಿಸಿ ಪೇಚಿಗೀಡಾಗುತ್ತಾರೆ. ಈ ರೀತಿ ಪ್ರಶ್ನೆ ಕೇಳುವವರಿಗೆ ಕೆಲವರು ಧೈರ್ಯದಿಂದ ತಿರುಗೇಟು ನೀಡಿದರೆ, ಇನ್ನೂ ಕೆಲವರು ತಮಗೇಕೆ ಎಂದು ಸುಮ್ಮನಾಗುತ್ತಾರೆ. ಈಗ ಹಿಂದಿ ಕಿರುತೆರೆ ನಟಿ ಸಾಯಂತನಿ ಘೋಷ್​ಗೂ ಇದೇ ರೀತಿಯ ವಿಚಿತ್ರ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಅವರು ತಕ್ಕ ಉತ್ತರ ನೀಡಿದ್ದಾರೆ. ಸಾಯಂತನಿ ಘೋಷ್​ ಈ ಬಗ್ಗೆ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ತಮಗಾದ ಕಹಿ ಅನುಭವ ಹಾಗೂ ಅದಕ್ಕೆ ನೀಡಿದ ಉತ್ತರದ ಬಗ್ಗೆ ಬರೆದುಕೊಂಡಿದ್ದಾರೆ. ನಿನ್ನೆ ಅಭಿಮಾನಿಗಳ ಜತೆ ಮಾತುಕತೆ ನಡೆಸುವಾಗ ಓರ್ವ ನನ್ನ ಬ್ರಾ ಸೈಜ್​ ಕೇಳಿದೆ. ಆತನಿಗೆ ನಾನು ಸೂಕ್ತ ಉತ್ತರ ನೀಡಿದ್ದೇನೆ. ಆದಾಗ್ಯೂ ಈ ಬಗ್ಗೆ ಸಾಕಷ್ಟು ಮಾತಾಡುವುದು ಇದೆ ಎಂದು ನನಗೆ ಅನ್ನಿಸುತ್ತಿದೆ. ಬಾಡಿ ಶೇಮಿಂಗ್​ ಮಾಡುವುದು ತಪ್ಪು. ಈ ರೀತಿಯ ಅಸಭ್ಯ ಪ್ರಶ್ನೆ ಕೇಳುವವರ ಮೆಂಟಾಲಿಟಿಯನ್ನು ಅಳತೆ ಮಾಡೋಕೆ ಪ್ರಯತ್ನ ಮಾಡಿದ್ದೇನೆ ಎಂದು ಸಾಯಂತನಿ ಹೇಳಿದ್ದಾರೆ.

ಮುಂದೆ ಬರಬಹುದಾದ ಟ್ರೋಲ್​ಗಳ ಬಗ್ಗೆಯೂ ಸಾಯಂತನಿ ಘೋಷ್ ಈಗಲೇ ಉತ್ತರಿಸಿದ್ದಾರೆ. ಮುಂದಿನ ಸಲ ಯಾರಾದರೂ ನನ್ನ ಕಪ್​ ಸೈಜ್​ ಕೇಳಿದರೆ ನಾನು ಏನು ಉತ್ತರಿಸಬೇಕು ಎಂಬುದು ನನಗೆ ಗೊತ್ತಿದೆ. ನನಗೆ ದೊಡ್ಡ ಕಪ್​ ಎಂದರೆ ಇಷ್ಟ. ಕಾಫಿ ಲವರ್ ಎಂದಮೇಲೆ ದೊಡ್ಡ ಕಪ್​ಅನ್ನೇ ಇಷ್ಟಪಡಬೇಕಲ್ಲವೆ ಎಂದು ವಿಡಂಬನಾತ್ಮಕವಾಗಿ ಸಾಯಂತನಿ ಮಾತನಾಡಿದ್ದಾರೆ.

ಸಾಯಂತನಿ ಹಿಂದಿಯಲ್ಲಿ ಮನೆಮಾತಾಗಿದ್ದಾರೆ. ಅವರು, ಸಾಕಷ್ಟು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕುಂಕುಮ್​-ಏಕ್​ ಪ್ಯಾರ್​ ಸಾ ಬಂಧನ್​, ನಾಮಕರಣ್​, ಬ್ಯಾರಿಸ್ಟರ್​ ಬಾಬು, ಸಂತೋಷಿ ಮಾ, ಮಹಾಭಾರತ್​, ನಾಗಿಣ್​ 4 ಸೇರಿ ಹಲವು ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ರಾಜು ಅಂಕಲ್​, ಸೇರಿ ಸಾಕಷ್ಟು ಬೆಂಗಾಳಿ ಸಿನಿಮಾಗಳಲ್ಲೂ ಸಾಯಂತನಿ ನಟಿಸಿದ್ದಾರೆ.

ಇದನ್ನೂ ಒದಿ: ‘ಮಹಿಳೆಯರು 8ರ ಶೇಪ್​ ಕಳೆದುಕೊಳ್ಳುತ್ತಿದ್ದಾರೆ.. ಸೊಂಟವೆಲ್ಲ ದೊಡ್ಡದಾಗುತ್ತಿದೆ’-ಅಸಭ್ಯ ಕೈಸನ್ನೆಯೊಂದಿಗೆ, ವಿವಾದಾತ್ಮಕ ಹೇಳಿಕೆ ನೀಡಿದ ರಾಜಕಾರಣಿ

Published On - 4:38 pm, Fri, 9 April 21

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ