AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಡಿಯೋ ಜಾಕಿ ಹಿಂದೆ ಬಿದ್ದ ರಾಜಮೌಳಿ, ಪ್ರಪೋಸ್ ಮಾಡೇಬಿಟ್ಟ ಚೆಲುವೆ

SS Rajamouli: ನಿರ್ದೇಶಕ ಎಸ್​ಎಸ್ ರಾಜಮೌಳಿ ಅದ್ಭುತ ನಿರ್ದೇಶಕ, ಅವರ ಸಿನಿಮಾಗಳಲ್ಲಿ ನಟಿಸಲು ದೊಡ್ಡ ದೊಡ್ಡ ನಟರು ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಸ್ವತಃ ರಾಜಮೌಳಿ ಆಗೊಮ್ಮೆ ಈಗೊಮ್ಮೆ ತಮ್ಮದೇ ಸಿನಿಮಾಗಳಲ್ಲಿ ನಟಿಸುವುದು ಸಹ ಉಂಟು. ಇದೀಗ ರಾಜಮೌಳಿಯ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋನಲ್ಲಿ ರಾಜಮೌಳಿ, ರೇಡಿಯೋ ಜಾಕಿ ಯುವತಿಯೊಟ್ಟಿಗೆ ಸಖತ್ ಫ್ಲರ್ಟ್ ಮಾಡುತ್ತಿದ್ದಾರೆ.

ರೆಡಿಯೋ ಜಾಕಿ ಹಿಂದೆ ಬಿದ್ದ ರಾಜಮೌಳಿ, ಪ್ರಪೋಸ್ ಮಾಡೇಬಿಟ್ಟ ಚೆಲುವೆ
Ss Rajamouli
ಮಂಜುನಾಥ ಸಿ.
|

Updated on: Feb 22, 2025 | 9:23 AM

Share

ಎಸ್​ಎಸ್ ರಾಜಮೌಳಿ ಎಷ್ಟು ಅದ್ಭುತವಾದ ಸಿನಿಮಾ ನಿರ್ದೇಶಕರೋ ಅಷ್ಟೆ ಅದ್ಭುತ ಕೌಟುಂಬಿಕ ಮೌಲ್ಯಗಳನ್ನು ಹೊಂದಿರುವ ನಟ. ತಮ್ಮ ಪತ್ನಿಯನ್ನು ಕುಟುಂಬವನ್ನು ಅತಿಯಾಗಿ ಪ್ರೀತಿಸುವ ರಾಜಮೌಳಿ, ಸಿನಿಮಾ ಸೆಟ್​ನಲ್ಲಾಗಲಿ, ಸಿನಿಮಾಗಳ ಹೊರತಾಗಲಿ ಸದಾ ಕುಟುಂಬದೊಟ್ಟಿಗೆ ಇರುತ್ತಾರೆ. ಅವರ ಸಿನಿಮಾ ಸೆಟ್​ನಲ್ಲಿ ಬಹುತೇಕ ಎಲ್ಲ ಪ್ರಮುಖ ವಿಭಾಗಗಳಲ್ಲಿ ಅವರ ಕುಟುಂಬದವರೇ ಇರುತ್ತಾರೆ. ಆದರೆ ಇದೀಗ ರಾಜಮೌಳಿಯ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು ನಿರೂಪಕಿ ಒಬ್ಬರ ಹಿಂದೆ ಬಿದ್ದಿದ್ದಾರೆ. ಆ ಚೆಲುವೆ ಸಹ ತಡ ಮಾಡದೆ ರಾಜಮೌಳಿಗೆ ಪ್ರೊಪೋಸ್ ಮಾಡಿದ್ದಾರೆ. ಮುಂದೇನಾಯ್ತು?

ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಜಮೌಳಿಯ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ವಿಡಿಯೋನಲ್ಲಿ ರಾಜಮೌಳಿ, ಚೆಲುವೆಯೊಬ್ಬಾಕೆಯ ಜೊತೆ ಬ್ಲೈಂಡ್ ಡೇಟ್​ಗೆ ಹೋಗಿದ್ದಾರೆ. ಆ ರೇಡಿಯೋ ಜಾಕಿಗೆ ಹಲವು ವಾರಗಳ ಕಾಲ ಮೆಸೇಜ್ ಮಾಡಿ ಚಾಟ್ ಮಾಡಿ ಆಕೆಯನ್ನು ಕಾಫಿ ಶಾಪ್​ಗೆ ಕರೆದಿದ್ದಾರೆ. ಆದರೆ ಆ ಚೆಲುವೆಗೆ ತಾನು ಭೇಟಿ ಆಗುತ್ತಿರುವುದು ನಿರ್ದೇಶಕ ರಾಜಮೌಳಿಯನ್ನು ಎಂಬುದು ಗೊತ್ತಿಲ್ಲ.

ಯುವತಿ, ರಾಜಮೌಳಿಯನ್ನು ನೋಡಿದ ಕೂಡಲೇ ಕನಸು ಕಾಣಲು ಆರಂಭಿಸುತ್ತಾಳೆ, ಆ ಕನಸಿನ ದೃಶ್ಯಗಳಲ್ಲಿ ರಾಜಮೌಳಿ ಸಹ ಹೀರೋಗಳ ರೀತಿ ರೊಮ್ಯಾಂಟಿಕ್ ಮೂಡ್​ನಲ್ಲಿ ಆಕ್ಟ್ ಮಾಡಿದ್ದಾರೆ. ವಾಸ್ತವಕ್ಕೆ ಬಂದರೆ, ಕಾಫಿ ಶಾಪ್​ನಲ್ಲಿ ಕುಳಿತ ಆ ಚೆಲುವೆ ಒಂದೇ ಬಾರಿಗೆ ರಾಜಮೌಳಿಗೆ ಪ್ರೊಪೋಸ್ ಮಾಡಿ ಬಿಡುತ್ತಾರೆ. ಇದರಿಂದ ರಾಜಮೌಳಿ ಸಹ ಶಾಕ್ ಆಗುತ್ತಾರೆ. ಇದೇನು ರಾಜಮೌಳಿ ಯಾವುದಾದರೂ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದರಾ? ಆ ಸಿನಿಮಾದ ದೃಶ್ಯಗಳಾ ಇವು? ಎಂಬ ಅನುಮಾನ ಬರುತ್ತದೆ.

ಇದನ್ನೂ ಓದಿ:SS Rajamouli: ಈ ಎರಡು ಹಾಡುಗಳನ್ನು ರಾಜಮೌಳಿ ಮತ್ತೆ ಮತ್ತೆ ನೋಡ್ತಾರಂತೆ

ಆದರೆ ಈಗ ವೈರಲ್ ಆಗಿರುವ ದೃಶ್ಯಗಳು ಸಿನಿಮಾದ ದೃಶ್ಯಗಳಲ್ಲ ಬದಲಿಗೆ ಸಿನಿಮಾದ ಪ್ರೊಮೋಷನ್​ನ ದೃಶ್ಯಗಳು. ರಾಜಮೌಳಿ ನಿರ್ದೇಶಿಸಿ 2006 ರಲ್ಲಿ ಬಿಡುಗಡೆ ಆಗಿದ್ದ ‘ವಿಕ್ರಮಾರ್ಕುಡು’ ಸಿನಿಮಾದ ಪ್ರಚಾರಕ್ಕಾಗಿ ಆಗ ಟಿವಿನಲ್ಲಿ ವಿಶೇಷ ಕಾರ್ಯಕ್ರಮ ಮಾಡಲಾಗಿತ್ತು. ಆಗ ರೇಡಿಯೋ ಜಾಕಿ, ಟಿವಿ ನಿರೂಪಕಿ ಆಗಿದ್ದ ಈಗ ನಟಿಯಾಗಿರುವ ರಶ್ಮಿ ಜೊತೆಗೆ ರಾಜಮೌಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮದ ದೃಶ್ಯಗಳು ಇದೀಗ ವೈರಲ್ ಆಗುತ್ತಿವೆ.

ಈಗಿನಂತೆ, ರಿಯಾಲಿಟಿ ಶೋಗಳಿಗೆ ಹೋಗಿ ಸಿನಿಮಾ ಅನ್ನು ಪ್ರಚಾರ ಮಾಡುವ ಪದ್ಧತಿ ಆಗ ಇರಲಿಲ್ಲ. ಸಿನಿಮಾ ಪ್ರಚಾರಕ್ಕಾಗಿ ಬರುವವರಿಗಾಗಿ ವಿಶೇಷ ಶೋ ಅನ್ನು ಟಿವಿಗಳವರು ಮಾಡುತ್ತಿದ್ದರು. ಫನ್ ರೀತಿಯ ಶೋ ಅದಾಗಿರುತ್ತಿತ್ತು. ಅಂಥಹುದೇ ಒಂದು ಕಾರ್ಯಕ್ರಮದಲ್ಲಿ ಅಥವಾ ಕಿರು ಎಪಿಸೋಡ್​ನಲ್ಲಿ ರಾಜಮೌಳಿ ನಟಿಸಿದ್ದರು. ಅದೀಗ ವೈರಲ್ ಆಗುತ್ತಿದ್ದು, ರಾಜಮೌಳಿಯ ನಟನಾ ಪ್ರತಿಭೆಯನ್ನು, ಪ್ಲರ್ಟ್ ಮಾಡುವ ಪ್ರತಿಭೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಆಲಿಕಲ್ಲು ಮಳೆ; ಮನೆ ಮೇಲ್ಚಾವಣಿ ಮೇಲಿನ ಕಲ್ಲುಬಿದ್ದು 6 ವರ್ಷದ ಮಗು ಸಾವು
ಆಲಿಕಲ್ಲು ಮಳೆ; ಮನೆ ಮೇಲ್ಚಾವಣಿ ಮೇಲಿನ ಕಲ್ಲುಬಿದ್ದು 6 ವರ್ಷದ ಮಗು ಸಾವು
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಕನ್ನಡದಲ್ಲಿ ಬರುತ್ತಿದೆ ಎಐ ಸಿನಿಮಾ
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಕನ್ನಡದಲ್ಲಿ ಬರುತ್ತಿದೆ ಎಐ ಸಿನಿಮಾ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ