AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈತ್ರಿ ಕಚೇರಿಯಲ್ಲಿ ಒಂದಾದ ‘7000 ಕೋಟಿ’ ನಿರ್ದೇಶಕರು: ದೊಡ್ಡ ಸ್ಕೆಚ್?

Mythri movie Makers: ಭಾರಿ ದೊಡ್ಡ ಬಜೆಟ್​​ನ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಯಾರೂ ಊಹಿಸದ ಕಾಂಬಿನೇಷನ್​​ಗಳನ್ನು ತೆರೆಗೆ ತರುತ್ತಾ, ಪ್ರತಿಭಾವಂತ ನಿರ್ದೇಶಕರು, ಸ್ಟಾರ್ ನಟರ ಮೇಲೆ ಬಂಡವಾಳ ಹಾಕುತ್ತಾ, ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ಮೈತ್ರಿ ನೀಡುತ್ತಿದೆ. ಇದೀಗ ಮೈತ್ರಿ ಕಚೇರಿಯಲ್ಲಿ ಮೀಟಿಂಗ್ ಒಂದು ನಡೆದಿದ್ದು, ಬಲು ದೊಡ್ಡ ‘ಸ್ಕೆಚ್’ ಒಂದು ಸಿದ್ಧವಾಗಿದೆ.

ಮೈತ್ರಿ ಕಚೇರಿಯಲ್ಲಿ ಒಂದಾದ ‘7000 ಕೋಟಿ’ ನಿರ್ದೇಶಕರು: ದೊಡ್ಡ ಸ್ಕೆಚ್?
Mythri Movie Makers
ಮಂಜುನಾಥ ಸಿ.
|

Updated on:Jun 25, 2026 | 4:33 PM

Share

ಮೈತ್ರಿ ಮೂವಿ ಮೇಕರ್ಸ್ (Mythri Movie Makers), ತೆಲುಗಿನ ಬಲು ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ. ಸಿನಿಮಾ ನಿರ್ಮಾಣಕ್ಕೆ ಇಳಿದು ಹೆಚ್ಚು ವರ್ಷವಾಗಿಲ್ಲವಾದರೂ ಒಂದರ ಹಿಂದೊಂದು ಭಾರಿ ದೊಡ್ಡ ಬಜೆಟ್​​ನ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಯಾರೂ ಊಹಿಸದ ಕಾಂಬಿನೇಷನ್​​ಗಳನ್ನು ತೆರೆಗೆ ತರುತ್ತಾ, ಪ್ರತಿಭಾವಂತ ನಿರ್ದೇಶಕರು, ಸ್ಟಾರ್ ನಟರ ಮೇಲೆ ಬಂಡವಾಳ ಹಾಕುತ್ತಾ, ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ಮೈತ್ರಿ ನೀಡುತ್ತಿದೆ. ಇದೀಗ ಮೈತ್ರಿ ಕಚೇರಿಯಲ್ಲಿ ಮೀಟಿಂಗ್ ಒಂದು ನಡೆದಿದ್ದು, ಬಲು ದೊಡ್ಡ ‘ಸ್ಕೆಚ್’ ಒಂದು ಸಿದ್ಧವಾಗಿದೆ.

ತೆಲುಗಿನ ಹಾಸ್ಯನಟ ನಿವಿನ್ ಪೋಲಿಶೆಟ್ಟಿ, ಇಂದು (ಜೂನ್ 25) ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಖುದ್ದು ಅವರೇ ಹೇಳಿರುವಂತೆ, ‘ಈ ವಿಡಿಯೋ ದೇಶದ ಅತ್ಯಂತ ದುಬಾರಿ ವಿಡಿಯೋ’. ಯಾಕೆಂದರೆ ಆ ವಿಡಿಯೋನಲ್ಲಿ ದೇಶದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ನಿರ್ದೇಶಕರುಗಳು ಇದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಕಚೇರಿಯಲ್ಲಿ, ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಇನ್ನೂ ಹಲವಾರು ಸ್ಟಾರ್ ಸಿನಿಮಾ ನಿರ್ದೇಶಕರು ಸೇರಿದ್ದರು.

ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್, ಲೋಕೇಶ್ ಕನಗರಾಜ್, ‘ಪುಷ್ಪ’ ನಿರ್ದೇಶಕ ಸುಕುಮಾರ್, ‘ಗಬ್ಬರ್ ಸಿಂಗ್’ ನಿರ್ದೇಶಕ ಹರೀಶ್ ಶಂಕರ್ ಅವರುಗಳು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮೈತ್ರಿ ಮೂವಿ ಮೇಕರ್ಸ್​​ನ ನಿರ್ಮಾಪಕ ನವೀನ್ ಯೆರಿನೇನಿ ಅವರು ಸಹ ಹಾಜರಿದ್ದರು. ವಿಶೇಷವೆಂದರೆ ಈ ಸಭೆಯಲ್ಲಿ ಯುವ ನಟ ನವೀನ್ ಪೋಲಿಶೆಟ್ಟಿ ಸಹ ಹಾಜರಿದ್ದರು. ವಿಡಿಯೋ ಮಾಡಿರುವ ನವೀನ್, ಪೋಲಿಶೆಟ್ಟಿ, ಪ್ರತಿಯೊಬ್ಬ ನಿರ್ದೇಶಕರ ಸಿನಿಮಾಗಳು ಗಳಿಸಿರುವ ಬಾಕ್ಸ್ ಲೆಕ್ಕಾಚಾರ ನೀಡಿದ್ದಾರೆ.

ಇದನ್ನೂ ಓದಿ:ರಕ್ಷಿತ್ ಜನ್ಮದಿನಕ್ಕೆ ರಿಷಬ್ ಶೆಟ್ಟಿ ಕಡೆಯಿಂದ ದೊಡ್ಡ ಅಪ್​​ಡೇಟ್

‘ಪುಷ್ಪ’, ‘ಪುಷ್ಪ 2’ 2000 ಕೋಟಿಗೂ ಹೆಚ್ಚು, ‘ಕಾಂತಾರ’ ಮತ್ತು ‘ಕಾಂತಾರ 2’ ಸಹ 2000 ಕೋಟಿಗೂ ಹೆಚ್ಚು, ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳು ಸಹ 2000 ಕೋಟಿಗೂ ಹೆಚ್ಚು, ಇನ್ನು ಲೋಕೇಶ್ ಅವರ ‘ವಿಕ್ರಂ’ ಇನ್ನಿತರೆ ಕೆಲ ಸಿನಿಮಾಗಳು ಸುಮಾರು 1000 ಕೋಟಿ ಗಳಿಸಿವೆ. ಅಲ್ಲಿಗೆ ಆ ಸಭೆಯಲ್ಲಿ 7000 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿರುವ ದೊಡ್ಡ ಸಿನಿಮಾಗಳ ನಿರ್ದೇಶಕರು ಒಟ್ಟಿಗೆ ಸೇರಿದ್ದರು. ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಮೈತ್ರಿ ಮೂವಿ ಮೇಕರ್ಸ್ ಅವರು ಸಭೆಯಲ್ಲಿ ಹಾಜರಿದ್ದ ಎಲ್ಲ ನಿರ್ದೇಶಕರುಗಳ ಮೈತ್ರಿ ಮೂವಿ ಮೇಕರ್ಸ್​​ಗೆ ಸಿನಿಮಾ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಎಲ್ಲರನ್ನೂ ಒಟ್ಟಿಗೆ ಸೇರಿಸಲಾಗಿತ್ತು ಎನ್ನಲಾಗಿದೆ. ಈ ಕುರಿತು ಕೆಲವೇ ದಿನಗಳಲ್ಲಿ ಅಧಿಕೃತ ಘೊಷಣೆ ಸಹ ಹೊರಬೀಳಲಿದೆ.

ಅಸಲಿಗೆ ರಿಷಬ್ ಶೆಟ್ಟಿ ಈಗಾಗಲೇ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಸಿನಿಮಾನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ರಿಷಬ್ ನಟಿಸುತ್ತಿರುವ ‘ಜೈ ಹನುಮಾನ್’ ಸಿನಿಮಾಕ್ಕೆ ಮೈತ್ರಿ ಅವರೇ ನಿರ್ಮಾಪಕರು. ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶಿಸಿ, ಅಲ್ಲು ಅರ್ಜುನ್ ನಟಿಸಲಿರುವ ಹೊಸ ಸಿನಿಮಾಕ್ಕೂ ಮೈತ್ರಿ ಅವರದ್ದೇ ಬಂಡವಾಳ. ಸುಕುಮಾರ್ ನಿರ್ದೇಶಿಸಿ, ರಾಮ್ ಚರಣ್ ನಟಿಸಲಿರುವ ಹೊಸ ಸಿನಿಮಾಕ್ಕೂ ಮೈತ್ರಿ ಅವರದ್ದೆ ಬಂಡವಾಳ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:31 pm, Thu, 25 June 26

Follow Us
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ
‘11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ’
‘11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ’
ಐವರು ಜಲಸಮಾಧಿ ಕೇಸ್​: ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು?
ಐವರು ಜಲಸಮಾಧಿ ಕೇಸ್​: ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು?
ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ: 24 ಗಂಟೆ ಕಳೆದ್ರೂ ಮುಗಿಯದ ಶೋಧ
ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ: 24 ಗಂಟೆ ಕಳೆದ್ರೂ ಮುಗಿಯದ ಶೋಧ
ಡೆಡ್ ಸ್ಟೋರೇಜ್​ನತ್ತ ಕಬಿನಿ ಡ್ಯಾಂ: ಬೆಂಗಳೂರಿಗೆ KRS​ನಿಂದ ಮಾತ್ರ ನೀರು
ಡೆಡ್ ಸ್ಟೋರೇಜ್​ನತ್ತ ಕಬಿನಿ ಡ್ಯಾಂ: ಬೆಂಗಳೂರಿಗೆ KRS​ನಿಂದ ಮಾತ್ರ ನೀರು
ನಿರ್ಜಲ ಏಕಾದಶಿಯ ದಿನ ಯಾರಿಗೆ ಒಲಿಯಲಿದೆ ಅದೃಷ್ಟ?
ನಿರ್ಜಲ ಏಕಾದಶಿಯ ದಿನ ಯಾರಿಗೆ ಒಲಿಯಲಿದೆ ಅದೃಷ್ಟ?