AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳು ನಿರ್ದೇಶಕ ಎಲ್ಲರೆದುರು ಕಪಾಳಕ್ಕೆ ಹೊಡೆದಿದ್ದ: ನಟಿ ಪದ್ಮಪ್ರಿಯಾ

Padmapriya: ಖ್ಯಾತ ನಟಿ ಪದ್ಮಪ್ರಿಯಾ ತಮಗೆ ತಮಿಳು ಚಿತ್ರರಂಗದಲ್ಲಿ ಆಗಿದ್ದ ಅವಮಾನದ ಬಗ್ಗೆ ಮಾತನಾಡಿದ್ದಾರೆ. ತಮಿಳಿನ ‘ಮೃಗಂ’ ಸಿನಿಮಾದಲ್ಲಿ ನಟಿಸಬೇಕಾದರೆ ಆ ಸಿನಿಮಾದ ನಿರ್ದೇಶಕ ಸ್ವಾಮಿ ನಟಿಯ ಕಪಾಳಕ್ಕೆ ಹೊಡೆದಿದ್ದರಂತೆ.

ತಮಿಳು ನಿರ್ದೇಶಕ ಎಲ್ಲರೆದುರು ಕಪಾಳಕ್ಕೆ ಹೊಡೆದಿದ್ದ: ನಟಿ ಪದ್ಮಪ್ರಿಯಾ
ಮಂಜುನಾಥ ಸಿ.
|

Updated on: Oct 02, 2024 | 8:01 AM

Share

ಹೇಮಾ ಕಮಿಟಿ ವರದಿ ಬಹಿರಂಗವಾದ ಬಳಿಕ ಮತ್ತೊಮ್ಮೆ ಚಿತ್ರರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ಬಹಿರಂಗ ಚರ್ಚೆಗೆ ವೇದಿಕೆ ಒದಗಿದೆ. ಹೇಮಾ ವರದಿ ಬಹಿರಂಗದ ಬಳಿಕ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಯರು ತಮ್ಮ ಮೇಲಾಗಿದ್ದ, ಆಗುತ್ತಿರುವ ದೈಹಿಕ, ಮಾನಸಿಕ ದೌರ್ಜನ್ಯದ ಕುರಿತು ಮಾತನಾಡುತ್ತಿದ್ದಾರೆ. ತಮ್ಮ ಚಿತ್ರರಂಗಗಳಲ್ಲಿಯೂ ಹೇಮಾ ಕಮಿಟಿ ರೀತಿಯ ಕಮಿಟಿ ರಚನೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿಯೂ ಈ ಬೇಡಿಕೆ ನಿರ್ಮಾಣವಾಗಿದೆ. ಇದರ ನಡುವೆ ಖ್ಯಾತ ನಟಿ ಪದ್ಮಪ್ರಿಯಾ ತಮಿಳು ಚಿತ್ರರಂಗದಲ್ಲಿ ತಮಗೆ ಆಗಿದ್ದ ಅವಮಾನದ ಬಗ್ಗೆ ಮಾತನಾಡಿದ್ದಾರೆ.

ಏಳು ಭಾಷೆಗಳಲ್ಲಿ ನಟಿಸಿರುವ ಮಲಯಾಳಂ ನಟಿ ಪದ್ಮಪ್ರಿಯಾ, 2004 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟವರು. ಹಲವು ಭಾಷೆಗಳಲ್ಲಿ ಖ್ಯಾತ ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಅತ್ಯುತ್ತಮ ನಟನೆಗೆ ಹಲವು ಪ್ರಶಸ್ತಿಗಳನ್ನು ಸಹ ಅವರು ತಮ್ಮದಾಗಿಸಿಕೊಂಡಿದ್ದಾರೆ. ಕಾಲೇಜು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪದ್ಮಪ್ರಿಯಾ, ‘2007 ರಲ್ಲಿ ಬಿಡುಗಡೆ ಆದ ತಮಿಳಿನ ‘ಮೃಗಂ’ ಸಿನಿಮಾದಲ್ಲಿ ನಟಿಸುವಾಗ, ಚಿತ್ರೀಕರಣದ ಕೊನೆಯ ದಿನ ಎಲ್ಲರ ಎದುರು ನಿರ್ದೇಶಕ ಸ್ವಾಮಿ ನನ್ನ ಕಪಾಳಕ್ಕೆ ಹೊಡೆದಿದ್ದರು’ ಎಂದಿದ್ದಾರೆ.

ಇದನ್ನೂ ಓದಿ:ಕನ್ನಡದಲ್ಲೂ ‘ಹೇಮಾ ಸಮಿತಿ’ ರೀತಿ ವರದಿ ಬೇಕು ಎಂಬ ಮಾತಿಗೆ ರಕ್ಷಿತ್​ ಶೆಟ್ಟಿ ಹೇಳಿದ್ದೇನು?

‘ಆ ಘಟನೆ ನನಗೆ ಆಘಾತ ಉಂಟು ಮಾಡಿತ್ತು. ಆದರೆ ಮಾಧ್ಯಮಗಳು ಘಟನೆ ಬಗ್ಗೆ ಉಲ್ಟಾ ವರದಿ ಮಾಡಿದವು. ನಾನೇ ನಿರ್ದೇಶಕನ ಕಪಾಳಕ್ಕೆ ಹೊಡೆದಿದ್ದೇನೆ ಎಂದು ವರದಿ ಬರೆದವು, ಇದು ನನಗೆ ಆಘಾತ ತಂದಿತು. ಅದಾದ ಬಳಿಕ ಘಟನೆ ಬಗ್ಗೆ ನಾನು ತಮಿಳು ಸಿನಿಮಾ ಸಂಘಗಳಿಗೆ ದೂರು ನೀಡಿದೆ. ಆದರೆ ಅದರಿಂದ ಯಾವುದೇ ಉಪಯೋಗ ಆಗಲಿಲ್ಲ. ಆ ನಂತರ ನನ್ನನ್ನೇ ಕೆಲವು ಸಿನಿಮಾಗಳಿಂದ ಕೈ ಬಿಡಲಾಯ್ತು. ಅದಾಗಲೇ ಒಪ್ಪಿಕೊಂಡಿದ್ದ ಸಿನಿಮಾಗಳಿಂದಲೂ ನನ್ನನ್ನು ತೆಗೆಯಲಾಯ್ತು’ ಎಂದಿದ್ದಾರೆ.

ಆದರೆ ‘ಮೃಗಂ’ ಸಿನಿಮಾದ ನಟನೆಗೆ ನನಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ದೊರಕಿತು. ನನ್ನ ನಟನೆಯನ್ನು ಜನ ಮೆಚ್ಚಿಕೊಂಡರು. ನನ್ನ ವಿರುದ್ಧ ಏನೇ ಪಿತೂರಿ ಮಾಡಿದರೂ ಸಹ ನಾನು ಮಾಡಿದ ಕೆಲಸದಿಂದ ನನಗೆ ಗೌರವ ಪ್ರಾಪ್ತಿಯಾಯ್ತು’ ಎಂದಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲಿ ಇರುವ ಲಿಂಗ ಭೇದದ ಬಗ್ಗೆಯೂ ನಟಿ ಪದ್ಮಪ್ರಿಯಾ ಮಾತನಾಡಿದ್ದು, ಲಿಂಗ ಭೇದದ ಬಗ್ಗೆ ನಾನು ವರ್ಷಗಳಿಂದಲೂ ಮಾತನಾಡುತ್ತಲೇ ಇದ್ದೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ: ದಾವಣಗೆರೆ ಅಖಾಡಕ್ಕಿಳಿದ ಪೈಲ್ವಾನ್!
ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ: ದಾವಣಗೆರೆ ಅಖಾಡಕ್ಕಿಳಿದ ಪೈಲ್ವಾನ್!