‘ಹನುಮಾನ್​’ ಚಿತ್ರಕ್ಕಾಗಿ 75 ಸಿನಿಮಾಗಳ ಅವಕಾಶ ಕೈಚೆಲ್ಲಿದ್ದ ನಟ ತೇಜ ಸಜ್ಜಾ

ಬಾಕ್ಸ್​ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದಿರುವ ‘ಹನುಮಾನ್​’ ಸಿನಿಮಾದಿಂದ ನಟ ತೇಜ ಸಜ್ಜಾ ಅವರ ಜನಪ್ರಿಯತೆ ಹೆಚ್ಚಾಗಿದೆ. ಅವರ ಅಭಿಮಾನಿ ಬಳಗ ಕೂಡ ದೊಡ್ಡದಾಗಿದೆ. ಅಂದಹಾಗೆ, ಅವರಿಗೆ ಈ ಯಶಸ್ಸು ಸಿಕ್ಕಿದ್ದು ಏಕಾಏಕಿಯಾಗಿ ಅಲ್ಲ. ಈ ಚಿತ್ರಕ್ಕಾಗಿ ಅವರು ತುಂಬ ಕಷ್ಟಪಟ್ಟಿದ್ದಾರೆ. ಹಲವು ಸಿನಿಮಾಗಳನ್ನು ರಿಜೆಕ್ಟ್​ ಮಾಡಿದ್ದಾರೆ. ಆ ಕುರಿತು ಅವರೀಗ ಮಾತಾಡಿದ್ದಾರೆ.

‘ಹನುಮಾನ್​’ ಚಿತ್ರಕ್ಕಾಗಿ 75 ಸಿನಿಮಾಗಳ ಅವಕಾಶ ಕೈಚೆಲ್ಲಿದ್ದ ನಟ ತೇಜ ಸಜ್ಜಾ
ತೇಜ ಸಜ್ಜಾ
Follow us
|

Updated on: Feb 04, 2024 | 1:03 PM

ತೆಲುಗಿನ ನಟ ತೇಜ ಸಜ್ಜಾ (Teja Sajja) ಅವರಿಗೆ 2024ರ ಆರಂಭದಲ್ಲೇ ಭರ್ಜರಿ ಗೆಲುವು ಸಿಕ್ಕಿದೆ. ಅವರು ನಟಿಸಿದ ‘ಹನುಮಾನ್​’ ಸಿನಿಮಾ (Hanuman Movie) ಸೂಪರ್​ ಹಿಟ್​ ಆಗಿದೆ. ದೇಸಿ ಸೂಪರ್​ ಹೀರೋ ಕಾನ್ಸೆಪ್ಟ್​ ಹೊಂದಿರುವ ಈ ಸಿನಿಮಾದಲ್ಲಿ ಅವರ ನಟನೆ ಕಂಡು ಅಭಿಮಾನಿಗಳು ಭೇಷ್​ ಎಂದಿದ್ದಾರೆ. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 250 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಹಾಗಂತ ತೇಜ ಸಜ್ಜಾ ಅವರಿಗೆ ಈ ಗೆಲುವು ಸಿಕ್ಕಿರುವುದು ರಾತ್ರೋರಾತ್ರಿ ಅಲ್ಲ. ‘ಹನುಮಾನ್​’ ಸಿನಿಮಾಗಾಗಿ ಅವರು ಸಾಕಷ್ಟು ತ್ಯಾಗ ಮಾಡಿದ್ದಾರೆ. ಅನೇಕ ಸಿನಿಮಾಗಳ ಅವಕಾಶವನ್ನು ತ್ಯಜಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

‘ಹನುಮಾನ್​’ ಸಿನಿಮಾದ ಕೆಲಸಗಳು ಪೂರ್ಣಗೊಳ್ಳಲು ಎರಡೂವರೆ ವರ್ಷಗಳ ಸಮಯ ಹಿಡಿಯಿತು. ‘ಈ ಸಮಯದಲ್ಲಿ ನಾನು ಮಾಡಿದ್ದು ಇದೊಂದೇ ಸಿನಿಮಾ. ನನಗೆ ಬೇರೆ ಅವಕಾಶಗಳು ಕೂಡ ಬರುತ್ತಿದ್ದವು. ಅಂದಾಜು 70ರಿಂದ 75 ಪ್ರಾಜೆಕ್ಟ್​ಗಳನ್ನು ನಾನು ರಿಜೆಕ್ಟ್​ ಮಾಡಿದೆ. ಅದರಲ್ಲಿ ಕೊನೇ ಪಕ್ಷ 15 ಪ್ರಾಜೆಕ್ಟ್​ಗಳು ಚೆನ್ನಾಗಿದ್ದವು. ಆದರೆ ನಾನು ಯಾವಾಗಲೂ ಹನುಮಾನ್​ ಸಿನಿಮಾಗೆ ಕಮಿಟ್​ ಆಗಿದ್ದೆ’ ಎಂದು ತೇಜ ಸಜ್ಜಾ ಹೇಳಿದ್ದಾರೆ.

ಇದನ್ನೂ ಓದಿ: ರಾಮನಾಗಿ ಮಹೇಶ್​ ಬಾಬು, ಹನುಮಂತನಾಗಿ ಚಿರಂಜೀವಿ? ಇದು ‘ಜೈ ಹನುಮಾನ್​’ ಪ್ಲ್ಯಾನ್​

ಸಾಧಾರಣ ಬಜೆಟ್​ನಲ್ಲಿ ಸಿದ್ಧವಾದ ‘ಹನುಮಾನ್​’ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆದಿದೆ. ಬಹಳ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದನ್ನು ತೇಜ ಸಜ್ಜಾ ಈಗ ನೆನಪಿಸಿಕೊಂಡಿದ್ದಾರೆ. ‘ಈ ಸಿನಿಮಾದ ಸೂಪರ್​ ಹೀರೋ ಲುಕ್​ಗಾಗಿ ನಾವು 25 ಲುಕ್​ ಟೆಸ್ಟ್​ ಮಾಡಿದೆವು. ಸಾಮಾನ್ಯವಾಗಿ ಬೇರೆ ನಟರು ಎರಡು-ಮೂರು ಲುಕ್​ ಟೆಸ್ಟ್​ ಮಾಡುತ್ತಾರೆ ಅಷ್ಟೇ. ಸಾಹಸ ದೃಶ್ಯಗಳ ಶೂಟಿಂಗ್​ ತುಂಬ ಕಷ್ಟಕರ ಆಗಿತ್ತು. ಅಂಥ ಎಲ್ಲ ದೃಶ್ಯಗಳಲ್ಲೂ ನಾನೇ ಸ್ವತಃ ಅಭಿನಯಿಸಿದ್ದೇನೆ’ ಎಂದಿದ್ದಾರೆ ತೇಜ ಸಜ್ಜಾ.

ಇದನ್ನೂ ಓದಿ: 250 ಕೋಟಿ ರೂಪಾಯಿ ಕಲೆಕ್ಷನ್​; ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ‘ಹನುಮಾನ್​’ ಸಾಧನೆ

ಪ್ರಶಾಂತ್​ ವರ್ಮಾ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಹನುಮಾನ್​’ ಸಿನಿಮಾ ಜನವರಿ 12ರಂದು ಬಿಡುಗಡೆ ಆಯಿತು. ಅಮೃತಾ ಅಯ್ಯರ್​, ರಾಜ್​ ದೀಪಕ್​ ಶೆಟ್ಟಿ, ವಿನಯ್​ ರೈ, ವರಲಕ್ಷ್ಮೀ ಶರತ್​ಕುಮಾರ್​ ಮುಂತಾದವರು ನಟಿಸಿದ್ದಾರೆ. ಸಂಕ್ರಾಂತಿ ಸಂದರ್ಭದಲ್ಲಿ ತೆರೆಕಂಡ ಸ್ಟಾರ್​ ಹೀರೋಗಳ ಸಿನಿಮಾಗಳಿಗೂ ‘ಹನುಮಾನ್​’ ಟಫ್​ ಪೈಪೋಟಿ ನೀಡಿದೆ. ಈ ಸಿನಿಮಾ ಗೆದ್ದಿರುವುದರಿಂದ ಅದಕ್ಕೆ ಸೀಕ್ವೆಲ್​ ಸಿದ್ಧವಾಗುತ್ತಿದೆ. ಸೀಕ್ವೆಲ್​ಗೆ ‘ಜೈ ಹನುಮಾನ್​’ ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗಷ್ಟೇ ಅದರ ಸ್ಕ್ರಿಪ್ಟ್​ ಪೂಜೆ ಮಾಡಲಾಗಿದೆ. ‘ಹನುಮಾನ್​’ ಸಿನಿಮಾ ಗೆದ್ದ ಬಳಿಕ ತೇಜ ಸಜ್ಜಾ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ