AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯ: ಆಸ್ಕರ್ ಗೆದ್ದ ಹಾಡಿನ ಗಾಯಕನಿಗೆ ಕೊನೆಗೂ ಕೋಟಿಯ ಭರವಸೆ

Natu Natu song: ಆರ್​ಆರ್​​ಆರ್ ಸಿನಿಮಾದ ‘ನಾಟು ನಾಟು’ ಹಾಡು ಭಾರಿ ದೊಡ್ಡ ಕ್ರೇಜ್ ಸೃಷ್ಟಿಸಿದೆ. ಈ ಹಾಡಿಗೆ ಆಸ್ಕರ್ ಸಹ ಬಂದಿದೆ. ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮತ್ತು ಹಾಡು ಬರೆದಿರುವ ಚಂದ್ರಬೋಸ್​ಗೆ ಪ್ರಶಸ್ತಿಗಳು ದೊರೆತಿವೆ. ಆದರೆ ಹಾಡಿರುವ ರಾಹುಲ್ ಸಿಪ್ಲಿಗಂಜ್ ಅನ್ನು ನಿರ್ಲಕ್ಷ್ಯ ಮಾಡಲಾಗಿದೆ. ಇದೀಗ ಸಿಎಂ ಅವರೇ ರಾಹುಲ್​ಗೆ ಪ್ರಶಸ್ತಿ ಘೋಷಿಸಿದ್ದಾರೆ. ಅದು ನಿಜಕ್ಕೂ ಅವರ ಕೈ ಸೇರುತ್ತಾ?

ರಾಜಕೀಯ: ಆಸ್ಕರ್ ಗೆದ್ದ ಹಾಡಿನ ಗಾಯಕನಿಗೆ ಕೊನೆಗೂ ಕೋಟಿಯ ಭರವಸೆ
Rahul Sipliganj
ಮಂಜುನಾಥ ಸಿ.
|

Updated on:Jul 20, 2025 | 6:22 PM

Share

ಭಾರತಕ್ಕೆ ಆಸ್ಕರ್ ಗೆದ್ದುಕೊಟ್ಟ ಸಿನಿಮಾ ಯಾವುದೆಂದರೆ ‘ಆರ್​​ಆರ್​​ಆರ್’ ಎನ್ನುತ್ತೇವೆ. ಅದರಲ್ಲೂ ಆ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂತು. ‘ನಾಟು ನಾಟು’ ಹಾಡಿಗೆ ಸಂಗೀತ ನೀಡಿದ ಎಂಎಂ ಕೀರವಾಣಿ ಹಾಗೂ ಸಾಹಿತ್ಯ ಬರೆದ ಚಂದ್ರಭೋಸ್ ಅವರಿಗೆ ಆಸ್ಕರ್ ಬಂತು. ಈ ಇಬ್ಬರಿಗೂ ಸಾಕಷ್ಟು ಜನಪ್ರಿಯತೆ, ಸನ್ಮಾನಗಳು, ಪಾರಿತೋಷಕಗಳು, ಬಹುಮಾನಗಳು, ನಗದು ಬಹುಮಾನಗಳು ಬಂದವು. ಆದರೆ ‘ನಾಟು ನಾಟು’ ಹಾಡು ಹಾಡಿದ ಗಾಯಕನನ್ನು ಮಾತ್ರ ಎಲ್ಲರೂ ಮರೆತರು. ಹೀಗೆ ಮರೆತದ್ದೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ ಈಗ ಗಾಯಕನಿಗೆ ಕೊನೆಗೂ ಒಂದು ಕೋಟಿ ರೂಪಾಯಿ ಹಣದ ಭರವಸೆ ದೊರೆತಿದೆ. ಆದರೆ ನಗದು ಕೈಗೆ ಯಾವಾಗ ಬರುತ್ತದೆಯೋ ನೋಡಬೇಕು.

ತೆಲುಗಿನಲ್ಲಿ ‘ನಾಟು ನಾಟು’ ಸಿನಿಮಾ ಹಾಡನ್ನು ಹಾಡಿರುವುದು ಗಾಯಕ ರಾಹುಲ್ ಸಿಪ್ಲಿಗಂಜ್. ‘ನಾಟು ನಾಟು’ ಹಾಡಿಗೆ ಆಸ್ಕರ್ ಬಂದಾಗ ಎಲ್ಲರೂ ಕೀರವಾಣಿ, ಚಂದ್ರಭೋಸ್​ ಅನ್ನು ಅಭಿನಂದಿಸಿದರು ಆದರೆ ರಾಹುಲ್ ಸಿಪ್ಲಿಗಂಜ್ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ‘ಆರ್​​ಆರ್​​ಆರ್’ಗೆ ಆಸ್ಕರ್ ಬಂದಾಗ ಆಗಿದ್ದ ತೆಲಂಗಾಣ ಸರ್ಕಾರದ ಸಿಎಂ ಚಂದ್ರಶೇಖರ್ ರಾವ್ ಹಾಗೂ ಇತರರು ಚಿತ್ರತಂಡವನ್ನು ಸನ್ಮಾನಿಸಿದ್ದರು, ಕೀರವಾಣಿ, ಚಂದ್ರಭೋಸ್​ಗೆ ನಗದು ಬಹುಮಾನ ಘೋಷಣೆ ಮಾಡಿದ್ದರು. ಆದರೆ ಗಾಯಕ ರಾಹುಲ್ ಸಿಪ್ಲಿಗಂಜ್ ಅನ್ನು ಮರೆತಿದ್ದರು.

ಇದನ್ನೂ ಓದಿ:ಆಲಿಯಾ ಭಟ್ ಮನೆಯಲ್ಲಿ ನಿತ್ಯವೂ ಪ್ಲೇ ಆಗುತ್ತೆ ‘ನಾಟು ನಾಟು..’ ಹಾಡು

ಆಗ, ವಿಪಕ್ಷವಾಗಿದ್ದ ಕಾಂಗ್ರೆಸ್ ಇದನ್ನು ಟೀಕಿಸಿತ್ತು. ರಾಹುಲ್ ಸಿಪ್ಲಿಗಂಜ್ ಅವರ ಜಾತಿಯ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಲಾಗಿದೆ ಎಂದು ಸ್ವತಃ ರೇವಂತ್ ರೆಡ್ಡಿ (ಈಗಿನ ಸಿಎಂ) ಆಗ ಟೀಕೆ ಮಾಡಿದ್ದರು. ಈಗ ರೇವಂತ್ ರೆಡ್ಡಿ ಸಿಎಂ ಆಗಿದ್ದಾರೆ. ಸಿಎಂ ಆಗಿ ಈಗಾಗಲೇ ಸುಮಾರು ಎರಡು ವರ್ಷ ಕಳೆದಿವೆ. ಆದರೆ ಈ ವರೆಗೆ ರಾಹುಲ್ ಸಿಪ್ಲಿಗಂಜ್​ಗೆ ಪ್ರಶಸ್ತಿ ಘೋಷಣೆ ಮಾಡಿರಲಿಲ್ಲ. ಆದರೆ ಇತ್ತೀಚೆಗೆ ಬೋನಾಲ ಪಂಡಗ ಕಾರ್ಯಕ್ರಮಕ್ಕೆ ಬಂದಿದ್ದ ರೇವಂತ್ ರೆಡ್ಡಿ, ಆದಷ್ಟು ಶೀಘ್ರವೇ ರಾಹುಲ್ ಸಿಪ್ಲಿಗಂಜ್​ಗೆ ಒಂದು ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ಹಸ್ತಾಂತರ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ರಾಹುಲ್ ಸಿಪ್ಲಿಗಂಜ್ ಅವರು ಹಿಂದುಳಿದ ಜಾತಿಯವರಾಗಿದ್ದು, ಕ್ಷೌರಿಕ ವೃತ್ತಿಯವರಾಗಿದ್ದಾರೆ. ಅವರ ಜಾತಿಗೆ ಸಾಮಾಜಿಕವಾಗಿ ಹೆಚ್ಚು ಶಕ್ತಿ ಇಲ್ಲದ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಲಾಗಿದೆ ಎಂದು ಈ ಹಿಂದೆ ವಿಪಕ್ಷ ನಾಯಕ ಆಗಿದ್ದಾಗ ರೇವಂತ್ ರೆಡ್ಡಿ ಅವರೇ ಆರೋಪ ಮಾಡಿ, ರಾಹುಲ್ ಸಿಪ್ಲಿಗಂಜ್​ಗೆ ಪ್ರಶಸ್ತಿ ಕೊಡಬೇಕೆಂದು ಒತ್ತಾಯಿಸಿದ್ದರು. ಆದರೆ ಅದು ಆಗಿರಲಿಲ್ಲ. 2023 ರಲ್ಲಿ ರೇವಂತ್ ರೆಡ್ಡಿ ಸಿಎಂ ಆದಾಗಿಂದಲೂ ರಾಹುಲ್​ಗೆ ಪ್ರಶಸ್ತಿ ಕೊಡಬೇಕೆಂಬ ಒತ್ತಾಯ ಕೇಳಿ ಬರುತ್ತಲೇ ಇತ್ತು. ಈಗ ಕೊನೆಗೆ ರಾಹುಲ್ ಅವರಿಗೆ ಪ್ರಶಸ್ತಿ ಘೋಷಣೆ ಆಗಿದೆ. ಆದರೆ ಒಂದು ಕೋಟಿ ರೂಪಾಯಿ ಯಾವಾಗ ಅವರ ಕೈ ಸೇರುತ್ತದೆಯೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Sun, 20 July 25

ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ