ವರ್ತೂರು ಸಂತೋಷ್​ ಪರವಾಗಿ ತುಕಾಲಿ ಸಂತೋಷ್​ ನಿಂತುಕೊಂಡಿದ್ದು ಯಾಕೆ?

ಒಂದು ಹಂತದಲ್ಲಿ ವರ್ತೂರು ಸಂತೋಷ್​ ಅವರು ಬಿಗ್​ ಬಾಸ್​ ಆಟವನ್ನು ಅರ್ಧಕ್ಕೆ ತೊರೆಯುವ ನಿರ್ಧಾರ ಮಾಡಿದ್ದರು. ಹೊರಗೆ ಹೋಗಲೇಬೇಕು ಎಂದು ಕಣ್ಣೀರು ಹಾಕಿದ್ದರು. ಅಂಥ ಸಂದರ್ಭದಲ್ಲಿ ಅವರಿಗೆ ಧೈರ್ಯ ತುಂಬಿದವರು ತುಕಾಲಿ ಸಂತೋಷ್​. ತಾವು ವರ್ತೂರು ಸಂತೋಷ್​ ಪರವಾಗಿ ನಿಂತಿದ್ದು ಯಾಕೆ ಎಂಬುದನ್ನು ಅವರೀಗ ವಿವರಿಸಿದ್ದಾರೆ.

ವರ್ತೂರು ಸಂತೋಷ್​ ಪರವಾಗಿ ತುಕಾಲಿ ಸಂತೋಷ್​ ನಿಂತುಕೊಂಡಿದ್ದು ಯಾಕೆ?
ತುಕಾಲಿ ಸಂತೋಷ್, ವರ್ತೂರು ಸಂತೋಷ್​

Updated on: Jan 29, 2024 | 9:36 PM

ಬಿಗ್​ ಬಾಸ್​ ಮನೆಯೊಳಗೆ ಕಾಲಿಡುವುದಕ್ಕೂ ಮೊದಲು ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್ (Tukali Santhosh)​ ನಡುವೆ ಸ್ನೇಹ ಇರಲಿಲ್ಲ. ಆದರೆ ದೊಡ್ಮನೆಯೊಳಗೆ ಅವರು ಆತ್ಮೀಯ ಸ್ನೇಹಿತರಾದರು. ಇಬ್ಬರೂ ಜೊತೆಯಾಗಿ ಫಿನಾಲೆ ತನಕ ಪೈಪೋಟಿ ನೀಡಿದರು ಎಂಬುದು ಗಮನಾರ್ಹ ಸಂಗತಿ. ಜನವರಿ 28ರಂದು ಬಿಗ್​ ಬಾಸ್​ (BBK 10) ಫಿನಾಲೆ ನಡೆಯಿತು. ಅಂತಿಮವಾಗಿ ಕಾರ್ತಿಕ್​ ಮಹೇಶ್​ ಟ್ರೋಫಿ ಗೆದ್ದರು. ತುಕಾಲಿ ಸಂತೋಷ್​ 5ನೇ ರನ್ನರ್​ಅಪ್​ ಹಾಗೂ ವರ್ತೂರು ಸಂತೋಷ್​ (Varthur Santhosh) 4ನೇ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಶೋ ಮುಗಿದ ಬಳಿಕ ‘ಟಿವಿ 9 ಕನ್ನಡ’ದ ಜೊತೆ ಮಾತನಾಡಿದ ತುಕಾಲಿ ಸಂತೋಷ್​ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಒಂದು ಹಂತದಲ್ಲಿ ವರ್ತೂರು ಸಂತೋಷ್​ ಅವರು ಬಿಗ್​ ಬಾಸ್​ ಆಟವನ್ನು ಅರ್ಧಕ್ಕೆ ತೊರೆಯುವ ನಿರ್ಧಾರ ಮಾಡಿದ್ದರು. ಹೊರಗೆ ಹೋಗಲೇಬೇಕು ಎಂದು ಕಣ್ಣೀರು ಹಾಕಿದ್ದರು. ಅಂಥ ಸಂದರ್ಭದಲ್ಲಿ ಅವರಿಗೆ ಧೈರ್ಯ ತುಂಬಿದವರು ತುಕಾಲಿ ಸಂತೋಷ್​. ಅಷ್ಟಕ್ಕೂ ತುಕಾಲಿ ಸಂತೋಷ್​ ಅವರು ವರ್ತೂರು ಪರವಾಗಿ ನಿಂತಿದ್ದು ಯಾಕೆ ಎಂಬುದನ್ನು ಅವರೀಗ ವಿವರಿಸಿದ್ದಾರೆ.

ಇದನ್ನೂ ಓದಿ: ‘ಯಾರು ಗೆಲ್ಲಬೇಕು ಅನ್ನೋದು ಫಿಕ್ಸ್​ ಆಗಿತ್ತು’: ಬಿಗ್ ಬಾಸ್​ ಮೇಲೆ ದೊಡ್ಡ ಆರೋಪ

‘ವರ್ತೂರು ಸಂತೋಷ್​ ಅವರದ್ದು ಮುಗ್ಧ ಮನಸ್ಸು. ಎಲ್ಲರಿಗೂ ಬೆಂಬಲ ನೀಡುವಂಥ ವ್ಯಕ್ತಿತ್ವ. ಯಾರ ಜೊತೆಗೂ ಬೇಸರ ಮಾಡಿಕೊಳ್ಳಲ್ಲ. ಅಂಥ ವ್ಯಕ್ತಿ ನನ್ನ ಫ್ರೆಂಡ್​. ನನ್ನಿಂದ ಅವರು ಏನೂ ನಿರೀಕ್ಷೆ ಮಾಡಿಲ್ಲ. ಅವರು ಅರ್ಧಕ್ಕೆ ಮನೆ ಬಿಟ್ಟು ಹೋಗುತ್ತೇನೆ ಎಂದಾಗ ಬೇಸರ ಆಯ್ತು. ಅಂಥ ಸ್ನೇಹವನ್ನು ಬಿಟ್ಟುಕೊಡಲು ನನಗೆ ಆಗಲ್ಲ. ರೈತರ ಪರವಾಗಿ ಬಂದಿದ್ದಾರೆ. ಚೆನ್ನಾಗಿ ಆಡುತ್ತಿದ್ದಾರೆ. ಈ ಶೋ ಮೂಲಕ ರೈತರಿಗೆ ಒಂದಷ್ಟು ವಿಷಯ ತಿಳಿಸಲಿ. ಕೊನೆವರೆಗೂ ಉಳಿದುಕೊಳ್ಳಲಿ ಎಂಬುದು ನನ್ನ ಆಸೆಯಾಗಿತ್ತು’ ಎಂದು ತುಕಾಲಿ ಸಂತೋಷ್​ ಹೇಳಿದ್ದಾರೆ.

‘ನಮ್ಮ ಅಣ್ಣ ಟಾಪ್​ 3 ಅಥವಾ ಟಾಪ್​ 2 ಸ್ಥಾನದಲ್ಲಿ ಇರುತ್ತಾರೆ ಎಂದುಕೊಂಡೆ. ಅದು ಆಗಲಿಲ್ಲ. ಏನಾಯ್ತೋ ಏನೋ. ಐದನೆಯವನಾಗಿ ನೀನು ಹೋಗು, ಆರನೆಯವನಾಗಿ ಅವನು ಹೋಗಲಿ ಅಂತ ದೇವರ ತಥಾಸ್ತು ಎಂದಿರಬಹುದು. ಅವರು ಹೊರಬಂದಾಗ ಕಣ್ಣೀರು ತಡೆಯೋಕೆ ಆಗಲಿಲ್ಲ. ಮನಸ್ಸಿನಲ್ಲಿ ನೋವು ಇಟ್ಟುಕೊಂಡು ಆಡುವುದು ಸುಲಭವಲ್ಲ. ಹಾಗಾಗಿ ಆರಂಭದಲ್ಲಿ ವರ್ತೂರು ಸಂತೋಷ್​ ಚೆನ್ನಾಗಿ ಆಟವಾಡಲು ಸಾಧ್ಯವಾಗಿರಲಿಲ್ಲ’ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us