ನಾಮಿನೇಟ್ ಆದವರಿಗೆ ಬಣ್ಣದ ಗುಂಡು: ಬಿಗ್​ಬಾಸ್ ಮನೆಯಲ್ಲಿ ಶುರು ಅಸಲಿ ಆಟ

|

Updated on: Oct 10, 2023 | 11:21 PM

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10ರ ಮೊದಲ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಮೊದಲೆರಡು ದಿನ ಆರಾಮವಾಗಿ ಹಾಡು-ಆಡುತ್ತಾ ಸಮಯ ಕಳೆದ ಸ್ಪರ್ಧಿಗಳು ಆಟದ ಬಿಸಿಯನ್ನು ಎದುರಿಸಿದ್ದಾರೆ.

ನಾಮಿನೇಟ್ ಆದವರಿಗೆ ಬಣ್ಣದ ಗುಂಡು: ಬಿಗ್​ಬಾಸ್ ಮನೆಯಲ್ಲಿ ಶುರು ಅಸಲಿ ಆಟ
ಬಿಗ್​ಬಾಸ್
Follow us on

ಬಿಗ್​ಬಾಸ್​ ಕನ್ನಡ ಸೀಸನ್ 10 (Bigg Boss) ಶುರುವಾಗಿದೆ. ಮೊದಲೆರಡು ದಿನಗಳು ಆರಾಮದಿಂದ ಜಾಲಿಯಾಗಿ ಕಳೆದ ಸ್ಪರ್ಧಿಗಳಿಗೆ ಮೂರನೇ ದಿನಕ್ಕೆ ಆಟದ ಶಾಖ ಅನುಭವಕ್ಕೆ ಬರಲು ಆರಂಭವಾದಂತಿದೆ. ಬಿಗ್​ಬಾಸ್​ ಆರಂಭವಾದ ಮೂರನೇ ದಿನಕ್ಕೆ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ನಾಮಿನೇಟ್ ಆದವರಿಗೆ ಬಿಗ್​ಬಾಸ್ ಬಣ್ಣದ ಗುಂಡು ಹೊಡೆದಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ನಿರೀಕ್ಷೆಯಂತೆಯೇ ಸ್ಪರ್ಧಿಗಳ ನಡುವೆ ರಾಗ-ದ್ವೇಷಗಳನ್ನು ಮೂಡಿಸಿದೆ.

ಬಿಗ್​ಬಾಸ್ ಆರಂಭದ ದಿನದಂದು ಕಡಿಮೆ ಮತಗಳನ್ನು ಪಡೆದ ಡ್ರೋನ್ ಪ್ರತಾಪ್, ಹಳ್ಳಿಕಾರ್ ಸಂತೋಶ್, ತನಿಷಾ, ಸಂಗೀತಾ ಶ್ರಿಂಗೇರಿ, ರಕ್ಷಕ್ ಬುಲೆಟ್, ಕಾರ್ತಿಕ್ ಈ ಆರು ಜನರಲ್ಲಿ ತಲಾ ಇಬ್ಬರನ್ನು ಮನೆಯ ಇತರೆ ಸದಸ್ಯರು ನಾಮಿನೇಟ್ ಮಾಡಬೇಕೆಂದು ಬಿಗ್​ಬಾಸ್ ಆದೇಶ ಹೊರಡಿಸಿದರು.

ಅಂತೆಯೇ ನಮ್ರತಾ, ಸಂತೋಶ್, ತನಿಷಾ ಅವರನ್ನು, ನಟ ಸ್ನೇಹಿತ್, ಡ್ರೋನ್ ಪ್ರತಾಪ್ ಹಾಗೂ ಹಳ್ಳಿಕಾರ್ ಸಂತೋಶ್ ಅವರನ್ನು, ರ್ಯಾಪರ್ ಈಶಾನಿ ತನಿಷಾ ಹಾಗೂ ಸಂತೋಶ್ ಅವರನ್ನು, ಸ್ನೇಕ್ ಶ್ಯಾಮ್ ಅವರು ಡ್ರೋನ್ ಪ್ರತಾಪ್ ಹಾಗೂ ಹಳ್ಳಿಕಾರ್ ಸಂತೋಶ್ ಅವರನ್ನು, ನೀತು ವನಜಾಕ್ಷಿ ಅವರು ಪ್ರತಾಪ್ ಹಾಗೂ ರಕ್ಷಕ್ ಅವರನ್ನು ನಟ
ತುಕಾಲಿ ಸಂತೋಶ್, ಸಂಗೀತ ಶ್ರಿಂಗೇರಿ ಹಾಗೂ ಕಾರ್ತಿಕ್ ಅವರನ್ನು, ನೈಜೀರಿಯನ್ ಕನ್ನಡಿಗ ಮೈಖಲ್ ಕಾರ್ತಿಕ್ ಹಾಗೂ ಪ್ರತಾಪ್ ಅವರನ್ನು, ನಟಿ ಸಿರಿ ಅವರು ರಕ್ಷಕ್, ಪ್ರತಾಪ್ ಅವರನ್ನು, ವಿನಯ್ ಅವರು ಕಾರ್ತಿಕ್ ಹಾಗೂ ಸಂಗೀತ ಅವರನ್ನು ಗೌರೀಶ್ ಅಕ್ಕಿ ಅವರು ಪ್ರತಾಪ್ ಹಾಗೂ ಸಂತೋಶ್ ಅವರನ್ನು ನಟಿ ಭಾಗ್ಯ ಅವರು ತನಿಷಾ, ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದರು.

ಇದನ್ನೂ ಓದಿ:ಕೋಟಿ ಕೊಟ್ರು ಬಿಗ್​ಬಾಸ್​ಗೆ ಹೋಗಲ್ಲ ಎಂದಿದ್ದ ನಟಿ ಬಿಗ್​ಬಾಸ್​ಗೆ ಬಂದಿದ್ದು ಏಕೆ?

ನಾಮಿನೇಟ್ ಆದ ಪ್ರತಿ ಬಾರಿಯೂ ನಾಮಿನೇಟ್ ಆದವರು ದೊಡ್ಡ ಸಿಡಿಮದ್ದು ತೋಪಿನ ಮುಂದೆ ಕೂರಬೇಕಿತ್ತು, ಆ ತೋಪಿನ ಮೂಲದ ಜೋರಾಗಿ ಬಣ್ಣವನ್ನು ನಾಮಿನೇಟ್ ಆದವರ ಮೇಲೆ ಸಿಡಿಸಲಾಯ್ತು. ಆ ತೋಪಿನ ಶಬ್ದ, ಬಣ್ಣ ಚೆಲ್ಲುವ ವೇಗ ಇತರೆ ಸ್ಪರ್ಧಿಗಳಲ್ಲಿ ಭಯ ಮೂಡಿಸಿತು. ನಾಮಿನೇಟ್ ಆದ ಸ್ಪರ್ಧಿಗಳು, ಬಣ್ಣ ನೇರವಾಗಿ ಎದೆಗೆ ತಗುಲಿ ನೋವು ಅನುಭವಿಸಿದರು.

ಅಂತಿಮವಾಗಿ ಡ್ರೋನ್ ಪ್ರತಾಪ್, ಹಳ್ಳಿಕಾರ್ ಸಂತೋಶ್, ನಟ ಕಾರ್ತಿಕ್ ಹಾಗೂ ನಟಿ ತನಿಷಾ ಅತಿ ಹೆಚ್ಚು ಜನರಿಂದ ನಾಮಿನೇಟ್ ಆದವರು ಎನಿಸಿಕೊಂಡು ಡೇಂಜರ್ ಜೋನ್​ಗೆ ತಳ್ಳಪಟ್ಟರು. ನಾಮಿನೇಶನ್ ಪ್ರಕ್ರಿಯೆ ಬಳಿಕ ನಟಿ ಸಂಗೀತಾ ಶ್ರಿಂಗೇರಿ ಅವರು ‘ಹರ ಹರ ಮಹದೇವ್’ ಧಾರಾವಾಹಿಯ ತಮ್ಮ ಸಹನಟ ವಿನಯ್ ಜೊತೆ ಇದೇ ಕಾರಣಕ್ಕೆ ವಾಗ್ವಾದವನ್ನೂ ಮಾಡಿದರು. ಕ್ಷುಲ್ಲಕ ಕಾರಣ ನೀಡಿ ತಮ್ಮನ್ನು ಉದ್ದೇಶಪೂರ್ವಕಾಗಿ ನಾಮಿನೇಟ್ ಮಾಡಿದ್ದೀಯ ಎಂಬುದು ಸಂಗೀತಾ ವಾದವಾಗಿತ್ತು.

ಇದಾದ ಬಳಿಕ ಮನೆಯ ಇತರೆ ಸ್ಪರ್ಧಿಗಳು ಸಹ ಪರಸ್ಪರರನ್ನು ನಾಮಿನೇಟ್ ಮಾಡಬೇಕಾದ ಪರಿಸ್ಥಿತಿ ಬಂತು. ಆಗ ಸ್ನೇಕ್ ಶ್ಯಾಮ್ ಅವರು ನೀತು ವನಜಾಕ್ಷಿ ಅವರನ್ನು ನಾಮಿನೇಟ್ ಮಾಡಿದರು. ನೀತು, ವಿನಯ್ ಹಾಗೂ ಸ್ನೇಹಿತ್​ರನ್ನು ನಾಮಿನೇಟ್ ಮಾಡಿದರು. ನಟ ವಿನಯ್ ಅವರು ಸ್ನೇಕ್ ಶಾಮ್ ಹಾಗೂ ನೀತು ವನಜಾಕ್ಷಿ ಅವರನ್ನು ನಾಮಿನೇಟ್ ಮಾಡಿದರು. ಹೀಗೆ ಪ್ರತಿಯೊಬ್ಬ ಸದಸ್ಯರು ಇಬ್ಬರು ಸದಸ್ಯರನ್ನು ನಾಮಿನೇಟ್ ಮಾಡಿದರು. ನಾಮಿನೇಷನ್ ಮುಗಿಯುವ ವೇಳೆಗೆ ಸ್ಪರ್ಧಿಗಳ ನಡುವೆ ಗುಂಪು ಚರ್ಚೆಗಳು ಆರಂಭವಾಗಿದ್ದು, ಪರಸ್ಪರರ ಬಗ್ಗೆ ಮೂದಲಿಕೆ, ಅನುಮಾನಗಳು ಆರಂಭವಾಗಿವೆ. ಈ ವಾರಾಂತ್ಯಕ್ಕೆ ಬಿಗ್​ಬಾಸ್ ಮನೆಯಿಂದ ಯಾರು ಹೊಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:21 pm, Tue, 10 October 23