AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss 12 Grand Finale Highlights: ಬಿಗ್​​ಬಾಸ್ ವಿನ್ನರ್ ಘೋಷಣೆ

Bigg Boss Kannada 12 Grand Finale Highlights: ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಗಿಲ್ಲಿ, ಕಾವ್ಯಾ, ಅಶ್ವಿನಿ, ರಕ್ಷಿತಾ, ರಘು, ಧನುಶ್ ಅವರುಗಳು ಸ್ಪರ್ಧೆಯಲ್ಲಿದ್ದು, ಇವರಲ್ಲಿ ಒಬ್ಬರು ವಿಜೇತರಾಗಲಿದ್ದಾರೆ. ಬಿಗ್​​ಬಾಸ್ ಫಿನಾಲೆಯ ಕ್ಷಣ-ಕ್ಷಣದ ಲೈವ್ ಮಾಹಿತಿ ಇಲ್ಲಿದೆ...

Bigg Boss 12 Grand Finale Highlights: ಬಿಗ್​​ಬಾಸ್ ವಿನ್ನರ್ ಘೋಷಣೆ
ಮಾರುತಿ ವಿಕ್ಟೋರಿಸ್ ಕಳೆದ ವರ್ಷ ಪರಿಚಯಿಸಲಾಗಿದೆ. ಈ ಕಾರು 1490 ಸಿಸಿ ಇಂಜಿನ್ ಹೊಂದಿದೆ. ಗ್ಲೋಬಲ್ ನ್​ಕ್ಯಾಪ್​​​ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಈ ಕಾರು ಗಿಲ್ಲಿಗೆ ಸಿಕ್ಕಿರೋದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.
ಮಂಜುನಾಥ ಸಿ.
| Edited By: |

Updated on:Jan 21, 2026 | 2:50 PM

Share

ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಇಂದು (ಭಾನುವಾರ) ನಡೆಯಲಿದೆ. ಸೆಪ್ಟೆಂಬರ್ 28, 2025ರಂದು ಪ್ರಾರಂಭವಾದ ಬಿಗ್​​ಬಾಸ್ ಸೀಸನ್ 12 ಇಂದಿಗೆ 112 ದಿನಗಳನ್ನು ಪೂರೈಸಲಿದೆ. ಫಿನಾಲೆಗೆ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಶ್, ಕಾವ್ಯಾ, ರಘು ಮತ್ತು ರಕ್ಷಿತಾ ಶೆಟ್ಟಿ ಅವರುಗಳು ಬಂದಿದ್ದಾರೆ. ಈ ಆರರಲ್ಲಿ ಒಬ್ಬರು ಈ ಸೀಸನ್​​ನ ವಿಜೇತರಾಗಲಿದ್ದಾರೆ. ಒಬ್ಬ ಸ್ಪರ್ಧಿಗೆ 37 ಕೋಟಿಗೂ ಅಧಿಕ ವೋಟು ಬಂದಿದೆ, ಇನ್ನೊಬ್ಬ ಸ್ಪರ್ಧಿಗೂ ಸರಿ ಸುಮಾರು ಇಷ್ಟೆ ಮತಗಳು ಬಂದಿವೆ ಎಂದು ಸುದೀಪ್ ಹೇಳಿರುವುದು ಕುತೂಹಲ ಮೂಡಿಸಿದೆ. ಕೆಲವೇ ಗಂಟೆಗಳಲ್ಲಿ ವಿನ್ನರ್ ಘೋಷಣೆ ಆಗಲಿದೆ. ಬಿಗ್​​ಬಾಸ್ ಫಿನಾಲೆಯ ಕ್ಷಣ-ಕ್ಷಣದ ಮಾಹಿತಿಯನ್ನು ಇಲ್ಲಿ ಗಮನಿಸಿ…

LIVE NEWS & UPDATES

The liveblog has ended.
  • 18 Jan 2026 11:46 PM (IST)

    ರಕ್ಷಿತಾಗೆ ಕಿಚ್ಚನ ಚಪ್ಪಾಳೆ

    ಅದ್ಭುತವಾಗಿ ಆಡಿದ ರಕ್ಷಿತಾ ಶೆಟ್ಟಿ ಮೊದಲ ರನ್ನರ್ ಅಪ್ ಆದರು. ಮನೊರಂಜನಾ ಕ್ಷೇತ್ರದ ಹಿನ್ನೆಲೆ ಇಲ್ಲದ ರಕ್ಷಿತಾ ರನ್ನರ್ ಅಪ್ ಆಗಿದ್ದನ್ನು ಸಾಧನೆ ಎಂದು ಸುದೀಪ್ ಕೊಂಡಾಡಿದರು.

  • 18 Jan 2026 11:43 PM (IST)

    ಗೆದ್ದ ಗಿಲ್ಲಿಗೆ ಸಿಕ್ಕಿದ್ದೇನು?

    ಗಿಲ್ಲಿಗೆ ಅಶ್ವಸೂರ್ಯ ಅವರ ಕಡೆಯಿಂದ 50 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಮಾರುತಿಯ ಹೊಸ ಕಾರನ್ನು ಉಡುಗೊರೆಯಾಗಿ ನೀಡಲಾಯ್ತು.

  • 18 Jan 2026 11:26 PM (IST)

    ಬಿಗ್​​ಬಾಸ್ 12 ವಿನ್ನರ್

    ಬಿಗ್​​ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿದ್ದಾರೆ ಗಿಲ್ಲಿ ನಟ.

  • 18 Jan 2026 11:25 PM (IST)

    ಆಶ್ಚರ್ಯಕರ ಎವಿಕ್ಷನ್

    ಈ ಸೀಸನ್​ನ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದ ಅಶ್ವಿನಿ ಗೌಡ ಅವರು ಎರಡನೇ ರನ್ನರ್ ಅಪ್ ಆಗಿ ಬಿಗ್​​ಬಾಸ್ ಮನೆಯಿಂದ ಹೊರ ಹೋಗಿದ್ದಾರೆ.

  • 18 Jan 2026 11:17 PM (IST)

    ಬಿಗ್​​ಬಾಸ್ ಮನೆಯ ಲೈಟ್ ಆಫ್

    ಬಿಗ್​ಬಾಸ್ ಕನ್ನಡ ಸಿಸನ್ 12 ರ ಮನೆಯ ಲೈಟ್ ಅನ್ನು ಸುದೀಪ್ ಆಫ್ ಮಾಡುವ ಮೂಲಕ ಈ ಸೀಸನ್​ನ ಮನೆಗೆ ವಿದಾಯ ಹೇಳಿದರು.

  • 18 Jan 2026 10:38 PM (IST)

    ಕೈಮುಗಿದು ಬೇಡಿಕೊಂಡ ರಕ್ಷಿತಾ

    ಇನ್ನು ಕೆಲವೇ ನಿಮಿಷಗಳಲ್ಲಿ ಎಲ್ಲರೂ ಬಿಗ್​​ಬಾಸ್ ಮನೆ ಬಿಟ್ಟು ಹೊರಗೆ ಬರಲಿದ್ದಾರೆ. ರಕ್ಷಿತಾ, ತಮ್ಮ ಕಿಚ್ಚನ ಚಪ್ಪಾಳೆಯ ಫೊಟೊ ತೆಗೆದುಕೊಂಡು ಹೋಗುವೆ ಎಂದರು ಆದರೆ ಕಿಚ್ಚ ಬೇಡ ಎಂದಿದ್ದಾರೆ. ಕೈ ಮುಗಿದು ರಕ್ಷಿತಾ ಬೇಡಿಕೊಂಡಿದ್ದಾರೆ.

  • 18 Jan 2026 10:21 PM (IST)

    ಬಿಗ್​​ಬಾಸ್ ಮನೆಯೊಳಗೆ ಕಿಚ್ಚ

    ಕಿಚ್ಚ ಸುದೀಪ್ ಅವರು ಇದೀಗ ಬಿಗ್​​ಬಾಸ್ ಮನೆಗೆ ಹೋಗಿದ್ದಾ. ಉಳಿದ ಮೂವರಾದ ಗಿಲ್ಲಿ, ರಕ್ಷಿತಾ ಮತ್ತು ಅಶ್ವಿನಿ ಅವರನ್ನು ಖುದ್ದಾಗಿ ಬಿಗ್​​ಬಾಸ್ ವೇದಿಕೆಗೆ ಕರೆತರುತ್ತಿದ್ದಾರೆ.

  • 18 Jan 2026 10:12 PM (IST)

    ಪ್ರಯಾಣದ ರೀಕ್ಯಾಪ್

    ಸುದೀಪ್ ಅವರು ಇದೀಗ ಗಿಲ್ಲಿ, ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರುಗಳ ಹಿಂದಿನ ಪಯಣದ ವಿಡಿಯೋಗಳನ್ನು ಹಾಕಿ ತೋರಿಸುತ್ತಿದ್ದಾರೆ. ಎಲ್ಲರ ಪ್ರಯಾಣವೂ ಅದ್ಭುತವಾಗಿದೆ.

  • 18 Jan 2026 10:11 PM (IST)

    ಉಳಿದಿದ್ದು ಮೂವರೇ

    ಬಿಗ್​​ಬಾಸ್ ಮನೆಯಲ್ಲಿ ಪ್ರಸ್ತುತ ಉಳಿದಿರುವುದು ಮೂರೇ ಜನ ಸ್ಪರ್ಧಿಗಳು. ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ. ಈ ಮೂವರಲ್ಲಿ ಗೆಲ್ಲುವುದು ಯಾರು?

  • 18 Jan 2026 09:27 PM (IST)

    ನಾಲ್ಕನೇ ಸ್ಪರ್ಧಿ ಹೊರಕ್ಕೆ

    Kavya

    Kavya

    ಬಿಗ್​​ಬಾಸ್ ಫಿನಾಲೆಯಿಂದ ನಾಲ್ಕನೇ ಸ್ಪರ್ಧಿಯಾಗಿ ಕಾವ್ಯಾ ಅವರು ಹೊರಗೆ ಹೋಗಿದ್ದಾರೆ. ರವಿಚಂದ್ರನ್ ಅವರು ಮನೆಯ ಒಳಗೆ ಹೋಗಿ ಆಕ್ಟಿವಿಟಿ ಮೂಲಕ ಕಾವ್ಯಾ ಅನ್ನು ಹೊರಗೆ ಕರೆತಂದರು.

  • 18 Jan 2026 09:27 PM (IST)

    ಹಣ ನಿರಾಕರಿಸಿದ ರಕ್ಷಿತಾ

    ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಬಿಗ್​​ಬಾಸ್ ಮನೆಗೆ ಸೂಟ್​ಕೇಸ್ ಸಹಿತ ಹೋಗಿದ್ದರು. ಈಗಲೇ ಹೊರಬರುವ ಸ್ಪರ್ಧಿಗೆ ಐದು ಲಕ್ಷ ಹಣ ಕೊಡುವುದಾಗಿ ಹೇಳಿದರು. ಆದರೆ ಯಾರೂ ಸಹ ರವಿಚಂದ್ರನ್ ನೀಡಿದ ಆಫರ್ ಒಪ್ಪಿಕೊಳ್ಳಲಿಲ್ಲ.

  • 18 Jan 2026 09:16 PM (IST)

    ಮತ್ತೊಮ್ಮೆ ಬಿಗ್​​​ಬಾಸ್​​ನಲ್ಲಿ ಕ್ರೇಜಿ ಸ್ಟಾರ್

    ಬಿಗ್​​ಬಾಸ್ ವೇದಿಕೆಗೆ ಮತ್ತೊಮ್ಮೆ ಬಂದಿದ್ದಾರೆ ಕ್ರೇಜಿ ಸ್ಟಾರ್ ವಿ ರವಿಚಂದ್ರನ್. ಇದೇ ಸೀಸನ್​​ನಲ್ಲಿ ಒಮ್ಮೆ ಬಿಗ್​​ಬಾಸ್ ಮನೆಗೂ ಹೋಗಿದ್ದ ರವಿಚಂದ್ರನ್ ಅವರು ಇದೀಗ ವೇದಿಕೆಗೆ ಬಂದಿದ್ದು, ನಾಲ್ಕನೇ ಸ್ಪರ್ಧಿಯನ್ನು ಹೊರಗೆ ಕರೆದುಕೊಂಡು ಬರಲಿದ್ದಾರೆ.

  • 18 Jan 2026 09:02 PM (IST)

    ಗಿಚ್ಚಿ ಗಿಲಿ ಗಿಲಿ ತಂಡ

    ಬಿಗ್​ಬಾಸ್ ವೇದಿಕೆ ಮೇಲೆ ನಕ್ಕು ನಗಿಸಿದ ಗಿಚ್ಚಿ ಗಿಲಿ ಗಿಲಿ ತಂಡ, ಸ್ಪರ್ಧಿಗಳ ಅನುಕರಣೆ ಮಾಡಿದ ಸ್ಪರ್ಧಿಗಳು.

  • 18 Jan 2026 08:28 PM (IST)

    ಐದನೇ ಸ್ಪರ್ಧಿಯಾಗಿ ಹೊರಬಂದಿದ್ದು ಯಾರು?

    ಬಿಗ್​​ಬಾಸ್ ಮನೆಯಿಂದ ಐದನೇ ಸ್ಪರ್ಧಿ ಹೊರಗೆ ಬಂದಿದ್ದಾರೆ. ಅದುವೇ ರಘು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಘು ಟಾಸ್ಕ್ ಹಾಗೂ ತಮ್ಮ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು. ಇದೀಗ ಅವರು ಹೊರಗೆ ಬಂದಿದ್ದಾರೆ.

  • 18 Jan 2026 08:04 PM (IST)

    ಬಿಗ್​​ಬಾಸ್ ವೇದಿಕೆಗೆ ಬಂದ ಅತಿಥಿ

    ಬಿಗ್​​ಬಾಸ್ ವೇದಿಕೆ ವಿಶೇಷ ಅತಿಥಿ ಬಂದಿದ್ದಾರೆ. ನಟಿ ಶ್ರುತಿ ಅವರು ಬಿಗ್​​ಬಾಸ್ ವೇದಿಕೆ ಬಂದಿದ್ದು, ಐದನೇ ಸ್ಪರ್ಧಿಯ ಎವಿಕ್ಷನ್ ಅನ್ನು ಶ್ರುತಿ ಅವರು ನಡೆಸಿಕೊಡಲಿದ್ದಾರೆ.

  • 18 Jan 2026 07:52 PM (IST)

    ಯಾರಿಗೆ ಸಿಕ್ತು ಅಳುಬುರುಕಿ ಅವಾರ್ಡ್

    ಬಿಗ್​​ಬಾಸ್ ಕನ್ನಡ ಮನೆಯಲ್ಲಿ ಯಾರು ಹೆಚ್ಚು ಅತ್ತಿದ್ದಾರೆ ಯಾರು ಚೆನ್ನಾಗಿ ಅತ್ತಿದ್ದಾರೆ ಎಂಬುದನ್ನು ಗುರುತಿಸಿ, ಕಣ್ಣೀರ ಕಣ್ಮಣಿ ಪ್ರಶಸ್ತಿಯನ್ನು ರಾಶಿಕಾಗೆ ನೀಡಲಾಯ್ತು. ರಾಶಿಕಾಗೂ ಒಂದು ಲಕ್ಷ ನಗದು ಕೊಡಲಾಯ್ತು.

  • 18 Jan 2026 07:44 PM (IST)

    ಮೈ ಕೈ ಜಾಕ್ಸನ್ ಪ್ರಶಸ್ತಿ

    ಮಿಡ್ ವೀಕ್ ಎವಿಕ್ಷನ್ ಆದ ಧ್ರುವಂತ್ ಅವರಿಗೆ ಮನೆಯಿಂದ ಹೊರಗೆ ಹೋದ ಬಳಿಕ ಪ್ರಶಸ್ತಿ ಲಭಿಸಿದೆ. ಅದುವೇ ಮೈ-ಕೈ ಜಾಕ್ಸನ್. ಧ್ರುವಂತ್ ಅವರ ಡ್ಯಾನ್ಸ್ ನೋಡಿ ಮೈ-ಕೈ ಜಾಕ್ಸನ್ ಪ್ರಶಸ್ತಿ ನೀಡಲಾಗಿದೆ. ಒಂದು ಲಕ್ಷ ಬಹುಮಾನ ಸಹ ಪಡೆದಿದ್ದಾರೆ.

  • 18 Jan 2026 07:29 PM (IST)

    ಕೈ ಎತ್ತಿಲ್ಲ, ಆದರೆ ಕೈ ಹಿಡಿದಿದ್ದೀನಿ

    ಧನುಶ್ ಅವರ ಪತ್ನಿಯೊಟ್ಟಿಗೆ ಮಾತನಾಡಿದ ಸುದೀಪ್ ಅವರು, ‘ಧನುಶ್ ಅದ್ಭುತ ಆಟಗಾರ, ಅವರ ನಗು ಮಾಸಿಲ್ಲ, ಎಲ್ಲರನ್ನೂ ಗೆದ್ದಿದ್ದಾರೆ, ನನಗೆ ಅವರ ಕೈ ಎತ್ತುವ ಅವಕಾಶ ಸಿಗಲಿಲ್ಲ ಆದರೆ ಅವರ ಕೈ ಹಿಡಿದಿದ್ದೀವಿ’ ಎಂದು ಮಾರ್ಮಿಕವಾಗಿ ಹೇಳಿದರು.

  • 18 Jan 2026 07:21 PM (IST)

    ‘ವ್ಯಕ್ತಿಯಾಗಿ ಗೆದ್ದಿದ್ದೀರಿ’

    ಧನುಶ್ ಅವರು ಆರನೇ ಸ್ಪರ್ಧಿಯಾಗಿ ಹೊರಗೆ ಬಂದಿದ್ದಾರೆ. ಆದರೆ ಸುದೀಪ್ ಅವರು ಧನುಶ್ ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಸುದೀಪ್ ಅವರು ಖುದ್ದು ಧನುಶ್ ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ನನ್ನ ಮನಸ್ಸು ಗೆದ್ದಿದ್ದಾರೆ ಎಂದಿದ್ದಾರೆ.

  • 18 Jan 2026 07:20 PM (IST)

    ಬಿಕ್ಕಿ ಬಿಕ್ಕಿ ಅತ್ತ ಧನುಶ್ ತಾಯಿ

    ಮಗ ಹೊರಗಡೆ ಬಂದಿದ್ದು ನೋಡಿ ಧನುಶ್ ತಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕೊನೆಗೆ ಧನುಶ್ ಅವರೇ ಹೋಗಿ ಅವರಿಗೆ ಸಮಾಧಾನ ಮಾಡಿದ್ದಾರೆ.

  • 18 Jan 2026 07:11 PM (IST)

    ಆರನೇ ಸ್ಪರ್ಧಿ ಹೊರಕ್ಕೆ, ಯಾರದು?

    ಧನುಶ್ ಅವರು ಆರನೇ ಸ್ಪರ್ಧಿಯಾಗಿ ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಅವರಿಗೆ 1.37 ಕೋಟಿ ಮತಗಳು ಬಂದಿವೆ. ಧನುಶ್ ಒಳ್ಳೆಯ ಸ್ಪರ್ಧಿ ಆಗಿದ್ದರು. ಆದರೆ ಇದೀಗ ಐದನೇ ರನ್ನರ್ ಅಪ್ ಆಗಿದ್ದಾರೆ

  • 18 Jan 2026 06:45 PM (IST)

    ಬಿಗ್​​ಬಾಸ್ ಮನೆಯತ್ತ ಅಭಿಮಾನಿಗಳ ದಂಡು

    ಬಿಗ್​​ಬಾಸ್ ಫಿನಾಲೆ ನಡೆಯುತ್ತಿರುವ ಬಿಡದಿಯ ಜಾಲಿವುಡ್​ನ ಅಭಿಮಾನಿಗಳ ದಂಡು ಧಾವಿಸುತ್ತಿದೆ. ಬಿಡದಿಗೆ ಹೋಗುವ ರಸ್ತೆಗಳೆಲ್ಲ ಟ್ರಾಫಿಕ್ ಹೆಚ್ಚಾಗುತ್ತಿದೆ.

  • 18 Jan 2026 06:37 PM (IST)

    ಬಿಗ್​​ಬಾಸ್ ಮನೆಯಲ್ಲಿ ಸ್ಪರ್ಧಿಗಳ ಡ್ಯಾನ್ಸ್

    ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಕಾರ್ಯಕ್ರಮ ಶುರುವಾಗಿದೆ. ಮನೆಯಲ್ಲಿರುವ ಸ್ಪರ್ಧಿಗಳು, ಮನೆಯ ಒಳಗಿನಿಂದಲೇ ಡ್ಯಾನ್ಸ್ ಮಾಡಿ ಪ್ರೇಕ್ಷಕರ ಮನರಂಜಿಸಿದ್ದಾರೆ.

    Boss

    Boss

  • 18 Jan 2026 06:03 PM (IST)

    ಪ್ರಸಾರ ಆರಂಭ

    ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್​​ಸ್ಟಾರ್​​ನಲ್ಲಿ ಪ್ರಸಾರ ಆರಂಭ ಆಗಿದೆ. ಸಂಜೆ 6 ಗಂಟೆಗೆ ಪ್ರಸಾರ ಶುರುವಾಗಿದೆ.

  • 18 Jan 2026 05:36 PM (IST)

    ಜಾನ್ವಿ ಪೋಸ್ಟ್​​ಗೆ ಆಕ್ರೋಶ

    ಇದೇ ಬಿಗ್​​ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಆಗಿದ್ದ ಜಾನ್ವಿ, ಗಿಲ್ಲಿಯ ಅಭಿಮಾನಿಗಳನ್ನು, ಗಿಲ್ಲಿಗೆ ಮತ ಹಾಕುವವರನ್ನು ಆಡಿಕೊಳ್ಳುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಗಿಲ್ಲಿ ಅಭಿಮಾನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

  • 18 Jan 2026 05:34 PM (IST)

    ಗಿಲ್ಲಿನೇ ಗೆಲ್ಲೋದು: ಹನುಮಂತು

    ಬಿಗ್​​ಬಾಸ್ ಕನ್ನಡ 11ನೇ ಸೀಸನ್​ನ ವಿಜೇತ ಹನುಮಂತು ಟಿವಿ9 ಜೊತೆಗೆ ಮಾತನಾಡಿದ್ದು, ಈ ಬಾರಿಯ ವಿಜೇತ ಗಿಲ್ಲಿಯೇ ಎಂದಿದ್ದಾರೆ. ಸುದೀಪ್ ಹೇಳಿದ 37 ಕೋಟಿ ವೋಟು ಬಂದಿರುವುದು ಗಿಲ್ಲಿಗೇನೆ ಎಂದಿದ್ದಾರೆ.

  • 18 Jan 2026 04:52 PM (IST)

    ಪ್ರೋಮೊ ನೋಡಿ

    ಆರನೇ ಸ್ಪರ್ಧಿಯಾಗಿ ಹೊರ ಹೋಗಿದ್ದು ಯಾರು?

  • 18 Jan 2026 02:56 PM (IST)

    ಗೆಲ್ಲುವವರು ಯಾರು?

    ಫಿನಾಲೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದಾರೆ. ಗಿಲ್ಲಿ ನಟ, ಧನುಶ್, ಅಶ್ವಿನಿ ಗೌಡ, ರಘು, ಕಾವ್ಯಾ ಮತ್ತು ರಕ್ಷಿತಾ ಶೆಟ್ಟಿ. ಈ ಆರು ಮಂದಿಯಲ್ಲಿ ಒಬ್ಬರು ಈ ಬಾರಿ ವಿನ್ನರ್ ಎನಿಸಿಕೊಳ್ಳಲಿದ್ದಾರೆ.

  • 18 Jan 2026 02:54 PM (IST)

    ಶೂಟಿಂಗ್ ಶುರು

    ಬಿಗ್​​ಬಾಸ್ ಕನ್ನಡ ಸೀಸನ್ 12ರ ಫಿನಾಲೆಯ ಚಿತ್ರೀಕರಣ ಈಗಾಗಲೇ ಬಿಡದಿಯ ಜಾಲಿವುಡ್​ ಸ್ಟುಡಿಯೋಸ್​​ನಲ್ಲಿ ಪ್ರಾರಂಭ ಆಗಿದೆ. ಇದೇ ಕಾರಣಕ್ಕೆ ಜಾಲಿವುಡ್ ಸ್ಟುಡಿಯೋ ಬಳಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.

  • 18 Jan 2026 02:53 PM (IST)

    ಜಾಲಿವುಡ್ ಸ್ಟುಡಿಯೋ

    ಜಾಲಿವುಡ್ ಸ್ಟುಡಿಯೋದ ಗೇಟ್​ನ ಎದುರು ಸ್ಪರ್ಧಿಗಳ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳ ಫ್ಲೆಕ್ಸ್​ ಬ್ಯಾನರ್​​ಗಳನ್ನು ಹಾಕಿದ್ದಾರೆ. ಒಟ್ಟಾರೆ ಫಿನಾಲೆಗೆ ಭಾರಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Published On - Jan 18,2026 2:52 PM

Follow Us
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ
ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!