AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವೇನು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾ: ಕೆರಳಿದ ಸುದೀಪ್, ಕಾರಣವೇನು?

Bigg Boss Kannada 12: ಬಿಗ್​​ಬಾಸ್ ಮನೆಯಲ್ಲಿ ಸಣ್ಣವರು-ದೊಡ್ಡವರೆನ್ನುವ ಭೇದವಿಲ್ಲದೆ ಪರಸ್ಪರ ಏಕವಚನದಲ್ಲಿ ಪರಸ್ಪರ ಬೈದಾಡಿಕೊಳ್ಳುತ್ತಾರೆ. ವೀಕೆಂಡ್ ಬಂದಾಗ ಸುದೀಪ್ ಎದುರು ಇದೇ ವಿಷಯವನ್ನು ಇರಿಸಿಕೊಂಡು ದೂರು ಸಹ ಹೇಳಲಾಗುತ್ತದೆ. ಪ್ರತಿಬಾರಿ ಇದನ್ನು ಕೇಳಿ ಸುಸ್ತಾಗಿದ್ದ ಸುದೀಪ್, ಇಂದು ಇದೇ ವಿಷಯವನ್ನು ಚರ್ಚೆಗೆ ಎತ್ತಿಕೊಂಡರು. ಮಾತ್ರವಲ್ಲದೆ ವಿಕ್ಟಿಮ್ ಕಾರ್ಡ್ ತೋರಿಸುತ್ತಿದ್ದ ಅಶ್ವಿನಿ ಹಾಗೂ ಇನ್ನೂ ಕೆಲವರನ್ನು ತರಾಟೆಗೆ ತೆಗೆದುಕೊಂಡರು.

ನೀವೇನು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾ: ಕೆರಳಿದ ಸುದೀಪ್, ಕಾರಣವೇನು?
ಸುದೀಪ್
ಮಂಜುನಾಥ ಸಿ.
|

Updated on: Nov 22, 2025 | 10:57 PM

Share

ಬಿಗ್​​ಬಾಸ್ (Bigg Boss) ಮನೆಯಲ್ಲಿ ಜಗಳ ಸಾಮಾನ್ಯ. ಅದರಲ್ಲೂ ಈ ಬಾರಿಯಂತೂ ಹಾಸ್ಯ, ಗೆಳೆತನ, ಭಾವನೆಗಳು ಸೈಡಿಗೆ ಹೋಗಿ ಜಗಳವೇ ಪ್ರಧಾನವಾಗಿಬಿಟ್ಟಿದೆ. ಅದರಲ್ಲೂ ಮನೆಯಲ್ಲಿ ಸಣ್ಣವರು-ದೊಡ್ಡವರೆನ್ನುವ ಭೇದವಿಲ್ಲದೆ ಪರಸ್ಪರ ಏಕವಚನದಲ್ಲಿ ಪರಸ್ಪರ ಬೈದಾಡಿಕೊಳ್ಳುತ್ತಾರೆ. ವೀಕೆಂಡ್ ಬಂದಾಗ ಸುದೀಪ್ ಎದುರು ಇದೇ ವಿಷಯವನ್ನು ಇರಿಸಿಕೊಂಡು ದೂರು ಸಹ ಹೇಳಲಾಗುತ್ತದೆ. ಪ್ರತಿಬಾರಿ ಇದನ್ನು ಕೇಳಿ ಸುಸ್ತಾಗಿದ್ದ ಸುದೀಪ್, ಇಂದು ಇದೇ ವಿಷಯವನ್ನು ಚರ್ಚೆಗೆ ಎತ್ತಿಕೊಂಡರು. ಮಾತ್ರವಲ್ಲದೆ ವಿಕ್ಟಿಮ್ ಕಾರ್ಡ್ ತೋರಿಸುತ್ತಿದ್ದ ಅಶ್ವಿನಿ ಹಾಗೂ ಇನ್ನೂ ಕೆಲವರನ್ನು ತರಾಟೆಗೆ ತೆಗೆದುಕೊಂಡರು.

ಈ ಮನೆಯಲ್ಲಿ ಯಾರು ಯಾರ ಬಗ್ಗೆ ಏಕವಚನದಲ್ಲಿ ಮಾತನಾಡಿಲ್ಲ ನನಗೆ ಹೇಳಿ ಎಂದು ಪ್ರಶ್ನೆ ಮಾಡಿದರು ಸುದೀಪ್. ಮನೆಯ ಪ್ರತಿಯೊಬ್ಬರೂ ಸಹ ಇನ್ನೊಬ್ಬರ ಬಗ್ಗೆ ಗೌರವ ಇಲ್ಲದೆ ಮಾತನಾಡಿದ್ದೀರಿ, ಮರ್ಯಾದೆ ಯಾವಾಗಲೂ ದ್ವಿಮುಖವಾಗಿರಬೇಕು, ಅದು ಏಕಮುಖ ಅಲ್ಲ. ನೀವು ಏ ಎಂದು ಮಾತನಾಡಿದರೆ ಎದುರು ಇರುವವರೂ ಸಹ ಹಾಗೆಯೇ ಪ್ರತಿಕ್ರಿಯೆ ನೀಡುತ್ತಾರೆ ಎಂದರು ಸುದೀಪ್.

ನಿಮಗೆ ಆಗುವ ಅವಮಾನ ಮಾತ್ರ ಅವಮಾನವಾ? ಬೇರೆಯವರಿಗೆ ಆಗುವ ಅವಮಾನ ಅವಮಾನ ಅಲ್ಲವಾ? ಬೇರೆಯವರ ಸಾಧನೆಗಳು ಲೆಕ್ಕಕ್ಕೆ ಇಲ್ಲವಾ? ಎಂದು ಪ್ರಶ್ನೆ ಮಾಡಿದರು. ವಿಶೇಷವಾಗಿ ಅಶ್ವಿನಿ ಕುರಿತಾಗಿ ಮಾತನಾಡಿದ ಸುದೀಪ್, ‘ನೀವು ಯಾರಾದರೂ ಮಾತನಾಡಿದ ಕೂಡಲೇ ಬೆರಳು ತೋರಿಸಿ, ಏರಿದ ದನಿಯಲ್ಲಿ ಮಾತನಾಡುತ್ತೀರಿ, ಅದರಿಂದ ಸಹಜವಾಗಿಯೇ ಎದುರು ಇರುವವರು ಟ್ರಿಗರ್ ಆಗುತ್ತಾರೆ. ನೀವು ಏ ಎಂದಾಗ ಸಹಜವಾಗಿಯೇ ಎದುರು ಇರುವವರು ಏ ಎನ್ನುತ್ತಾರೆ. ಹೌದು ನೀವು ದೊಡ್ಡವರು, ಹಾಗೆಯೇ ರಘು ಸಹ ನಿಮಗಿಂತಲೂ ವಯಸ್ಸಿನಲ್ಲಿ ದೊಡ್ಡವರು, ಅವರಿಗೂ ನೀವು ಅದೇ ಭಾಷೆಯಲ್ಲಿ ಮಾತನಾಡಿದ್ದೀರಿ’ ಎಂದರು ಸುದೀಪ್.

ಇದನ್ನೂ ಓದಿ:ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಹಾಕಿದ ಸುದೀಪ್; ಕೇಳೋಕೆ ಸಾಧ್ಯವಿಲ್ಲ

ಇಡೀ ಮನೆಯಲ್ಲಿ ಯಾರೂ ಸಹ ಇನ್ನೊಬ್ಬರಿಗೆ ಗೌರವದಿಂದ ಸಂಭೋದಿಸುತ್ತಿಲ್ಲ ಎಂದ ಸುದೀಪ್, ‘ಏ, ಹೋಗು ಬಾ’ ಎಂದು ಮಾತನಾಡಲು ನೀವೇನು ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳಾ’ ಎಂದು ಗರಂ ಆದರು. ಬಳಿಕ ಆಡಿಯೋ ಒಂದನ್ನು ಸಹ ಪ್ಲೇ ಮಾಡಿದರು ಸುದೀಪ್, ಆಡಿಯೋನಲ್ಲಿ ಅಶ್ವಿನಿ, ಜಾನ್ಹವಿ, ರಿಶಾ ಇನ್ನೂ ಕೆಲವರು ಪರಸ್ಪರ ಏಕವಚನದಲ್ಲಿ ಬೈದಾಡಿರುವ ದ್ವನಿ ಇತ್ತು. ಅದರಲ್ಲೂ ಆ ಆಡಿಯೋನಲ್ಲಿ ಅಶ್ವಿನಿ ಅವರ ದ್ವನಿಯೇ ಹೆಚ್ಚಿತ್ತು.

ಅಂತಿಮವಾಗಿ, ಬಿಗ್​​ಬಾಸ್ ಮನೆಯಲ್ಲಿ ಮರ್ಯಾದೆ ಕೊಟ್ಟರಷ್ಟೆ ಮರ್ಯಾದೆ ಸಿಗುವುದು, ಗೌರವ ಕೊಟ್ಟರಷ್ಟೆ ಗೌರವ ಸಿಗುವುದು. ಇಲ್ಲಿ ಪ್ರೀತಿ ಕೊಟ್ಟರೆ ಪ್ರೀತಿ ಸಿಗುತ್ತದೆ, ಸ್ನೇಹ ಕೊಟ್ಟರೆ ಸ್ನೇಹ ಸಿಗುತ್ತದೆ. ದ್ವೇಷ ಕೊಟ್ಟರೆ ದ್ವೇಷ ಸಿಗುತ್ತದೆ. ನೀವು ಬಿತ್ತಿದ್ದನ್ನೆ ಇಲ್ಲಿ ಬೆಳೆಯುತ್ತೀರಿ ಎಂದ ಸುದೀಪ್, ಸ್ವತಃ ಮನೆಯವರಿಗೆ ಅಧಿಕಾರ ಒಂದನ್ನು ನೀಡಿದರು. ಯಾರು ನಿಮಗೆ ಗೌರವ ಕೊಡುವುದಿಲ್ಲವೊ ಅವರಿಗೆ ನೀವು ಗೌರವ ಕೊಡಬೇಡಿ, ದೊಡ್ಡವರಾದರೂ ಇರಲಿ, ಚಿಕ್ಕವರಾದರೂ ಇರಲಿ’ ಎಂದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ