AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿವಿಕ್ರಮ್ ಅನ್ನು ಬಳಸಿಕೊಂಡರೇ ಭವ್ಯಾ: ಸುದೀಪ್ ಎದುರು ಬಿಸಿ-ಬಿಸಿ ಚರ್ಚೆ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ನಲ್ಲಿ ಭವ್ಯಾ ಮತ್ತು ತ್ರಿವಿಕ್ರಮ್ ಆರಂಭದಿಂದಲೂ ಆತ್ಮೀಯರಾಗಿದ್ದರು. ಆದರೆ ಫಿನಾಲೆ ವಾರ ಹತ್ತಿರ ಬರುತ್ತಿದ್ದಂತೆ ಇಬ್ಬರ ನಡುವೆ ಬಿರುಕು ಮೂಡಿದೆ. ‘ನೀನು ನನ್ನನ್ನು ಬಳಸಿಕೊಂಡು ಇಲ್ಲಿಯವರೆಗೆ ಬಂದಿದ್ದೀಯ’ ಎಂದು ಭವ್ಯಾಗೆ ತ್ರಿವಿಕ್ರಮ್ ಹೇಳಿದ್ದರು. ಈ ವಿಷಯವನ್ನು ವಾರದ ಪಂಚಾಯಿತಿಯಲ್ಲಿ ಸುದೀಪ್ ಚರ್ಚೆ ಮಾಡಿದರು.

ತ್ರಿವಿಕ್ರಮ್ ಅನ್ನು ಬಳಸಿಕೊಂಡರೇ ಭವ್ಯಾ: ಸುದೀಪ್ ಎದುರು ಬಿಸಿ-ಬಿಸಿ ಚರ್ಚೆ
Trivikram Bhavya
ಮಂಜುನಾಥ ಸಿ.
|

Updated on: Jan 18, 2025 | 10:46 PM

Share

ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತು, ಮೋಕ್ಷಿತಾ ಮತ್ತು ತ್ರಿವಿಕ್ರಮ್ ಇದೀಗ ಫಿನಾಲೆ ತಲುಪಿದ್ದಾರೆ. ಆದರೆ ಸೀಸನ್ ಆರಂಭದಿಂದಲೂ ಆತ್ಮೀಯರಾಗಿದ್ದ ಭವ್ಯಾ ಮತ್ತು ತ್ರಿವಿಕ್ರಮ್ ನಡುವೆ ಬಿರುಕು ಮೂಡಿದೆ. ತ್ರಿವಿಕ್ರಮ್ ಅಂತೂ ಭವ್ಯಾಗೆ, ‘ನೀನು ನನ್ನ ಬಳಸಿಕೊಂಡು ಇಲ್ಲಿವರೆಗೂ ಬಂದಿದ್ದೀಯ’ ಎಂದಿದ್ದಾರೆ. ಇದು ಭವ್ಯಾಗೆ ತೀವ್ರ ನೋವು ತಂದಿದೆ. ಶನಿವಾರ ನಡೆದ ಈ ಸೀಸನ್​ನ ಕೊನೆಯ ವಾರದ ಪಂಚಾಯಿತಿಯಲ್ಲಿ ಸುದೀಪ್ ಅವರು ಇದೇ ವಿಷಯವನ್ನು ಎಲ್ಲರೆದುರು ಚರ್ಚೆಗಿಟ್ಟರು.

ಈ ವೇಳೆ ಮಾತನಾಡಿದ ಭವ್ಯಾ, ‘ಖಂಡಿತ ನಾನು ಬಳಸಿಕೊಂಡಿಲ್ಲ. ನನ್ನ ಆಟ ನಾನು ಆಡಿಕೊಂಡು ಇಲ್ಲಿ ವರೆಗೆ ಬಂದಿದ್ದೀನಿ’ ಎಂದರು. ಆದರೆ ತ್ರಿವಿಕ್ರಮ್, ಹಿಂದೆ ನಡೆದ ಟಾಸ್ಕ್​ನ ಉದಾಹರಣೆ ಕೊಟ್ಟು, ‘ಪ್ರತಿ ಕ್ಯಾಪ್ಟನ್ ಆಯ್ಕೆ ಬಂದಾಗ ಬಾರಿ ನನ್ನ ಹೆಸರು ತಗೊಂಡಿದ್ದಾರೆ. ನನ್ನ ಜೊತೆ ಗೇಮ್ ಪ್ಲ್ಯಾನ್ ಮಾಡಿದ್ದಾರೆ. ನನ್ನ ಜೊತೆಗೆ ಇದ್ದರು, ಭಾವನಾತ್ಮಕ ಬೆಂಬಲ ಕೊಟ್ಟಿದ್ದಾರೆ, ತೆಗೆದುಕೊಂಡಿದ್ದಾರೆ. ಇಷ್ಟು ದಿನ ಮಾಡಿ ಕೊನೆಯ ಆಟಕ್ಕೆ ಬಂದಾಗ ನನಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ನನ್ನನ್ನು ಆಯ್ಕೆ ಮಾಡಲಿಲ್ಲ. ಟಾಸ್ಕ್​ನಲ್ಲಿ ಮೋಕ್ಷಿತಾ ಜೊತೆ ಮಾತನಾಡಿದ ವಿಷಯ ನನಗೆ ಹೇಳಬಹುದಿತ್ತು, ಎಂಡ್​ಗೇಮ್ ಬಂದಾಗ ಹೀಗೆ ಆಡುವುದು ಸರಿಯಲ್ಲ. ಹಾಗಾಗಿ ನೀವು ನನ್ನನ್ನು ಬಳಸಿಕೊಂಡಿರಿ ಎಂದು ಹೇಳಿದೆ’ ಎಂದರು ತ್ರಿವಿಕ್ರಮ್.

ಇದನ್ನೂ ಓದಿ:ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?

ಆದರೆ ಇದನ್ನು ಒಪ್ಪದ ಭವ್ಯಾ ಗೌಡ, ‘ಆ ಟಾಸ್ಕ್​ನ ಒಂದು ರೌಂಡ್ ಆದ ಬಳಿಕವೇ ನಮಗೆ ಹೀಗೊಂದು ಸ್ಟ್ರಾಟಜಿ ಮಾಡಬಹುದು ಎಂದು ಗೊತ್ತಾಗಿದ್ದು, ಹಾಗಾಗಿ ನಾನು ಆ ಸ್ಟ್ರಾಟಜಿ ಮಾಡಿದೆ. ಅಲ್ಲದೆ ಅದೇ ಟಾಸ್ಕ್​ನಲ್ಲಿ ಮೂರನೇ ರೌಂಡ್​ನಲ್ಲಿ ತ್ರಿವಿಕ್ರಮ್ ಅವರನ್ನು ಆಯ್ಕೆ ಮಾಡಿದೆ ಸಹ’ ಎಂದರು ಭವ್ಯಾ. ಈ ಚರ್ಚೆಯ ವೇಳೆ ಭವ್ಯಾ ಗೌಡ ಕಣ್ಣೀರು ಸಹ ಹಾಕಿದರು. ಆದರೆ ಕಣ್ಣೀರಿಗೆ ಕರಗದ ತ್ರಿವಿಕ್ರಮ್, ‘ಮೋಕ್ಷಿತಾ ಜೊತೆಗೆ ಮಾಡಿದ ಸ್ಟ್ರಾಟಜಿಯನ್ನು ನನ್ನ ಜೊತೆಗೆ ಮಾಡಬಹುದಿತ್ತು. ಅದೇ ಸ್ಟ್ರಾಟಜಿಯನ್ನು ನನ್ನೊಂದಿಗೆ ಮಾಡಿದ್ದಿದ್ದರೆ ಇಬ್ಬರೂ ಸಹ ಒಟ್ಟಿಗೆ ಗೆಲ್ಲುವ ಸಾಧ್ಯತೆ ಇತ್ತು. ಒಂದೊಮ್ಮೆ ನೀನು ಆಡಿದರೆ ನಾನು ಸೋಲುತ್ತೀನಿ ಎಂದು ಅನಿಸಿದ್ದರೆ ಅದನ್ನು ನೇರವಾಗಿ ಹೇಳಬಹುದಿತ್ತು’ ಎಂದು ತ್ರಿವಿಕ್ರಮ್ ಹೇಳಿದರು.

ಇಬ್ಬರ ಚರ್ಚೆ ಆಲಿಸಿದ ಸುದೀಪ್, ‘ನಾನು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದೀನಿ, ಯಾವುದೇ ಕಾರಣಕ್ಕೂ ಅನವಶ್ಯಕ ಬಂಧಗಳನ್ನು ಬೆಳೆಸಿಕೊಳ್ಳಬೇಡಿ. ಆ ಅನವಶ್ಯಕ ಸಂಬಂಧ ನಿಮ್ಮ ಆಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಲೇ ಬಂದಿದ್ದೇನಿ. ನೀವು ಬಂಧ ಬೆಳೆಸಿಕೊಂಡಾಗ ಸಹಜವಾಗಿಯೇ ನಿರೀಕ್ಷೆಗಳು ಹುಟ್ಟುತ್ತವೆ, ಆ ನಿರೀಕ್ಷೆಗಳು ಫುಲ್​ಫಿಲ್ ಆಗದಾಗ ಸಹಜವಾಗಿಯೇ ಬಿರುಕು ಮೂಡುತ್ತದೆ ಅದು ನಿಮ್ಮ ಆಟದ ಮೇಲೆ ಪರಿಣಾಮ ಬೀರುತ್ತದೆ’ ಎಂದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ವಿಷ್ಣು ಸ್ಮಾರಕ: ಸಿಎಂ ಭೇಟಿ ಬಳಿಕ ಹಿರಿಯ ನಟಿ ಭಾರತಿ ಹೇಳಿದ್ದು ಹೀಗೆ
ವಿಷ್ಣು ಸ್ಮಾರಕ: ಸಿಎಂ ಭೇಟಿ ಬಳಿಕ ಹಿರಿಯ ನಟಿ ಭಾರತಿ ಹೇಳಿದ್ದು ಹೀಗೆ
ಧರ್ಮಸ್ಥಳ ಪ್ರಕರಣ: ಎನ್​ಐಎಗೆ ವಹಿಸುವ ಬಗ್ಗೆ ಶಾ ಭೇಟಿ ಮಾಡಲಿರುವ ಹೆಚ್​ಡಿಕೆ
ಧರ್ಮಸ್ಥಳ ಪ್ರಕರಣ: ಎನ್​ಐಎಗೆ ವಹಿಸುವ ಬಗ್ಗೆ ಶಾ ಭೇಟಿ ಮಾಡಲಿರುವ ಹೆಚ್​ಡಿಕೆ