AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿವಿಕ್ರಮ್ ಹೇಳಿದ ಹುಲಿ-ಜಿಂಕೆ ಕತೆ, ಯಾರು ಹುಲಿ? ಯಾರು ಜಿಂಕೆ?

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ರ ಕೊನೆಯ ವಾರದ ಪಂಚಾಯಿತಿಯನ್ನು ಶನಿವಾರ ಸುದೀಪ್ ನಡೆಸಿಕೊಟ್ಟರು. ಈ ವೇಳೆ ಚರ್ಚೆಯೊಂದಕ್ಕೆ ಸಂಬಂಧಿಸಿದಂತೆ ಸುದೀಪ್ ಎದುರು ತ್ರಿವಿಕ್ರಮ್ ಹುಲಿ ಹಾಗೂ ಜಿಂಕೆ ಕತೆಯೊಂದನ್ನು ಹೇಳಿದರು. ಅಂದಹಾಗೆ ಬಿಗ್​ಬಾಸ್ ಮನೆಯಲ್ಲಿ ಯಾರು ಜಿಂಕೆ? ಯಾರು ಹುಲಿ?

ತ್ರಿವಿಕ್ರಮ್ ಹೇಳಿದ ಹುಲಿ-ಜಿಂಕೆ ಕತೆ, ಯಾರು ಹುಲಿ? ಯಾರು ಜಿಂಕೆ?
Bigg Boss Kannada 11
ಮಂಜುನಾಥ ಸಿ.
|

Updated on: Jan 19, 2025 | 8:31 AM

Share

ಬಿಗ್​ಬಾಸ್ ಕನ್ನಡ ಸೀಸನ್ 11 ರ ಕೊನೆಯ ವಾರದ ಪಂಚಾಯಿತಿ ಶನಿವಾರ (ಜನವರಿ 18) ಪ್ರಾರಂಭ ಆಗಿದೆ. ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಒಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಿದ್ದಾರೆ. ಶನಿವಾರದ ಎಪಿಸೋಡ್​ನಲ್ಲಿ ಗೌತಮಿ, ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಇನ್ನೂ ಒಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಹೋಗುವುದು ಬಾಕಿ ಇದೆ. ಶನಿವಾರದ ವಾರದ ಪಂಚಾಯಿತಿಯಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದವು. ಈ ವೇಳೆ ತ್ರಿವಿಕ್ರಮ್, ಸುದೀಪ್ ಎದುರು ಹುಲಿ ಮತ್ತು ಜಿಂಕೆಯ ಕತೆ ಹೇಳಿದರು. ಅಂದಹಾಗೆ ಯಾರು ಜಿಂಕೆ? ಯಾರು ಹುಲಿ?

ಸುದೀಪ್ ಎದುರು ಹುಲಿ-ಜಿಂಕೆ ಕತೆ ಹೇಳಿದ ತ್ರಿವಿಕ್ರಮ್. ಒಂದು ಕಾಡಿನಲ್ಲಿ ಒಂದು ಹುಲಿ ಇತ್ತು, ಆ ಹುಲಿ ಭೇಟಿ ಆಡಿಕೊಂಡು, ಮಾಂಸ ತಿಂದುಕೊಂಡು ಆರಾಮವಾಗಿ ಇತ್ತು. ಹೀಗೆ ಕಾಡಿನಲ್ಲಿ ಬರುವಾಗ ದೇವಸ್ಥಾನದ ಎದುರು ಒಂದು ಜಿಂಕೆಯನ್ನು ನೋಡಿತು. ಆ ಜಿಂಕೆಯೂ ಹೆದರಿತ್ತು. ಆದರೆ ಜಿಂಕೆ, ಹುಲಿ ಜೊತೆ ಗೆಳೆತನ ಮಾಡಿಕೊಂಡಿತು. ಅಬ್ಬರಿಸುತ್ತಿದ್ದ ಆ ಹುಲಿಯನ್ನು ಈ ಜಿಂಕೆ ಮೆತ್ತಗೆ ಮಾಡಿಬಿಟ್ಟಿತು. ಆ ಹುಲಿಗೆ ನಾನ್ ವೇಜ್ ತಿನ್ನಬೇಡ ಅಂತು. ಬೇಟೆ ಆಡಬೇಡ ಅಂತು, ಹುಲಿ ಸಹ ಮಾಂಸ ತಿನ್ನುವುದು ಬಿಟ್ಟಿತು, ಬೇಟೆ ಆಡುವುದನ್ನು ಬಿಟ್ಟಿತು. ಈಗ ಹುಲಿ ಹಸಿದುಕೊಂಡಿದೆ ಆದರೆ ಬೇಟೆ ಆಡುವುದನ್ನೇ ಮರೆತುಬಿಟ್ಟಿದೆ’ ಎಂದರು ತ್ರಿವಿಕ್ರಮ್.

ಇದನ್ನೂ ಓದಿ:ತ್ರಿವಿಕ್ರಮ್ ಅನ್ನು ಬಳಸಿಕೊಂಡರೇ ಭವ್ಯಾ: ಸುದೀಪ್ ಎದುರು ಬಿಸಿ-ಬಿಸಿ ಚರ್ಚೆ

ಅಸಲಿಗೆ ಈ ಕತೆಯನ್ನು ತ್ರಿವಿಕ್ರಮ್ ಹೇಳಿದ್ದು ಉಗ್ರಂ ಮಂಜು ಮತ್ತು ಗೌತಮಿ ಅವರನ್ನು ಉದ್ದೇಶಿಸಿ. ಕತೆಯಲ್ಲಿ ಬೇಟೆ ಆಡುವುದನ್ನು ಮರೆತಿರುವ ಹುಲಿ ಉಗ್ರಂ ಮಂಜು. ಜಿಂಕೆ ಗೌತಮಿ. ಆದರೆ ಆ ನಂತರ ಮಾತನಾಡಿದ ಸುದೀಪ್, ಉಗ್ರಂ ಮಂಜು ಅವರು ಗೌತಮಿ ಜೊತೆಗೆ ಇದ್ದರು ಕೊನೆಯ ವಾರದಲ್ಲಿ ಅವರನ್ನೇ ನಾಮಿನೇಟ್ ಮಾಡಿದರು. ಗೌತಮಿ-ಗೌತಮಿ ಎನ್ನುತ್ತಲೇ ಕೊನೆಯ ಮೆಟ್ಟಿಲಿನಿಂದ ಕೆಳಗೆ ತಳ್ಳಿದರು. ಹಾಗಿದ್ದರೆ ಇಲ್ಲಿ ಜಿಂಕೆ ಮಂಜು, ಹುಲಿ ಗೌತಮಿ ಅನ್ನಿಸುತ್ತಿಲ್ಲವೆ? ಎಂದು ಪ್ರಶ್ನೆ ಮಾಡಿದರು.

ಆದರೆ ಈಗ ಗೌತಮಿಯ ಆಟ ಮುಗಿದಿದೆ. ಬಿಗ್​ಬಾಸ್ ಮನೆಯಿಂದ ಗೌತಮಿ ಹೊರ ಹೋಗಿದ್ದಾಗಿದೆ. ಉಗ್ರಂ ಮಂಜು ಇನ್ನೂ ಮನೆಯಲ್ಲಿ ಉಳಿದಿದ್ದಾರೆ. ಆದರೆ ಭಾನುವಾರದ ಎಪಿಸೋಡ್​ನಲ್ಲಿಯೂ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಅದು ಯಾರೆಂಬುದು ಪ್ರಶ್ನೆ. ರಜತ್, ಉಗ್ರಂ ಮಂಜು, ಧನರಾಜ್ ಮತ್ತು ಭವ್ಯಾ ಗೌಡ ಅವರ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಇಷ್ಟರಲ್ಲಿ ಯಾರಾದರೂ ಒಬ್ಬರು ಭಾನುವಾರದ ಎಪಿಸೋಡ್​ನಲ್ಲಿ ಮನೆಗೆ ಹೋಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ