AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿವಿಕ್ರಮ್ ಹೇಳಿದ ಹುಲಿ-ಜಿಂಕೆ ಕತೆ, ಯಾರು ಹುಲಿ? ಯಾರು ಜಿಂಕೆ?

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ರ ಕೊನೆಯ ವಾರದ ಪಂಚಾಯಿತಿಯನ್ನು ಶನಿವಾರ ಸುದೀಪ್ ನಡೆಸಿಕೊಟ್ಟರು. ಈ ವೇಳೆ ಚರ್ಚೆಯೊಂದಕ್ಕೆ ಸಂಬಂಧಿಸಿದಂತೆ ಸುದೀಪ್ ಎದುರು ತ್ರಿವಿಕ್ರಮ್ ಹುಲಿ ಹಾಗೂ ಜಿಂಕೆ ಕತೆಯೊಂದನ್ನು ಹೇಳಿದರು. ಅಂದಹಾಗೆ ಬಿಗ್​ಬಾಸ್ ಮನೆಯಲ್ಲಿ ಯಾರು ಜಿಂಕೆ? ಯಾರು ಹುಲಿ?

ತ್ರಿವಿಕ್ರಮ್ ಹೇಳಿದ ಹುಲಿ-ಜಿಂಕೆ ಕತೆ, ಯಾರು ಹುಲಿ? ಯಾರು ಜಿಂಕೆ?
Bigg Boss Kannada 11
ಮಂಜುನಾಥ ಸಿ.
|

Updated on: Jan 19, 2025 | 8:31 AM

Share

ಬಿಗ್​ಬಾಸ್ ಕನ್ನಡ ಸೀಸನ್ 11 ರ ಕೊನೆಯ ವಾರದ ಪಂಚಾಯಿತಿ ಶನಿವಾರ (ಜನವರಿ 18) ಪ್ರಾರಂಭ ಆಗಿದೆ. ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಒಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಿದ್ದಾರೆ. ಶನಿವಾರದ ಎಪಿಸೋಡ್​ನಲ್ಲಿ ಗೌತಮಿ, ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಇನ್ನೂ ಒಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಹೋಗುವುದು ಬಾಕಿ ಇದೆ. ಶನಿವಾರದ ವಾರದ ಪಂಚಾಯಿತಿಯಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದವು. ಈ ವೇಳೆ ತ್ರಿವಿಕ್ರಮ್, ಸುದೀಪ್ ಎದುರು ಹುಲಿ ಮತ್ತು ಜಿಂಕೆಯ ಕತೆ ಹೇಳಿದರು. ಅಂದಹಾಗೆ ಯಾರು ಜಿಂಕೆ? ಯಾರು ಹುಲಿ?

ಸುದೀಪ್ ಎದುರು ಹುಲಿ-ಜಿಂಕೆ ಕತೆ ಹೇಳಿದ ತ್ರಿವಿಕ್ರಮ್. ಒಂದು ಕಾಡಿನಲ್ಲಿ ಒಂದು ಹುಲಿ ಇತ್ತು, ಆ ಹುಲಿ ಭೇಟಿ ಆಡಿಕೊಂಡು, ಮಾಂಸ ತಿಂದುಕೊಂಡು ಆರಾಮವಾಗಿ ಇತ್ತು. ಹೀಗೆ ಕಾಡಿನಲ್ಲಿ ಬರುವಾಗ ದೇವಸ್ಥಾನದ ಎದುರು ಒಂದು ಜಿಂಕೆಯನ್ನು ನೋಡಿತು. ಆ ಜಿಂಕೆಯೂ ಹೆದರಿತ್ತು. ಆದರೆ ಜಿಂಕೆ, ಹುಲಿ ಜೊತೆ ಗೆಳೆತನ ಮಾಡಿಕೊಂಡಿತು. ಅಬ್ಬರಿಸುತ್ತಿದ್ದ ಆ ಹುಲಿಯನ್ನು ಈ ಜಿಂಕೆ ಮೆತ್ತಗೆ ಮಾಡಿಬಿಟ್ಟಿತು. ಆ ಹುಲಿಗೆ ನಾನ್ ವೇಜ್ ತಿನ್ನಬೇಡ ಅಂತು. ಬೇಟೆ ಆಡಬೇಡ ಅಂತು, ಹುಲಿ ಸಹ ಮಾಂಸ ತಿನ್ನುವುದು ಬಿಟ್ಟಿತು, ಬೇಟೆ ಆಡುವುದನ್ನು ಬಿಟ್ಟಿತು. ಈಗ ಹುಲಿ ಹಸಿದುಕೊಂಡಿದೆ ಆದರೆ ಬೇಟೆ ಆಡುವುದನ್ನೇ ಮರೆತುಬಿಟ್ಟಿದೆ’ ಎಂದರು ತ್ರಿವಿಕ್ರಮ್.

ಇದನ್ನೂ ಓದಿ:ತ್ರಿವಿಕ್ರಮ್ ಅನ್ನು ಬಳಸಿಕೊಂಡರೇ ಭವ್ಯಾ: ಸುದೀಪ್ ಎದುರು ಬಿಸಿ-ಬಿಸಿ ಚರ್ಚೆ

ಅಸಲಿಗೆ ಈ ಕತೆಯನ್ನು ತ್ರಿವಿಕ್ರಮ್ ಹೇಳಿದ್ದು ಉಗ್ರಂ ಮಂಜು ಮತ್ತು ಗೌತಮಿ ಅವರನ್ನು ಉದ್ದೇಶಿಸಿ. ಕತೆಯಲ್ಲಿ ಬೇಟೆ ಆಡುವುದನ್ನು ಮರೆತಿರುವ ಹುಲಿ ಉಗ್ರಂ ಮಂಜು. ಜಿಂಕೆ ಗೌತಮಿ. ಆದರೆ ಆ ನಂತರ ಮಾತನಾಡಿದ ಸುದೀಪ್, ಉಗ್ರಂ ಮಂಜು ಅವರು ಗೌತಮಿ ಜೊತೆಗೆ ಇದ್ದರು ಕೊನೆಯ ವಾರದಲ್ಲಿ ಅವರನ್ನೇ ನಾಮಿನೇಟ್ ಮಾಡಿದರು. ಗೌತಮಿ-ಗೌತಮಿ ಎನ್ನುತ್ತಲೇ ಕೊನೆಯ ಮೆಟ್ಟಿಲಿನಿಂದ ಕೆಳಗೆ ತಳ್ಳಿದರು. ಹಾಗಿದ್ದರೆ ಇಲ್ಲಿ ಜಿಂಕೆ ಮಂಜು, ಹುಲಿ ಗೌತಮಿ ಅನ್ನಿಸುತ್ತಿಲ್ಲವೆ? ಎಂದು ಪ್ರಶ್ನೆ ಮಾಡಿದರು.

ಆದರೆ ಈಗ ಗೌತಮಿಯ ಆಟ ಮುಗಿದಿದೆ. ಬಿಗ್​ಬಾಸ್ ಮನೆಯಿಂದ ಗೌತಮಿ ಹೊರ ಹೋಗಿದ್ದಾಗಿದೆ. ಉಗ್ರಂ ಮಂಜು ಇನ್ನೂ ಮನೆಯಲ್ಲಿ ಉಳಿದಿದ್ದಾರೆ. ಆದರೆ ಭಾನುವಾರದ ಎಪಿಸೋಡ್​ನಲ್ಲಿಯೂ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಅದು ಯಾರೆಂಬುದು ಪ್ರಶ್ನೆ. ರಜತ್, ಉಗ್ರಂ ಮಂಜು, ಧನರಾಜ್ ಮತ್ತು ಭವ್ಯಾ ಗೌಡ ಅವರ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಇಷ್ಟರಲ್ಲಿ ಯಾರಾದರೂ ಒಬ್ಬರು ಭಾನುವಾರದ ಎಪಿಸೋಡ್​ನಲ್ಲಿ ಮನೆಗೆ ಹೋಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ