AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿವಿಕ್ರಮ್ ಹೇಳಿದ ಹುಲಿ-ಜಿಂಕೆ ಕತೆ, ಯಾರು ಹುಲಿ? ಯಾರು ಜಿಂಕೆ?

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ರ ಕೊನೆಯ ವಾರದ ಪಂಚಾಯಿತಿಯನ್ನು ಶನಿವಾರ ಸುದೀಪ್ ನಡೆಸಿಕೊಟ್ಟರು. ಈ ವೇಳೆ ಚರ್ಚೆಯೊಂದಕ್ಕೆ ಸಂಬಂಧಿಸಿದಂತೆ ಸುದೀಪ್ ಎದುರು ತ್ರಿವಿಕ್ರಮ್ ಹುಲಿ ಹಾಗೂ ಜಿಂಕೆ ಕತೆಯೊಂದನ್ನು ಹೇಳಿದರು. ಅಂದಹಾಗೆ ಬಿಗ್​ಬಾಸ್ ಮನೆಯಲ್ಲಿ ಯಾರು ಜಿಂಕೆ? ಯಾರು ಹುಲಿ?

ತ್ರಿವಿಕ್ರಮ್ ಹೇಳಿದ ಹುಲಿ-ಜಿಂಕೆ ಕತೆ, ಯಾರು ಹುಲಿ? ಯಾರು ಜಿಂಕೆ?
Bigg Boss Kannada 11
ಮಂಜುನಾಥ ಸಿ.
|

Updated on: Jan 19, 2025 | 8:31 AM

Share

ಬಿಗ್​ಬಾಸ್ ಕನ್ನಡ ಸೀಸನ್ 11 ರ ಕೊನೆಯ ವಾರದ ಪಂಚಾಯಿತಿ ಶನಿವಾರ (ಜನವರಿ 18) ಪ್ರಾರಂಭ ಆಗಿದೆ. ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಒಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಿದ್ದಾರೆ. ಶನಿವಾರದ ಎಪಿಸೋಡ್​ನಲ್ಲಿ ಗೌತಮಿ, ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಇನ್ನೂ ಒಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಹೋಗುವುದು ಬಾಕಿ ಇದೆ. ಶನಿವಾರದ ವಾರದ ಪಂಚಾಯಿತಿಯಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದವು. ಈ ವೇಳೆ ತ್ರಿವಿಕ್ರಮ್, ಸುದೀಪ್ ಎದುರು ಹುಲಿ ಮತ್ತು ಜಿಂಕೆಯ ಕತೆ ಹೇಳಿದರು. ಅಂದಹಾಗೆ ಯಾರು ಜಿಂಕೆ? ಯಾರು ಹುಲಿ?

ಸುದೀಪ್ ಎದುರು ಹುಲಿ-ಜಿಂಕೆ ಕತೆ ಹೇಳಿದ ತ್ರಿವಿಕ್ರಮ್. ಒಂದು ಕಾಡಿನಲ್ಲಿ ಒಂದು ಹುಲಿ ಇತ್ತು, ಆ ಹುಲಿ ಭೇಟಿ ಆಡಿಕೊಂಡು, ಮಾಂಸ ತಿಂದುಕೊಂಡು ಆರಾಮವಾಗಿ ಇತ್ತು. ಹೀಗೆ ಕಾಡಿನಲ್ಲಿ ಬರುವಾಗ ದೇವಸ್ಥಾನದ ಎದುರು ಒಂದು ಜಿಂಕೆಯನ್ನು ನೋಡಿತು. ಆ ಜಿಂಕೆಯೂ ಹೆದರಿತ್ತು. ಆದರೆ ಜಿಂಕೆ, ಹುಲಿ ಜೊತೆ ಗೆಳೆತನ ಮಾಡಿಕೊಂಡಿತು. ಅಬ್ಬರಿಸುತ್ತಿದ್ದ ಆ ಹುಲಿಯನ್ನು ಈ ಜಿಂಕೆ ಮೆತ್ತಗೆ ಮಾಡಿಬಿಟ್ಟಿತು. ಆ ಹುಲಿಗೆ ನಾನ್ ವೇಜ್ ತಿನ್ನಬೇಡ ಅಂತು. ಬೇಟೆ ಆಡಬೇಡ ಅಂತು, ಹುಲಿ ಸಹ ಮಾಂಸ ತಿನ್ನುವುದು ಬಿಟ್ಟಿತು, ಬೇಟೆ ಆಡುವುದನ್ನು ಬಿಟ್ಟಿತು. ಈಗ ಹುಲಿ ಹಸಿದುಕೊಂಡಿದೆ ಆದರೆ ಬೇಟೆ ಆಡುವುದನ್ನೇ ಮರೆತುಬಿಟ್ಟಿದೆ’ ಎಂದರು ತ್ರಿವಿಕ್ರಮ್.

ಇದನ್ನೂ ಓದಿ:ತ್ರಿವಿಕ್ರಮ್ ಅನ್ನು ಬಳಸಿಕೊಂಡರೇ ಭವ್ಯಾ: ಸುದೀಪ್ ಎದುರು ಬಿಸಿ-ಬಿಸಿ ಚರ್ಚೆ

ಅಸಲಿಗೆ ಈ ಕತೆಯನ್ನು ತ್ರಿವಿಕ್ರಮ್ ಹೇಳಿದ್ದು ಉಗ್ರಂ ಮಂಜು ಮತ್ತು ಗೌತಮಿ ಅವರನ್ನು ಉದ್ದೇಶಿಸಿ. ಕತೆಯಲ್ಲಿ ಬೇಟೆ ಆಡುವುದನ್ನು ಮರೆತಿರುವ ಹುಲಿ ಉಗ್ರಂ ಮಂಜು. ಜಿಂಕೆ ಗೌತಮಿ. ಆದರೆ ಆ ನಂತರ ಮಾತನಾಡಿದ ಸುದೀಪ್, ಉಗ್ರಂ ಮಂಜು ಅವರು ಗೌತಮಿ ಜೊತೆಗೆ ಇದ್ದರು ಕೊನೆಯ ವಾರದಲ್ಲಿ ಅವರನ್ನೇ ನಾಮಿನೇಟ್ ಮಾಡಿದರು. ಗೌತಮಿ-ಗೌತಮಿ ಎನ್ನುತ್ತಲೇ ಕೊನೆಯ ಮೆಟ್ಟಿಲಿನಿಂದ ಕೆಳಗೆ ತಳ್ಳಿದರು. ಹಾಗಿದ್ದರೆ ಇಲ್ಲಿ ಜಿಂಕೆ ಮಂಜು, ಹುಲಿ ಗೌತಮಿ ಅನ್ನಿಸುತ್ತಿಲ್ಲವೆ? ಎಂದು ಪ್ರಶ್ನೆ ಮಾಡಿದರು.

ಆದರೆ ಈಗ ಗೌತಮಿಯ ಆಟ ಮುಗಿದಿದೆ. ಬಿಗ್​ಬಾಸ್ ಮನೆಯಿಂದ ಗೌತಮಿ ಹೊರ ಹೋಗಿದ್ದಾಗಿದೆ. ಉಗ್ರಂ ಮಂಜು ಇನ್ನೂ ಮನೆಯಲ್ಲಿ ಉಳಿದಿದ್ದಾರೆ. ಆದರೆ ಭಾನುವಾರದ ಎಪಿಸೋಡ್​ನಲ್ಲಿಯೂ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಅದು ಯಾರೆಂಬುದು ಪ್ರಶ್ನೆ. ರಜತ್, ಉಗ್ರಂ ಮಂಜು, ಧನರಾಜ್ ಮತ್ತು ಭವ್ಯಾ ಗೌಡ ಅವರ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಇಷ್ಟರಲ್ಲಿ ಯಾರಾದರೂ ಒಬ್ಬರು ಭಾನುವಾರದ ಎಪಿಸೋಡ್​ನಲ್ಲಿ ಮನೆಗೆ ಹೋಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ