ಬಿಗ್ ಬಾಸ್ ಕನ್ನಡ ಎಲಿಮಿನೇಷನ್: ಅಣ್ಣ-ತಂಗಿ ಜಿಂಕೆ ಇದನ್ನು ಊಹಿಸಿರಲಿಲ್ಲ

ಧನರಾಜ್ ಮತ್ತು ಭವ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಅಣ್ಣ-ತಂಗಿಯಾಗಿ ಆಪ್ತತೆ ಬೆಳೆಸಿಕೊಂಡಿದ್ದಾರೆ. ಈ ವಾರದ ಎಲಿಮಿನೇಷನ್​ನಲ್ಲಿ ಈ ರೀತಿ ಆಗುತ್ತದೆ ಎಂದು ಅವರಿಬ್ಬರೂ ಊಹಿಸಿರಲಿಲ್ಲ. ಒಟ್ಟು ಏಳು ಜನರು ಈ ವಾರ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಧನರಾಜ್ ಮತ್ತು ಭವ್ಯಾ ಅವರು ಡೇಂಜರ್ ಝೋನ್​ಗೆ ಬಂದರು. ಆದರೆ ನಂತರ ಆಗಿದ್ದೇ ಬೇರೆ.

ಬಿಗ್ ಬಾಸ್ ಕನ್ನಡ ಎಲಿಮಿನೇಷನ್: ಅಣ್ಣ-ತಂಗಿ ಜಿಂಕೆ ಇದನ್ನು ಊಹಿಸಿರಲಿಲ್ಲ
ಧನರಾಜ್, ಭವ್ಯಾ

Updated on: Nov 10, 2024 | 11:12 PM

ಭಾನುವಾರ ಬಂದರೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಎಲಿಮಿನೇಷನ್​ನ ಟೆನ್ಷನ್​ ಹೆಚ್ಚಾಗುತ್ತದೆ. ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಕಾಡುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಈ ವಾರ ಒಟ್ಟು 7 ಮಂದಿ ನಾಮಿನೇಟ್​​ ಆಗಿದ್ದರು. ಅವರಲ್ಲಿ ಯಾರ ಆಟ ಅಂತ್ಯ ಆಗಲಿದೆ ಎಂಬ ಕೌತುಕ ಇತ್ತು. ಅಂತಿಮವಾಗಿ ಎಲ್ಲರೂ ಸೇಫ್ ಆಗಿದ್ದರು. ಆದರೆ ಕೊನೆಯಲ್ಲಿ ಉಳಿದುಕೊಂಡಿದ್ದು ಭವ್ಯಾ ಮತ್ತು ಧನರಾಜ್. ಅವರಿಗೂ ಒಂದು ಸರ್ಪೈಸ್ ಕಾದಿತ್ತು.

ಡೇಂಜರ್ ಝೋನ್​ನಲ್ಲಿ ಇದ್ದ ಧನರಾಜ್ ಮತ್ತು ಭವ್ಯಾ ಅವರ ಪೈಕಿ ಧನರಾಜ್ ಸೇಫ್ ಆದರು. ಭವ್ಯಾ ಅವರು ಲಗೇಜ್ ಪ್ಯಾಕ್ ಮಾಡಿಕೊಂಡು ಮುಖ್ಯದ್ವಾರದ ಕಡೆಗೆ ಬರಬೇಕಾಯಿತು. ಎಲಿಮಿನೇಷನ್​ನಲ್ಲಿ ಭವ್ಯಾ ಹೆಸರು ಬರುತ್ತದೆ ಎಂದು ಬಹುತೇಕರು ಊಹಿರಲಿಲ್ಲ. ಹಾಗಾಗಿ ಐಶ್ವರ್ಯಾ, ಶಿಶಿರ್, ತ್ರಿವಿಕ್ರಮ್ ಮುಂತಾದವರು ಸಿಕ್ಕಾಪಟ್ಟೆ ಎಮೋಷನಲ್ ಆದರು.

ಇನ್ನೇನು ಭವ್ಯಾ ಅವರು ಬಿಗ್ ಬಾಸ್​ ಮನೆಯಿಂದ ಹೊರಗೆ ಬರಬೇಕು ಎಂಬಷ್ಟರಲ್ಲಿ ಒಂದು ಟ್ವಿಸ್ಟ್​ ನೀಡಲಾಯಿತು. ದೊಡ್ಮನೆಯ ಬಾಗಿಲು ಓಪನ್ ಆಗಲೇ ಇಲ್ಲ. ‘ಭವ್ಯ ಅವರೇ.. ಈ ವಾರ ಈ ಮನೆಯಲ್ಲಿ ನಿಮ್ಮ ಪಯಣ ಮುಂದುವರಿಯುತ್ತದೆ’ ಎಂದು ಬಿಗ್ ಬಾಸ್ ಘೋಷಿಸಿದರು. ಇನ್ನೇನು ಹೊರಗೆ ಹೋಗಿ ಫ್ಯಾಮಿಲಿಯವರನ್ನು ನೋಡಬೇಕು ಎಂದುಕೊಂಡಿದ್ದ ಭವ್ಯಾ ಅವರಿಗೆ ಈ ಟ್ವಿಸ್ಟ್​ ನೋಡಿ ಅಚ್ಚರಿ ಆಯಿತು.

ಇದನ್ನೂ ಓದಿ: ಧನರಾಜ್, ಹನುಮಂತ ಫ್ರೇಮ್​ನಲ್ಲಿ ಇದ್ದರೆ ಬಿಗ್ ಬಾಸ್ ಪ್ರೇಕ್ಷಕರಿಗೆ ಡಬಲ್ ಕಾಮಿಡಿ

ಭವ್ಯಾ ಎಲಿಮಿನೇಟ್ ಆಗಿಲ್ಲ ಎಂಬುದು ಗೊತ್ತಾದ ಬಳಿಕ ಇನ್ನುಳಿದ ಸ್ಪರ್ಧಿಗಳು ಬಂದು ವಿಶ್ ಮಾಡಿದರು. ಈ ವಾರ ಓಟಿಂಗ್ ಲೈನ್ಸ್ ಇರುವುದಿಲ್ಲ ಎಂದು ವೀಕ್ಷಕರಿಗೆ ಮೊದಲೇ ತಿಳಿಸಲಾಗಿತ್ತು. ಆದರೆ ಬಿಗ್ ಬಾಸ್ ಮನೆಯ ಒಳಗೆ ಇರುವ ಸ್ಪರ್ಧಿಗಳಿಗೆ ಈ ವಿಷಯ ತಿಳಿದಿರಲಿಲ್ಲ. ಹಾಗಾಗಿ ಅವರಿಗೆ ಎಂದಿನಂತೆ ಟೆನ್ಷನ್ ಇತ್ತು. ಅಣ್ಣ-ತಂಗಿ ಜಿಂಕೆ ಎಂದೇ ಫೇಮಸ್ ಆಗಿರುವ ಭವ್ಯಾ ಮತ್ತು ಧನರಾಜ್ ಅವರಿಗೆ ಜಾಸ್ತಿ ಆತಂಕ ಆಗಿತ್ತು. ಆದರೆ ಈ ವಾರ ಎಲಿಮಿನೇಷನ್​ ಇಲ್ಲ ಎಂದು ತಿಳಿದ ಬಳಿಕ ಎಲ್ಲರೂ ನಿಟ್ಟುಸಿರು ಬಿಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us