ಟಾಸ್ಕ್ ಆಡುವಾಗ ಜಾನ್ವಿ ಮುಖಭಾವ ನೋಡಿ; ನಡೆಯಿತು ಹೊಡೆಯುವ ಪ್ರಯತ್ನ

ಆ್ಯಂಕರ್ ಜಾನ್ವಿ ಬಿಗ್ ಬಾಸ್ ಮನೆಯಲ್ಲಿ ಹಲವು ವಿವಾದಗಳಿಗೆ ಕಾರಣರಾಗಿದ್ದಾರೆ. ಅಶ್ವಿನಿ ಗೌಡ ಜೊತೆ ನಿಯಮ ಉಲ್ಲಂಘಿಸಿ, ನೇರ ನಾಮಿನೇಷನ್‌ಗೆ ಗುರಿಯಾಗಿದ್ದರು. ಟಾಸ್ಕ್ ವೇಳೆ ಕೋಪಗೊಂಡು, ರಾಶಿಕಾ ಅವರೊಂದಿಗೆ ಜಗಳಕ್ಕಿಳಿದರು. ಅವರನ್ನು 'ನಾಗವಲ್ಲಿ' ಹೋಲಿಕೆ ಮಾಡಲಾಗಿದೆ. ಅವರ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.

ಟಾಸ್ಕ್ ಆಡುವಾಗ ಜಾನ್ವಿ ಮುಖಭಾವ ನೋಡಿ; ನಡೆಯಿತು ಹೊಡೆಯುವ ಪ್ರಯತ್ನ
ಜಾನ್ವಿ

Updated on: Nov 19, 2025 | 7:35 AM

ಆ್ಯಂಕರ್ ಜಾನ್ವಿ ಅವರು ಬಿಗ್ ಬಾಸ್​ಗೆ (Bigg Boss) ತೆರಳಿ ಸುದ್ದಿ ಆಗುತ್ತಿದ್ದಾರೆ. ಅವರ ಬಗ್ಗೆ ನೆಗೆಟಿವ್ ಅಭಿಪ್ರಾಯ ವ್ಯಕ್ತವಾಗಿದೆ. ಅಶ್ವಿನಿ ಗೌಡ ಜೊತೆ ಸೇರಿ ಅವರು ಹಲವು ನಿಯಮಗಳನ್ನು ಬ್ರೇಕ್ ಮಾಡುತ್ತಿದ್ದಾರೆ. ಈ ಕಾರಣದಿಂದ ಸುದ್ದಿ ಆಗುತ್ತಿದ್ದಾರೆ. ಜಾನ್ವಿ ಈಗ ಟಾಸ್ಕ್ ಆಡುವಾಗ ನಡೆದುಕೊಂಡ ರೀತಿ ಚರ್ಚೆಗೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ.

ನವೆಂಬರ್ 18ರ ಎಪಿಸೋಡ್​ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ ಅನುಸಾರ ಈಜುಕೊಳದಿಂದ ನೀರನ್ನು ಬಕೆಟ್​ನಲ್ಲಿ ತೆಗೆದುಕೊಂಡು ಬಂದು ಟ್ಯಾಂಕ್ ಒಳಗೆ ಹಾಕಬೇಕಿತ್ತು. ಈ ರೀತಿ ನೀರನ್ನು ಹಾಕಲು ಪ್ರತಿ ತಂಡದಲ್ಲಿ ಇಬ್ಬರಿಗೆ ಅವಕಾಶ ನೀಡಲಾಯಿತು. ಇವರು ನೀರನ್ನು ತೆಗೆದುಕೊಂಡು ಹೋಗದಂತೆ ತಡೆಯಲು ಒಬ್ಬರನ್ನು ನಿಲ್ಲಿಸಲಾಗಿತ್ತು.

ಜಾನ್ವಿ ಹಾಗೂ ರಿಷಾ ಅವರು ನೀರು ತುಂಬುವ ಕಾಯಕದಲ್ಲಿ ನಿರತರಾಗಿದ್ದರು. ರಾಶಿಕಾ ಅವರು ಇವರು ಬರದಂತೆ ತಡೆಯಲು ಗುರಾಣಿ ರೀತಿಯ ವಸ್ತು ಹಿಡಿದು ನಿಂತಿದ್ದರು. ಈ ವೇಳೆ ಜಾನ್ವಿ ಬಕೆಟ್​ನಲ್ಲಿ ನೀರು ಹಿಡಿದು ಹೋಗದಂತೆ ತಡೆಯಲಾಯಿತು. ಇದರಿಂದ ಜಾನ್ವಿ ಸಿಟ್ಟಾದರು. ಅವರ ಮುಖದಲ್ಲಿ ಕೋಪ ಮಿತಿ ಮೀರಿತ್ತು. ಅನೇಕರು ಜಾನ್ವಿ ಅವರನ್ನು ನಾಗವಲ್ಲಿಗೆ ಹೋಲಿಕೆ ಮಾಡಿದ್ದಾರೆ. ಸಾಧಾರಣವಾಗಿದ್ದ ಅವರ ಮುಖ ಭಾವನೆ ಒಮ್ಮೆಲೇ ಬದಲಾಗಿದ್ದು ಅನೇಕರಿಗೆ ಅಚ್ಚರಿ ತಂದಿದೆ.

ಜಾನ್ವಿ ಅವರು ಆ ಬಳಿಕ ರಾಶಿಕಾ ಬಳಿ ಜಗಳಕ್ಕೆ ಇಳಿದರು. ಈ ವೇಳೆ ರಾಶಿಕಾ ಅವರು ಕೈ ತೋರಿಸಿದಾಗ ಕೈಗೆ ಹೊಡೆಯುವ ಪ್ರಯತ್ನವನ್ನು ಜಾನ್ವಿ ಮಾಡಿದರು. ಆದರೆ, ಆ ಏಟು ರಾಶಿಕಾಗೆ ಬಿದ್ದಿಲ್ಲ ಅನ್ನೋದು ಅದೃಷ್ಟ. ಈ ಮೊದಲು ರಿಷಾ ಅವರು ಗಿಲ್ಲಿಗೆ ಹೊಡೆದ ವಿಚಾರ ಸಾಕಷ್ಟು ಗಂಭೀರವಾಗಿತ್ತು. ಈಗ ಅವರು ಮತ್ತೆ ಹೊಡೆದಿದ್ದರೆ ಆ ಪ್ರಕರಣ ಮತ್ತಷ್ಟು ಗಂಭಿರತೆ ಪಡೆದುಕೊಳ್ಳುತ್ತಿತ್ತು.

ಇದನ್ನೂ ಓದಿ: ಅಣ್ಣ ಪದಕ್ಕೆ ಕಳಂಕ; ಈ ಸಂಬಂಧವನ್ನು ಬೇಕಾಬಿಟ್ಟಿ ಬಳಸಿದ ಬಿಗ್ ಬಾಸ್ ಸ್ಪರ್ಧಿಗಳು

ಜಾನ್ವಿ ಹಾಗೂ ಅಶ್ವಿನಿ ಡ್ರೆಸ್ಸಿಂಗ್ ರೂಂನಲ್ಲಿ ಮೈಕ್ ಹಾಕದೆ ಮಾತನಾಡಿದ್ದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ಮತ್ತೆ ಇದೇ ತಪ್ಪನ್ನು ಮಾಡಿದ್ದರು. ಹೀಗಾಗಿ, ಬಿಗ್ ಬಾಸ್ ಇವರಿಬ್ಬರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Wed, 19 November 25

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us