AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಣ್ಣಯ್ಯ’-‘ಕರ್ಣ’ ‘ಮಹಾಸಂಗಮ’ದಲ್ಲಿ ಮಹಾ ತಿರುವು; ನಿತ್ಯಾ ಪ್ರೆಗ್ನೆನ್ಸಿ ವಿಷಯ ಎಲ್ಲರಿಗೂ ತಿಳಿದೋಯ್ತು

Kannada serial: ‘ಅಣ್ಣಯ್ಯ’ ಹಾಗೂ ‘ಕರ್ಣ’ ಧಾರಾವಾಹಿಯ ಮಹಾಸಂಗಮ ನಡೆದಿದೆ. ಸೋಮವಾರದಿಂದ (ನವೆಂಬರ್ 17) ಒಂದು ವಾರಗಳ ಕಾಲ ಈ ಮಹಾ ಸಂಗಮ ನಡೆಯಲಿದೆ. ಈ ಮಹಾ ಸಂಗಮದಲ್ಲಿ ಮಹಾ ತಿರುವುಗಳನ್ನು ನೀವು ನಿರೀಕ್ಷಿಸಬಹುದು. ನಿತ್ಯಾ ಪ್ರೆಗ್ನೆನ್ಸಿ ವಿಷಯ ಎಲ್ಲರಿಗೂ ತಿಳಿಯುವ ಸಮಯ. ಅದಕ್ಕೆ ಕಾರಣ ಆಗೋದು ವಾಚ್. ಅಷ್ಟಕ್ಕೂ ನಡೆದಿದ್ದು ಏನು? ಇಲ್ಲಿದೆ ವಿವರ.

‘ಅಣ್ಣಯ್ಯ’-‘ಕರ್ಣ’ ‘ಮಹಾಸಂಗಮ’ದಲ್ಲಿ ಮಹಾ ತಿರುವು; ನಿತ್ಯಾ ಪ್ರೆಗ್ನೆನ್ಸಿ ವಿಷಯ ಎಲ್ಲರಿಗೂ ತಿಳಿದೋಯ್ತು
Zee Kannada (1)
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 18, 2025 | 7:27 PM

Share

‘ಅಣ್ಣಯ್ಯ’ ಹಾಗೂ ‘ಕರ್ಣ’ ಧಾರಾವಾಹಿಯ ಮಹಾಸಂಗಮ ನಡೆದಿದೆ. ಸೋಮವಾರದಿಂದ (ನವೆಂಬರ್ 17) ಒಂದು ವಾರಗಳ ಕಾಲ ಈ ಮಹಾ ಸಂಗಮ ನಡೆಯಲಿದೆ. ಈ ಮಹಾ ಸಂಗಮದಲ್ಲಿ ಮಹಾ ತಿರುವುಗಳನ್ನು ನೀವು ನಿರೀಕ್ಷಿಸಬಹುದು. ನಿತ್ಯಾ ಪ್ರೆಗ್ನೆನ್ಸಿ ವಿಷಯ ಎಲ್ಲರಿಗೂ ತಿಳಿಯುವ ಸಮಯ. ಅದಕ್ಕೆ ಕಾರಣ ಆಗೋದು ವಾಚ್. ಅಷ್ಟಕ್ಕೂ ನಡೆದಿದ್ದು ಏನು? ಇಲ್ಲಿದೆ ವಿವರ.

‘ಅಣ್ಣಯ್ಯ’ ಹಾಗೂ ‘ಕರ್ಣ’ ಧಾರಾವಾಹಿ ಕಥೆ ಮಧ್ಯೆ ಲಿಂಕ್ ಬೆಸೆಯುವ ಪ್ರಯತ್ನ ನಡೆದಿದೆ. ಕರ್ಣನ ಹಿನ್ನೆಲೆ ಇರೋದು ‘ಅಣ್ಣಯ್ಯ’ ಧಾರಾವಾಹಿಯ ಶಿವುನ ಊರು ಮಾರಿಗುಡಿಯಲ್ಲಿ ಎಂಬ ರೀತಿಯಲ್ಲಿ ತೋರಿಸಲಾಗಿದೆ. ಈ ಮೊದಲು ಕರ್ಣ ಹಾಗೂ ಕುಟುಂಬದವರು ಮಾರಿಗುಡಿಗೆ ಬಂದಿದ್ದರು. ಆದರೆ ಕರ್ಣ ಹಾಗೂ ನಿಧಿಗೆ ಪ್ರೀತಿ ಆಗಿದ್ದು ಬಿಟ್ಟರೆ ಅಂತಹ ಮಹತ್ವದ ಬದಲಾವಣೆ ಏನು ಆಗಿರಲಿಲ್ಲ. ಈಗ ಇವರು ಮತ್ತೆ ಮಾರಿಗುಡಿಗೆ ಬಂದಿದ್ದಾರೆ.

ಇದನ್ನೂ ಓದಿ:‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಆದಿ ಮದುವೆ ಆಗಲು ಬಂದ ಮೇಘಾಶ್ರೀ; ಹೊಸ ತಿರುವಿಗೆ ವೇದಿಕೆ

ಕರ್ಣ ಹಾಗೂ ನಿಧಿ ಮಾತನಾಡುತ್ತಾ ಇರುತ್ತಾರೆ. ನಿತ್ಯಾ ಜೊತೆ ನಡೆದ ಮದುವೆ ಸುಳ್ಳು ಎಂಬುದನ್ನು ಪರೋಕ್ಷವಾಗಿ ಹೇಳಲು ಆತ ಪ್ರಯತ್ನಿಸುತ್ತಾನೆ. ಆಗ ನಿತ್ಯಾಳ ಆಗಮನ ಆಗುತ್ತದೆ. ಈ ವೇಳೆ ಆಕೆ ತನ್ನ ಪ್ರೆಗ್ನೆನ್ಸಿ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ಹೇಳುತ್ತಾಳೆ. ಇದಕ್ಕೆ ಕರ್ಣ ಕೂಡ ಒಪ್ಪಿಕೊಳ್ಳುತ್ತಾನೆ. ಅತ್ತ ‘ಅಣ್ಣಯ್ಯ’ ಧಾರಾವಾಹಿ ಪಾತ್ರಧಾರಿಯೊಬ್ಬ ನಿತ್ಯಾ ಕೈಗೆ ವಾಚ್ ಕಟ್ಟುತ್ತಾನೆ. ಅದು ಸ್ಮಾರ್ಟ್ ವಾಚ್. ಈ ವಾಚ್ ‘ಪ್ರೆಗ್ನೆಂಟ್’ ಎಂದು ಹೇಳುತ್ತದೆ. ಇದರಿಂದ ನಿತ್ಯಾ ಕಂಗಾಲಾಗುತ್ತಾಳೆ.

ಈ ಮೊದಲು ಕೂಡ ಪಾರುಗೆ ಇದೇ ವಾಚ್ ಕಟ್ಟಿದಾಗ ಆಕೆ ಪ್ರೆಗ್ನೆಂಟ್ ಎಂದೇ ಹೇಳಿತ್ತು. ವಾಚ್​​ನಲ್ಲಿರುವ ತಾಂತ್ರಿಕ ದೋಷ ಇದಕ್ಕೆ ಕಾರಣ ಆಗಿತ್ತು. ಈಗಲೂ ಹಾಗೆಯೇ ಆಗಿರಬಹುದು ಎಂದು ‘ಅಣ್ಣಯ್ಯ’ ಧಾರಾವಾಹಿ ತಂಡದವರು ಭಾವಿಸಿದ್ದಾರೆ. ಆದರೆ, ಪಾರು ಹೋಗಿ ನಿತ್ಯಾಳ ಕೈ ಹಿಡಿದಾಗ ಅಸಲಿ ವಿಷಯ ಗೊತ್ತಾಗಿದೆ. ಈಗ ಈ ವಿಚಾರವನ್ನು ಪಾರು ಬೇರೆ ಯಾರಿಗಾದರೂ ಹೇಳುತ್ತಾಳಾ? ಎಲ್ಲರಿಗೂ ಈ ವಿಷಯ ತಿಳಿದು ಹೋಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಸಂಪೂರ್ಣ ಮಹಾ ಸಂಗಮ ಪೂರ್ಣಗೊಳ್ಳುವ ಮೊದಲು ಒಂದು ದೊಡ್ಡ ತಿರುವು ನಿರೀಕ್ಷಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು