ಊಹಿಸದ ರೀತಿಯಲ್ಲಿ ಮುನ್ನುಗ್ಗುತ್ತಿರುವ ವರ್ತೂರು ಸಂತೋಷ್, ಫಿನಾಲೆಗೆ ಬರ್ತಾರಾ?

Varthur Santhosh: ವರ್ತೂರು ಸಂತು ಅವರ ಈವರೆಗಿನ ಬಿಗ್​ಬಾಸ್ ಜರ್ನಿ ಬಹಳ ರೋಚಕವಾದುದು. ಏನೇನೋ ಆಗಿ ಕೊನೆಗೆ ಈಗ ಫಿನಾಲೆಗೆ ತಲುಪುವ ಹಂತಕ್ಕೆ ಬಂದು ನಿಂತಿದ್ದಾರೆ.

ಊಹಿಸದ ರೀತಿಯಲ್ಲಿ ಮುನ್ನುಗ್ಗುತ್ತಿರುವ ವರ್ತೂರು ಸಂತೋಷ್, ಫಿನಾಲೆಗೆ ಬರ್ತಾರಾ?
ವರ್ತೂರು ಸಂತೋಷ್
Follow us
|

Updated on: Jan 10, 2024 | 11:15 PM

ವರ್ತೂರು ಸಂತೋಷ್ (Varthur Santhosh) ಬಿಗ್​ಬಾಸ್​ ಮನೆಯ ಭಿನ್ನ ಸ್ಪರ್ಧಿ. ಮನೊರಂಜನಾ ಕ್ಷೇತ್ರಕ್ಕೆ ಸಂಬಂಧ ಪಡದ, ಅಪ್ಪಟ ಹಳ್ಳಿ ಹೈದ, ಅವರ ಮಾತು, ನಡೆ, ಟಾಸ್ಕ್ ಆಡುವ ರೀತಿ ಎಲ್ಲವೂ ಭಿನ್ನ. ಹಲವು ವಾರಗಳ ಹಿಂದೆಯೇ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂದೆನಿಸಿಕೊಂಡಿದ್ದ ವರ್ತೂರು ಜನರ ಬೆಂಬಲದಿಂದ ಫಿನಾಲೆಯ ಹೊಸ್ತಿಲ ವರೆಗೆ ಬಂದು ನಿಂತಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ವರ್ತೂರು ಸಂತೋಷ್, ಫಿನಾಲೆಗೆ ಸಮೀಪ ಬಂದಾಗ ಭಾರಿ ವೇಗ ಪಡೆದುಕೊಂಡಿದ್ದಾರೆ. ಊಹಿಸದ ರೀತಿ ಮುಂದೆ ಸಾಗುತ್ತಿದ್ದಾರೆ.

ಈ ವಾರ ಟಿಕೆಟ್ ಟು ಫಿನಾಲೆ ಹೆಸರಿನಲ್ಲಿ ಮನೆಯ ಸ್ಪರ್ಧಿಗಳಿಗೆ ಬಿಗ್​ಬಾಸ್ ಟಾಸ್ಕ್​ಗಳನ್ನು ನೀಡುತ್ತಿದ್ದಾರೆ. ಸ್ಪರ್ಧಿಗಳು ಆಡುವ ಟಾಸ್ಕ್ ಆಧರಿಸಿ ಅವರಿಗೆ ಪಾಯಿಂಟ್ಸ್​ಗಳನ್ನು ನೀಡಲಾಗುತ್ತಿದ್ದು, ಯಾರು ಹೆಚ್ಚು ಪಾಯಿಂಟ್ ಪಡೆಯುತ್ತಾರೆಯೋ ಅವರು ಫಿನಾಲೆಗೆ ನೇರ ಪ್ರವೇಶ ಪಡೆಯಲಿದ್ದಾರೆ. ಟಾಸ್ಕ್ ಆರಂಭವಾದಾಗ ಎಲ್ಲರೂ ಊಹಿಸಿದ್ದು, ವಿನಯ್, ಸಂಗೀತಾ, ಕಾರ್ತಿಕ್, ನಮ್ರತಾ, ಪ್ರತಾಪ್ ಅವರುಗಳು ಟಾಸ್ಕ್​ನಲ್ಲಿ ಮುಂದೆ ಇರುತ್ತಾರೆ ಎಂದು ಆದರೆ ವರ್ತೂರು ತಮ್ಮ ಪ್ರದರ್ಶನದಿಂದ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಟಾಸ್ಕ್​ಗಳಲ್ಲಿ ಬಹಳ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ವರ್ತೂರು ಸಂತೋಷ್​, ಮನೆಯಲ್ಲಿ ತಾವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಗೆ ಸಮಜಾಯಿಷಿಯನ್ನು ಸಹ ಪ್ರಬಲವಾಗಿಯೇ ನೀಡುತ್ತಿದ್ದಾರೆ. ಟಿಕೆಟ್​ ಟು ಫಿನಾಲೆ ಟಾಸ್ಕ್​ನಲ್ಲಿ ಬುಧವಾರದ ಎಪಿಸೋಡ್​ನಲ್ಲಿ ಒಂದು ಹಂತದಲ್ಲಿ ಇಡೀ ಮನೆಯಲ್ಲಿ ಹೆಚ್ಚು ಅಂಕ ಪಡೆದ ಸ್ಪರ್ಧಿಯಾಗಿದ್ದರು. ಎರಡೆರಡು ಟಾಸ್ಕ್​ಗಳನ್ನು ಗೆದ್ದರು. ಪ್ರತಾಪ್​ ರ ಟಾಸ್ಕ್​ಗೂ ಆಯ್ಕೆ ಆಗಿದ್ದರು ಆದರೆ ಗೆಲ್ಲುವಲ್ಲಿ ವಿಫಲವಾದರು. ತನಿಷಾ ನಾಯಕತ್ವದ ಟಾಸ್ಕ್​ನಲ್ಲಿಯೂ ಆಡಿದರು. ಆದರೆ ಅಲ್ಲಿಯೂ ಸಫಲರಾಗಲಿಲ್ಲ.

ಇದನ್ನೂ ಓದಿ:ನೀವು ಅಂದುಕೊಂಡಂತೆ ಇಲ್ಲ ವರ್ತೂರು ಸಂತೋಷ್​; ಹೊರಬಂತು ನೋಡಿ ಅಸಲಿ ಟ್ಯಾಲೆಂಟ್​

ಕೆಲ ವಾರಗಳ ಹಿಂದಿನ ವರೆಗೂ ತುಕಾಲಿ ಸಂತು ಹೊರತಾಗಿ ಇನ್ಯಾರೊಟ್ಟಿಗೆ ಹೆಚ್ಚಾಗಿ ಬೆರೆಯದಿದ್ದ, ಟಾಸ್ಕ್​ಗಳ ವಿಚಾರದಲ್ಲಿ ಹೆಚ್ಚು ಆಸಕ್ತಿಯೂ ತೋರದಿದ್ದ ವರ್ತೂರು ಸಂತೋಷ್ ಈ ವಾರ ಬಹಳ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಅಂಕಗಳೂ ಹೆಚ್ಚಿಗೆ ಗಳಿಸುತ್ತಿದ್ದಾರೆ. ಅವರು ಇದೇ ವೇಗದಲ್ಲಿ ಮುಂದೆ ಸಾಗಿದರೆ ಫಿನಾಲೆಗೆ ಪಕ್ಕಾ ತಲುಪುತ್ತಾರೆ ಎನ್ನಬಹುದು. ಮನೆಯ ಸದಸ್ಯರಾದ ತುಕಾಲಿ ಸಂತು ಹಾಗೂ ಕಾರ್ತಿಕ್ ಮಾತನಾಡುತ್ತಾ, ವರ್ತೂರು ಸಂತೋಷ್​ಗೆ ಇರುವ ಜನಬೆಂಬಲ, ಈಗ ಇವರು ಆಡುತ್ತಿರುವ ರೀತಿ ನೋಡಿದರೆ ಫಿನಾಲೆ ತಲುಪಿಬಿಡುತ್ತಾರೇನೋ ಎಂದು ಹೇಳಿದರು. ಅವರು ಹೇಳಿದ್ದು ನಿಜವಾಗುವ ಸಾಧ್ಯತೆಯೂ ಇದೆ.

ವರ್ತೂರು ಸಂತು ಅವರ ಈವರೆಗಿನ ಬಿಗ್​ಬಾಸ್ ಜರ್ನಿ ಬಹಳ ರೋಚಕವಾದುದು. ಬಿಗ್​ಬಾಸ್​ಗೆ ಹೋದ ಕೆಲವೇ ದಿನಗಳಲ್ಲಿ ಹುಲಿ ಉಗುರು ಪ್ರಕರಣದಲ್ಲಿ ಜೈಲು ಪಾಲಾದರು. ಅದಾದ ಬಳಿಕ ಜೈಲಿನಿಂದ ನೇರವಾಗಿ ಬಿಗ್​ಬಾಸ್ ಮನೆಗೆ ಬಂದರು. ಅಲ್ಲಿಂದಲೂ ವಾಪಸ್ ಹೋಗುವ ಮಾತನಾಡಿದರು. ಹೊರಗೆ ಕಳಿಸುವಂತೆ ಕಣ್ಣೀರು ಹಾಕಿ ಕೇಳಿಕೊಂಡರು. ಬಳಿಕ ಅವರ ತಾಯಿಯವರು ಬಂದು ಅವರ ಮನವೊಲಿಸಿದರು. ಟಾಸ್ಕ್ ಆಡಲು ಅವಕಾಶಗಳು ಸಿಗದೆ ಕೊರಗಿದರು. ಸಿಕ್ಕ ಕಡಿಮೆ ಸ್ಕ್ರೀನ್ ಸ್ಪೇಸ್​ನಲ್ಲಿಯೇ ಗಮನ ಸೆಳೆದು ಈಗ ಫಿನಾಲೆಗೆ ತಲುಪುವ ಹಂತಕ್ಕೆ ಬಂದು ನಿಂತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ