AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಗೆ ಕೇಕ್ ಕಳಿಸಿದ ಕಿಚ್ಚ, ಕೇಕ್ ತಿಂದು ಪೆಚ್ಚಾದ ಸ್ಪರ್ಧಿಗಳು

Bigg Boss Kannada season 11: ಕಳೆದ ವಾರ ಮನೆ ಸದಸ್ಯರು ಅಷ್ಟೆಲ್ಲ ಜಗಳ, ಗಲಾಟೆ ಮಾಡಿದ್ದರೂ ಸಹ ಕಿಚ್ಚ ಸುದೀಪ್ ಸ್ಪರ್ಧಿಗಳಿಗಾಗಿ ಕೇಕ್ ಕಳಿಸಿಕೊಟ್ಟಿದ್ದರು. ಸ್ಪರ್ಧಿಗಳು ಖುಷಿಯಿಂದ ಕೇಕ್ ತಿಂದರು, ಆದರೆ ಬಳಿಕ ವಿಷಯ ತಿಳಿದು ಎಲ್ಲರೂ ಪೆಚ್ಚಾದರು.

ಬಿಗ್​ಬಾಸ್ ಮನೆಗೆ ಕೇಕ್ ಕಳಿಸಿದ ಕಿಚ್ಚ, ಕೇಕ್ ತಿಂದು ಪೆಚ್ಚಾದ ಸ್ಪರ್ಧಿಗಳು
ಮಂಜುನಾಥ ಸಿ.
|

Updated on: Oct 19, 2024 | 11:27 PM

Share

ಈ ವಾರದ ಬಿಗ್​ಬಾಸ್ ಕನ್ನಡ ಸೀಸನ್ 11ರ ವಾರದ ಪಂಚಾಯಿತಿಯ ಶನಿವಾರದ ಎಪಿಸೋಡ್​ ಬಹಳ ಗರಂ ಆಗಿತ್ತು. ಮನೆಯಲ್ಲಿ ಭಾರಿ ಜಗಳ, ಇಬ್ಬರು ಸ್ಪರ್ಧಿಗಳು ಹೊರಗೆ ಹೋಗಿರುವುದು, ಸ್ಪರ್ಧಿಗಳು ವರ್ತಿಸಿದ ರೀತಿ, ಮಾತನಾಡಿದ ರೀತಿ ಹಲವು ವಿಷಯಗಳು ಚರ್ಚಿಸಲು ಇದ್ದವು. ಸುದೀಪ್ ಎಂದಿನಂತೆ ಸ್ಟೈಲ್ ಆಗಿ ಎಂಟ್ರಿ ನೀಡಿದರು. ಸಣ್ಣದಾಗಿ ಉಭಯ ಕುಶಲೋಪರಿ ನಡೆಸಿದರು. ಆ ನಂತರ ಬಿಗ್​ಬಾಸ್ ಮನೆಯೊಳಗೆ ಒಂದು ಕೇಕ್ ಅನ್ನು ಕಳಿಸಿದರು.

ಕೇಕ್ ನೋಡಿ ಸ್ಪರ್ಧಿಗಳೆಲ್ಲ ಬಹಳ ಖುಷಿಯಾದರು. ಕೇಕ್ ಮೇಲೆ ‘ಅಭಿನಂದನೆಗಳು’ ಎಂದು ಬರೆದಿತ್ತು. ವಿಷಯ ಗೊತ್ತಿಲ್ಲದ ಸ್ಪರ್ಧಿಗಳು ಖುಷಿಯಿಂದ ಕೇಕ್ ತಿಂದರು. ಕೇಕ್ ಕಳಿಸಿದ ಜನರಿಗೆ ಥ್ಯಾಂಕ್ಸ್ ಎಂದು ಖುಷಿಯಿಂದ ಹೇಳಿದರು. ಕೇಕ್ ಕತ್ತರಿಸುವಾಗ ಹಾಡುಗಳನ್ನು ಸಹ ಹಾಡಿದರು. ಕೆಲವು ಸ್ಪರ್ಧಿಗಳು ಪರಸ್ಪರರಿಗೆ ಕೇಕ್ ತಿನ್ನಿಸಿ ಖುಷಿ ಪಟ್ಟರು. ಕೇಕ್ ತಿಂದಿದ್ದು ಮುಗಿದ ಬಳಿಕ ವಿಷಯ ಹೇಳಿದರು ಸುದೀಪ್.

ಪ್ರತಿ ಬಾರಿ ಮಾಧ್ಯಮದವರು, ನಿಮ್ಮ ಪಾಲಿಗೆ ಕೆಟ್ಟ ಸೀಸನ್ ಯಾವುದಾಗಿತ್ತು? ಎಂದು ಕೇಳಿದಾಗಲೆಲ್ಲ ನಾನು ಸೀಸನ್ 6 ಅಥವಾ ಬ್ಯಾಚ್ ನಂಬರ್ 6 ಎಂದು ಹೇಳುತ್ತಿದ್ದೆ. ಆದರೆ ನೀವು ಅದನ್ನು ರೀಪ್ಲೇಸ್ ಮಾಡಿದ್ದೀರಿ. ಕೆಟ್ಟ ಬ್ಯಾಚ್ ಯಾವುದಾಗಿತ್ತು ಎಂದು ಕೇಳಿದಾಗ ಸೀಸನ್ 6 ಎನ್ನುವ ಬದಲಿಗೆ ಇನ್ನು ಮುಂದೆ ಸೀಸನ್ 11 ಎನ್ನಬಹುದು. ನನ್ನ ಅಭಿಪ್ರಾಯವನ್ನು ಬದಲಾವಣೆ ಮಾಡಿದ್ದಕ್ಕೆ ನಿಮಗೆ ಅಭಿನಂದನೆ ಎಂದು ನಾನೇ ಕೇಕ್ ಕಳಿಸಿದ್ದೆ’ ಎಂದರು. ಸುದೀಪ್​ರ ಮಾತು ಕೇಳಿ ಖುಷಿಯಾಗಿ ಕೇಕ್ ತಿಂದಿದ್ದ ಸ್ಪರ್ಧಿಗಳೆಲ್ಲರೂ ಪೆಚ್ಚಾದರು.

ಇದನ್ನೂ ಓದಿ:ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?

ಅಸಲಿಗೆ ಈವರೆಗಿನ ಸೀಸನ್​ಗಳಲ್ಲಿ ಅತ್ಯಂತ ಕೆಟ್ಟ ಸೀಸನ್ ಇದು ಎಂಬ ಅಭಿಪ್ರಾಯ ಕೇವಲ ಮೂರೇ ವಾರಕ್ಕೆ ಮೂಡಿಬಿಟ್ಟಿದೆ. ಮನೆಯಲ್ಲಿ ಬರೀ ಗಲಾಟೆಗಳೇ ನಡೆಯುತ್ತಿವೆ. ಫನ್ ಎನ್ನುವುದೇ ಇಲ್ಲದಂತಾಗಿದೆ. ಆಟ ಆಡಿ ಗೆಲ್ಲೋಣ ಎನ್ನುವುದಕ್ಕಿಂತಲೂ ಜಗಳ ಆಡಿಯೇ ಬಿಗ್​ಬಾಸ್ ಗೆಲ್ಲಬೇಕು ಎಂದು ನಿರ್ಧಾರ ಮಾಡಿಕೊಂಡು ಬಂದವರಂತೆ ಸ್ಪರ್ಧಿಗಳು ಪರಸ್ಪರ ಕಿತ್ತಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ನಿಯಮ ಮುರಿಯುತ್ತಾರೆ. ಅತ್ಯಂತ ಕೆಟ್ಟ ಪದಗಳನ್ನು ಬಳಸುವುದು, ಸುಮ್ಮ-ಸುಮ್ಮನೆ ಕಿತ್ತಾಡುವುದು ಬಿಗ್​ಬಾಸ್ ಮನೆಯಲ್ಲಿ ಇದೇ ನಡೆಯುತ್ತಿದೆ. ಹಾಗಾಗಿಯೇ ಸುದೀಪ್ ಇದನ್ನು ಅತ್ಯಂತ ಕೆಟ್ಟ ಬ್ಯಾಚ್​ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?