AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಗೆ ಕೇಕ್ ಕಳಿಸಿದ ಕಿಚ್ಚ, ಕೇಕ್ ತಿಂದು ಪೆಚ್ಚಾದ ಸ್ಪರ್ಧಿಗಳು

Bigg Boss Kannada season 11: ಕಳೆದ ವಾರ ಮನೆ ಸದಸ್ಯರು ಅಷ್ಟೆಲ್ಲ ಜಗಳ, ಗಲಾಟೆ ಮಾಡಿದ್ದರೂ ಸಹ ಕಿಚ್ಚ ಸುದೀಪ್ ಸ್ಪರ್ಧಿಗಳಿಗಾಗಿ ಕೇಕ್ ಕಳಿಸಿಕೊಟ್ಟಿದ್ದರು. ಸ್ಪರ್ಧಿಗಳು ಖುಷಿಯಿಂದ ಕೇಕ್ ತಿಂದರು, ಆದರೆ ಬಳಿಕ ವಿಷಯ ತಿಳಿದು ಎಲ್ಲರೂ ಪೆಚ್ಚಾದರು.

ಬಿಗ್​ಬಾಸ್ ಮನೆಗೆ ಕೇಕ್ ಕಳಿಸಿದ ಕಿಚ್ಚ, ಕೇಕ್ ತಿಂದು ಪೆಚ್ಚಾದ ಸ್ಪರ್ಧಿಗಳು
ಮಂಜುನಾಥ ಸಿ.
|

Updated on: Oct 19, 2024 | 11:27 PM

Share

ಈ ವಾರದ ಬಿಗ್​ಬಾಸ್ ಕನ್ನಡ ಸೀಸನ್ 11ರ ವಾರದ ಪಂಚಾಯಿತಿಯ ಶನಿವಾರದ ಎಪಿಸೋಡ್​ ಬಹಳ ಗರಂ ಆಗಿತ್ತು. ಮನೆಯಲ್ಲಿ ಭಾರಿ ಜಗಳ, ಇಬ್ಬರು ಸ್ಪರ್ಧಿಗಳು ಹೊರಗೆ ಹೋಗಿರುವುದು, ಸ್ಪರ್ಧಿಗಳು ವರ್ತಿಸಿದ ರೀತಿ, ಮಾತನಾಡಿದ ರೀತಿ ಹಲವು ವಿಷಯಗಳು ಚರ್ಚಿಸಲು ಇದ್ದವು. ಸುದೀಪ್ ಎಂದಿನಂತೆ ಸ್ಟೈಲ್ ಆಗಿ ಎಂಟ್ರಿ ನೀಡಿದರು. ಸಣ್ಣದಾಗಿ ಉಭಯ ಕುಶಲೋಪರಿ ನಡೆಸಿದರು. ಆ ನಂತರ ಬಿಗ್​ಬಾಸ್ ಮನೆಯೊಳಗೆ ಒಂದು ಕೇಕ್ ಅನ್ನು ಕಳಿಸಿದರು.

ಕೇಕ್ ನೋಡಿ ಸ್ಪರ್ಧಿಗಳೆಲ್ಲ ಬಹಳ ಖುಷಿಯಾದರು. ಕೇಕ್ ಮೇಲೆ ‘ಅಭಿನಂದನೆಗಳು’ ಎಂದು ಬರೆದಿತ್ತು. ವಿಷಯ ಗೊತ್ತಿಲ್ಲದ ಸ್ಪರ್ಧಿಗಳು ಖುಷಿಯಿಂದ ಕೇಕ್ ತಿಂದರು. ಕೇಕ್ ಕಳಿಸಿದ ಜನರಿಗೆ ಥ್ಯಾಂಕ್ಸ್ ಎಂದು ಖುಷಿಯಿಂದ ಹೇಳಿದರು. ಕೇಕ್ ಕತ್ತರಿಸುವಾಗ ಹಾಡುಗಳನ್ನು ಸಹ ಹಾಡಿದರು. ಕೆಲವು ಸ್ಪರ್ಧಿಗಳು ಪರಸ್ಪರರಿಗೆ ಕೇಕ್ ತಿನ್ನಿಸಿ ಖುಷಿ ಪಟ್ಟರು. ಕೇಕ್ ತಿಂದಿದ್ದು ಮುಗಿದ ಬಳಿಕ ವಿಷಯ ಹೇಳಿದರು ಸುದೀಪ್.

ಪ್ರತಿ ಬಾರಿ ಮಾಧ್ಯಮದವರು, ನಿಮ್ಮ ಪಾಲಿಗೆ ಕೆಟ್ಟ ಸೀಸನ್ ಯಾವುದಾಗಿತ್ತು? ಎಂದು ಕೇಳಿದಾಗಲೆಲ್ಲ ನಾನು ಸೀಸನ್ 6 ಅಥವಾ ಬ್ಯಾಚ್ ನಂಬರ್ 6 ಎಂದು ಹೇಳುತ್ತಿದ್ದೆ. ಆದರೆ ನೀವು ಅದನ್ನು ರೀಪ್ಲೇಸ್ ಮಾಡಿದ್ದೀರಿ. ಕೆಟ್ಟ ಬ್ಯಾಚ್ ಯಾವುದಾಗಿತ್ತು ಎಂದು ಕೇಳಿದಾಗ ಸೀಸನ್ 6 ಎನ್ನುವ ಬದಲಿಗೆ ಇನ್ನು ಮುಂದೆ ಸೀಸನ್ 11 ಎನ್ನಬಹುದು. ನನ್ನ ಅಭಿಪ್ರಾಯವನ್ನು ಬದಲಾವಣೆ ಮಾಡಿದ್ದಕ್ಕೆ ನಿಮಗೆ ಅಭಿನಂದನೆ ಎಂದು ನಾನೇ ಕೇಕ್ ಕಳಿಸಿದ್ದೆ’ ಎಂದರು. ಸುದೀಪ್​ರ ಮಾತು ಕೇಳಿ ಖುಷಿಯಾಗಿ ಕೇಕ್ ತಿಂದಿದ್ದ ಸ್ಪರ್ಧಿಗಳೆಲ್ಲರೂ ಪೆಚ್ಚಾದರು.

ಇದನ್ನೂ ಓದಿ:ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?

ಅಸಲಿಗೆ ಈವರೆಗಿನ ಸೀಸನ್​ಗಳಲ್ಲಿ ಅತ್ಯಂತ ಕೆಟ್ಟ ಸೀಸನ್ ಇದು ಎಂಬ ಅಭಿಪ್ರಾಯ ಕೇವಲ ಮೂರೇ ವಾರಕ್ಕೆ ಮೂಡಿಬಿಟ್ಟಿದೆ. ಮನೆಯಲ್ಲಿ ಬರೀ ಗಲಾಟೆಗಳೇ ನಡೆಯುತ್ತಿವೆ. ಫನ್ ಎನ್ನುವುದೇ ಇಲ್ಲದಂತಾಗಿದೆ. ಆಟ ಆಡಿ ಗೆಲ್ಲೋಣ ಎನ್ನುವುದಕ್ಕಿಂತಲೂ ಜಗಳ ಆಡಿಯೇ ಬಿಗ್​ಬಾಸ್ ಗೆಲ್ಲಬೇಕು ಎಂದು ನಿರ್ಧಾರ ಮಾಡಿಕೊಂಡು ಬಂದವರಂತೆ ಸ್ಪರ್ಧಿಗಳು ಪರಸ್ಪರ ಕಿತ್ತಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ನಿಯಮ ಮುರಿಯುತ್ತಾರೆ. ಅತ್ಯಂತ ಕೆಟ್ಟ ಪದಗಳನ್ನು ಬಳಸುವುದು, ಸುಮ್ಮ-ಸುಮ್ಮನೆ ಕಿತ್ತಾಡುವುದು ಬಿಗ್​ಬಾಸ್ ಮನೆಯಲ್ಲಿ ಇದೇ ನಡೆಯುತ್ತಿದೆ. ಹಾಗಾಗಿಯೇ ಸುದೀಪ್ ಇದನ್ನು ಅತ್ಯಂತ ಕೆಟ್ಟ ಬ್ಯಾಚ್​ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್