Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಸ್ಪರ ಜಗಳ ಮಾಡಿಕೊಂಡ ಧನರಾಜ್-ರಜತ್​ಗೆ ಶಿಕ್ಷೆ ನೀಡಿದ ಕಿಚ್ಚ

Bigg Boss Kannada: ಬಿಗ್​ಬಾಸ್ ಕನ್ನಡದಲ್ಲಿ ಧನರಾಜ್ ಮತ್ತು ರಜತ್ ಪರಸ್ಪರ ಕಿತ್ತಾಡಿಕೊಂಡಿದ್ದರು. ಧನರಾಜ್ ಮೇಲೆ ಹಲ್ಲೆ ಮಾಡಲು ರಜತ್ ಮುಂದಾಗಿದ್ದರು. ಆದರೆ ಮನೆಯವರು ಇಬ್ಬರನ್ನೂ ತಡೆದರು. ಶನಿವಾರದ ಎಪಿಸೋಡ್​ಗೆ ಬಂದಿದ್ದ ಸುದೀಪ್, ಇಬ್ಬರಿಗೂ ಶಿಕ್ಷೆ ನೀಡಿದ್ದಾರೆ. ಮುಂದಿನ ಆದೇಶ ಬರುವವರೆಗೆ ರಜತ್ ಜೈಲಿನಲ್ಲಿ ಇರಬೇಕಿದೆ.

ಪರಸ್ಪರ ಜಗಳ ಮಾಡಿಕೊಂಡ ಧನರಾಜ್-ರಜತ್​ಗೆ ಶಿಕ್ಷೆ ನೀಡಿದ ಕಿಚ್ಚ
ಬಿಗ್​ಬಾಸ್ ಕನ್ನಡ
Follow us
ಮಂಜುನಾಥ ಸಿ.
|

Updated on:Dec 15, 2024 | 8:54 AM

ಬಿಗ್​ಬಾಸ್ ಮನೆಯಲ್ಲಿ ಕಳೆದ ವಾರ ಹಲವು ಘಟನೆಗಳು ನಡೆದಿವೆ. ಗೌತಮಿ ಕ್ಯಾಪ್ಟನ್ ಆಗಿದ್ದಾರೆ. ಗೌತಮಿ ಹಾಗೂ ಮಂಜು ಪರಸ್ಪರ ದೂರಾಗಿದ್ದಾರೆ. ತ್ರಿವಿಕ್ರಮ್-ಚೈತ್ರಾ ಜೈಲಿಗೆ ಹೋಗಿದ್ದಾರೆ. ಮನೆಯವರಿಗೆ ಶಿಕ್ಷೆ ಕೊಡಲು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಧನರಾಜ್ ಮತ್ತು ರಜತ್ ಸಖತ್ ಆಗಿ ಜಗಳ ಮಾಡಿಕೊಂಡಿದ್ದಾರೆ. ತನಗೆ ಕಳಪೆ ಕೊಟ್ಟಿದ್ದಕ್ಕೆ ಸಿಟ್ಟಾದ ರಜತ್, ಧನರಾಜ್​ಗೆ ಮೇಲೆ ಹಲ್ಲೆಗೆ ಮುಂದಾಗಿದ್ದರು. ಕೊನೆಗೆ ಮನೆಯವರ ಮಧ್ಯ ಪ್ರವೇಶದಿಂದ ಜಗಳ ಅಷ್ಟಕ್ಕೆ ನಿಂತಿತು.

ನಿನ್ನೆ ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಈ ವಿಷಯವಾಗಿ ಮಾತನಾಡಿದರು. ‘ನೀವೇನು ಮನುಷ್ಯರಾಗಿ ಇರಲು ಮನೆಯ ಒಳಗೆ ಹೋಗಿದ್ದೀರೋ ಅಥವಾ ಪ್ರಾಣಿಗಳಾಗಿ ಇರಲು ಮನೆಗೆ ಹೋಗಿದ್ದೀರೋ?’ ಎಂದು ಪ್ರಶ್ನೆ ಮಾಡಿದರು. ಮಾತು ಮುಂದುವರೆಸಿ, ಧನರಾಜ್​ಗೆ, ‘ನೀವೇಕೆ ರಜತ್ ಕೆನ್ನೆ ತಟ್ಟಿ ಅವರಿಗೆ ಕೋಪ ಬರಿಸುವ ಪ್ರಯತ್ನ ಮಾಡಿದಿರಿ’ ಎಂದು ಪ್ರಶ್ನಿಸಿದರು. ಇನ್ನು ರಜತ್​ಗೆ ನಿಮ್ಮ ನಾಲಗೆ ಮೇಲೆ ಹಿಡಿತ ಇರಲಿ, ಚೆನ್ನಾಗಿ ಆಡುತ್ತಿದ್ದೀರಿ ಆದರೆ ಆಡುವ ಭಾಷೆ ಮೇಲೆ ಹಿಡಿತ ಇರಲಿ’ ಎಂದರು.

ಧನರಾಜ್ ಹಾಗೂ ರಜತ್​ ಗೆ ಪರಸ್ಪರ ಅಪ್ಪಿಕೊಂಡು ರಾಜಿ ಆಗುವಂತೆ ಹೇಳಿದ ಸುದೀಪ್, ಕೊನೆಗೆ ಇಬ್ಬರಿಗೂ ಶಿಕ್ಷೆಯೊಂದನ್ನು ನೀಡಿದರು. ಒಂದು ಚಕ್ರಗಳಿರುವ ಜೈಲು ತರಿಸಿ, ಅದರಲ್ಲಿ ರಜತ್ ಸೇರಿಕೊಳ್ಳುವಂತೆ ಹೇಳಿದರು. ಮುಂದಿನ ಆದೇಶ ಬರುವವರೆಗೆ ರಜತ್ ಆ ಜೈಲಿನಲ್ಲಿಯೇ ಇರಬೇಕು. ಆ ಚಕ್ರಗಳಿರುವ ಜೈಲನ್ನು ಧನರಾಜ್ ಮನೆಯಲ್ಲೆಲ್ಲ ತಳ್ಳಿಕೊಂಡು ಓಡಾಡಬೇಕು. ರಜತ್ ಎಲ್ಲಿ ಹೇಳುತ್ತಾರೋ ಅಲ್ಲಿಗೆ ಆ ಜೈಲನ್ನು ತಳ್ಳಬೇಕು.

ಇದನ್ನೂ ಓದಿ:ಬಿಗ್​ಬಾಸ್​ಗೆ ಯಾವ ಸ್ಪರ್ಧಿಯಿಂದ ಎಷ್ಟು ಟಿಆರ್​ಪಿ ಬರುತ್ತೆ?

ಆ ಮೂಲಕ ಇಬ್ಬರಿಗೂ ಶಿಕ್ಷೆ ನೀಡಿದರು ಸುದೀಪ್. ಆದರೆ ರಜತ್​ಗೆ ಇದು ಸಮಸ್ಯೆ ಆಯ್ತು. ಬಟ್ಟೆ ಬದಲಿಸುವುದು ನಿದ್ದೆ ಮಾಡುವುದು, ಟಾಯ್ಲೆಟ್​ಗೆ ಹೋಗುವುದು ಎಲ್ಲ ಹೇಗೆ ಎಂಬುದು ರಜತ್​ ಪ್ರಶ್ನೆ. ಆದರೆ ರಜತ್ ಪ್ರಶ್ನೆಗಳಿಗೆ ಸುದೀಪ್ ಉತ್ತರ ನೀಡಲಿಲ್ಲ. ಮುಂದಿನ ಆದೇಶ ಬರುವವರೆಗೆ ಧನರಾಜ್ ಆ ಪುಟ್ಟ ಜೈಲಿನಲ್ಲೇ ಇರಬೇಕಿದೆ. ಧನರಾಜ್​, ರಜತ್ ಹೇಳಿದಲ್ಲೆಲ್ಲ ಆ ಜೈಲನ್ನು ತಳ್ಳಿಕೊಂಡು ಓಡಾಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 am, Sun, 15 December 24

ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ