AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರಿಗಮಪ ಶೋನಿಂದ ರಾಜೇಶ್ ಕೃಷ್ಣನ್ ಹೊರಹೋಗಲು ಅನುಶ್ರೀ ಕಾರಣ’; ಅಚ್ಚರಿ ವಿಚಾರ ಹೇಳಿದ ವಿಜಯ್ ಪ್ರಕಾಶ್

Reality Show: ಸರೆಗಮಪ ಹೊಸ ಸೀಸನ್ ಪ್ರಾರಂಭ ಆಗಿದೆ. ರಾಜೇಶ್ ಕೃಷ್ಣನ್ ಮತ್ತೆ ಜಡ್ಜ್ ಆಗಿ ಶೋಗೆ ವಾಪಸ್ಸಾಗಿದ್ದಾರೆ. ಆದರೆ ಈ ಹಿಂದೆ ಅವರು ಶೋ ಬಿಟ್ಟು ಹೋಗಲು ಕಾರಣ ಏನೆಂಬುದನ್ನು ವಿವರಿಸಲಾಗಿದೆ. ಅನುಶ್ರೀ ಅವರಿಂದ ರಾಜೇಶ್ ಕೃಷ್ಣನ್ ಶೋ ಬಿಟ್ಟು ಹೊರಗೆ ಹೋಗಿದ್ದರಂತೆ.

ಸರಿಗಮಪ ಶೋನಿಂದ ರಾಜೇಶ್ ಕೃಷ್ಣನ್ ಹೊರಹೋಗಲು ಅನುಶ್ರೀ ಕಾರಣ’; ಅಚ್ಚರಿ ವಿಚಾರ ಹೇಳಿದ ವಿಜಯ್ ಪ್ರಕಾಶ್
ರಾಜೇಶ್ ಕೃಷ್ಣನ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Dec 14, 2024 | 10:21 PM

‘ಸರಿಗಮಪ’ ಶೋ ಮತ್ತೆ ಆರಂಭ ಆಗಿರೋದು ಗೊತ್ತೇ ಇದೆ. ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ (ಡಿಸೆಂಬರ್ 14) ಈ ಶೋ ಪ್ರಸಾರ ಆರಂಭಿಸಿದೆ. ಈ ಶೋಗೆ ಮೆಗಾ ಆಡಿಷನ್​ಗೆ ಈ ಬಾರಿ ಬರೋಬ್ಬರಿ 40 ಸ್ಪರ್ಧಿಗಳು ಇದ್ದು, ಈ ಪೈಕಿ ಕೆಲವು ಸ್ಪರ್ಧಿಗಳನ್ನು ಫೈನಲ್ ಆಗಲಿದ್ದಾರೆ. ಈ ಬಾರಿ ಜಡ್ಜ್ ಸ್ಥಾನದಲ್ಲಿ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಇದ್ದಾರೆ. ಸ್ಪರ್ಧಿಗಳನ್ನು ಈ ಮೂವರನ್ನು ಫೈನಲ್ ಮಾಡಲಿದ್ದಾರೆ. ರಾಜೇಶ್ ಕೃಷ್ಣನ್ ಎಂಟ್ರಿಗೆ ಫನ್ ಮಾಡಲಾಯಿತು.

ರಾಜೇಶ್ ಕೃಷ್ಣನ್ ಅವರು ಈ ಮೊದಲು ‘ಸರಿಗಮಪ’ ಶೋ ಜಡ್ಜ್ ಸ್ಥಾನದಲ್ಲಿ ಇದ್ದರು. ಆ ಬಳಿಕ ಅವರು ಕಾರಣಾಂತರಗಳಿಂದ ಈ ಶೋನ ಬಿಟ್ಟು ಹೋದರು. ಅವರು ಈ ಶೋನ ತೊರೆದು ಮೂರು ವರ್ಷಗಳು ಕಳೆದಿವೆ. ಈಗ 2024ರ ಅಂತ್ಯದಲ್ಲಿ ಆರಂಭ ಆಗಿರುವ ‘ಸರಿಗಮಪ’ ಶೋಗೆ ಅವರು ಮತ್ತೆ ಆಗಮಿಸಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ. ರಾಜೇಶ್ ಕೃಷ್ಣನ್ ಅವರು ಈ ಶೋ ಬಿಡಲು ಅನುಶ್ರೀ ಕಾರಣ ಎಂದು ವಿಜಯ್ ಪ್ರಕಾಶ್ ಅವರು ಕಾಲೆಳೆದಿದ್ದಾರೆ.

View this post on Instagram

A post shared by Zee Kannada (@zeekannada)

‘ನೀವು ಬಂದಿದ್ದು ಬಹಳ ಸಂತೋಷ ಆಯಿತು. ನೀವು ನನ್ನ ಗುರುಗಳು’ ಎಂದು ಅನುಶ್ರೀ ಹೇಳಿದರು. ಇದಕ್ಕೆ ಫನ್ ಆಗಿ ಉತ್ತರ ಕೊಟ್ಟರು ವಿಜಯ್ ಪ್ರಕಾಶ್. ‘ಅನುಶ್ರೀ ಇದಾಳೆ ಎಂದೇ ಅಲ್ಲವೇ ನೀವು ಶೋನ ಬಿಟ್ಟು ಹೋಗಿದ್ದು’ ಎಂದರು. ಇದಕ್ಕೆ ರಾಜೇಶ್ ಕೃಷ್ಣನ್ ಹೌದು ಎಂದರು. ಆ ಬಳಿಕ ಇದಕ್ಕೆ ಕಾರಣ ವಿವರಿಸಲಾಯಿತು.

ಇದನ್ನೂ ಓದಿ:ಬರ್ತಿದೆ ‘ಸರಿಗಮಪ’ ಶೋ; ಜಡ್ಜ್ ಸ್ಥಾನಕ್ಕಾಗಿ ಮತ್ತೆ ಬಂದ ರಾಜೇಶ್ ಕೃಷ್ಣನ್

‘ಅನುಶ್ರೀ ಸಂಗೀತ ಹೇಳಿಕೊಡಿ ಎಂದು ಕೇಳಿ ಕೇಳಿ ರಾಜೇಶ್ ಕೃಷ್ಣನ್ ಅವರು ಸುಸ್ತಾಗಿದ್ದಾರೆ. ಅನುಶ್ರೀಗೆ ಸಂಗೀತ ಕಲಿಸುವ ಪ್ರಯತ್ನದಲ್ಲಿ ಈಗ ರಾಜೇಶ್​ಗೆ ಐದೇ ಸ್ವರ ನೆನಪಿದೆ. ಶೋ ಬಿಡೋಕೆ ನೀವೇ ಕಾರಣ’ ಎಂದು ಅನುಶ್ರೀ ಬಗ್ಗೆ ಫನ್ ಮಾಡಿದರು ವಿಜಯ್ ಪ್ರಕಾಶ್. ಇದಕ್ಕೆ ರಾಜೇಶ್ ಕೃಷ್ಣನ್ ಕೂಡ ಹೌದು ಎಂದರು. ‘ಸರಿಗಮಪ’ ಅವರು ಈ ಬಾರಿ 40 ಸ್ಪರ್ಧಿಗಳು ಇದ್ದಾರೆ. ಮೆಗಾ ಆಡಿಷನ್ ನಡೆಯುತ್ತಿದೆ. ಕೆಲವು ವಾರಗಳ ಈ ಆಡಿಷನ್ ಪ್ರಸಾರ ಕಾಣಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್