AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಂಗೇನು ತೆವಲಾ’: ಮೊದಲ ಬಾರಿಗೆ ಭವ್ಯಾ ವಿರುದ್ಧ ತಿರುಗಿಬಿದ್ದ ತ್ರಿವಿಕ್ರಂ

Bigg Boss Kannada: ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಈ ಮೊದಲು ಇಬ್ಬರೂ ‘ಬಿಗ್ ಬಾಸ್ ಕನ್ನಡ ಮಿನಿ ಸೀಸನ್​ನಲ್ಲಿ ಭಾಗಿ ಆಗಿದ್ದರು. ಈ ಕಾರಣಕ್ಕೋ ಏನೋ ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಇವರು ಒಟ್ಟಾಗಿ ಆಟ ಆಡುತ್ತಿದ್ದಾರೆ. ಆದರೆ, ಈ ಬಾಡಿಂಗ್ ಇಬ್ಬರ ಆಟದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಅನೇಕರ ಅಭಿಪ್ರಾಯ. ಈಗ ಇಬ್ಬರ ಮಧ್ಯೆ ಕಿರಿಕ್ ಆಗಿದೆ.

‘ನಂಗೇನು ತೆವಲಾ’: ಮೊದಲ ಬಾರಿಗೆ ಭವ್ಯಾ ವಿರುದ್ಧ ತಿರುಗಿಬಿದ್ದ ತ್ರಿವಿಕ್ರಂ
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Dec 15, 2024 | 12:39 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಈ ಮೊದಲು ಇಬ್ಬರೂ ‘ಬಿಗ್ ಬಾಸ್ ಕನ್ನಡ ಮಿನಿ ಸೀಸನ್​ನಲ್ಲಿ ಭಾಗಿ ಆಗಿದ್ದರು. ಈ ಕಾರಣಕ್ಕೋ ಏನೋ ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಇವರು ಒಟ್ಟಾಗಿ ಆಟ ಆಡುತ್ತಿದ್ದಾರೆ. ಆದರೆ, ಈ ಬಾಡಿಂಗ್ ಇಬ್ಬರ ಆಟದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಅನೇಕರ ಅಭಿಪ್ರಾಯ. ಈಗ ಇಬ್ಬರ ಮಧ್ಯೆ ಕಿರಿಕ್ ಆಗಿದೆ.

ಈ ವಾರ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಂ ಅವರು ಕಳಪೆ ಆಗಿದ್ದರು. ಈ ಕಾರಣಕ್ಕೆ ಇಬ್ಬರೂ ಜೈಲು ಸೇರಿದ್ದಾರೆ. ಅಲ್ಲಿ ಇಡೀ ಮನೆಯ ಸ್ಪರ್ಧಿಗಳಿಗೆ ತೊಂದರೆ ಕೊಟ್ಟಿದ್ದಾರೆ. ಈ ತೊಂದರೆ ಮಿತಿಮೀರಿದೆ. ಈ ಕಾರಣಕ್ಕೆ ಅನೇಕರಿಗೆ ಬೇಸರ ಆಗಿದೆ. ಈ ಮಧ್ಯೆ ತ್ರಿವಿಕ್ರಂ ಅವರು ಭವ್ಯಾ ಗೌಡ ಅವರಿಗೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.

ಭವ್ಯಾ ಗೌಡ ಅವರು ದೂರದಲ್ಲಿ ಕಸ ಗುಡಿಸುತ್ತಾ ಇದ್ದರು. ಆಗ ತ್ರಿವಿಕ್ರಂ ಅವರು ಭವ್ಯಾ ಗೌಡ ಅವರನ್ನು ಕರೆದರು. ‘ಇಲ್ಲಿ ನನಗೆ ಡಸ್ಟ್ ಅಲರ್ಜಿ ಆಗುತ್ತಿದೆ. ಬಂದು ಕಸ ಗುಡಿಸಿ’ ಎಂದರು ತ್ರಿವಿಕ್ರಂ. ಆದರೆ, ಭವ್ಯಾ ಗೌಡ ಬರಲಿಲ್ಲ. ‘ಏನು ನಿಮ್ಮ ಸಮಸ್ಯೆ’ ಎಂದು ಭವ್ಯಾ ಕೇಳಿದರು. ಇದಕ್ಕೆ ತ್ರಿವಿಕ್ರಂ ಸಿಟ್ಟಾದರು.

‘ನನಗೆ ಡಸ್ಟ್ ಅಲರ್ಜಿ ಆಗುತ್ತಿದೆ. ಬಂದು ಕಸ ಗುಡಿಸಿ. ನಂಗೇನು ಸುಮ್ಮನೆ ಹೇಳೋಕೆ ತೆವಲಾ? ನೀವೇ ನಮ್ಮನ್ನು ಒಳಕ್ಕೆ ಕಳುಹಿಸಿದ್ದು’ ಎಂದು ಕೂಗಾಡಿಕೊಂಡರು ತ್ರಿವಿಕ್ರಂ. ಅವರ ಮಾತಿನಿಂದ ಭವ್ಯಾ ಗೌಡ ಅವರು ಸಾಕಷ್ಟು ಬೇಸರಗೊಂಡರು. ತ್ರಿವಿಕ್ರಂ ಬಳಿ ಅವರು ಜಗಳಕ್ಕೆ ಇಳಿದರು. ಆ ಬಳಿಕ ಅಸಲಿ ವಿಚಾರ ಏನು ಎಂಬುದು ಗೊತ್ತಾಯಿತು.

ಭವ್ಯಾ ಗೌಡ ಅವರು ಜೈಲಿನ ಬಳಿ ಬಂದು ಹರಟೆ ಹೊಡೆಯಬೇಕು ಎಂಬುದು ತ್ರಿವಿಕ್ರಂ ಅವರ ಆಸೆ ಆಗಿತ್ತು. ಆದರೆ, ಈ ಆಸೆ ಈಡೇರಿಸಿಕೊಳ್ಳಲು ತ್ರಿವಿಕ್ರಂ ಅವರು ಇಷ್ಟೆಲ್ಲ ಸಾಹಸ ಮಾಡಿದರು. ‘ನೀವೇ ತಾನೇ ಆಗ ಇಲ್ಲಿಗೆ ಬರಬೇಡಿ ಎಂದು ಹೇಳಿದ್ದು. ಈಗ ನೋಡಿದರೆ ಬನ್ನಿ ಎನ್ನುತ್ತಿದ್ದೀರಲ್ಲ’ ಎಂದರು ಭವ್ಯಾ ಗೌಡ. ಅಲ್ಲಿಗೆ ಇಬ್ಬರ ಮಧ್ಯೆ ಎಲ್ಲವೂ ಸಮಸ್ಯೆ ಬಗೆಹರಿಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ