
ಬಿಗ್ಬಾಸ್ ಕನ್ನಡ ಸೀಸನ್ 13 (Bigg Boss Kannada) ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಇಂದು (ಆಗಸ್ಟ್ 30) ಬಿಗ್ಬಾಸ್ ಕನ್ನಡ ಪ್ರೀ ಲಾಂಚ್ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಸುದೀಪ್ ಅವರು ಬಿಗ್ಬಾಸ್ ಶೋ, ‘ಅಗ್ನಿಪರೀಕ್ಷೆ’ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪದೇ ಪದೇ ‘ಅಗ್ನಿಪರೀಕ್ಷೆ’ ಕುರಿತು ಪ್ರಶ್ನೆಗಳು ಎದುರಾದವು. ಈ ಬಾರಿ ಬಿಗ್ಬಾಸ್ಗೆ ಸಾಮಾನ್ಯರನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲು ಅಗ್ನಿಪರೀಕ್ಷೆ ಎಂಬ ವಿಶೇಷ ಟಾಸ್ಕ್ ಅನ್ನು ಮಾಡಲಾಗುತ್ತಿದೆ. ಈ ವೀಶೇಷ ಶೋನಲ್ಲಿ ವಿನಯ್, ಚಂದನ್, ಸಂಗೀತ, ಶ್ರುತಿ ಅವರುಗಳು ಜಡ್ಜ್ಗಳಾಗಿದ್ದಾರೆ. ಆದರೆ ಈ ಶೋನಲ್ಲಿ ಬಿಗ್ಬಾಸ್ ಆಕಾಂಕ್ಷಿಗಳನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ಅವರಿಗೆ ಅವಮಾನ ಮಾಡಲಾಗಿದೆ ಎಂಬ ಟೀಕೆ ಕೇಳಿ ಬಂದಿದೆ.
ಈ ಬಗ್ಗೆ ಸುದೀಪ್ ಅವರಿಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಯ್ತು. ಪ್ರಶ್ನೆಗೆ ಜಾಣತನದಿಂದ ಉತ್ತರ ನೀಡಿದ ಸುದೀಪ್, ‘ಅಗ್ನಿಪರೀಕ್ಷೆಗಳನ್ನು ದಾಟಿ ಬಂದರಷ್ಟೆ ಸ್ವರ್ಗ ಸಿಗುತ್ತದೆ’ ಹಾಗೆಯೇ ಆ ಕಠಿಣವಾದ ಅಗ್ನಿಪರೀಕ್ಷೆಯನ್ನು ದಾಟಿದರೆ ಮಾತ್ರವೇ ಬಿಗ್ಬಾಸ್ನಲ್ಲಿ ಸ್ವರ್ಗ ಸಿಗಬಹುದು’ ಎಂದರು. ‘ಅಗ್ನಿಪರೀಕ್ಷೆ’ ಹೆಸರೇ ಹೇಳುವಂತೆ ಅದೊಂದು ಕಠಿಣವಾದ ಹಂತ, ಅಲ್ಲಿ ಜಡ್ಜ್ಗಳು ತುಸು ಕಠಿಣವಾಗಿಯೇ ಇರಬೇಕಾಗುತ್ತದೆ. ಹಾಗೆಂದು ಅಲ್ಲಿ ನಡೆದಿದ್ದೆಲ್ಲ ಸರಿಯಿದೆ ಎಂದು ನಾನು ಹೇಳಲಾಗದು, ಇನ್ನಷ್ಟು ಸೌಮ್ಯದಿಂದ ಹ್ಯಾಂಡಲ್ ಮಾಡಬಹುದಿತ್ತು’ ಎಂದರು ಸುದೀಪ್.
‘ಯಾರು ಆ ಕಠಿಣತೆಗಳನ್ನು ಎದುರಿಸಿದರೋ ಅವರು ಮುಂದೆ ಬರುತ್ತಿದ್ದಾರೆ. ಬಹುಷಃ ಬಿಗ್ಬಾಸ್ಗೆ ಬಂದು ವಿಜೇತರೂ ಆಗಬಹುದು. ಯಾರು ದೂರು ಹೇಳಿ ಕಷ್ಟ ಎಂದರೊ ಅವರು ಹೊರಗೆ ಹೋಗಿದ್ದಾರೆ. ಜೀವನದಲ್ಲೂ ಹಾಗೆಯೇ ಕಠಿಣವಾದ ಕ್ಷಣಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ, ಅದಕ್ಕೆ ದೂರುತ್ತಾ ಕೂತರೆ ಅದರ ಮುಂದಿರುವ ಒಳಿತು ಸಿಗದೇ ಹೋಗುತ್ತದೆ’ ಎಂದರು ಸುದೀಪ್.
ಇದನ್ನೂ ಓದಿ:ಬಿಗ್ಬಾಸ್ ಕನ್ನಡ: ಗೆಲ್ಲಲಿರುವ ಸ್ಪರ್ಧಿಗೆ ಬಂದಿವೆ 37 ಕೋಟಿ ಮತಗಳು
‘ಎಲ್ಲ ವಿಚಾರಕ್ಕೂ ಎರಡು ಸೈಡ್ ಇರುತ್ತವೆ. ನಾನೂ ಸಹ ಸಾಕಷ್ಟು ಕಠಿಣ ಸಮಯ, ಕಠಿಣವಾದ ಜವಾಬ್ದಾರಿಗಳನ್ನು ಎದುರಿಸಿಕೊಂಡೇ ಬಂದವನು. ಆಗೆಲ್ಲ ದೊಡ್ಡವರು ಹೇಳುವುದು ಬೈಗುಳ ಎನಿಸುತ್ತಿತ್ತು, ಆದರೆ ಈಗ ಅವರೆಲ್ಲ ಎಷ್ಟು ಸರಿಯಿದ್ದರು ಅನಿಸುತ್ತದೆ. ಇದೂ ಹಾಗೆಯೇ ಈಗ ಜಡ್ಜ್ಗಳು ಹೇಳಿರುವುದು ಕಠಿಣವಾಗಿದೆ ಎನಿಸಬಹುದು ಆದರೆ ಆಳೆ ಅದರಿಂದಲೇ ಒಳ್ಳೆಯದೂ ಆಗಬಹುದು’ ಎಂದಿದ್ದಾರೆ ಸುದೀಪ್.
ಬಿಗ್ಬಾಸ್ ಅಗ್ನಿಪರೀಕ್ಷೆ ಎಂಬ ಹೊಸ ಎಲಿಮೆಂಟ್ ಅನ್ನು ಈ ಬಾರಿ ಸೇರಿಸಲಾಗಿತ್ತು. ಬಿಗ್ಬಾಸ್ ಮನೆಯ ಒಳಗೆ ಹೋಗಲು ಬಯಸುವವರನ್ನು ಒಂದೆಡೆ ಸೇರಿಸಿ ಅವರಲ್ಲಿ ಅರ್ಹರನ್ನು ಟಾಸ್ಕುಗಳ ಮೂಲಕ, ವಿವಿಧ ಸಂದರ್ಶನಗಳ ಮೂಲಕ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ವಿನಯ್ ಗೌಡ, ಚಂದನ್ ಗೌಡ, ಸಂಗೀತ ಶೃಂಗೇರಿ ಮತ್ತು ಶ್ರುತಿ ಅವರುಗಳು ಈ ಶೋನ ಜಡ್ಜ್ಗಳಾಗಿದ್ದಾರೆ. ಇವರು ಮೆಚ್ಚಿ ಆರಿಸುವ ವ್ಯಕ್ತಿಗಳು ಸಾಮಾನ್ಯರ ಕೋಟಾನಲ್ಲಿ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 pm, Sun, 30 August 26