AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್ v/s ಕಾರ್ತಿಕ್: ನಿಜವಾಗಿಯೂ ಕಾರ್ತಿಕ್ ಆ ಪದ ಬಳಸಿದರೆ?

Bigg Boss: ಬಿಗ್​ಬಾಸ್ ಮನೆಯಲ್ಲಿ ಮತ್ತೊಮ್ಮ ವಿನಯ್ ಹಾಗೂ ಕಾರ್ತಿಕ್ ನಡುವೆ ಬಿರುಸಿನ ಜಗಳ ನಡೆದಿದೆ. ಕಾರ್ತಿಕ್ ತಮಗೆ ಕೆಟ್ಟ ಪದ ಬಳಸಿ ಬೈದಿದ್ದಾನೆಂದು ವಿನಯ್ ಆರೋಪಿಸಿದ್ದಾರೆ. ನಿಜಕ್ಕೂ ಕಾರ್ತಿಕ್ ಆ ಪದಗಳನ್ನು ಬಳಸಿದರೆ?

ವಿನಯ್ v/s ಕಾರ್ತಿಕ್: ನಿಜವಾಗಿಯೂ ಕಾರ್ತಿಕ್ ಆ ಪದ ಬಳಸಿದರೆ?
ವಿನಯ್-ಕಾರ್ತಿಕ್
ಮಂಜುನಾಥ ಸಿ.
|

Updated on:Dec 06, 2023 | 11:51 PM

Share

ಬಿಗ್​ಬಾಸ್​ನಲ್ಲಿ (BiggBoss) ಈ ವಾರ ಜಗಳಗಳು ಬಹಳ ಜೋರಾಗಿವೆ. ರಾಕ್ಷಸರು-ಗಂಧರ್ವರು ಎಂದು ಗುಂಪುಗಳನ್ನಾಗಿ ವಿಂಗಡಿಸಿದ್ದು ಜಗಳಗಳಿಗೆ ಸರಿಯಾದ ವೇದಿಕೆಯನ್ನೇ ಒದಗಿಸಲಾಗಿತ್ತು. ಬುಧವಾರದ ಎಪಿಸೋಡ್​ನಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ರಾಕ್ಷಸ ವೇಷದಲ್ಲಿದ್ದ ಸಂಗೀತಾ, ಕಾರ್ತಿಕ್ ಅವರುಗಳು ಕುರ್ಚಿಯ ಮೇಲೆ ಕೂರಿಸಲಾಗಿದ್ದ ನಾಲ್ವರು ಗಂಧರ್ವರಲ್ಲಿ ಇಬ್ಬರನ್ನು ಕುರ್ಚಿ ಬಿಟ್ಟು ಏಳುವಂತೆ ಮಾಡಬೇಕಿತ್ತು.

ಟಾಸ್ಕ್ ಆಡುವ ವೇಳೆ ಯಾವುದೋ ಮಾತಿಗೆ ವಿನಯ್, ಕಾರ್ತಿಕ್ ಅನ್ನು ತಗಡು ಎಂದು ರೇಗಿಸಲು ಪ್ರಾರಂಭಿಸಿದರು. ಕಾರ್ತಿಕ್ ಸಹ ಅದಕ್ಕೆ ತಕ್ಕಂತೆ ವಿನಯ್ ಅನ್ನು ತಗಡು ಎಂದು ಪ್ರತಿಕ್ರಿಯಿಸಲು ಆರಂಭಿಸಿದರು. ಈ ವೇಳೆ ಮಹಿಳೆಯರ ಬಗ್ಗೆಯೂ ಮಾತೊಂದು ಬಂತು, ಆ ಮಾತು ಹಾಗೆಯೇ ಮುಂದುವರೆದು ಇಬ್ಬರ ನಡುವೆ ತುಸು ಜೋರಾದ ಜಗಳವಾಯ್ತು.

ಈ ವೇಳೆ ವಿನಯ್ ತೀವ್ರ ಸಿಟ್ಟಿನಿಂದ ವರ್ತಿಸಿದರು. ಕಾರ್ತಿಕ್ ಸಹ. ಕಾರ್ತಿಕ್ ಬಳಿ ಬಂದ ವಿನಯ್ ಕೆಲವು ಆಂಗಿಕ ಸಂಜ್ಞೆಗಳನ್ನು ಮಾಡಿದರು. ಈ ವೇಳೆ ಕಾರ್ತಿಕ್ ಧ್ವನಿ ಹೊರಡಿಸದೆ ಕೆಲವು ಮಾತುಗಳನ್ನು ಆಡಿದರು. ಆದರೆ ಆ ಬಳಿಕ ವಿನಯ್, ಕಾರ್ತಿಕ್ ನನ್ನನ್ನು ಕೆಟ್ಟ ಮಾತಿನಿಂದ ಬೈದ ಎಂದು ಒಮ್ಮೆಲೆ ಜೋರಾಗಿ ಕೂಗಾಡಿದರು. ಕುಟುಂಬದ ವಿಷಯವನ್ನು ಚರ್ಚೆಗೆ ತಂದ, ಅವನಿಗೂ ಅಮ್ಮ, ತಂಗಿ ಇದ್ದಾರೆ ಅವನು ನನ್ನನ್ನು ಕೆಟ್ಟದಾಗಿ ಬೈದ ಎಂದು ಜೋರಾಗಿ ಕೂಗಾಡಿದರು. ‘ನೀನು ನನ್ನ ಟಾರ್ಗೆಟ್, ನೀನೊಬ್ಬನೆ ನನ್ನ ಟಾರ್ಗೆಟ್’ ಎಂದು ವಿನಯ್ ಧಮ್ಕಿ ಸಹ ಹಾಕಿದರು. ಅದಕ್ಕೆ ಕಾರ್ತಿಕ್ ಆಯ್ತು ಹೋಗೋಲೆ ಎಂದು ಕೂಗಾಡಿದರು.

ಇದನ್ನೂ ಓದಿ:ಬಿಗ್​ಬಾಸ್: ಮತ್ತೆ ಪಾರ್ಟಿ ಬದಲಿಸಿದ ಸಂಗೀತಾ, ವಿನಯ್ ಜೊತೆ ಮತ್ತೆ ವೈರತ್ವ ಶುರು

ವಿನಯ್​ ಮಾಡಿದ ಆರೋಪವನ್ನು ಕಾರ್ತಿಕ್ ಸಂಪೂರ್ಣವಾಗಿ ಅಲ್ಲಗಳೆದರು. ನಾನು ಕೆಟ್ಟ ಪದಗಳನ್ನು ಬಳಸಿದ್ದರೆ ನನ್ನನ್ನು ಈ ಕೂಡಲೇ ಈ ಮನೆಯಿಂದ ಹೊರಗೆ ಹಾಕಿ, ಈ ಕೂಡಲೇ ನಾನು ಹೊರಗೆ ಹೋಗಲು ಸಿದ್ಧ. ನಾನು ಖಂಡಿತ ಹಾಗೆ ಅಂದಿಲ್ಲ ಎಂದರು. ವಿಡಿಯೋ ಇದೆ ಬೇಕಾದರೆ ವೀಡಿಯೋದಲ್ಲಿ ನೋಡಿಕೊಳ್ಳಲಿ ಎಂದು ಸವಾಲು ಹಾಕಿದರು.

ಆದರೆ ವಿನಯ್, ತುಕಾಲಿ, ನಮ್ರತಾ ಇನ್ನಿತರರ ಮುಂದೆ ಕಾರ್ತಿಕ್ ಬಗ್ಗೆ ಬೋಡ ಇನ್ನಿತರೆ ಮಾತುಗಳನ್ನು ಬೈಯ್ಯುತ್ತಲೇ ಇದ್ದರು. ನಿಜವಾಗಿಯೂ ಕಾರ್ತಿಕ್, ವಿನಯ್​ಗೆ ಕೆಟ್ಟ ಪದಗಳನ್ನು ಬಳಸಿದರೇ ಅಥವಾ ಇಲ್ಲವೇ ಎಂಬುದು ಪ್ರೇಕ್ಷಕರಿಗೆ ತಿಳಿಯಲಿಲ್ಲ. ಬಹುಷಃ ವಾರಾಂತ್ಯದಲ್ಲಿ ಸುದೀಪ್ ಅವರು ಬಂದಾಗ ಈ ಗೊಂದಲಕ್ಕೆ ಪರಿಹಾರ ಸಿಗಬಹುದು. ನಿಜವಾಗಿಯೂ ಕಾರ್ತಿಕ್ ಕೆಟ್ಟ ಪದಗಳನ್ನು ಬಳಸಿದ್ದಾರೆಯೇ ಅಥವಾ ವಿನಯ್ ಉದ್ದೇಶಪೂರ್ವಕವಾಗಿ ಕಾರ್ತಿಕ್ ಮೇಲೆ ಸುಳ್ಳು ಆರೋಪ ಮಾಡಿದ್ದಾರೆಯೇ ತಿಳಿಯಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:33 pm, Wed, 6 December 23

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!